• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • Hassan

Hassan

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಜೈ ಭೀಮ್ ಕಪ್‌ ಕ್ರಿಕೆಟ್ ಪಂದ್ಯಾವಳಿ ಉದ್ಘಾಟನೆ
ಜಿಲ್ಲೆಯ ರಸ್ತೆಗಳ ಅಭಿವೃದ್ಧಿ ಕುರಿತು ಸಂಸದ ಶ್ರೇಯಸ್ ಪಟೇಲ್ ಪಟ್ಟಿ ನೀಡಿದ್ದಾರೆ, ಹೆಚ್ಚಿನ ಒತ್ತು ನೀಡಿ ಅಭಿವೃದ್ಧಿಪಡಿಸಲಾಗುವುದು. ಪಟ್ಟಣದ ಕ್ರೀಡಾಂಗಣಕ್ಕೆ ಫ್ಲಡ್‌ ಲೈಟ್ ವ್ಯವಸ್ಥೆ ಮಾಡಿಕೊಡುವುದಾಗಿ ಹಾಗೂ ಅಂಬೇಡ್ಕರ್ ಭವನದ ಕಾಮಗಾರಿ ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಡಾ. ಅಂಬೇಡ್ಕರ್ ಹೆಸರಿನಲ್ಲಿ ಜೈಭೀಮ್ ಕಪ್‌ ಪಂದ್ಯಾವಳಿ ಆಯೋಜಿಸಿರುವುದು ಶ್ಲಾಘನೀಯ ಕಾರ್ಯ. ಇದು ನಿಲ್ಲದಂತೆ ಪ್ರತಿವರ್ಷ ನಡೆಸಿಕೊಂಡು ಬರುವಂತೆ ಸಲಹೆ ನೀಡಿ ಪ್ರಥಮ ಬಹುಮಾನ ರು. ಒಂದು ಲಕ್ಷವನ್ನು ತಾವು ನೀಡುವುದಾಗಿ ಹೇಳಿದರು.
ಬೀಚಗೊಂಡನಹಳ್ಳಿಯ ಭಕ್ತಾಂಜನೇಯನಿಗೆ ಅದ್ಧೂರಿ ರಾಮೋತ್ಸವ
ಶ್ರೀರಾಮ ಮತ್ತು ರಾವಣರ ಯುದ್ಧದ ಸಂದರ್ಭದಲ್ಲಿ ಮೂರ್ಛೆ ಹೋದ ಲಕ್ಷ್ಮಣನಿಗಾಗಿ ಗಿಡಮೂಲಿಕೆ ತರಲು ಸಂಜೀವಿನ ಪರ್ವತಕ್ಕೆ ಹೋಗುವ ವೇಳೆ ಹನುಮನ ಪಾದಸ್ಪರ್ಶ ಈ ಗ್ರಾಮಕ್ಕೆ ಆಗಿತ್ತು ಎನ್ನುವ ಪ್ರತೀತಿ ಇದೆ. ಈಗಾಗಿ ಇಲ್ಲಿ ಒಂದು ಹನುಮನ ಪುಟ್ಟ ಗುಡಿಯೊಂದನ್ನು ಕಟ್ಟಿ ಅನಾದಿಕಾಲದಿಂದಲೂ ಪೂಜಿಸಿಕೊಂಡು ಬರುತ್ತಿದ್ದರು. ೬-೭ ದಶಕಗಳ ಹಿಂದೆ ದೇವಾಲಯದ ಜೀರ್ಣೋದ್ಧಾರದ ಸಂದರ್ಭದಲ್ಲಿ ಮಂಗವೊಂದು ಈ ದೇವಾಲಯದಲ್ಲಿ ವಾಸವಿತ್ತಂತೆ. ದೇವಾಲಯ ನಿರ್ಮಾಣವಾಗುವ ಸಂದರ್ಭದಲ್ಲಿ ಒಮ್ಮೆ ನಾಯಿ ಅದನ್ನು ಘಾಸಿಗೊಳಿಸಿದ ಹಿನ್ನೆಲೆಯಲ್ಲಿ ಅದು ದೇವಾಲಯದ ಆವರಣಕ್ಕೆ ಬಂದು ಪ್ರಾಣಬಿಟ್ಟಿದ್ದು, ನಂತರ ಅದೇ ಸ್ಥಳದಲ್ಲಿ ಒಂದು ಕಲ್ಲಿನ ರೂಪದಲ್ಲಿ ಹನುಮ ಉದ್ಭವವಾಗಿದ್ದು, ಅ ಸ್ಥಳದಲ್ಲಿಯೇ ಮತ್ತೊಂದು ಗುಡಿಯನ್ನು ನಿರ್ಮಿಸಿ ಪೂಜಿಸಲು ಆರಂಭಿಸಿದ್ದಾರೆ.
ನರೇಗಾ ಯೋಜನೆಯು ಗ್ರಾಮೀಣ ಜನರ ಬದುಕಿಗೆ ಆಶಾದಾಯಕ
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಪರಿಣಾಮಕಾರಿ ಅನುಷ್ಟಾನದ ಕುರಿತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೂರ್ಣಿಮ ಬಿ.ಆರ್. ಅಧ್ಯಕ್ಷತೆಯಲ್ಲಿ ಜಿಲ್ಲಾ, ತಾಲೂಕು, ಗ್ರಾಮ ಪಂಚಾಯಿತಿ ಮಟ್ಟದ ಎಲ್ಲಾ ಅನುಷ್ಟಾನಾಧಿಕಾರಿಗಳು ಹಾಗೂ ತಾಂತ್ರಿಕ ಸಿಬ್ಬಂದಿಗೆ ಬುಧವಾರ ನಗರದ ಹಾಸನಾಂಬ ಕಲಾಭವನದಲ್ಲಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಕೌಟುಂಬಿಕ ಕಲಹ ಮನನೊಂದ ಮಹಿಳೆ ನೇಣಿಗೆ ಶರಣು
ಕೌಟುಂಬಿಕ ಕಲಹ , ಕಿರುಕುಳ ತಾಳಲಾರದೇ ಮನನೊಂದ ಪತ್ನಿ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾದ ಘಟನೆ ತಾಲೂಕಿನ ಲಿಂಗಾಪುರ ಗ್ರಾಮದಲ್ಲಿ ಬುಧವಾರ ಸಂಜೆ ನಡೆದಿದೆ. ಕೆಲ ದಿನಗಳ ಹಿಂದಷ್ಟೇ ಕುಟುಂಬಸ್ಥರ ಸಮ್ಮುಖದಲ್ಲಿ ಇಬ್ಬರಿಗೂ ತಿಳಿ ಹೇಳಿದ್ದೆವು. ಆ ಬಳಿಕ ದಂಪತಿಗಳಿಬ್ಬರೂ ಕೆಲ ದಿನಗಳ ಸಮಯಾವಕಾಶ ನೀಡಿ ಸರಿಪಡಿಸಿಕೊಳ್ಳುತ್ತೇವೆ ಎಂದಿದ್ದರು. ಆದರೆ ಇದೀಗ ಅವನ ಚಿತ್ರಹಿಂಸೆಗೆ ನನ್ನ ಮಗಳ ದಾರುಣ ಸಾವು ಸಂಭವಿಸಿದೆ ಎಂದು ಮೃತಳ ತಂದೆ ಆರೋಪಿಸಿದ್ದಾರೆ.
ವರ್ಷಕ್ಕೆ ಮೂರು ಬಾರಿಯಾದರೂ ರಕ್ತದಾನ ಮಾಡಿ
ಗಂಡಸರಿಗೆ ಹುಟ್ಟಿನಿಂದ ಜೀವಿತ ಅವಧಿಯಲ್ಲಿ ಒಮ್ಮೆಯೂ ದೇಹದಿಂದ ರಕ್ತ ಹೊರಹೋಗುವುದಿಲ್ಲ ಮತ್ತು ವಯಸ್ಸಾದಂತೆ ರಕ್ತ ಗಟ್ಟಿಯಾಗುತ್ತದೆ. ಇದರಿಂದ ಹೃದಯಘಾತ, ಲಕ್ವಾ ಹಾಗೂ ಇತರೆ ಕಾಯಿಲೆಗಳು ಕಾಡುವ ಸಾಧ್ಯತೆ ಹೆಚ್ಚು ಇರುತ್ತದೆ. ಆದ್ದರಿಂದ ಯುವಕರು ಭಯ ಅಥವಾ ಇತರೆ ತಪ್ಪು ತಿಳಿವಳಿಕೆ ಬಿಟ್ಟು ವರ್ಷಕ್ಕೆ ಮೂರು ಬಾರಿ ರಕ್ತದಾನವನ್ನು ಮಾಡುವುದರಿಂದ ಉತ್ತಮ ಆರೋಗ್ಯದ ಜೊತೆಗೆ ಆತ್ಮವಿಶ್ವಾಸದಿಂದ ಇರಲು ಸಾಧ್ಯವಾಗುತ್ತದೆ ಎಂದು ಚನ್ನರಾಯಪಟ್ಟಣ ಸಂಸ್ಥೆಯ ಭರತ್ ಸಲಹೆ ನೀಡಿದರು.
ಮೈಸೂರು ರಸ್ತೆ ಅಗಲೀಕರಣ ಕಾಮಗಾರಿ ವೀಕ್ಷಿಸಿದ ಶಾಸಕ ರೇವಣ್ಣ
ಕೇಂದ್ರ ಸರ್ಕಾರದಿಂದ ೬೦ ಅಡಿ ರಸ್ತೆಗೆ ೨೯ ಕೋಟಿ ಹಣ ಮಂಜೂರಾಗಿದ್ದು, ಯಾರಿಗೂ ತೊಂದರೆ ಆಗದಂತೆ ರಸ್ತೆ ಒಂದು ಬದಿಯ ಡ್ರೈನಿಂದ ೩೦ ಅಡಿ ರಸ್ತೆಯ ಕಾಮಗಾರಿ ಪ್ರಾರಂಭ ಮಾಡಲಾಗಿದೆ ಮತ್ತು ಡಾ. ಅಂಬೇಡ್ಕರ್ ವೃತ್ತದ ತನಕ ಮಾಡುತ್ತೇವೆ ಎಂದು ಶಾಸಕ ಎಚ್.ಡಿ.ರೇವಣ್ಣ ತಿಳಿಸಿದರು. ಸೂರನಹಳ್ಳಿ ರೈಲ್ವೆ ಗೇಟ್ ಸಮೀಪದ ಅಂಡರ್‌ಪಾಸ್ ಹತ್ತಿರದಿಂದ ಕಾಮಗಾರಿ ಪ್ರಾರಂಭ ಮಾಡಲಾಗಿದ್ದು, ಜೆಸಿಬಿ ಬಳಸಿ, ಚರಂಡಿಗಳನ್ನು ತೆಗೆಯಲಾಗುತ್ತಿದ್ದು, ೬೦ ಅಡಿ ರಸ್ತೆ ಕಾಮಗಾರಿಯಲ್ಲಿ ಅಗತ್ಯವಿದ್ದಲ್ಲಿ ಭೂ ಸ್ವಾಧೀನವಾದ ನಂತರ ಪರಿಹಾರ ನೀಡಿ ಉಳಿಕೆ ಕಾಮಗಾರಿ ಮಾಡುತ್ತೇವೆ ಎಂದರು.
ಜಾಜೂರು ಗ್ರಾಮದಲ್ಲಿ ಮಹಾ ರಥೋತ್ಸವ
ರಥೋತ್ಸವದ ಹಿನ್ನೆಲೆಯಲ್ಲಿ ಗುರುವಾರ ಬೆಳಿಗ್ಗೆ ಗ್ರಾಮ ದೇವತೆಗಳಾದ ರಂಗನಾಥ ಸ್ವಾಮಿ, ಹೊನ್ನಾಲದಮ್ಮ ದೇವಿ, ಅಮ್ಮಯ್ಯಜ್ಜಿ ದೇವಿ, ಧೂತರಾಯ ಸ್ವಾಮಿ, ವೀರಭದ್ರೇಶ್ವರ ಸ್ವಾಮಿ, ಧೂತರಾಯ ಸ್ವಾಮಿ, ಹೊಸಪಟ್ಟಣ ಗ್ರಾಮದ ಧೂತರಾಯ ಸ್ವಾಮಿ, ಚಿಕ್ಕಮ್ಮ ದೇವಿ, ದೇವತೆಗಳಿಗೆ ವಿಶೇಷ ಪೂಜೆ ಹಾಗೂ ಅಲಂಕಾರ ಸೇರಿದಂತೆ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನೆರವೇರಿದವು, ಹೊನ್ನಾಲದಮ್ಮ ಹಾಗೂ ಅಮ್ಮಯ್ಯಜ್ಜಿ ದೇವಿಯರು ಹಾಗೂ ಚಿಕ್ಕಮ್ಮ ದೇವಿ, ಹುತ್ತದಮ್ಮ ದೇವಿಗೆ ಮೂಲಸ್ಥಾನದಲ್ಲಿ ಅಭಿಷೇಕ ಮತ್ತು ವಿಶೇಷ ಪೂಜೆ ಅಲಂಕಾರ ಸೇರಿದಂತೆ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನೆರವೇರಿದವು.
ಪೌರಾಣಿಕ ನಾಟಕಗಳಿಂದ ಗ್ರಾಮೀಣ ಸಂಸ್ಕೃತಿ ಜೀವಂತ
ಆಧುನಿಕ ಯುಗದಲ್ಲಿ ಯುವ ಜನಾಂಗ ಮೊಬೈಲ್ ಟಿವಿ, ಸಿನಿಮಾಗಳಿಗೆ ಮಾರುಹೋಗಿ ರಂಗಭೂಮಿಯ ಅವನತಿಗೆ ಸಾಗುತ್ತಿದೆ ಎಂದಾಗ ಸುಮಾರು ೧೮ ವರ್ಷಗಳಿಂದ ಪೌರಾಣಿಕ ನಾಟಕಗಳಿಗೆ ಜೀವತುಂಬಿ ಇಂದಿಗೂ ಸಹ ಸಾವಿರಾರು ಕಲಾರಸಿಕರನ್ನು ಒಂದೆಡೆ ಕಲೆಹಾಕುವುದು ಸಾಧನೆಯಾಗಿದೆ. ರಂಗಭೂಮಿಯಲ್ಲಿ ನಿಜವಾದ ಕಲಾವಂತಿಕೆ ಇದೆ ಕಲಾವಿದರಿಗೆ ಉತ್ತೇಜನ ನೀಡುವುದು ನಮ್ಮೆಲ್ಲರ ಕರ್ತವ್ಯ. ಈ ಪೌರಾಣಿಕ ಕಲೆಯನ್ನು ಪ್ರತಿಯೊಬ್ಬರು ಉಳಿಸಿ ಬೆಳಸಬೇಕು ಎಂದರು.
ನಗರಸಭೆ ಅಧ್ಯಕ್ಷರ ಚುನಾವಣೆ ನಡೆದೇ ನಡೆಯುತ್ತೆ
ನಮ್ಮ ಪಕ್ಷದ ತೀರ್ಮಾನದಂತೆ ಅಧ್ಯಕ್ಷರ ಚುನಾವಣೆಯ ನಡೆದೇ ನಡೆಯುತ್ತದೆ. ಎಲ್ಲಾ ಪ್ರಕ್ರಿಯೆಗಳು ಕಾನೂನು ಬದ್ಧವಾಗಿಯೇ ನಡೆಯಲಿದೆ ಹಾಗೂ ನಗರಸಭೆ ಅಧ್ಯಕ್ಷರ ಬದಲಾವಣೆ ನಿಶ್ಚಿತ. ಉಪಾಧ್ಯಕ್ಷರ ಚುನಾವಣೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಅಧಿಕಾರ ಹಂಚಿಕೆ ಸಂಬಂಧ ಈಗಾಗಲೇ ಪಕ್ಷದಲ್ಲಿ ತೀರ್ಮಾನವಾಗಿದ್ದು ಅದರಂತೆಯೇ ಪ್ರಕ್ರಿಯೆಗಳು ನಡೆಯಲಿದೆ ಎಂದು ಸ್ಪಷ್ಟಪಡಿಸಿದರು.
ಲಯನ್ಸ್‌ ವತಿಯಿಂದ ಕೃತಕ ಕಾಲು ಜೋಡಣಾ ಶಿಬಿರ
ಈಗಾಗಲೇ ಸುಮಾರು ೪೦ ಮಂದಿ ಅರ್ಹ ಫಲಾನುಭವಿಗಳ ಕೃತಕ ಕಾಲು ಜೋಡಣೆ ಮಾಡಲಾಗಿದೆ, ಕಾಲಿಲ್ಲದೆ ಬವಣೆ ಪಡುತ್ತಿರುವ ವ್ಯಕ್ತಿಗಳನ್ನು ಗುರುತಿಸಿ ಉತ್ತಮ ಗುಣಮಟ್ಟದ ಕೃತಕ ಕಾಲಿನ ಜೋಡಣೆಯನ್ನು ಉಚಿತವಾಗಿ ಮಾಡಿಕೊಡಲಾಗುವುದು. ಪ್ರಸ್ತುತ ವರ್ಷದ ಬಹುಮುಖ್ಯ ಯೋಜನೆ ಇದಾಗಿದ್ದು, ಅಂದಾಜು ಸುಮಾರು ೧೫ ಲಕ್ಷ ರು. ವೆಚ್ಚ ತಗಲುವುದು. ಕೃತಕ ಕಾಲು ಜೋಡಿಸಿದ ವ್ಯಕ್ತಿಗೆ ಓಟದ ಸ್ಪರ್ಧೆಯಲ್ಲಿ ಭಾಗವಹಿಸಲು ಸಾಧ್ಯವಿದೆ ಎಂಬ ಮಾಹಿತಿ ನೀಡಿದರು.
  • < previous
  • 1
  • ...
  • 111
  • 112
  • 113
  • 114
  • 115
  • 116
  • 117
  • 118
  • 119
  • ...
  • 508
  • next >
Top Stories
ಬಾಹ್ಯಾಕಾಶದಿಂದ ಫ್ರೀಜ್‌ ಮಾಡಿದ್ದ ಹೆಸರು, ಮೆಂತ್ಯೆ ವಾಪಸ್‌!
ಶುಲ್ಕ ಪಾವತಿಸದ ವಿದ್ಯಾರ್ಥಿನಿ ತಾಯಿ ತಾಳಿ ಬಿಚ್ಚಿಸಿಕೊಂಡಿದ್ದ ಚೇರ್‌ಮನ್‌ ಕ್ಷಮೆ
ರಮ್ಯಾ ಹಾಗೂ ವಿನಯ್‌ ಸುತ್ತಾಟದ ಫೋಟೋ ಟ್ರೆಂಡಿಂಗ್‌
ಯಶ್ ದೃಷ್ಟಿಕೋನ ಅಚ್ಚರಿಗೊಳಿಸಿತು : ರುಕ್ಮಿಣಿ ವಸಂತ್
ಬ್ಯಾಲೆಟ್ ಪೇಪರ್ ಅಕ್ರಮ ಈಗ ಸುಲಭವಲ್ಲ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved