• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • Hassan

Hassan

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ದೈವಬಲ ಇದ್ದವರಿಗೆ ಮರಳು ಗಣಿಗಾರಿಕೆ ಟೆಂಡರ್‌
ಆರ್ಥಿಕ ಬಲಾಢ್ಯರಿಗಿಂತ ದೈವಬಲ ಹೊಂದಿದ್ದವರು ಈ ಬಾರಿಯ ಮರಳು ಗಣಿಗಾರಿಕೆ ಟೆಂಡರ್ ಪಡೆಯುವುದು ನಿಶ್ಚಿತವಾಗಿದೆ. ಟೆಂಡರನಲ್ಲಿ ಭಾಗಿಯಾಗಿರುವ 274 ಜನರ ದಾಖಲೆ ಪರಿಶೀಲನೆ ಕಷ್ಟಕರ. ಪ್ರತಿಯೊಬ್ಬ ಟೆಂಡರ್‌ದಾರರ ದಾಖಲೆ ಕನಿಷ್ಠ ನೂರರಿಂದ ನೂರೈವತ್ತು ಪುಟಗಳಿದ್ದು ಇವುಗಳ ಪರಿಶೀಲನೆ ನಡೆಸಿ ಮತ್ತೊಂದು ಸಭೆ ನಡೆಸಿ ಜಿಲ್ಲಾಧಿಕಾರಿಗಳ ಅನುಮೋದನೆಗೆ ಕಳುಹಿಸಿದ ನಂತರ ಟೆಂಡರ್‌ದಾರರು ಏಕಧರ ನಮೂದಿಸಿದ್ದರೆ ಲಾಟರಿ ಮೂಲಕ ಟೆಂರ್‌ದಾರರ ಘೋಷಣೆ ಮಾಡಲಾಗುವುದು ಎಂದು ಇಲಾಖೆ ಸ್ವಷ್ಟಪಡಿಸಿದೆ.
ಲಯನ್ಸ್ ಕ್ಲಬ್ ಸುವರ್ಣ ಮಹೋತ್ಸವದ ಲಾಂಛನ ಬಿಡುಗಡೆ
ಲಯನ್ಸ್ ಸೇವಾಸಂಸ್ಥೆಯ ೫೦ನೇ ವರ್ಷದ ಸಂಭ್ರಮಾಚರಣೆಯ ಹಿನ್ನೆಲೆಯಲ್ಲಿ ಸುವರ್ಣ ಮಹೋತ್ಸವದ ಲಾಂಛನವನ್ನು ಮಾಜಿ ಗೌರ್‍ನರ್ ಲಯನ್ ಬಿ.ವಿ. ಹೆಗಡೆ ಮತ್ತು ಮಾಲತಿ ಹೆಗಡೆ ದಂಪತಿ ಬಿಡುಗಡೆಗೊಳಿಸಿದರು. ಈ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ನೂತನ ಅಧ್ಯಕ್ಷರು ಇನ್ನಷ್ಟು ಒಳ್ಳೆ ಕೆಲಸ ಮಾಡಲಿ ಎಂದು ಶುಭ ಹಾರೈಸಿದರು ಸಭೆಗೆ ಕೆಲ ಉಪಯುಕ್ತ ಮಾಹಿತಿ ನೀಡಿದರು. ನಿಯೋಜಿತ ಅಧ್ಯಕ್ಷ ಲಯನ್ಸ್‌ ಎಚ್. ರಮೇಶ್ ಮಾತನಾಡಿ, ತಮ್ಮ ಅವಧಿಯಲ್ಲಿ ಮಾಡಲು ನಿರ್ಧರಿಸಿರುವ ಶಾಶ್ವತ ಸೇವೆಗಳ ಯೋಜನೆಗಳ ಬಗ್ಗೆ ಸಭೆಗೆ ಮಾಹಿತಿ ನೀಡಿದರು.
ಮಕ್ಕಳಿದ್ದ ಆಟೋವನ್ನು ನ್ಯೂಟ್ರಲ್ ಮಾಡಿ ಇಳಿಜಾರಿನಲ್ಲಿ ಚಲಿಸಲು ಬಿಟ್ಟ ಯುವಕ
ಹಾಸನ ಮೂಲದ ವ್ಯಕ್ತಿಯೊಬ್ಬರು ತಮ್ಮ ಆಟೋವನ್ನು ಅಂಗಡಿಯ ಮುಂದೆ ನಿಲ್ಲಿಸಿ ಒಳಗೆ ತೆರಳಿದ್ದ ವೇಳೆ, ತನ್ನ ಬೈಕ್ ತೆಗೆದುಕೊಂಡು ಹೋಗಲು ಬಂದ ಯುವಕನಿಗೆ ಆಟೋ ಅಡ್ಡಿಯಾಗಿತ್ತು. ಕೆಲ ನಿಮಿಷ ಕಾದ ಬಳಿಕ, ಯುವಕ ಆಟೋವನ್ನು ನ್ಯೂಟ್ರಲ್‌ಗೆ ಹಾಕಿ ಬಿಟ್ಟಿದ್ದಾನೆ. ಇದರಿಂದ ಆಟೋ ಹಿಮ್ಮುಖವಾಗಿ ಚಲಿಸತೊಡಗಿದೆ. ಇದರಿಂದ ಆಟೋದೊಳಗೆ ಕುಳಿತಿದ್ದ ಪುಟ್ಟ ಮಕ್ಕಳ ಜೀವಕ್ಕೆ ತೊಂದರೆಯಾಗುವ ಸ್ಥಿತಿ ನಿರ್ಮಾಣವಾಗಿತ್ತು. ಆಟೋ ಚಲಿಸುವುದನ್ನು ಗಮನಿಸಿದ ಚಾಲಕ ಹಾಗೂ ಸ್ಥಳದಲ್ಲಿದ್ದವರು ಓಡಿಹೋಗಿ ಆಟೋವನ್ನು ನಿಲ್ಲಿಸಿದ್ದಾರೆ. ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ ಮಕ್ಕಳು ಅಪಾಯದಿಂದ ಪಾರಾಗಿವೆ.
ಯಶಸ್ಸು ಗಳಿಸಲು ಅನಗತ್ಯ ಚಟುವಟಿಕೆಗಳಿಂದ ದೂರವಿರಿ
ಜೀವನದಲ್ಲಿ ನಿಜವಾದ ಯಶಸ್ಸುಗಳಿಸಲು ವಿದ್ಯಾರ್ಥಿಗಳು ಅನಗತ್ಯ ಚಟುವಟಿಕೆಗಳಿಂದ ದೂರವಿರಬೇಕು ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಕರೆ ನೀಡಿದ್ದಾರೆ. ಆಧುನಿಕ ಜಗತ್ತಿನಲ್ಲಿ ಕೇವಲ ಪದವಿ ಶಿಕ್ಷಣ ಸಾಕಾಗುವುದಿಲ್ಲ. ವಿದ್ಯೆಯ ಜೊತೆಗೆ ಕೌಶಲ್ಯವೂ ಅತಿ ಮುಖ್ಯ. ಈಗಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉದ್ಯೋಗ ಪಡೆಯಲು ಕೌಶಲ್ಯ ನಿರ್ಣಾಯಕ ಪಾತ್ರ ವಹಿಸುತ್ತವೆ. ಆದರಲ್ಲೂ, ಸಂಪರ್ಕ ಕೌಶಲ್ಯವನ್ನು ವಿದ್ಯಾರ್ಥಿಗಳು ಕಡ್ಡಾಯವಾಗಿ ಬೆಳೆಸಿಕೊಳ್ಳಬೇಕು. ಸಮಾಜದಲ್ಲಿ ಸಮರ್ಪಣಾ ಮನೋಭಾವವನ್ನು ರೂಢಿಸಿಕೊಳ್ಳುವುದು ಅತ್ಯಗತ್ಯ ಎಂದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಸಾಹಿತಿ ವೆಂಕಟೇಶಮೂರ್ತಿ ನಿಧನಕ್ಕೆ ಶ್ರದ್ಧಾಂಜಲಿ
ಮಕ್ಕಳ ಸಾಹಿತಿ, ಚಿಂತಕ, ಬರಹಗಾರ, ಭಾವಲೋಕದ ಕವಿ ಎಚ್.ಎಸ್.ವೆಂಕಟೇಶಮೂರ್ತಿ ಅವರ ನಿಧನಕ್ಕೆ ಶ್ರದ್ಧಾಂಜಲಿ ಅರ್ಪಿಸುವ ಕಾರ್ಯಕ್ರಮದಲ್ಲಿ ಅವರ ರಚನೆಯ ಭಾವಗೀತೆಗಳ ಹಾಡುವ ಮೂಲಕ ನಡೆದಿದ್ದು ಅತ್ಯಂತ ವಿಶೇಷವಾಗಿತ್ತು. , ವೆಂಕಟೇಶಮೂರ್ತಿ ಅವರ ದೇಹ ನಮ್ಮೊಂದಿಗೆ ಇಲ್ಲವಾಗಿರಬಹುದು ಆದರೆ ಸಾಹಿತ್ಯ, ಭಾವಗೀತೆಗಳು ಸದಾ ನಮ್ಮೊಂದಿಗಿದೆ ಎಂದು ಹೇಳಿದರು. ಅವರ ರಚನೆಯ ಪುಸ್ತಕಗಳು, ಅವರ ಚಿಂತನೆ ಆದರ್ಶಗಳು, ಇಂದಿನ ಪೀಳಿಗೆಗೆ, ಮಕ್ಕಳಿಗೆ ಆದರ್ಶವಾಗಬೇಕು, ಕನ್ನಡ ಸಾಹಿತ್ಯಕ್ಕೆ ಮಕ್ಕಳ ಸಾಹಿತ್ಯಕ್ಕೆ ಅವರು ನೀಡಿದ ಕೊಡುಗೆ ಅಪಾರವಾದದ್ದು ಎಂದು ಸ್ಮರಿಸಿದರು.
ತನಿಖೆ ವರದಿ ಬಳಿಕ ಸತ್ಯಾಂಶ ಹೊರಬರುತ್ತೆ
ಕಮಿಷನರ್ ಆಫೀಸ್, ಕೆಳಗಿನ ಪೊಲೀಸ್ ಅಧಿಕಾರಿಗಳು ಅನುಮತಿ ನೀಡಿದ್ರಾ, ಬೇಡ ಅಂದ್ರು ಏಕೆ ಹೋದರು, ಸಾಕಷ್ಟು ಗೊಂದಲಗಳಿವೆ, ಸಿಐಡಿ, ಸಿಒಡಿ ತನಿಖೆ ಮಾಡ್ತಾರೆ, ವರದಿ ಬಳಿಕ ಸತ್ಯಾಂಶ ಹೊರಗೆ ಬರುತ್ತೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು. ಸ್ಟೇಡಿಯಂಗೆ ಹೋಗುವ ಮುಂಚೆ ಡೆತ್ ಆಗಿದ್ರೆ ಸಿಎಂಗೆ, ಸರ್ಕಾರಕ್ಕೆ ಹೇಳಬೇಕಾದದ್ದು ಪೊಲೀಸರ ಕರ್ತವ್ಯ, ಜವಾಬ್ದಾರಿ, ಜತೆಗೆ ಮುಖ್ಯಮಂತ್ರಿಗಳಿಗೆ ಮುಂಚೆಯೇ ಹೇಳಬೇಕಿತ್ತು, ಯಾಕೆ ಹೇಳಿಲ್ಲ ಎಂದು ಪ್ರಶ್ನಿಸಿ, ಇದು ಪೊಲೀಸರ ಮೇಲೆ ಬಂದ ಪ್ರಶ್ನೆಯಾಗಿದೆ. ಇದರ ಬಗ್ಗೆ ಸಿಐಡಿ, ಸಿಒಡಿ ಇನಿಖೆ ನಡೆಸಿದ ನಂತರ ಭೀಕರ ಕಾಲ್ತುಣಿತ ಪ್ರಕರಣದ ಬಗ್ಗೆ ಸತ್ಯಾಂಶ ತಿಳಿಯಲಿದೆ ಎಂದರು.
ನಿವೃತ್ತ ನಿಲಯಪಾಲಕ ಮಹೇಶ್‌ಗೆ ಬೀಳ್ಕೊಡುಗೆ
ಇಂದಿರಾ ಗಾಂಧಿ ವಸತಿ ಶಾಲೆಯ ನಿಲಯಪಾಲಕ ಮಹೇಶ್ ವಯೋ ನಿವೃತ್ತಿ ಹಿನ್ನೆಲೆಯಲ್ಲಿ ಬೀಳ್ಕೊಡುಗೆ ಕಾರ್ಯಕ್ರಮ ಜರುಗಿತು. ಸಿ. ವಿ. ಮಂಜಪ್ಪ ಸಮುದಾಯ ಭವನದಲ್ಲಿ ನಡೆದ ಸಮಾರಂಭದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ಕುಸುಮಬಾಲಕೃಷ್ಣ ಮಾತನಾಡಿ, ಮಹೇಶ್‌ರವರ ನಿವೃತ್ತಿ ಜೀವನ ಸುಖಕರವಾಗಿರಲಿ, ಅವರ ಸೇವೆ ತಾಲೂಕಿಗೆ ಅನನ್ಯ, ವಸತಿ ಶಾಲೆಗಳಲ್ಲಿ ಹೆಚ್ಚು ಪ್ರಚಲಿತದಲ್ಲಿದ್ದ ಮಹೇಶ್‌ರವರು ತಮ್ಮ ಅಧಿಕಾರ ಅವಧಿಯಲ್ಲಿ ಯಾವುದೇ ಕಪ್ಪು ಚುಕ್ಕೆ ಬರದ ರೀತಿಯಲ್ಲಿ ಕೆಲಸ ನಿರ್ವಹಿಸಿದ್ದು ಮಕ್ಕಳು ಹಾಗೂ ಸಿಬ್ಬಂದಿಯ ಜೊತೆ ಉತ್ತಮ ಒಡನಾಟ ಹೊಂದಿದ್ದರು ಎಂದರು.
ಸಾವಯವ ಕೃಷಿಯಿಂದ ಮಣ್ಣಿನ ಜೀವಸತ್ವ ಉಳಿಸಲು ಸಾಧ್ಯ
ಬದಲಾದ ಜೀವನಶೈಲಿ ಮಾನವ ದೇಹದ ಮೇಲೆ ಪ್ರತಿಕೂಲ ಪರಿಣಾಮ ಉಂಟು ಮಾಡಲಿವೆ ಎಂಬವುದಕ್ಕೆ ಸಾಕ್ಷಿ ಇತ್ತೀಚಿನದಲ್ಲಿ ಜನರು ಆಸ್ಪತ್ರೆಗೆ ಅಲೆಯುತ್ತಾ ಹಣ ವ್ಯಯ ಮಾಡುತ್ತಿದ್ದಾರೆ. ರಾಗಿ ಉತ್ತಮ ಆಹಾರ, ಆದರೆ ರಾಗಿ ಬೆಳೆ ದಿನಕಳೆದಂತೆ ಇಳಿಮುಖವಾಗುತ್ತಿದೆ. ಬಿಳಿ ಅಕ್ಕಿ ಆರೋಗ್ಯಕ್ಕೆ ಹಾನಿ ಎಂದು ತಿಳಿದರೂ ಜನರು ಮಾತ್ರ ಬಾಯಿರುಚಿಗೆ ಮಾರು ಹೋಗುತ್ತಿದ್ದಾರೆ. ಕೃಷಿಕರು ಮಣ್ಣಿನ ಜೀವಸತ್ವ ಉಳಿಸಲು ಸಾವಯವ ಕೃಷಿ ಕಡೆ ಹೆಚ್ಚಿನ ಗಮನ ನೀಡಬೇಕು ಎಂದು ಹಾಸನ ಆಕಾಶವಾಣಿ ಮುಖ್ಯಸ್ಥ ಡಾ.ವಿಜಯ ಅಂಗಡಿ ಹೇಳಿದರು.
ಪೌರಕಾರ್ಮಿಕರಿದ್ದರೆ ನಗರ ಸ್ವಚ್ಛತೆ
ನಗರವನ್ನು ಮತ್ತು ಪಟ್ಟಣವನ್ನು ಅತಿ ಸ್ವಚ್ಛತೆಯಿಂದ ಸ್ವಚ್ಛಗೊಳಿಸಲು ಪೌರಕಾರ್ಮಿಕರ ಶ್ರಮ ಬಹುಮಖ್ಯವಾಗಿದೆ. ನಾಗರಿಕತೆ ತಿಳಿದಿರುವವರೇ ತಪ್ಪು ಮಾಡಿ ಬೀದಿ ಮತ್ತು ಎಲ್ಲೆಂದರಲ್ಲಿ ಅಲ್ಲಿ ಕಸ ಬಿಸಾಡುತ್ತಾರೆ. ಅದನ್ನು ಸ್ವಚ್ಛಗೊಳಿಸಿ ಪ್ರತಿಯೊಬ್ಬ ಮನುಷ್ಯನ ಆರೋಗ್ಯ ಮತ್ತು ಪರಿಸರವನ್ನು ಕಾಪಾಡುವಲ್ಲಿ ಪೌರಕಾರ್ಮಿಕರ ಪಾತ್ರ ಬಹುಮುಖ್ಯವಾಗಿದೆ. ಇಂಥವರೊಂದಿಗೆ ನನ್ನ ಹುಟ್ಟುಹಬ್ಬವನ್ನು ಪ್ರತಿವರ್ಷ ನನ್ನ ಸ್ನೇಹಿತರು ಆಚರಿಸುವರು. ನನ್ನ ಸ್ನೇಹಿತರು ಮತ್ತು ನನ್ನ ಸಹೋದ್ಯೋಗಿಗಳು ಹುಟ್ಟುಹಬ್ಬವನ್ನು ಪೌರಕಾರ್ಮಿಕರೊಂದಿಗೆ ಮತ್ತು ಇನ್ನಿತರೆ ಸಮಾಜ ಸೇವೆಗಳೊಂದಿಗೆ ಆಚರಿಸಲು ಮುಂದಾಗಿದ್ದಾರೆ ಎಂದು ಪುರಸಭಾ ಮಾಜಿ ಸದಸ್ಯ ಸಿ. ಎನ್. ಶಶಿಧರ್‌ ತಿಳಿಸಿದ್ದಾರೆ.
ಅನೈತಿಕ ಸಂಬಂಧಕ್ಕೆ ಅಡ್ಡಿ ಎಂದು ಕುಟುಂಬಕ್ಕೆ ವಿಷ ಕೊಟ್ಟ ಸೊಸೆ
ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡ ಮತ್ತು ಆತನ ಕುಟುಂಬವನ್ನ ಮುಗಿಸಲು ಪತ್ನಿಯೊಬ್ಬಳು ಖತರ್ನಾಕ್​​ ಪ್ಲಾನ್​ ರೂಪಿಸಿದ್ದು, ಇಡೀ ಕುಟುಂಬಕ್ಕೆ ವಿಷದ ಮಾತ್ರೆ ಹಾಕಿ, ಇದೀಗ ಸಿಕ್ಕಿಬಿದ್ದಿದ್ದಾಳೆ. ಘಟನೆ ಸಂಬಂಧ ಪೊಲೀಸರು ಆರೋಪಿ ಮಹಿಳೆಯನ್ನು ಬಂಧಿಸಿದ್ದು. ತನಿಖೆ ವೇಳೆ ಊಟಕ್ಕೆ ವಿಷ ಹಾಕಿರುವುದು ಬೆಳಕಿಗೆ ಬಂದಿದೆ. ಈ ವಿಷಯ ಮನೆಯವರಿಗೆ ತಿಳಿದರೆ ತೊಂದರೆಯಾಗುತ್ತದೆ ಎಂದು ಯೋಚಿಸಿದ್ದ ಚೈತ್ರ ತನ್ನ ಕುಟುಂಬದವರನ್ನು ಕೊನೆಗಾಣಿಸಲು ಪ್ಲಾನ್​ ರೂಪಿಸಿದ್ದಳು. ಪತಿ ಗಜೇಂದ್ರ, ಅತ್ತೆ-ಮಾವ ಅಷ್ಟೇ ಅಲ್ಲದೇ ಇಬ್ಬರು ಹೆತ್ತ ಮಕ್ಕಳಿಗೆ ಆಹಾರದಲ್ಲಿ ಮತ್ತಿನ ಮಾತ್ರೆ ಬೆರೆಸಿ ನಿಧಾನವಾಗಿ ವಿಷ ದೇಹ ಪ್ರವೇಶಿಸುವ ಯೋಜನೆ ರೂಪಿಸಿದ್ದಳು.​
  • < previous
  • 1
  • ...
  • 110
  • 111
  • 112
  • 113
  • 114
  • 115
  • 116
  • 117
  • 118
  • ...
  • 550
  • next >
Top Stories
ಸಿಎಂ ಕುರ್ಚಿಗಾಗಿ ಬಡಿದಾಟ : ನಿಖಿಲ್‌ ಕುಮಾರಸ್ವಾಮಿ
ಬೆಂಗ್ಳೂರನ್ನು ‘ಸ್ಕಿಲ್‌’ ರಾಜಧಾನಿ ಮಾಡ್ತೀವಿ : ಸಿಎಂ ಸಿದ್ದರಾಮಯ್ಯ
‘ಶಕ್ತಿ’ ಸ್ಕೀಂನಿಂದ ವಾಯುಮಾಲಿನ್ಯ ತಗ್ಗಿದೆ : ನರೇಂದ್ರಸ್ವಾಮಿ
ಕೊಲೆ ಕೇಸ್‌ ಸಾಬೀತಾದ್ರೆ ದರ್ಶನ್‌ಗೇನು ಶಿಕ್ಷೆ? ಮರಣದಂಡನೆ, ಜೀವಾವಧಿಗೂ ಅವಕಾಶವಿದೆ
ಬೆಳಗಾವಿಯ ಹಲವು ತಾಲೂಕುಗಳಲ್ಲಿ ಬೀದಿಗಿಳಿದ ರೈತರು : ಹೋರಾಟ ತೀವ್ರ ಸ್ವರೂಪ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved