ಮಹಿಳೆಯರ ಸಿಂದೂರ ಅಳಿಸಲು ಬಂದರೆ ಬಿಡುವುದಿಲ್ಲತಿರಂಗಾ ಯಾತ್ರೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಸಿಮೆಂಟ್ ಮಂಜು ಭಾರತವು ಸನಾತನ ಹಿಂದೂ ರಾಷ್ಟ್ರವಾಗಿದ್ದು, 140 ಕೋಟಿ ಜನಸಂಖ್ಯೆಯನ್ನು ಹೊಂದಿರುವ, ಭಾರತ ಇಂದು ಬಲಿಷ್ಠ ರಾಷ್ಟ್ರವಾಗಿದ್ದು, ಭಾರತವು ಇದುವರೆಗೂ ಯಾವ ದೇಶದ ಮೇಲು ದಂಡೆತ್ತಿ ಯುದ್ಧಕ್ಕೆ ಹೋದ ಉದಾಹರಣೆಗಳಿಲ್ಲ. ಆದರೆ ಶತ್ರು ರಾಷ್ಟ್ರ ಪಾಕಿಸ್ತಾನ ಇಂದು ನಮ್ಮ ಭಾರತೀಯ ಮಹಿಳೆಯರ ಸಿಂದೂರವನ್ನು ಅಳಿಸಲು ಬಂದರೆ ಬಿಡುವುದಿಲ್ಲ ಎಂಬ ಪ್ರತ್ಯುತ್ತರವನ್ನು,ನಮ್ಮ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ನಮ್ಮ ದೇಶದ ಹೆಮ್ಮೆಯ ಸೈನಿಕರು, ಆಪರೇಷನ್ ಸಿಂದೂರದ ಮೂಲಕ ತಕ್ಕ ಉತ್ತರವನ್ನು ಕೊಟ್ಟು ನಮ್ಮರಾಷ್ಟ್ರ ಎಂಬುದನ್ನು ನಿರೂಪಿಸಿದೆ ಎಂದರು.