ಸಿದ್ದರಾಮಯ್ಯ ಮುಸ್ಲಿಮರ ಗುರು ಇದ್ದಂತೆವಿಜಯಪುರ ನಮ್ಮ ಜೊತೆಗೆ ನಿಮಗೆ ಇರೋಕಾಗದಿದ್ರೆ ಅಂತವರೆಲ್ಲ ಪಾಕಿಸ್ತಾನಕ್ಕೆ ಹೋಗಲಿ. ಸಿದ್ದರಾಮಯ್ಯ ಮುಸ್ಲಿಮರ ಗುರು ಇದ್ದಂತೆ, ಸಿದ್ದರಾಮಯ್ಯ ಮುಸ್ಲಿಮರಿಗೆ ₹10 ಸಾವಿರ ಕೋಟಿ ಕೊಡ್ತೀನಿ ಅಂದ್ರು, ಯಾಕಪ್ಪ ಕೊಡ್ತೀರಿ, ಮಸೀದಿಗಳಲ್ಲಿ ಅನ್ನ ದಾಸೋಹ ನೋಡಿದ್ದೀರಾ? ಮಂದಿರ, ಮಠಗಳಲ್ಲಿ ಮಾತ್ರ ದಾಸೋಹ ನಡೆಯುತ್ತೆ ಎಂದು ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಆಕ್ರೋಶ ವ್ಯಕ್ತಪಡಿಸಿದರು. ನಗರದ ಶಿವಾಜಿ ವೃತ್ತದಲ್ಲಿ ನಡೆದ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಯತ್ನಾಳ ಮಾತನಾಡಿದರು.