ನೂತನ ಬಡಾವಣೆಗಳ ನಿರ್ಮಾಣಕ್ಕೆ ಜನರ ಸಹಕಾರ ಬೇಕುಪೂರ್ಣ ಪ್ರಮಾಣದಲ್ಲಿ ಮನೆಗಳು ನಿರ್ಮಾಣವಾದ ನಂತರ ಇನ್ನಷ್ಟು ಸೌಲಭ್ಯ ದೊರೆಯುತ್ತವೆ. ಕುಡಿಯುವ ನೀರಿನ ವ್ಯವಸ್ಥೆಯು ಶೀಘ್ರದಲ್ಲಿಯೇ ಆಗಲಿದೆ. ಮನೆಗಳ ನಡುವೆಯೇ ಇರುವ ಸ್ಮಶಾನವನ್ನು ತೆರವುಗೊಳಿಸಿ ಅಲ್ಲಿ ಉದ್ಯಾನವನ ನಿರ್ಮಾಣ ಮಾಡುವ ಚಿಂತನೆ ಇದೆ. ಇದರಿಂದ ನಾಗರಿಕರಿಗೂ ಅನುಕೂಲವಾಗಲಿದೆ. ಪುರಸಭೆ ತೆರಿಗೆ ಅನುದಾನದಲ್ಲಿ ಪ್ರತಿವರ್ಷ ಸುಮಾರು ಏಳು ಕೋಟಿ ರು. ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದರು. ಹೊಸ ಬಡಾವಣೆಗಳ ನಾಗರಿಕರು ಅಲ್ಲಿನ ಅಭಿವೃದ್ಧಿಗೆ ಪುರಸಭೆಯೊಂದಿಗೆ ಸಹಕರಿಸಬೇಕು ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.