ಮಂಡ್ಯ: ಹೈಟೆಕ್ ಶೌಚಾಲಯ ದಿಢೀರ್ ಓಪನ್..!ಒಂದು ವರ್ಷದ ಹಿಂದೆ ನಿರ್ಮಾಣಗೊಂಡಿದ್ದ ಸಾರ್ವಜನಿಕ ಶೌಚಾಲಯ ಸುಣ್ಣ- ಬಣ್ಣ ಕಾಣದೆ ಬೀಗ ಹಾಕಿದ ಸ್ಥಿತಿಯಲ್ಲಿತ್ತು. ಇದೇ ವೇಳೆಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುವ ವೇಳೆ ಈ ಶೌಚಾಲಯಕ್ಕೂ ಸುಣ್ಣ-ಬಣ್ಣ ಬಳಿಯಲಾಯಿತು. ಸಮ್ಮೇಳನದ ವೇಳೆಗೂ ಶೌಚಾಲಯ ಸಾರ್ವಜನಿಕರಿಗೆ ಮುಕ್ತವಾಗಲೇ ಇಲ್ಲ. ಅದಕ್ಕೆ ನಗರಸಭೆ ಅಧಿಕಾರಿಗಳು, ಜನಪ್ರತಿನಿಧಿಗಳೂ ಸಮರ್ಪಕ ಉತ್ತರ ನೀಡಲಿಲ್ಲ.