ರಾಘವೇಶ್ವರ ಶ್ರೀಗಳ ಸುವರ್ಣ ಪಾದುಕೆಗೆ ಅದ್ಧೂರಿ ಸ್ವಾಗತಕನ್ನಡಪ್ರಭ ವಾರ್ತೆ ಭಟ್ಕಳತಾಲೂಕಿಗೆ ಆಗಮಿಸಿ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರ ಸುವರ್ಣ ಪಾದುಕೆ ಸಂಚಾರಕ್ಕೆ ಭಕ್ತರು ಅದ್ಧೂರಿ ಸ್ವಾಗತ ನೀಡಿ ಬರಮಾಡಿಕೊಂಡರು.ಮಂಗಳವಾರ ಸಂಜೆ ಶ್ರೀ ಕ್ಷೇತ್ರ ದೇವಿಮನೆಗೆ ಆಗಮಿಸಿದ ಸುವರ್ಣ ಪಾದುಕೆಗೆ ದೇವಿಮನೆ ಮೊಕ್ತೇಸರ ಉಮೇಶ ಹೆಗಡೆ ದಂಪತಿ ಪೂಜೆ ಸಲ್ಲಿಸಿದರು.ಈ ಸಂದರ್ಭದಲ್ಲಿ ಭವತಾರಿಣಿ ಸೀಮಾ ವಲಯದ ಅಧ್ಯಕ್ಷ ವಿನಾಯಕ ಭಟ್ಟ ತೆಕ್ನಗದ್ದೆ, ದೇವಿಮನೆ ಅರ್ಚಕ ಬಾಲಚಂದ್ರ ಭಟ್ಟ,ದೇವಿಮನೆ ಅಧ್ಯಕ್ಷ ಶಿವಾನಂದ ಹೆಬ್ಬಾರ ಮುಲ್ಲೆಮಕ್ಕಿ, ವೆ ಮೂ ಗುರು ಉಪಾಧ್ಯಾಯ ಮುಂತಾದವರಿದ್ದರು.