2018ರ ವಿಧಾನಸಭಾ ಚುನಾವಣೆ ನಂತರ ಎರಡು ಬಣಗಳಾಗಿ ರೂಪುಗೊಂಡು ಪ್ರತ್ಯೇಕ ಚಟುವಟಿಕೆ ನಡೆಸುತ್ತಿದ್ದ ಇಲ್ಲಿಯ ಕಾಂಗ್ರೆಸ್ಸಿನ ಎರಡೂ ಬಣಗಳು ಇದೀಗ ಲೋಕಸಭಾ ಚುನಾವಣೆ ವೇಳೆ ಗುರುವಾರ ತಾಲೂಕಿನ ತೆಲಿಗಿ, ಹಲುವಾಗಲು ಮುಂತಾದೆಡೆ ನಡೆದ ಪ್ರಚಾರ ಸಭೆಯಲ್ಲಿ ಒಂದೇ ವೇದಿಕೆ ಹಂಚಿಕೊಂಡು ಒಗ್ಗಟ್ಟಿನ ಮಂತ್ರ ಜಪಿಸಿದರು.