ಕೋಹಿನೂರ್ ವಜ್ರದ ತವರಿಗೆ ಅಕ್ರಮ ಮರಳು ಗಣಿಗಾರಿಕೆ ಕುತ್ತು!ಕೃಷ್ಣಾ ನದಿಯೊಡಲಲ್ಲೇ ಜೆಸಿಬಿಗಳ ಅರ್ಭಟ ಶುರುವಾಗಿದೆ. ಸರ್ಕಾರದ ಟೆಂಡರ್ ಇಲ್ಲದಿದ್ದರೂ, ಬೇರೆಡೆಯ ಪರ್ಮಿಟ್ ಟೋರಿಸಿ, ಇಲ್ಲಿನ ಟೊಣ್ಣೂರು ಭಾಗದಲ್ಲಿ ಅವ್ಯಾಹತವಾಗಿ ಅಕ್ರಮ ಮರಳು ದಂಧೆ ನಡೆದಿದೆ. ಇದಕ್ಕೆಂದೇ ನದಿಗುಂಟ ಸಾಗಲು ಸುಮಾರು 35 ಲಕ್ಷ ರು.ಗಳ ವೆಚ್ಚದಲ್ಲಿ ಮಣ್ಣಿನ ರಸ್ತೆ ನಿರ್ಮಾಣ ಮಾಡಲಾಗಿದೆ.