ಅವನತಿಯತ್ತ ಮಂಜರಾಬಾದ್ ತಾಲೂಕು ಕಚೇರಿ ಕಟ್ಟಡ
Jun 21 2025, 12:49 AM ISTಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ಹಳೆ ತಾಲೂಕು ಕಚೇರಿ ಕಟ್ಟಡದ ಮರಮುಟ್ಟುಗಳು ಪ್ರಕೃತಿಯ ಹೊಡೆತಕ್ಕೆ ಸಿಲುಕಿ ನಾಶವಾಗುತ್ತಿವೆ. ಹರಾಜು ವೇಳೆ ವ್ಯಕ್ತಿಯೊಬ್ಬರು ಮೂರು ಲಕ್ಷ ರು. ಗಳಿಗೆ ಈ ಮರಮುಟ್ಟುಗಳನ್ನು ಹರಾಜು ಕೂಗಿದ್ದರು. ಆದರೆ, ಮತ್ತಷ್ಟು ಹೆಚ್ಚಿನ ದರಕ್ಕೆ ಮರಮುಟ್ಟುಗಳು ಹರಾಜಾಗಲಿದೆ ಎಂದು ಅಂದಿನ ಕಂದಾಯ ಇಲಾಖೆ ಅಧಿಕಾರಿಗಳು ಈ ಹರಾಜನ್ನು ರದ್ದುಗೊಳಿಸಿದರು. ಆದರೆ, ಮತ್ತೊಮ್ಮೆ ಮರಮುಟ್ಟುಗಳನ್ನು ಹರಾಜು ನಡೆಸಲು ಇಚ್ಛಾಶಕ್ತಿ ತೊರದ ಅಧಿಕಾರಿಗಳು ನೆಲಂತಸ್ತಿಗೆ ಮತ್ತೆ ಈ ಮರಮುಟ್ಟುಗಳನ್ನು ಸಾಗಿಸಲು ನಿರ್ಲಕ್ಷ್ಯ ವಹಿಸಿದರು. ಪರಿಣಾಮ ಅಂದಿನಿಂದ ಬಿಸಿಲು, ಮಳೆಯಲ್ಲಿ ಈ ಮರಮುಟ್ಟುಗಳು ನೆನೆದು ಒಣಗಿ ಹಾಳಾಗುತ್ತಿದ್ದು ಸದ್ಯದ ಮಳೆಗೆ ಕೊಳೆತು ಹೋಗುತ್ತಿವೆ.