ಮಾನವನ ಸಂರ್ವಾಂಗೀಣ ವಿಕಾಸ ಧರ್ಮದ ತಳಹದಿ: ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ
Aug 13 2025, 02:31 AM ISTಧರ್ಮವೆಂಬುದು ಮಾನವ ಹಿತ ಹಾಗೂ ಮಾನವೀಯತೆ, ಜೀವಕಾರುಣ್ಯದಿಂದ ತುಂಬಿದೆ. ಸಕಲ ಜೀವಾತ್ಮರಿಗೆ ಲೇಸ ಬಯಸುವ ಮನಸ್ಸು ಮಹಾಮಾನವತಾ ವಾದ ಆಗುತ್ತದೆ. ಮಾನವರ ನಡುವೆ ಸಾಮಾರಸ್ಯವಿರಬೇಕು. ಧರ್ಮಗಳ ಮಧ್ಯೆ ತಾತ್ವಿಕ ಸಂಘರ್ಷವಿರಬೇಕೇ ಹೊರತು ಯುದ್ಧೋನ್ಮಾದ, ಸಂಘರ್ಷ ಇರಬಾರದು. ಮಾನವ ಸರ್ವಾಂಗೀಣ ವಿಕಾಸವಾದ ಇರಬೇಕು. ಮಾನವನ ವಿನಾಶವಾದ ಇರಬಾರದು ಎಂದು ಭೋವಿ ಗುರುಪೀಠದ ಜಗದ್ಗುರು ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ತಿಳಿಸಿದರು.