• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಶೃಂಗೇರಿ: ಮಳೆ ತಗ್ಗಿದರೂ ನಿಲ್ಲದ ಗಾಳಿ ಆರ್ಭಟ,

Jul 28 2024, 02:06 AM IST
ಶೃಂಗೇರಿ, ತಾಲೂಕಿನಾದ್ಯಂತ ಶುಕ್ರವಾರ ಅಬ್ಬರಿಸಿದ ಪುಷ್ಯ ಮಳೆಯಿಂದಾಗಿ ರಾತ್ರಿ ತುಂಗಾ ನದಿಯಲ್ಲಿ ಪ್ರವಾಹ ಉಂಟಾಗಿ ಗಾಂಧಿ ಮೈದಾನ ಸಂಪೂರ್ಣ ಜಲಾವೃತಗೊಂಡಿತ್ತು. ಮಂಗಳೂರು ಶೃಂಗೇರಿ ರಾಷ್ಟ್ರೀಯ ಹೆದ್ದಾರಿ 169 ರ ನೆಮ್ಮಾರು ಕುರಾದಮನೆ ಬಳಿ ತುಂಗಾ ನದಿ ಪ್ರವಾಹ ರಸ್ತೆಯ ಮೇಲೆ ಹರಿದು ಸಂಪರ್ಕ ಕಡಿತಗೊಂಡಿತ್ತು. ನೆಮ್ಮಾರು ಹೊಳೆಹದ್ದು ಸಂಪರ್ಕ ಕಲ್ಪಿಸುವ ತೂಗು ಸೇತುವೆ ಅರ್ಧ ಮುಳುಗಡೆಯಾದರೆ, ಮಾಣಿ ಬೈಲು ಕಿಗ್ಗಾ ಸಿರಿಮನೆ ಸಂಪರ್ಕ ರಸ್ತೆ ಕಡಿತಗೊಂಡು ಬೆಳಿಗ್ಗೆ ಪ್ರವಾಹ ಇಳಿಮುಖವಾಗಿ ಸಂಚಾರ ಪುನರ್ ಆರಂಭಗೊಂಡಿತು.

ಹಾಸನದಲ್ಲಿ ಮಳೆ ನಿಂತು ಎಲ್ಲೆಲ್ಲೂ ಬಿಸಿಲು

Jul 28 2024, 02:03 AM IST
ಜೂನ್ ತಿಂಗಳಿನಿಂದ ಜುಲೈ ತಿಂಗಳ ಕೊನೆವಾರದವರೆಗೂ ಹೆಚ್ಚಿನ ಮಳೆ ಹಗಲು ರಾತ್ರಿ ಸುರಿದಿದ್ದರಿಂದ ಬಹುತೇಕ ಕೆರೆಕಟ್ಟೆಗಳು ತುಂಬಿ ಹೋಗಿ ಒಂದು ಕಡೆ ಸಂತೋಷವಾದರೇ ಇನ್ನೊಂದು ಕಡೆ ಶಾಲಾ-ಕಾಲೇಜು ಮಕ್ಕಳಿಗೆ, ಸಣ್ಣ ಸಣ್ಣ ವ್ಯಾಪಾರಸ್ಥರಿಗೆ ಹಾಗೂ ಕೆಲಸಕ್ಕೆ ಹೋಗುವ ಕಾರ್ಮಿಕರಿಗೆ ಸಮಸ್ಯೆ ಆಗಿತ್ತು.ಕಳೆದ ಒಂದೂವರೆ ತಿಂಗಳಿನಿಂದಲೂ ಸತತವಾಗಿ ಬಾರಿ ಮಳೆ ಬಂದು ತತ್ತರಿಸಿ ಹೋಗಿದ್ದ ಜನತೆಗೆ ಶನಿವಾರ ಸೂರ್ಯನ ಆಗಮನದಿಂದ ಸಲ್ಪ ನಿಟ್ಟುಸಿರು ಬಿಟ್ಟಿದ್ದು, ಎಂದಿನಂತೆ ಜನತೆ ತಮ್ಮ ದಿನನಿತ್ಯದ ಚಟುವಟಿಕೆಯಲ್ಲಿ ತೊಡಗಿದ್ದರು.

ಉಡುಪಿ ಜಿಲ್ಲೆ: ಮಳೆ ಕ್ಷೀಣ, ಗಾಳಿಗೆ 67 ಮನೆ, 12 ಕೊಟ್ಟಿಗೆಗೆ ಹಾನಿ

Jul 28 2024, 02:02 AM IST
ಶುಕ್ರವಾರ ಹಗಲು ಮತ್ತು ರಾತ್ರಿ ಗಾಳಿ ಮಳ‍ೆಗೆ ಜಿಲ್ಲೆಯಲ್ಲಿ ಮತ್ತೆ 67 ಮನೆ ಮತ್ತು 12 ಜಾನುವಾರು ಕೊಟ್ಟಿಗೆಗಳಿಗೆ ಲಕ್ಷಾಂತರ ರು. ಹಾನಿಯಾಗಿದೆ. 9 ಕೃಷಿಕರ ತೋಟಗಳಿಗೂ ಹಾನಿಯಾಗಿದೆ. ಬ್ರಹ್ಮಾವರ ತಾಲೂಕಿನಲ್ಲಿ ಗಾಳಿಮಳೆಯ ಆರ್ಭಟ ಜೋರಾಗಿದ್ದು, ಇಲ್ಲಿನ 29 ಮನೆಗಳಿಗೆ ಹಾನಿಯಾಗಿ ಒಟ್ಟು 6.37 ಲಕ್ಷ ರು.ಗಳಷ್ಟು ನಷ್ಟವಾಗಿದೆ.

ಕೊಡಗಿನಲ್ಲಿ ಮಳೆ ಇಳಿಮುಖ: ಭಾರಿ ಗಾಳಿಗೆ ಬಿದ್ದ ಮರಗಳು

Jul 28 2024, 02:01 AM IST
ಕೊಡಗು ಜಿಲ್ಲೆಯಲ್ಲಿ ಶನಿವಾರ ಮಳೆ ಪ್ರಮಾಣ ಇಳಿಮುಖವಾಗಿದೆ. ಭಾರಿ ಗಾಳಿಯಿಂದಾಗಿ ಹಲವು ಮರಗಳು ಧರೆಗುಳಿದಿದೆ.

ಮಳೆ ಅವಾಂತರ: ಶಿವಮೊಗ್ಗದಲ್ಲಿ ಪ್ರವಾಹ ಭೀತಿ

Jul 28 2024, 02:01 AM IST
ತುಂಗಾ ಜಲಾಶಯದಿಂದ 80 ಸಾವಿರ ಕ್ಯುಸೆಕ್‌ ನೀರು ನದಿಗೆ ಹರಿಸಿದರೆ ನದಿಪಾತ್ರದಲ್ಲಿ ಪ್ರವಾಹದ ಸ್ಥಿತಿ ತಲೆದೋರಿದೆ.

ಲಿಂಗದಹಳ್ಳಿಯಾದ್ಯಂತ ಮಳೆ: ರೈತರಿಗೆ ಗಾಯದ ಮೇಲೆ ಬರೆ

Jul 27 2024, 12:55 AM IST
ತರೀಕೆರೆ, ಲಿಂಗದಹಳ್ಳಿ ಹೋಬಳಿಯಾದ್ಯಂತ ಬಿಟ್ಟು ಬಿಡದೇ ಸುರಿಯುತ್ತಿರುವ ಗಾಳಿ ಮಳೆಯಿಂದ ಈ ಭಾಗದಲ್ಲಿ ರೈತರು ಬೆಳೆದಿರುವ ಆಲೂಗಡ್ಡೆ, ಬಟಾಣಿ, ಜೋಳ, ಶೇಂಗಾ ಸೇರಿದಂತೆ ಅಲ್ಪಕಾಲದ ಬೆಳೆಗಳೆಲ್ಲವೂ ಕೊಳೆಯುವ ಹಂತದಲ್ಲಿದ್ದು, ಧೀರ್ಘಕಾಲದ ತೋಟದ ಬೆಳೆಗಳಾದ ಅಡಕೆ, ಕಾಫಿ, ಕಾಳು ಮೆಣಸು ಮುಂತಾದ ಬೆಳೆಗಳಿಗೂ ಕಂಟಕವಾಗಿದೆ.

ಭಾರಿ ಮಳೆ ಹಿನ್ನೆಲೆ ಪ್ರವಾಹ ಭೀತಿಯಲ್ಲಿ ಕೊಳ್ಳೇಗಾಲದ ನದಿ ಪಾತ್ರದ ಗ್ರಾಮಗಳು

Jul 27 2024, 12:53 AM IST
ಕಾವೇರಿ ಜಲಾನಯನ ಪ್ರದೇಶಗಳಲ್ಲಿ ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಾವೇರಿ ನದಿ ಉಕ್ಕಿ ಹರಿಯುತ್ತಿರುವುದರಿಂದ ಕೊಳ್ಳೇಗಾಲ ತಾಲೂಕಿನ ನದಿ ತೀರದ ಗ್ರಾಮಗಳು ಪ್ರವಾಹದ ಭೀತಿ ಎದುರಿಸುವಂತಾಗಿದೆ.

ತರೀಕೆರೆಯಲ್ಲಿ ಧಾರಾಕಾರ ಮಳೆ: 5 ಮನೆಗಳಿಗೆ ಹಾನಿ

Jul 27 2024, 12:51 AM IST
ತರೀಕೆರೆ, ಪಟ್ಟಣ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆ ಮತ್ತು ಗಾಳಿ ಇಂದು ಕೂಡ ಮುಂದುವರಿದ ಪರಿಣಾಮ ತಾಲೂಕಿನಲ್ಲಿ ಹಲವೆಡೆ ಮನೆಗಳಿಗೆ ಹಾನಿ, ತಂತಿ ಮೇಲೆ ಮರ ಬಿದ್ದು ವಿದ್ಯುತ್ ಕಂಬಗಳು ಮುರಿದು ಬಿದ್ದಿದೆ.

ಭಾರೀ ಮಳೆ ಮೈದುಂಬಿ ಉಕ್ಕಿ ಹರಿಯುತ್ತಿರುವ ಹೇಮಾವತಿ ನದಿ

Jul 27 2024, 12:50 AM IST
ಹಾಸನದ ಗೊರೂರು ಅಣೆಕಟ್ಟೆಯಿಂದ ಸುಮಾರು 70 ಸಾವಿರ ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಜಲಾಶಯದ ಹೊರ ಹರಿವಿನ ಪ್ರಮಣ ಹೆಚ್ಚಳವಾದ ಹಿನ್ನೆಲೆಯಲ್ಲಿ ಹೇಮಾವತಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ನದಿ ದಂಡೆಯ ಕೆಲವು ಜಮೀನುಗಳಿಗೆ ನೀರು ನುಗ್ಗಿದ್ದರೂ ಬೆಳೆ ಹಾನಿ ವರದಿಯಾಗಿಲ್ಲ.

ಶನಿವಾರಸಂತೆ ಹೋಬಳಿಯಲ್ಲಿ ವ್ಯಾಪಕ ಮಳೆ: ಮರ ಉರುಳಿ ಹಾನಿ

Jul 27 2024, 12:50 AM IST
ಶನಿವಾರಸಂತೆ ಹೋಬಳಿ ವ್ಯಾಪ್ತಿಯಲ್ಲಿ ಭಾರಿ ಗಾಳಿ ಸಹಿತ ಮಳೆಯಾಗುತ್ತಿದ್ದು ವ್ಯಾಪಕ ಹಾನಿಯಾಗಿದೆ.ಶುಕ್ರವಾರ ಬೆಳಗ್ಗೆ ಶನಿವಾರಸಂತೆ-ಕುಶಾಲನಗರ ಹೆದ್ದಾರಿಯ ಮಾಲಂಬಿ-ಕಣಿವೆಬಸವನಹಳ್ಳಿ ಗ್ರಾಮದಲ್ಲಿ ಭಾರಿ ಗಾಳಿ ಮಳೆಗೆ ರಸ್ತೆ ಸಮಿಪದ ಬೃಹತ್ ಗಾತ್ರದ ಮರವೊಂದು ಬುಡ ಸಮೇತ ರಸ್ತೆಗೆ ಅಡ್ಡಲಾಗಿ ಬಿದ್ದುಸಂಚಾರಕ್ಕೆ ಅಡ್ಡಿ ಆಯಿತು.
  • < previous
  • 1
  • ...
  • 70
  • 71
  • 72
  • 73
  • 74
  • 75
  • 76
  • 77
  • 78
  • ...
  • 132
  • next >

More Trending News

Top Stories
ಮುಂದೂಡಿಕೆ ಇಲ್ವೇ ಇಲ್ಲ, ನಾಡಿದ್ದಿಂದ್ಲೇ ಜಾತಿ ಗಣತಿ
46 ಜಾತಿ ಜತೆ ಕ್ರಿಶ್ಚಿಯನ್‌ ನಂಟು ಈಗಲೂ ಕಗ್ಗಂಟು
ಮಹಿಳೆಯರು ಬರೆದ ಪುಸ್ತಕ ಬೋಧನೆಗೆ ತಾಲಿಬಾನ್‌ ಬ್ಯಾನ್‌
ಬೆಂಗ್ಳೂರು, ದಿಲ್ಲಿಯಲ್ಲಿ ಐಫೋನ್‌ 17 ಖರೀದಿಗೆ ದುಂಬಾಲು : ಮುಂಬೈನಲ್ಲಿ ಹೊಡೆದಾಟ
ಅಮೆರಿಕ ಪೊಲೀಸರ ಗುಂಡೇಟಿಗೆ ತೆಲಂಗಾಣದ ಟೆಕ್ಕಿ ಬಲಿ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved