ತೊಗರಿ ತಳಮಳ ಮರೆತು ಎಳ್ಳಮವಾಸ್ಯೆ ಸಡಗರದಲ್ಲಿ ರೈತ
Dec 30 2024, 01:00 AM ISTಬೆಳೆಹಾನಿಯಾಗಿ ಆರ್ಥಿಕ ಮುಗ್ಗಟ್ಟಿನಲ್ಲಿದ್ದರೂ ರೈತಾಪಿ ಕುುಟಂಬದವರು ವರುಷದ ಸಡಗರ ಸಂಪ್ರದಾಯದ ಎಳ್ಳಮವಾಸ್ಯೆ ಆಚರಣೆಗೆ ಸ್ವಲ್ಪವೂ ಮುಕ್ಕಾಗದಂತೆ ಸಿದ್ಧತೆ ನಡೆಸುತ್ತಿದ್ದಾರೆ. ಭೂಮಿತಾಯಿ ಹಬ್ಬ ಮಾಡಲೇಬೇಕಲ್ಲ ಎಂದು ರೈತಾಪಿ ಕುಟುಂಬದವರು ರೊಟ್ಟಿ, ಬಜ್ಜಿಪಲ್ಲೆ, ಶಸೇಂಗಾ ಹೋಳಿಗೆ, ಎಣ್ಣಿಗಾಯಿ, ಜೋಳದ ಕಡಬು ಸೇರಿದಂತೆ ತರಹೇವಾರಿ ಪದಾರ್ಥಗಳನ್ನು ಸಿದ್ಧಪಡಿಸಿಕೊಂಡು ಎಳ್ಳಮವಾಸ್ಯೆ ಸಂಭ್ರಮದಲ್ಲಿ ಮಿಂದೇಳಲು ಸಂಭ್ರಮದಲ್ಲಿದ್ದಾರೆ.