ಗುಂಡ್ಲುಪೇಟೆಯಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಶಾಸಕ, ಡೀಸಿ ಚಾಲನೆ

Jan 07 2024, 01:30 AM IST
ಪಟ್ಟಣದ ಪುರಸಭೆ ಆಯೋಜಿಸಿದ್ದ ನಮ್ಮ ನಡೆ ಸ್ವಚ್ಛ ಗುಂಡ್ಲುಪೇಟೆ ಕಡೆ ಎಂಬ ಸ್ವಚ್ಛತಾ ಅಭಿಯಾನಕ್ಕೆ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌, ಜಿಲ್ಲಾಧಿಕಾರಿ ಶಿಲ್ಪಾನಾಗ್‌ ಚಾಲನೆ ನೀಡಿದರು. ಪಟ್ಟಣದ ನೆಹರು ಪಾರ್ಕ್‌ ಆವರಣದಲ್ಲಿ ನಮ್ಮ ನಡೆ ಸ್ವಚ್ಛ ಗುಂಡ್ಲುಪೇಟೆ ಕಡೆ ಅಭಿಯಾನದ ಅಂಗವಾಗಿ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಹಾಗೂ ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಗಿಡ ನೆಡುವ ಮೂಲಕ ಗುಂಡ್ಲುಪೇಟೆ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದರು. ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಮಾತನಾಡಿ, ಪಟ್ಟಣದ ಸ್ವಚ್ಛತೆಯಾಗಿದ್ದರೆ ಪರಿಸರ ಹಾಗೂ ಜನರ ಆರೋಗ್ಯವೂ ಚೆನ್ನಾಗಿ ಇರಲಿದೆ. ಅಶುಚಿತ್ವಕ್ಕೆ ದಾರಿ ಮಾಡಿಕೊಟ್ಟರೆ ರೋಗ, ರುಜಿನಗಳು ಬರಲಿವೆ. ಪಟ್ಟಣದ ಸ್ವಚ್ಛತೆಗೆ ನಾಗರೀಕರು ಪ್ರಥಮ ಆದ್ಯತೆ ನೀಡಬೇಕು ಎಂದರು.

ಹಿಂದಿನ ಸಿಡಿಪಿಓಗೆ ಆದ ಗತಿ ನಿಮಗೂ ಆಗುತ್ತೆ: ಶಾಸಕ ಎಚ್ಚರಿಕೆ

Jan 07 2024, 01:30 AM IST
ಹಿಂದಿನ ಸಿಡಿಪಿಓ ನಾಗೇಶ್ ಅವರಿಗೆ ಬಂದ ಸ್ಥಿತಿ ನಿಮಗೂ ಆಗುತ್ತೆ ಎಂದು ಎಸ್ಸಿ, ಎಸ್ಟಿ ಹಿತರಕ್ಷಣಾ ಸಮಿತಿ ಸಭೆಯಲ್ಲಿ ಎಚ್ಚರಿಸಿದ ಘಟನೆ ಜರುಗಿತು. ಸಭೆಯಲ್ಲಿ ಹೊಸ ಹಂಪಾಪುರ ಲಿಂಗರಾಜು, ಶಂಕನಪುರ ಲಿಂಗರಾಜು , ದಿಲೀಪ್ ಸಿದ್ದಪ್ಪಾಜಿ ಇನ್ನಿತರು ಮಾತನಾಡಿ, ಬಹುತೇಕ ಅಂಗನವಾಡಿ ಕೇಂದ್ರದಲ್ಲಿ ಕಳಪೆ ಆಹಾರ ಪದಾರ್ಥ ಪೂರೈಕೆಯಾಗುತ್ತಿದೆ. ಮೊಟ್ಟೆಗಳನ್ನು ಬೇಯಿಸಿ ನಾಲ್ಕು ಭಾಗ ಮತ್ತು ಎರಡು ಭಾಗ ಮಾಡಿ ಕೆಲವು ಕಡೆಗಳಲ್ಲಿ ನೀಡಲಾಗುತ್ತಿದೆ. ಬಾಣಂತಿಯರಿಗೆ ನೀಡುವ ಆಹಾರದಲ್ಲಿ ಕಳಪೆ, ಹಾಗೂ ಹುಳು ಮಿಶ್ರಿತ ಆಹಾರ ವಿತರಿಸಲಾಗುತ್ತಿದೆ. ಕಾಳುಗಳು ಸಹಾ ಕಳಪೆ ಗುಣಮಟ್ಟದ್ದಾಗಿದೆ. ಆ ಕಾಳುಗಳಿಗೆ ಮಣಿಯನ್ನು ಪೊಣಿಸಬಹುದು. ಅಷ್ಟರ ಮಟ್ಟಿಗೆ ಕಾಳುಗಳು ಕಳಪೆಯಾಗಿದ್ದು, ಅಧಿಕಾರಿಗಳು ಪರಿಶೀಲಿಸಬೇಕು, ಕೆಲವು ಕಡೆ ಹುಳು ಮಿಶ್ರಿತ ಆಹಾರ ಸಹಾ ಪೂರೈಸಲಾಗುತ್ತಿದ್ದು ಗಮನ ಹರಿಸಬೇಕು ಎಂದರು.