ನಾನು ಕೇಂದ್ರದ ಸಚಿವನಾಗಿದ್ದೇನೆ. ಇಡೀ ದೇಶದ ಸಮಸ್ಯೆ ಆಲಿಸಬೇಕು. ಹೀಗಾಗಿ ಕೆಡಿಪಿ ಸಭೆಗೆ ನಾನು ಬರಲಿಲ್ಲ. ಕೆಡಿಪಿ ಸಭೆಗೆ ಬರದಿದ್ದರೂ ಮಾಹಿತಿ ತರಿಸಿಕೊಂಡು ಲೋಪದೋಷಗಳನ್ನು ಸರಿಪಡಿಸಲಿದ್ದೇನೆ. ಚಲುವರಾಯಸ್ವಾಮಿ ಬಂದರೆ ಬರಲಿ ಅಥವಾ ಬಿಡಲಿ. ನಾನು ಮಾತ್ರ ನನ್ನ ಕೆಲಸ ಮಾಡ್ತಿನಿ ಅಷ್ಟೇ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ ಅತ್ಯಾಚಾರ, ಸುಲಿಗೆ, ಕೊಲೆ, ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿವೆ. ಎಲ್ಲಾ ಜೈಲುಗಳು ರೆಸಾರ್ಟ್ ಆಗಿವೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.