ಸ್ವದೇಶಿ ವಸ್ತು ಬಳಿಸಿ ಗುಡಿ ಕೈಗಾರಿಕೆ ಉಳಿಸಿ: ರಾಚಪ್ಪ ಸರಡಗಿ
Jan 29 2024, 01:32 AM ISTಅಮೀನಗಡ: ಸ್ವದೇಶಿ ವಸ್ತಗಳ ಖರೀದಿ, ಗುಡಿ ಕೈಗಾರಿಕೆಗಳಿಗೆ ಹೆಚ್ಚು ಒತ್ತು ನೀಡುವ ಮೂಲಕ ಭಾರತ ಸ್ವಾವಲಂಬಿ ರಾಷ್ಟ್ರವಾಗಲು ಸಾಧ್ಯ ಎಂದು ದೊಡ್ಡಣವರ ಮೈನ್ಸ್ ಉಪಾಧ್ಯಕ್ಷ ರಾಚಪ್ಪ ಸರಡಗಿ ಹೇಳಿದರು. ಸಮೀಪದ ದೊಡ್ಡಣವರ್ ಮೈನ್ಸ್ ಕಂಪನಿ ಆವರಣದಲ್ಲಿ 75ನೇ ಗಣರಾಜ್ಯೋತ್ಸವ ಧ್ವಜಾರೋಹಣ ಮಾಡಿ ಮಾತನಾಡಿ, ಭಾರತೀಯರು ಅದರಲ್ಲೂ ಇಂದಿನ ಯುವ ಜನಾಂಗ ಪರದೇಶಿ ವಸ್ತಗಳ ವ್ಯಾಮೋಹ ತೊರೆದು ಸ್ವದೇಶಿ ವಸ್ತುಗಳನ್ನು ಹೆಚ್ಚು ಬಳಸುವುದರಿಂದ ರಾಷ್ಟ್ರದ ಆರ್ಥಿಕ ಪ್ರಗತಿ ಸಾಧ್ಯ ಎಂದರು.