ಮಂಡ್ಯ: ತಮಿಳು ಕಾಲೋನಿ ಸರ್ವೇಗೆ ಬಹುತೇಕರ ಒಪ್ಪಿಗೆ
Nov 18 2024, 12:02 AM ISTಮಂಡ್ಯ ನಗರದ ಚಿಕ್ಕಮಂಡ್ಯ ಸರ್ವೇ ನಂ.೫೦೭ರಲ್ಲಿ ರಾಜೀವ್ ಆವಾಸ್ ಯೋಜನೆಯಡಿ ನಿರ್ಮಿಸಿರುವ ೫೭೬ ಮನೆಗಳಿಗೆ ತಮಿಳು ಕಾಲೋನಿ ಕೊಳಚೆ ಪ್ರದೇಶದ ನಿವಾಸಿಗಳನ್ನು ಸ್ಥಳಾಂತರಿಸುವ ಸಂಬಂಧ ನಡೆಸಲಾದ ಸಭೆಯಲ್ಲಿ ಸರ್ವೇ ಕಾರ್ಯ ಮತ್ತು ಫಲಾನುಭವಿಗಳ ಆಯ್ಕೆಗೆ ಅಡ್ಡಿಪಡಿಸುವುದಿಲ್ಲವೆಂದು ನಿವಾಸಿಗಳ ಪೈಕಿ ಹಲವರು ಹೇಳಿದರೇ, ಕೆಲವರು ಸರ್ವೇ ಕಾರ್ಯಕ್ಕೆ ನಾವು ಅವಕಾಶವನ್ನೇ ನೀಡುವುದಿಲ್ಲವೆಂದು ನೇರವಾಗಿ ಹೇಳಿದರು.