ಆರೋಪ ಹೊತ್ತಿರುವ ತಹಸೀಲ್ದಾರನ್ನು ವರ್ಗಾವಣೆ ಮಾಡಲಿ

Jul 31 2025, 12:45 AM IST
ಹಲವಾರು ಆರೋಪಗಳನ್ನು ಹೊತ್ತಿರುವ ತಹಸೀಲ್ದಾರ್ ಅವರನ್ನು ಕೂಡಲೇ ಬೇರೆಡೆಗೆ ವರ್ಗಾವಣೆ ಮಾಡಬೇಕೆಂದು ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಆರ್‌.ಪಿ.ಐ. ಸತೀಶ್ ಆಗ್ರಹಿಸಿದರು. ಚಿಕ್ಕಮಗಳೂರು ಜಿಲ್ಲಾ ಖಜಾನೆಯಲ್ಲಿ ಎಫ್‌ಡಿಎ ಆಗಿ ನಂತರ ಮುಗಳವಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ನಂತರ ಕೆಎಎಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಉತ್ತರ ಕನ್ನಡ ಜಿಲ್ಲೆ ಶಿರಸಿಯಲ್ಲಿ ತಹಸೀಲ್ದಾರ್ ಆಗಿ ನೇಮಕಗೊಂಡರು. ಹೊಸದರಲ್ಲಿ ಇದೇ ತಾಲೂಕಿನ ಸಿದ್ದಾಪುರ ಗ್ರಾಮದ ಗಣೇಶ್ ಭಟ್ ಎಂಬುವರಿಗೆ ೯೪ಸಿನಲ್ಲಿ ವಜಾ ಆದ ಅರ್ಜಿಗೆ ಹಕ್ಕುಪತ್ರ ನೀಡಿ ಖಾತೆ ಮಾಡಿಕೊಟ್ಟ ಆರೋಪವನ್ನು ಇವರು ಹೊತ್ತುಕೊಂಡವರು ಎಂದು ದೂರಿದರು.