ಜನತೆ ತಲೆತಗ್ಗಿಸುವಂತೆ ಸಿಎಂ ಹೇಳಿಕೆ: ಜನಾರ್ದನ ರೆಡ್ಡಿ
Apr 28 2025, 12:45 AM ISTನೀವು ನಾವು ಶಾಶ್ವತ ಅಲ್ಲ, ಈ ದೇಶ, ನೆಲ, ಜಲ, ಭೂಮಿ ಶಾಶ್ವತ. ಪಾಕಿಸ್ತಾನ ದೇಶದ ಪರ ಹೇಳಿಕೆ ಕೊಡುವುದು ಮೂರ್ಖತನ. ಸಿದ್ದರಾಮಯ್ಯ ಎರಡನೇ ಬಾರಿ ಮುಖ್ಯಮಂತ್ರಿ ಆಗಿದ್ದಾರೆ. ಅಧಿಕಾರ ಶಾಶ್ವತ ಅಲ್ಲ, ಯಾವಾಗ ಇಳಿದು ಹೋಗುತ್ತಾರೋ ಗೊತ್ತಿಲ್ಲ. ವಯಸ್ಸು 76 ಆಗಿದೆ, ಈ ವಯಸ್ಸಲ್ಲಾದರೂ ಭರತ ಭೂಮಿ, ಪುಣ್ಯಭೂಮಿಯ ಪರವಾಗಿ ಮಾತಾಡಿ ಪುಣ್ಯ ಕಟ್ಟಿಕೊಳ್ಳಿ. ನಿಮ್ಮದು ರಾಕ್ಷಸಿ ಮನೋಭಾವ, ಶ್ರೀ ಕೃಷ್ಣನೇ ನಿಮಗೆ ಉತ್ತರ ಕೊಡುತ್ತಾನೆ ಎಂದು ರೆಡ್ಡಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.