ಅಂಬೇಡ್ಕರ 133ನೇ ಜಯಂತಿ ಆಚರಣೆಬಾಗಲಕೋಟೆ: ಹೆಚ್.ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆಯಿಂದ ಭಾರತರತ್ನ, ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರವರ 133 ನೇಯ ಜನ್ಮದಿನ ಆಚರಿಸಲಾಯಿತು. ನವನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಗೌರವ ಸೂಚಿಸಿ, ಜಯಘೋಷ ಹಾಕುವ ಮೂಲಕ ಅಂಬೇಡ್ಕರರವರ ಜಯಂತಿಯನ್ನು ಆಚರಿಸಲಾಯಿತು.