ಬಂಗಾಳ ಕೊಲ್ಲಿಯಲ್ಲಿ ಸುಳಿಗಾಳಿ ಸೃಷ್ಟಿಯಾಗಿರುವ ಕಾರಣ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ 5 ದಿನಗಳ ಕಾಲ ಗಾಳಿ ಸಹಿತ ಭಾರಿ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮೆಜೆಸ್ಟಿಕ್ನಿಂದ ದೇವನಹಳ್ಳಿ ಸಂಪರ್ಕಿಸುವ ಉಪನಗರ ರೈಲಿನ ಮೊದಲ ‘ಸಂಪಿಗೆ’ ಮಾರ್ಗವನ್ನು ಬಳ್ಳಾರಿ ರಸ್ತೆಯ ಏರ್ಪೋರ್ಟ್ ಟ್ರಂಪೆಟ್ ಇಂಟರ್ಚೇಂಜ್ನ ಬದಲಾಗಿ ದೊಡ್ಡಜಾಲದ ಮೂಲಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಿಸಲು ಯೋಜಿಸಿದೆ.
ದೆಹಲಿ ಮೆಟ್ರೋದಂತೆ ‘ನಮ್ಮ ಮೆಟ್ರೋ’ ರೈಲಿನಲ್ಲಿ ಮತ್ತೊಮ್ಮೆ ವಿವಾದ ತಲೆದೂರಿದ್ದು, ಚಲಿಸುತ್ತಿದ್ದ ರೈಲಿನಲ್ಲಿ ಯುವ ಜೋಡಿಯೊಂದು ಎಲ್ಲರೆದುರು ತೋರಿದ ಸಲ್ಲಾಪ ವರ್ತನೆಗೆ ಬಹಳಷ್ಟು ಪ್ರಯಾಣಿಕರು, ನೆಟ್ಟಿಗರು ಕೆಂಗಣ್ಣು ಬೀರಿದ್ದರೆ, ಇನ್ನೊಂದಿಷ್ಟು ಜನ ಸಮರ್ಥಿಸಿಕೊಂಡಿದ್ದಾರೆ.