ರಂಜಾನ್ ಶುಭಾಶಯ ವಿನಿಮಯಶಾಂತಿ ಮತ್ತು ಸೌಹಾರ್ದತೆಯಿಂದ ಆಚರಿಸಿದರು. ತದನಂತರ ಒಬ್ಬರಿಗೊಬ್ಬರು ಆಲಿಂಗನ ಮಾಡಿಕೊಳ್ಳುವ ಮೂಲಕ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡು ದೇಶದಲ್ಲಿ ಶಾಂತಿ, ಸಹಬಾಳ್ವೆ ಮತ್ತು ಸಹೋದರತ್ವವು ನೆಲೆಸಲಿ. ಈ ಬಾರಿ ಉತ್ತಮ ಮಳೆ, ಬೆಳೆಯಾಗಿ ಪ್ರತೀ ಸಮುದಾಯದ ಜನರ ಬದುಕು ಹಸನಾಗಿರಲಿ ಎಂದು ದೇವರಲ್ಲಿ ಮೊರೆಯಿಟ್ಟರು. ದೇಶದ ಏಳ್ಗೆಗೆ ಹಾಗೂ ಎಲ್ಲಾ ಸಮುದಾಯದ ಜನರ ಬದುಕಿಗೆ ನೆಮ್ಮದಿಯನ್ನು ತರಲಿ ಎಂದು ಹರಸಿದರು.