ಆದರ್ಶ ಪುರುಷರ ಆದರ್ಶಗಳನ್ನು ನಾವು ಪಾಲಿಸುತ್ತಿಲ್ಲಎಲ್ಲರೂ ಸಜ್ಜನರ ಸಹವಾಸ ಮಾಡಬೇಕು, ನೀತಿವಂತರಾಗಿರಬೇಕು, ಅನ್ಯಾಯಕ್ಕೆ ಕೈ ಹಾಕಬಾರದು, ಸನ್ಮಾರ್ಗದಲ್ಲಿ ನಡೆಯಬೇಕು. ಇದನ್ನೇ ಭಗವಾನ್ ಬುದ್ಧ, ಕನಕದಾಸರು, ವಿವೇಕಾನಂದರು, ಗಾಂಧೀಜಿ ಹೇಳಿದರು. ಆದರೆ ನಾವು ಅದಕ್ಕೆ ಪೂರಕವಾಗಿ ನಡೆಯುತ್ತಿಲ್ಲ, ಮಾರಕವಾಗಿ ನಡೆಯುತ್ತಿದ್ದೇವೆ ಎಂದು ನಗರಸಭೆ ಅಧ್ಯಕ್ಷ ಎಂ. ಚಂದ್ರೇಗೌಡ ಬೇಸರ ವ್ಯಕ್ತಪಡಿಸಿದರು. ಎರಡು ಸಾವಿರ ವರ್ಷಗಳ ಹಿಂದೆ ಹೇಳಿದ ಮಾತುಗಳು ಇಂದಿಗೂ ಕೂಡ ಅನುಷ್ಠಾನಕ್ಕೆ ತರಲು ಆಗುತ್ತಿಲ್ಲ. ಈ ವಿಚಾರದಲ್ಲಿ ಎಡವುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.