• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • Hassan

Hassan

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಒಬ್ಬ ನೈಜ ಕವಿ ರೂಪಕಗಳ ಹುಡುಕಾಟದಲ್ಲಿರುತ್ತಾನೆ
ವೃತ್ತಿಯಲ್ಲಿ ಕೃಷಿಕರೂ ಪ್ರವೃತ್ತಿಯಲ್ಲಿ ಲೇಖಕರೂ ಆಗಿರುವ ಮಹೇಶ್ ಭಾರದ್ವಾಜ್ ಹಂದ್ರಾಳುರವರ ಎರಡು ಕೃತಿಗಳ ಲೋಕಾರ್ಪಣೆ ಸಮಾರಂಭ ಇತ್ತೀಚೆಗೆ ಬೇಲೂರು ತಾಲೂಕು ಹಗರೆ ಸಮೀಪದ ಹಂದ್ರಾಳು ಗ್ರಾಮದ ಲಕ್ಷ್ಮೀ ನಾರಾಯಣ ದೇವಸ್ಥಾನದ ಅಂಗಳದಲ್ಲಿ ನಡೆಯಿತು. ಒಳಗೆ ತಳಮಳವಿಲ್ಲದ ಯಾವುದೇ ಸಾಹಿತಿ ಅಥವಾ ಕವಿ ಉತ್ತಮವಾದುದನ್ನು ಸೃಷ್ಟಿಸಲಾರ. ಮಹೇಶ್ ಭಾರದ್ವಾಜರ ಪ್ರತಿಯೊಂದು ಅಂಕಣ ಬರಹಗಳಲ್ಲಿ ಏಕತಾನತೆಗೆ ಬದಲಾಗಿ ವೈವಿಧ್ಯತೆ ಮತ್ತು ಜೀವನಾನುಭವಗಳ ಕಸುವು ತುಂಬಿದೆ ಎಂದು ಅಭಿಪ್ರಾಯಪಟ್ಟರು.
ಧರ್ಮ ಪರಿಪಾಲನೆಯಿಂದ ಮುನ್ನಡೆದರೆ ಬದುಕು ಆದರ್ಶಮಯ
ಧರ್ಮದ ಪರಿಪಾಲನೆಯಿಂದ ಮನ್ನಡೆದರೆ ಬದುಕು ಆದರ್ಶಗೊಳ್ಳುತ್ತದೆ. ಅಲ್ಲದೆ ಸತ್ಕಾರ್ಯಗಳಿಂದ ಮನುಷ್ಯ ಅಂತರಂಗ ಪರಿಶುದ್ಧವಾಗುತ್ತದೆ ಎಂದು ಬಾಳೆಹೂನ್ನೂರು ಶ್ರೀಮದ್ ರಂಬಾಪುರಿ ೧೦೦೮ ಜಗದ್ಗುರು ಡಾ. ವೀರ ಸೋಮೇಶ್ವರ ಜಗದ್ಗುರು ಭಗವತ್ಪಾದರು ತಿಳಿಸಿದ್ದಾರೆ. ಮುಸುವತ್ತೂರಿನ ನೂತನ ಶ್ರೀ ವೀರಭದ್ರೇಶ್ವರ ದೇವಸ್ಥಾನ ಪುನರ್ ನಿರ್ಮಾಣ ಪ್ರಾಣ ಪ್ರತಿಷ್ಠಾಪನೆ ಮತ್ತು ಶ್ರೀ ಶಂಭುಲಿಂಗೇಶ್ವೇರ ಜಂಪೋತ್ಸವದ ಅಂಗವಾಗಿ ಜರುಗಿದ ಜನ ಜಾಗೃತಿ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಾ ತಿಳಿಸಿದರು.
ಎಲ್ಲಾ ಮತಧರ್ಮಗಳ ಮೂಲ ಸನಾತನವೇ ಆಗಿದೆ
ತೆಂಕಲಗೂಡು ಬೃಹನ್ಮಠದಲ್ಲಿ ಆಯೋಜಿಸಲಾಗಿದ್ದ ಪಂಚಮಹೋತ್ಸವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ, ಭರತದೇಶ ಹಲವು ಧರ್ಮಗಳ ಉಗಮಗಳ ಪುಣ್ಯಸ್ಥಳವಾಗಿದೆ. ಇಲ್ಲಿ ಉಗಮಗೊಂಡ ಧರ್ಮಗಳು ಸೇರಿದಂತೆ ಅನ್ಯ ನಾಡಿನಿಂದ ವಲಸೆ ಬಂದು ಇಲ್ಲಿ ಪ್ರವರ್ಧಮಾನವಾಗಿರುವ ಧರ್ಮದ ಜನರ ಮೂಲ ಸಹ ಸನಾತನವೇ ಆಗಿದೆ. ವೀರಶೈವ ಧರ್ಮ ಸಹ ಸನತಾನ ಧರ್ಮದ ಒಂದು ಕವಲು. ಪಾಕಿಸ್ತಾನದಲ್ಲಿ ದಾಳಿ ಮಾಡುತ್ತಿರುವ ಜನರು ಸಹ ಸನಾತನಿಗಳೆ ಆದರೆ, ಬಾಲ್ಯದಲ್ಲಿ ನೀಡುವ ತಪ್ಪು ಸಂಸ್ಕಾರದಿಂದಾಗಿ ಹಿಂಸವಾದಿಗಳಾಗಿ ಮಾರ್ಪಟ್ಟಿದ್ದಾರೆ ಎಂದು ಡಾ.ಶ್ರೀ ಮಲ್ಲಿಕಾರ್ಜುನ ವಿಶ್ವರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಆದರ್ಶ ಪುರುಷರ ಆದರ್ಶಗಳನ್ನು ನಾವು ಪಾಲಿಸುತ್ತಿಲ್ಲ
ಎಲ್ಲರೂ ಸಜ್ಜನರ ಸಹವಾಸ ಮಾಡಬೇಕು, ನೀತಿವಂತರಾಗಿರಬೇಕು, ಅನ್ಯಾಯಕ್ಕೆ ಕೈ ಹಾಕಬಾರದು, ಸನ್ಮಾರ್ಗದಲ್ಲಿ ನಡೆಯಬೇಕು. ಇದನ್ನೇ ಭಗವಾನ್ ಬುದ್ಧ, ಕನಕದಾಸರು, ವಿವೇಕಾನಂದರು, ಗಾಂಧೀಜಿ ಹೇಳಿದರು. ಆದರೆ ನಾವು ಅದಕ್ಕೆ ಪೂರಕವಾಗಿ ನಡೆಯುತ್ತಿಲ್ಲ, ಮಾರಕವಾಗಿ ನಡೆಯುತ್ತಿದ್ದೇವೆ ಎಂದು ನಗರಸಭೆ ಅಧ್ಯಕ್ಷ ಎಂ. ಚಂದ್ರೇಗೌಡ ಬೇಸರ ವ್ಯಕ್ತಪಡಿಸಿದರು. ಎರಡು ಸಾವಿರ ವರ್ಷಗಳ ಹಿಂದೆ ಹೇಳಿದ ಮಾತುಗಳು ಇಂದಿಗೂ ಕೂಡ ಅನುಷ್ಠಾನಕ್ಕೆ ತರಲು ಆಗುತ್ತಿಲ್ಲ. ಈ ವಿಚಾರದಲ್ಲಿ ಎಡವುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ಸದ್ದು ಮಾಡುತ್ತಿದೆ ನದಿ ಮರಳು ಗಣಿಗಾರಿಕೆ ಟೆಂಡರ್‌
ಸರ್ಕಾರ ಹೇಮಾವತಿ ನದಿ ಮರಳು ಗಣಿಗಾರಿಕೆಗಾಗಿ ಕರೆದಿರುವ ಟೆಂಡರ್ ಪ್ರಕ್ರಿಯೆ ತಾಲೂಕಿನಲ್ಲಿ ಬಾರಿ ಸದ್ದು ಮಾಡುತ್ತಿದೆ. ೨೦೨೩ರ ಏಪ್ರಿಲ್‌ವರೆಗೆ ಇದ್ದ ಮರಳು ಗಣಿಗಾರಿಕೆ ಅವಧಿ ಮುಕ್ತಾಯದ ನಂತರದ ಎರಡು ವರ್ಷದವರಗೆ ಮರಳು ಗಣಿಗಾರಿಕೆಗೆ ಅವಕಾಶವಿಲ್ಲದ ಕಾರಣ ಜನರು ಅಭಿವೃದ್ಧಿ ಕಾಮಗಾರಿಗಾಗಿ ಮರಳು ದೊರೆಯದೆ ದುಪ್ಪಟ್ಟು ದುಡ್ಡು ಕೊಟ್ಟು ಮರಳುಗಳ್ಳರಿಂದ ಮರಳು ಪಡೆಯುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದರಿಂದಾಗಿ ತಾಲೂಕಿನಲ್ಲಿ ಮರಳು ಗಣಿಗಾರಿಕೆಗೆ ಅವಕಾಶ ನೀಡುವಂತೆ ಒತ್ತಾಯ ಕೇಳಿ ಬರುತ್ತಿದ್ದ ಹಿನ್ನೆಲೆಯಲ್ಲಿ ಸರ್ಕಾರ ಮರಳು ಗಣಿಗಾರಿಕೆಗೆ ಹೊಸ ವಿಧಾನದಲ್ಲಿ ಟೆಂಡರ್‌ಗೆ ಅವಕಾಶ ಮಾಡಿಕೊಟ್ಟಿದೆ.
ರೈಲು ರಕ್ಷಣಾ ದಳ ಶ್ವಾನದಿಂದ ತಪಾಸಣೆ
ದೇಶದ ಗಡಿ ಭಾಗದಲ್ಲಿ ಉದ್ವಿಘ್ನ ಪರಿಸ್ಥಿತಿ ಹಿನ್ನೆಲೆಯಲ್ಲಿ ನಗರದ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರ ಲಗೇಜ್ ಸೇರಿದಂತೆ ಸೂಕ್ಷ್ಮ ಸ್ಥಳಗಳನ್ನು ರೈಲ್ವೆ ರಕ್ಷಣಾದಳ ಚಾರ್ಲಿ ಶ್ವಾನದಿಂದ ತಪಾಸಣೆ ಮಾಡಲಾಯಿತು.
14ರಂದು ಚನ್ನರಾಯಪಟ್ಟಣದ ಮಿನಿ ವಿಧಾನಸೌಧಕ್ಕೆ ಬೀಗ
ಪಟ್ಟಣದ ಮಿನಿವಿಧಾನಸೌಧಕ್ಕೆ ಮೇ ೧೪ ರಂದು ಮುತ್ತಿಗೆ ಹಾಕಿ ಬೀಗ ಹಾಕುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಿಐಟಿಯು ಮುಖಂಡ ಮಂಜುನಾಥ್ ತಿಳಿಸಿದ್ದಾರೆ.
ಮುಂಗಾರು ತಂಬಾಕು ನಾಟಿಗೆ ರೈತರ ಸಿದ್ಧತೆ
ಇಲ್ಲಿಯ ತಂಬಾಕು ಹರಾಜು ಮಾರುಕಟ್ಟೆ ಫ್ಲಾಟ್ ಫಾರಂ 7 ಹಾಗೂ 63 ರಲ್ಲಿ ಪ್ರಮುಖ ವಾಣಿಜ್ಯ ಬೆಳೆಯಾದ ತಂಬಾಕು ಸಸಿ ಮಡಿ ಬೆಳೆಸಲು ರೈತರು ಆರಂಭಿಸಿದ್ದಾರೆ.
ಭಾರತೀಯ ಸೇನಾಪಡೆಗೆ ದೇವರು ಹೆಚ್ಚಿನ ಶಕ್ತಿ ನೀಡಲಿ
ಆಪರೇಷನ್ ಸಿಂದೂರದ ಮೂಲಕ ಉಗ್ರರ ನೆಲೆಗಳನ್ನು ಭಾರತೀಯ ಸೇನೆಯ ವಾಯುಪಡೆ ನಾಶಪಡಿಸಿ ಪಹಲ್ಗಾಮ್‌ ದಾಳಿಗೆ ತಕ್ಕ ಉತ್ತರ ನೀಡಿರುವ ಭಾರತೀಯ ಸೇನಾಪಡೆಗೆ ದೇವರು ಹೆಚ್ಚಿನ ಶಕ್ತಿ ನೀಡಲಿ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಪ್ರಾರ್ಥಿಸಿದರು.
ಶ್ರದ್ಧಾಭಕ್ತಿಯೊಂದಿಗೆ ತೆರೆ ಕಂಡ ಕೆಂಚಾಂಬೆ ಜಾತ್ರೋತ್ಸವ
೪೮ ಹಳ್ಳಿಗಳಿಗೆ ಸೇರಿದ ಕೆಂಚಾಂಬ ದೇವಿ ವರ್ಷದ ದೊಡ್ಡ ಜಾತ್ರೆ ಕಟ್ಟುನಿಟ್ಟಿನಿಂದ ಅತ್ಯಂತ ವೈಭವ, ಭಯ, ಭಕ್ತಿಯಿಂದ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು. ಈ ಜಾತ್ರೆಯಲ್ಲಿ ಮಾತ್ರ ದೇವಿ ಪಾದ ಮುಟ್ಟಿ ನಮಸ್ಕರಿಸಲು ಅವಕಾವಿರುತ್ತದೆ.ಇತ್ತೀಚೆಗೆ ಆರಂಭವಾದ ಜಾತ್ರೆಗೆ ಭಾನುವಾರ ದೊಡ್ಡ ಜಾತ್ರೆ ನಡೆಯುವುದರೊಂದಿಗೆ ನಾಂದಿ ಹಾಡಲಾಯಿತು.
  • < previous
  • 1
  • ...
  • 25
  • 26
  • 27
  • 28
  • 29
  • 30
  • 31
  • 32
  • 33
  • ...
  • 441
  • next >
Top Stories
ಆಸ್ಪತ್ರೆಗಳಿಗೆ ಏಕರೂಪದ ಪ್ಯಾಕೇಜ್‌ ದರ ಶಿಫಾರಸಿಗೆ ತಜ್ಞರ ಸಮಿತಿ ರಚನೆ
ಪ್ರಜ್ವಲ್‌ ರೇ‍ವಣ್ಣ ಸಂಕಷ್ಟ ನೋಡಿ ಸರ್ಕಾರಕ್ಕೆ ಸಂತೋಷ : ವಕೀಲ
ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ : ಅ.5ರಂದು ಭಾರತ vs ಪಾಕ್ ಮಹಿಳೆಯರ ಫೈಟ್‌
ಸೋನಂ ಬಳಸಿದ್ದ ಮಚ್ಚು ಪತ್ತೆ : ರಘುವಂಶಿ ದಂಪತಿ ಕೊನೇ ವಿಡಿಯೋ ಬಯಲು
ಶೀಘ್ರ 13 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗುವುದು : ಮಧು ಬಂಗಾರಪ್ಪ
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಪ್ರಪಂಚ
  • ಮನರಂಜನೆ
  • ವಿಶೇಷ
  • ಭಾರತ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved