• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • Hassan

Hassan

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಚನ್ನರಾಯಪಟ್ಟಣದ ಸಮಗ್ರ ಅಭಿವೃದ್ಧಿಗೆ ಬದ್ಧ: ಶಾಸಕ ಬಾಲಕೃಷ್ಣ
ಪಟ್ಟಣದ ಜನರಿಗೆ ನದಿ ನೀರಿನಿಂದ ಸಮರ್ಪಕವಾಗಿ ಕುಡಿಯುವ ನೀರಿನ ಯೋಜನೆಯನ್ನು ಪೂರ್ಣಗೊಳಿಸಿದ್ದು, ಕಸ ವಿಲೇವಾರಿ ಕೆಲಸದಲ್ಲಿ ಜಿಲ್ಲೆಯಲ್ಲೇ ಮೊದಲ ಸ್ಥಾನದಲ್ಲಿದ್ದು, ಸಂಸ್ಕರಣಾ ಘಟಕವು ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದೆ.
ಹಾಸನಾಂಬ ದೇವಿ ಮಹೋತ್ಸವಕ್ಕೆ ಭಾಗವಹಿಸಲು ಸಾರ್ವಜನಿಕರಿಗೆ ಶಾಸಕ ಕೆ.ಎಂ. ಶಿವಲಿಂಗೇಗೌಡರ ಕರೆ
ಹಾಸನಾಂಬೆ ಸನ್ನಿಧಿಗೆ ಲಕ್ಷಾಂತರ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಮೂಲಭೂತ ಸೌಲಭ್ಯಗಳು ಮತ್ತು ಎಲ್ಲಾ ವ್ಯವಸ್ಥಿತ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಹಾಸನದ ಹಿರಿಯ ಅಧಿಕಾರಿಗಳು ಸಮರೋಪಾದಿಯಲ್ಲಿ ಸಿದ್ಧತೆ ನಡೆಸುತ್ತಿದ್ದಾರೆ.
ಕೋಟ್ಯಂತರ ಜನರ ಬಾಳಿಗೆ ಬೆಳಕಾದವರು ಶ್ರೀಗಳು
ಮಠ ಕಟ್ಟುವ ಮುನ್ನ ಶಾಲೆ ಕಟ್ಟಿದವರು ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮಿಗಳು ಎಂದು ಶಿವಗಂಗೆಯ ಶ್ರೀ ಮೆಲಣಗವಿ ವೀರಸಿಂಹಾಸನ ಮಠದ ಡಾ. ಶ್ರೀ ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮಿಗಳು ಹೇಳಿದರು. ಕಷ್ಟಕಾಲದಲ್ಲಿ ಸಹಾಯಕ್ಕೆ ಬರುವುದು ವಿದ್ಯೆ ಮಾತ್ರ ಎಂದರು. ತಮ್ಮ ಕಷ್ಟ ಮತ್ತೊಬ್ಬರಿಗೆ ಬರಬಾರದು ಎಂದು ಚಿಂತಿಸುವವನೇ ಮಹಾತ್ಮ. ಇಂತಹ ಮನಸ್ಥಿತಿ ಹೊಂದಿದವರ ಸಂಖ್ಯೆ ಹೆಚ್ಚಿದಾಗ ಉತ್ತಮ ಸಮಾಜ ನಿರ್ಮಾಣವಾಗಲಿದೆ. ಶಿಕ್ಷಣ ನೀಡುವ ಉದ್ದೇಶದಿಂದ ತಮ್ಮ ಚಿನ್ನವನ್ನೆ ಮಾರಾಟ ಮಾಡಿದ ಮಹತ್ಮಾ ರಾಜೇಂದ್ರ ಶ್ರೀಗಳು ಇದರಿಂದಾಗಿಯೆ ಇವರನ್ನು ಜಗದ್ಗುರು ಎಂದು ಕರೆಯಲಾಗುತ್ತಿದೆ. ಶ್ರೀಗಳು ವ್ಯಕ್ತಿ ಜ್ಞಾನಿ ಸುಜ್ಞಾನಿಯಾಗ ಬೇಕು ಎಂಬ ಮಹತ್ತಾರ ಆಸೆ ಹೊಂದಿದ್ದ ಫಲವಾಗಿ ಮಠದಲ್ಲಿ ವ್ಯಸಾಂಗ ಮಾಡಿದ ಹಲವರು ದೇಶದಲ್ಲಿ ಉತ್ತಮ ಹೆಸರು ಗಳಿಸಿದ್ದಾರೆ ಎಂದರು.
ಅರ್ಜಿಗಳ ಶೀಘ್ರ ವಿಲೇವಾರಿಗೆ ಕ್ರಮವಹಿಸಿ
ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಸ್ವೀಕೃತವಾದ ಅರ್ಜಿಗಳ ಶೀಘ್ರ ವಿಲೇವಾರಿಗೆ ಕ್ರಮ ವಹಿಸುವುದರ ಜೊತೆಗೆ ಬಡಜನರ ಸಮಸ್ಯೆ ಬಗೆಹರಿಸಲು ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಲತಾ ಕುಮಾರಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡುವ ಸಂದರ್ಭದಲ್ಲಿ ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ವಾಹನ ನಿಲುಗಡೆಗೆ ಸ್ಥಳಾವಕಾಶ ಇದೆಯೇ ಎಂಬುದನ್ನು ಪರಿಶೀಲಿಸಿ ನಂತರ ಅನುಮತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸಿಸಿ ಕ್ಯಾಮೆರಾ ಕಳ್ಳನ ಕೈಚಳಕ ಸಿಸಿ ಕ್ಯಾಮೆರಾದಲ್ಲೇ ಸೆರೆ
ಹೊಳೆನರಸೀಪುರ ಪಟ್ಟಣದ ಪೇಟೆ ಮುಖ್ಯ ರಸ್ತೆ ಸೇರಿದಂತೆ ಅಂಗಡಿ ಮುಂಗಟ್ಟುಗಳ ಮುಂದೆ ಆಳವಡಿಸಿದ್ದ ಸಿಸಿ ಕ್ಯಾಮರಾಗಳನ್ನು ಸರಣಿಯಾಗಿ ಕಳವು ಮಾಡಿದ ಘಟನೆ ಗುರುವಾರ ರಾತ್ರಿ ನಡೆದಿದೆ. ಪಟ್ಟಣದಲ್ಲಿನ ಕಳುವು ಪ್ರಕರಣ ಸೇರಿದಂತೆ ಅಪರಿಚಿತರ ಹಾವಳಿಯನ್ನು ತಡೆಗಟ್ಟುವ ಸಲುವಾಗಿ ನಗರ ಠಾಣೆ ಪೋಲಿಸರು ಅಂಗಡಿ ಮಾಲೀಕರ ಸಹಕಾರ ಪಡೆದು ಅಂಗಡಿ ಮುಂಗಟ್ಟುಗಳ ಮುಂದೆ ಸಿಸಿ ಕ್ಯಾಮರಾ ಆಳವಡಿಸುವಲ್ಲಿ ಯಶಸ್ವಿಯಾಗಿದ್ದಲ್ಲದೆ, ಕಳುವು ಪ್ರಕರಣಗಳು ನಡೆಯದಂತೆ ಎಚ್ಚರ ವಹಿಸಿದ್ದರು. ಆದರೆ ಕಳ್ಳರು ಅಂಗಡಿ ಮುಂಗಟ್ಟುಗಳ ಮುಂದೆ ಅಳವಡಿಸಿರುವ ಕ್ಯಾಮರಾಗಳನ್ನೇ ಕಳುವು ಮಾಡುವ ಮೂಲಕ ಪೊಲೀಸರಿಗೆ ತಲೆನೋವಾಗಿದ್ದಾರೆ.
ಅರಳೇಪೇಟೆ ನಿವಾಸಿಗಳಿಂದ ಪ್ರಸಾದ ವಿತರಣೆ
ಕಳೆದ ೨೦೧೭ನೇ ಇಸವಿಯಿಂದ ನಿರಂತರವಾಗಿ ನಗರದ ಅರಳೇಪೇಟೆ ರಸ್ತೆಯ ನಿವಾಸಿಗಳಿಂದ ಸೇರಿ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗುತ್ತಿದೆ. ಸುಮಾರು ಮೂರು ಸಾವಿರ ಜನರು ಪ್ರಸಾದ ಸ್ವೀಕರಿಸಿದ್ದು, ನಾಡಿನ ಜನತೆಗೆ ಒಳ್ಳೆಯದನ್ನು ಮಾಡಲಿ ಎಂದು ಗಣೇಶನನು ಪ್ರಾರ್ಥಿಸಲಾಗಿದೆ ಎಂದರು. ಮುಂದಿನ ದಿನಗಳಲ್ಲಿ ಎಲ್ಲಾರ ಸಹಕಾರದಲ್ಲಿ ಇನ್ನು ಹೆಚ್ಚಿನ ರೀತಿಯಲ್ಲಿ ಇಂತಹ ಅನ್ನಸಂತರ್ಪಣೆ ಕಾರ್ಯಕ್ರಮ ನೆರವೇರಿಸಲಾಗುವುದು ಎಂದು ಹೇಳಿದರು. ಈ ಪುಣ್ಯ ಕಾರ್‍ಯಕ್ಕೆ ಎಲ್ಲರೂ ಸಹಕಾರ ಕೊಟ್ಟಿದ್ದಾರೆ. ಶ್ರೀ ಗಣೇಶ ಎಲ್ಲಾರಿಗೂ ಒಳ್ಳೆಯದ ಮಾಡಲಿ ಎಂದು ಶುಭಹಾರೈಸಿದರು.
ಹೊಳೆನರಸೀಪುರದಲ್ಲಿ ಮಹಿಳೆಯರಿಂದ ಮತಾಂತರಕ್ಕೆ ಯತ್ನ
ಅಂಗಡಿ ಮಾಲೀಕ ಮತಾಂತರ ಮಾಡಿಸಲು ಪಟ್ಟಣದ ಪ್ರಮುಖ ವೃತ್ತಕ್ಕೂ ಬಂದಿದ್ದೀರ ಎಂದು ಏರು ಧ್ವನಿಯಲ್ಲಿ ಪ್ರಶ್ನಿಸಿದಾಗ ಮಹಿಳೆಯರು ಓಡಿ ಹೋಗಿದ್ದಾರೆ. ಹುಡುಕಿದರೂ ಮಹಿಳೆಯರು ಸಿಗದೇ ಇದ್ದಾಗ, ಇದರ ಸಂಬಂಧ ದೂರು ನೀಡದೇ ಇದ್ದರೂ ಸಹ ಮಹಿಳೆಯರು ನೀಡಿದ ಕಾರ್ಡ್ ಅಂಗಡಿ ಮಾಲೀಕನ ಬಳಿ ಇದೆ. ಪಟ್ಟಣದ ಸ್ಲಮ್ ಬೋರ್ಡ್‌, ನರಸಿಂಹನಾಯಕ ನಗರ ಹಾಗೂ ಇತರೆ ಬಡಾವಣೆಯಲ್ಲಿ ಇಂತಹ ಮತಾಂತರರ ವಿನಯದ ಮಾತಿಗೆ ಮರುಳಾಗಿ ಇವರ ವಿಚಾರ ನಂಬಿಸುವ ಸ್ಥಿತಿಯಿಂದಾಗಿ ನೂರಾರು ಕುಟುಂಬಗಳು ಮತಾಂತರಗೊಂಡು, ಪ್ರಾರ್ಥನಾ ಮಂದಿರದ ಹೆಸರಿನಲ್ಲಿ ಐವತ್ತಕ್ಕೂ ಹೆಚ್ಚು ಚರ್ಚ್‌ಗಳು ಪ್ರಾರಂಭವಾಗಿವೆ.
ಆಲೂರಿನ ಕೆಇಬಿ ಸರ್ಕಲ್‌ ಗಣಪತಿ ಅದ್ಧೂರಿ ವಿಸರ್ಜನೆ
ವಿಸರ್ಜನಾ ಮಹೋತ್ಸವದ ಅಂಗವಾಗಿ ಗೌರಿ, ಗಣಪತಿಗೆ ಬೆಳಗ್ಗೆ ಪೆಂಡಾಲಿನಲ್ಲಿ ಹೋಮ ಸೇರಿದಂತೆ ಪೂಜಾ ವಿಧಿವಿಧಾನಗಳು ಜರುಗಿದವು. ಮಹಾ ಮಂಗಳಾರತಿ ನಂತರ ನೆರೆದಿದ್ದ ಭಕ್ತರಿಗೆ ಅನ್ನದಾನ ನೆರವೇರಿಸಲಾಯಿತು. ರಸ್ತೆಗಳ ಅಕ್ಕಪಕ್ಕದಲ್ಲಿ ಬಂಟಿಂಗ್ಸ್ ಹಾಕಿ ಅಲಂಕರಿಸಲಾಗಿತ್ತು. ಬಣ್ಣ ಬಣ್ಣದ ಹೂವು, ಹಾರಗಳಿಂದ ಅಲಂಕೃತಗೊಂಡಿದ್ದ ಗೌರಿ, ಗಣಪತಿ ಮೂರ್ತಿಗಳಿಗೆ ವಿಶೇಷ ಪೂಜೆ ಸಲ್ಲಿಸಿ ಬೆಳ್ಳಿರಥ ಅಲಂಕೃತಗೊಂಡ ಟ್ರ್ಯಾಕ್ಟರ್‌ನಲ್ಲಿ ಮೆರವಣಿಗೆ ಮಾಡಲಾಯಿತು.
ಎಸ್ಸಿ ಎಸ್ಟಿ ಅನುದಾನ ಅನ್ಯ ಉದ್ದೇಶಗಳಿಗೆ ಬಳಕೆ
ಈಗಾಗಲೇ ರಾಜ್ಯ ಸರ್ಕಾರ ಎಸ್‌ಟಿ, ಎಸ್‌ಸಿ ಜನಾಂಗದ ಅನುದಾನಕ್ಕಾಗಿ ಮತ್ತು ವಿವಿಧ ಕಾಮಗಾರಿಗಳಿಗಾಗಿ ಸರ್ಕಾರ ಅನೇಕ ಅನುದಾನಗಳನ್ನು ಬಿಡುಗಡೆ ಮಾಡಿದೆ. ಆದರೆ ಸ್ಥಳೀಯ ರಾಜಕಾರಣಿಗಳು ಮತ್ತು ಅಧಿಕಾರಿಗಳು ಸೇರಿಕೊಂಡು ಈ ಹಣವನ್ನು ತಮಗೆ ಇಷ್ಟಬಂದ ಸ್ಥಳಗಳಲ್ಲಿ ಮಾಡಿದ್ದಾರೆ ಹಾಗೂ ದುರ್ಬಳಕೆಯನ್ನು ಕೂಡ ಮಾಡಿಕೊಂಡಿದ್ದಾರೆ. ಜೊತೆಯಲ್ಲಿ ಎಸ್‌ಸಿ, ಎಸ್‌ಟಿ ಕಾಲೋನಿಗಳು ಇಲ್ಲದ ಸ್ಥಳಗಳಲ್ಲೂ ಕೂಡ ಕಾಮಗಾರಿಗಳನ್ನು ನಿರ್ವಹಿಸಿದ್ದಾರೆ ಎಂದು ಆರೋಪಿಸಿದರು.
ರಾಜಕೀಯದಲ್ಲಿ ಆದರ್ಶ ನಡವಳಿಕೆ ಅಗತ್ಯ
ರಾಜಕೀಯ ಕ್ಷೇತ್ರದಲ್ಲಿ ಸ್ಥಾನಮಾನ, ಕೀರ್ತಿ, ಅಪಕೀರ್ತಿ, ಆರೋಪ ಪ್ರತ್ಯಾರೋಪಗಳು ಸಹಜ. ಆದರೆ ವೈಯಕ್ತಿಕ ಸ್ವಾರ್ಥಕ್ಕಾಗಿ ಮತ್ತೊಬ್ಬರನ್ನು ನೋಯಿಸುವುದು ಅಥವಾ ಅಪಪ್ರಚಾರ ಮಾಡುವುದು ಎಂದಿಗೂ ಆದರ್ಶ ರಾಜಕಾರಣಿಯ ಗುಣವಲ್ಲ ಎಂದು ಹೇಳಿದರು. ಸಮಾಜ ಸೇವೆಯ ಹಂಬಲ ಹೊಂದಿರುವವರಿಗೆ ರಾಜಕೀಯವೇ ಸೂಕ್ತ ಮಾರ್ಗವಾಗಿದ್ದು, ಜನರ ನೋವು ನಲಿವುಗಳಿಗೆ ಸ್ಪಂದಿಸುವ ಮನಸ್ಥಿತಿ ಹೊಂದಿದವರನ್ನು ಜನರು ಯಾವ ಜಾತಿ ಧರ್ಮವೂ ನೋಡದೆ ಬೆಂಬಲಿಸುತ್ತಾರೆ ಎಂದು ನಿವೃತ್ತ ಪ್ರಾಂಶುಪಾಲ ಡಾ. ಎಚ್.ಆರ್. ಸ್ವಾಮಿ ಅಭಿಪ್ರಾಯಪಟ್ಟರು.
  • < previous
  • 1
  • ...
  • 25
  • 26
  • 27
  • 28
  • 29
  • 30
  • 31
  • 32
  • 33
  • ...
  • 545
  • next >
Top Stories
ಎಸಿ ಬಸ್‌ಗಳಲ್ಲಿ ಅಗ್ನಿ ಸುರಕ್ಷತಾ ಆಡಿಟ್‌ಗೆ ಮುಂದಾದ ನಿಗಮ
ನವೆಂಬರ್‌ ಕ್ರಾಂತಿ ಬಗ್ಗೆ ಚರ್ಚಿಸಿ ದಣಿವು ಮಾಡ್ಕೊಬೇಡಿ - ಶಿವಕುಮಾರ್‌ ಸಲಹೆ
ರಂಗಸನ್ಸ್ ಏರೋಸ್ಪೇಸ್ ಘಟಕಕ್ಕೆ ಎಂಬಿಪಾ ಚಾಲನೆ
ನವೆಂಬರ್‌ ಅಂತ್ಯಕ್ಕೆ ಕೈ ಕಿತ್ತಾಟಕ್ಕೆ ತಾರ್ಕಿಕ ಅಂತ್ಯ ಖಚಿತ : ಬಿವೈವಿ
ಕರ್ನಾಟಕದಲ್ಲಿ ಒಳ ಮೀಸಲು ಸಮರ್ಪಕ ಜಾರಿಗೆ ಕಾಯ್ದೆ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved