• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • Hassan

Hassan

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಹುತಾತ್ಮ ಯೋಧರನ್ನು ಸ್ಮರಿಸುವುದು ಪ್ರತಿಯೊಬ್ಬರ ಕರ್ತವ್ಯ
ಕಾರ್ಗಿಲ್ ವಿಜಯ ದಿವಸ ನೆನಪಿನ ಜೊತೆಗೆ ಯುದ್ಧದಲ್ಲಿ ವೀರ ಮರಣ ಅಪ್ಪಿದ ಸೈನಿಕರ ಶ್ರಮವನ್ನು ಪ್ರತಿಯೊಬ್ಬರೂ ಸ್ಮರಿಸಬೇಕು ಎಂದು ಶಾಸಕ ಎಚ್.ಪಿ. ಸ್ವರೂಪ್ ತಿಳಿಸಿದರು. ಚೈನ ದೇಶವು ಈ ಹಿಂದೆ ಬಂದಂತಹ ಕೋವಿಡ್ ವೈರಾಣುವನ್ನು ದೇಶಾದ್ಯಂತ ಹರಡಿಸಿ ಯುದ್ಧ ಸಾರಿತ್ತು. ಆದರೆ ಭಾರತ ಯಾವುದಕ್ಕೂ ಕಡಿಮೆ ಇಲ್ಲ. ತಡೆಯುವ ಶಕ್ತಿ ನಮ್ಮಲ್ಲೂ ಇದೆ ಎಂಬುದಕ್ಕೆ ಸಾಬೀತು ಮಾಡಿದೆ. ಭಾರತೀಯ ಸೇನೆ ಆಪರೇಷನ್ ಸಿಂದೂರ ಮೂಲಕ ಮಾಡಿ ಎದುರಾಳಿಯನ್ನು ಮೆಟ್ಟಿ ನಿಲ್ಲಿಸುವ ಕೆಲಸವನ್ನು ಭಾರತೀಯ ಯೋಧರು ಮಾಡಿದ್ದಾರೆ ಎಂದರು.
ಕರ್ನಾಟಕದಲ್ಲಿ ತಲಾ ಆದಾಯ ಹೆಚ್ಚಲು ಗ್ಯಾರಂಟಿಗಳು ಕಾರಣ
ಇತ್ತೀಚಿನ ವರದಿ ಪ್ರಕಾರ ಇಡೀ ದೇಶದಲ್ಲಿ ತಲಾ ಆದಾಯ ಹೆಚ್ಚಳದಲ್ಲಿ ಕರ್ನಾಟಕ ನಂಬರ್‌ ಒನ್‌ ಸ್ಥಾನದಲ್ಲಿದೆ. ಇದಕ್ಕೆ ನಮ್ಮ ಪಂಚ ಗ್ಯಾರಂಟಿಗಳೇ ಕಾರಣ. ಗ್ಯಾರಂಟಿಗಳಿಂದಾಗಿ ಜನರ ಬಳಿ ದುಡ್ಡು ಓಡಾಡುತ್ತಿದೆ. ಇದರಿಂದ ಸರ್ಕಾರಕ್ಕೂ ಆದಾಯ ಬರುತ್ತಿದೆ. ಇದರಿಂದ ಅಭಿವೃದ್ಧಿಯೂ ಆಗುತ್ತಿದೆ. ಆದರೆ, ಎಕನಾಮಿಕ್ಸಲ್ಲಿ ವೀಕ್‌ ಇರುವ ಬಿಜೆಪಿಯವರಿಗೆ ಇದೆಲ್ಲಾ ಎಲ್ಲಿ ಅರ್ಥವಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದರು. ಶಿವಲಿಂಗೇಗೌಡರು ಜನಪ್ರಿಯ ಶಾಸಕರಾಗದಿದ್ದರೆ ಇಷ್ಟೊಂದು ಜನ ಸೇರುತ್ತಿರಲಿಲ್ಲ. ಅವರು ಬಡವರ ಪರ, ಕ್ಷೇತ್ರದ ಪರ ಕೆಲಸ ಮಾಡುತ್ತಿರುವ ಹಿನ್ನೆಲೆಯಲ್ಲಿ ಜನ ಅವರ ಪರವಾಗಿದ್ದಾರೆ. ಶಿವಲಿಂಗೇಗೌಡ್ರು ಈ ಕ್ಷೇತ್ರದಲ್ಲಿ ನಾಲ್ಕು ಬಾರಿ ಶಾಸಕರಾಗಿದ್ದಾರೆ. ಮುಂಬರುವ ಚುನಾವಣೆಯಲ್ಲಿಯೂ ಅವರೇ ಗೆದ್ದು ಬರುತ್ತಾರೆ ಅನ್ನೊ ನಂಬಿಕೆ ಇದೆ ಎಂದರು.
ಬಿಕ್ಕೋಡು ರಸ್ತೆಯಲ್ಲಿನ ಗುಂಡಿಗಳಿಂದ ನರಕ ದರ್ಶನ
ಬಿಕ್ಕೋಡು ರಸ್ತೆಯಲ್ಲಿ ಮೆಣಸಿನಮ್ಮ ದೇವಾಲಯದ ಭಾಗದಲ್ಲಿ ರಸ್ತೆ ಸಂಪೂರ್ಣವಾಗಿ ದೊಡ್ಡ ದೊಡ್ಡ ಗುಂಡಿಗಳಿಂದ ಕೂಡಿದೆ. ಈ ಮಾರ್ಗ ದಿನನಿತ್ಯ ಪ್ರಯಾಣಿಸುವ ಪಾದಚಾರಿಗಳಿಗೆ ಹಾಗೂ ವಾಹನ ಸವಾರರಿಗೆ ಅಪಾರ ತೊಂದರೆಯಾಗಿದ್ದು ಅಪಘಾತ ಸಂಭವಿಸುತ್ತಿದೆ ಎಂದು ಕಿಡಿಕಾರಿದರು. ಇಲ್ಲಿಯ ಪಕ್ಕದಲ್ಲೇ ಬಾಲಕಿಯರ ಪದವಿ ಕಾಲೇಜು ಇದ್ದು ವಿದ್ಯಾರ್ಥಿನಿಯರು ಮತ್ತು ಶಿಕ್ಷಕರು ದಿನವೂ ಈ ಮಾರ್ಗವಾಗಿ ಸಾಗಬೇಕಾಗುತ್ತದೆ. ಗುಂಡಿಗಳಲ್ಲಿ ನೀರು ನಿಲ್ಲುವ ಪರಿಣಾಮ ವಾಹನಗಳ ಚಕ್ರಗಳಿಂದ ದಾರಿಹೋಗುವವರಿಗೆ ನೀರು ಎರಚುತ್ತಿರುವ ಘಟನೆಗಳು ಪ್ರತಿದಿನವೂ ನಡೆಯುತ್ತಿವೆ.
ಜಾತಿ ಗಣತಿ ಕೇಂದ್ರ ನಮ್ಮನ್ನು ನೋಡಿ ಘೋಷಿಸಿದೆ
ರಾಜ್ಯ ಸರ್ಕಾರಕ್ಕೆ ಜಾತಿಗಣತಿ ಮಾಡುವ ಯೋಗ್ಯತೆ ಇಲ್ಲ ಎಂಬ ಮೈಸೂರು ಸಂಸದ ಯದುವೀರ್ ಕೃಷ್ಣರಾಜ ಒಡೆಯರ್ ಹೇಳಿಕೆಗೆ ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು ನೀಡಿದರು. ನಾವು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ವಿಚಾರದಲ್ಲಿ ಗಣತಿ ಮಾಡುತ್ತಿದ್ದೇವೆ, ಹಿಂದೆ ಕೂಡ ಮಾಡಿದ್ದೆವು. ಆದರೆ ಆ ಬಗ್ಗೆ ಕೆಲವು ಸಂಘ ಸಂಸ್ಥೆಗಳು, ಪ್ರಬಲ ಸಮಾಜಗಳು ಅಪಸ್ವರ ಎತ್ತಿದ್ದರಿಂದ, ಮರುಗಣತಿ ಮಾಡಿ ಎಂದು ಹೇಳಿದ್ದರಿಂದ ಈಗ ಮತ್ತೆ ಅವಕಾಶ ಮಾಡಿಕೊಟ್ಟಿದ್ದೇವೆ ಎಂದರು. ಯದುವೀರ್ ಅವರು ಇನ್ನೂಎಲ್ಲಾ ಕಲಿತುಕೊಳ್ಳಲಿ,ಪಾಪ ಅವರಿಗಿನ್ನೂ ಅನುಭವ ಇಲ್ಲ, ಕೇಂದ್ರ ಸರ್ಕಾರ ನಮ್ಮನ್ನ ನೋಡಿ ಅನೌನ್ಸ್ ಮಾಡಿದೆ ಎಂದು ಕುಟುಕಿದರು.
ಎಂಸಿಇ ಕಾಲೇಜಿನ ಆವರಣದಲ್ಲಿ ಗಮನಸೆಳೆದ ಡ್ರೋನ್ ಶೋ
ಮಲೆನಾಡು ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಮೀ ರೆಸ್ ಫೌಂಡೇಶನ್ ಮತ್ತು ಜಟ್ಕಿಂಗ್ ಕಂಪನಿ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಡ್ರೋನ್ ಹಾರಿಸುವ ಶೋ ಕಾರ್ಯಕ್ರಮವು ನೂರಾರು ಮಕ್ಕಳ ಎದುರು ಯಶಸ್ವಿಯಾಗಿ ಜರುಗಿತು. ಈ ಡ್ರೋನ್ ರೈತ ಸಂಕುಲಕ್ಕೆ ಉಪಯುಕ್ತವಾಗಿದೆ. ಡ್ರೋನ್ ಎಂದರೇ ಕ್ಯಾಮರಾ ಒಂದೇ ಮಾತ್ರವಲ್ಲ. ರೈತ ಬೆಳೆಯುವ ಕೃಷಿ ಬೆಳೆಗಳಿಗೆ ಔಷಧಿ ಸಿಂಪಡಣೆ ಇರಬಹುದು, ಕಳೆ ನಾಶಕ ಸಿಂಪಡಣೆ ಇರಬಹುದು ಎಲ್ಲಾ ರೀತಿಯಲ್ಲೂ ರೈತ ಸಂಕುಲಕ್ಕೆ ಉಪಯುಕ್ತವಾದಂತಹ ಈ ಡ್ರೋನ್ ಸಂಸ್ಥೆ ನಮ್ಮ ಮಲೆನಾಡು ಶಿಕ್ಷಣ ಸಂಸ್ಥೆಯಲ್ಲಿ ದೊಡ್ಡ ಕಂಪನಿಯಾಗಿ ಇರುವುದು ಹೆಮ್ಮೆಯ ವಿಷಯ ಎಂದು ತಿಳಿಸಿದರು.
ಆಲೋಚನೆಗಳು ಸರಿಯಿದ್ದಾಗ ಮಾತ್ರ ಸುಸ್ಥಿರ ದೇಶದ ನಿರ್ಮಾಣ ಸಾಧ್ಯ
ಒಬ್ಬ ವ್ಯಕ್ತಿ ನಾಯಕನಾಗಿ ಸರಿಯಾದ ದೃಷ್ಠಿ ಜತೆಗೆ ಜವಾಬ್ದಾರಿಯನ್ನು ಹೊಂದಿದಾಗ ಮಾತ್ರ ಉತ್ತಮ ಆಡಳಿತದ ಜತೆಗೆ ಜನಮನದಲ್ಲಿ ನೆಲೆ ನಿಲ್ಲಲು ಸಾಧ್ಯ ಎಂದು ನಿಕಟಪೂರ್ವ ಸಹಾಯಕ ಗವರ್ನರ್ ಜಿ.ಎಸ್.ಪ್ರದೀಪ್ ಅಭಿಪ್ರಾಯಪಟ್ಟರು. ರೋಟರಿ ಸಂಸ್ಥೆಯ ಬಗ್ಗೆ ಜನರಲ್ಲಿ ಹೆಚ್ಚಿನ ಅರಿವು ಮೂಡಿಸುವ ಜತೆಗೆ ನೂತನ ಸದಸ್ಯರಿಗೆ ಹೆಚ್ಚಿನ ಮಾಹಿತಿ, ವಿಚಾರ ವಿನಿಮಯ ಮಾಡಿಕೊಂಡಾಗ ಸಂಸ್ಥೆಯ ಉದ್ದೇಶ ಹಾಗೂ ಧ್ಯೇಯವನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಕೈಗೊಳ್ಳಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಆರೋಗ್ಯಕ್ಕಾಗಿ ಸಮಯ ಮೀಸಲಿಡಲು ಸಿಇಒ ಪೂರ್ಣಿಮಾ
ಪ್ರತಿಯೊಬ್ಬರು ಆರೋಗ್ಯಕ್ಕಾಗಿ ಪ್ರತಿ ದಿನ ೪೫ ನಿಮಿಷ ನಡಿಗೆ, ೨೦ ನಿಮಿಷ ಯೋಗಾಭ್ಯಾಸ ಅಥವಾ ವ್ಯಾಯಾಮ ಮಾಡಬೇಕು ಜನರು ಜೀವನ ಶೈಲಿ ಹಾಗೂ ಆಹಾರ ಸೇವನೆಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್. ಪೂರ್ಣಿಮಾ ತಿಳಿಸಿದ್ದಾರೆ. ಆಧುನಿಕ ಜೀವನ ಶೈಲಿಯಿಂದ ಹೃದಯ ಆರೋಗ್ಯದ ಕಡೆ ಗಮನಹರಿಸಬೇಕಿದೆ, ರಾಜ್ಯ ಸರ್ಕಾರ ಗೃಹ ಆರೋಗ್ಯ ಕಾರ್ಯಕ್ರಮದಡಿ ಮನೆ ಮನೆಗೆ ಭೇಟಿ ನೀಡಿ ಆರೋಗ್ಯ ತಪಾಸಣೆ ಮಾಡಲಾಗುತ್ತಿದ್ದು, ಅವಶ್ಯಕವಿರುವ ಚಿಕಿತ್ಸೆಯನ್ನು, ಮಾತ್ರೆಗಳನ್ನು ನೀಡಲಾಗುವುದು ಎಂದು ತಿಳಿಸಿದರು.
ಅರಸೀಕೆರೆಯಲ್ಲಿ ಇಂದು ಅಭಿವೃದ್ಧಿ ಕಾಮಗಾರಿಗಳಿಗೆ ಸಿಎಂ ಶಂಕುಸ್ಥಾಪನೆ
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಇವರ ಸಹಯೋಗದಲ್ಲಿ ಜು.೨೬ರಂದು ಮಧ್ಯಾಹ್ನ ೧೨ ಗಂಟೆಗೆ ಅರಸೀಕೆರೆ ತಾಲೂಕು ಕ್ರೀಡಾಂಗಣದಲ್ಲಿ ಅರಸೀಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ, ಲೋಕಾರ್ಪಣೆ ಹಾಗೂ ಫಲಾನುಭವಿಗಳ ಸಮಾವೇಶ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಶಂಕುಸ್ಥಾಪನೆ ಹಾಗೂ ಕಾರ್ಯಕ್ರಮ ಉದ್ಟಾಟಿಸಲಿದ್ದಾರೆ. ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡರು ಗೌರವಾನ್ವಿತ ಉಪಸ್ಥಿತಿ ವಹಿಸಲಿದ್ದಾರೆ. ಉಪ ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್‌ ಅವರು ಭಾಗವಹಿಸಲಿದ್ದಾರೆ.
ಶ್ರೀ ಸ್ವರ್ಣ ಗೌರಮ್ಮ ದೇವಿ ದೇವಾಲಯದಲ್ಲಿ ಭೀಮನ ಅಮಾವಾಸ್ಯೆ
ಅರಸೀಕೆರೆ ತಾಲೂಕಿನ ಇತಿಹಾಸ ಪ್ರಸಿದ್ಧ ಮಾಡಾಳು ಗ್ರಾಮದ ಮೂಲಸ್ಥಾನ ಶ್ರೀ ಸ್ವರ್ಣ ಗೌರಮ್ಮ ದೇವಿ ದೇವಾಲಯದಲ್ಲಿ ಭೀಮನ ಅಮಾವಾಸ್ಯೆ ಅಂಗವಾಗಿ ಹಾರನಹಳ್ಳಿ ಸುಕ್ಷೇತ್ರ ಕೋಡಿಮಠದ ಉತ್ತರಾಧಿಕಾರಿ ಶ್ರೀ ಚೇತನ್ ಮುರಿದೇವರ ಪಾದಪೂಜೆಯನ್ನು ಭಕ್ತಾದಿಗಳು ನೆರವೇರಿಸಿದರು. ಈ ಬಾರಿಯೂ ಗ್ರಾಮದ ಆರಾಧ್ಯ ದೈವ ಶ್ರೀ ಗುರು ಚನ್ನಬಸವಣ್ಣನವರು ಹಾಗೂ ನೂರಾರು ಭಕ್ತರ ಸಮ್ಮುಖದಲ್ಲಿ ನೆರವೇರಿಸಲಾಯಿತು. ಪಾದಪೂಜೆ ಬಳಿಕ ಬಂದ ಭಕ್ತಾದಿಗಳಿಗೆ ದರ್ಶನ ಆಶೀರ್ವಾದವಿತ್ತು ಮಾತನಾಡಿದ ಶ್ರೀಗಳು ಮನುಷ್ಯನಿಗೆ ದೇವಾಲಯಗಳು ಶಾಂತಿ ನೆಮ್ಮದಿ ನೀಡುವ ತಾಣಗಳಾಗಿವೆ ಎಂದು ಹೇಳಿದರು.
ದೇಶದ ನಿಜವಾದ ಆಸ್ತಿ ಮಕ್ಕಳು
ದೇಶದ ನಿಜವಾದ ಆಸ್ತಿ ಮಕ್ಕಳು. ವಿದ್ಯಾರ್ಥಿಗಳು ಮುಂದಿನ ಮಾನವ ಸಂಪನ್ಮೂಲ, ಶಿಕ್ಷಕರು ಪೋಷಕರು ಕಾಳಜಿ ವಹಿಸಿ ಎಂದು ಡೀಸಿ ಲತಾ ಕುಮಾರಿ ತಿಳಿಸಿದರು. ಲೂ ಇನ್ನೂ ಹೆಚ್ಚಿನ ಗಮನವನ್ನು ಒಬ್ಬ ವಿದ್ಯಾರ್ಥಿಯು ಅನುತ್ತೀರ್ಣನಾಗಬಾರದು ಎಂಬ ನಿಟ್ಟಿನಲ್ಲಿ ಹೆಚ್ಚು ಕಾಳಜಿ ವಹಿಸಬೇಕು ಎಂದು ಶಿಕ್ಷಕರಿಗೆ ಸಲಹೆ ನೀಡಿದರು. ಪೋಷಕರಿಗೂ ಹೆಚ್ಚಿನ ಜವಾಬ್ದಾರಿ ಇರುತ್ತದೆ. ಮನೆಯಲ್ಲಿ ಮಕ್ಕಳ ಎದುರುಗಡೆ ಕೆಟ್ಟ ಪದಗಳನ್ನು ಬಳಸಬಾರದು. ಮನೆಯ ವಾತಾವರಣ ಪ್ರಶಾಂತವಾಗಿ, ಸಂತಸಮಯವಾಗಿ ಇರಬೇಕು, ಟಿವಿ, ಮೊಬೈಲ್ ಮೊದಲಾದವನ್ನು ಪೋಷಕರು ತ್ಯಾಗ ಮಾಡಬೇಕಾಗುತ್ತದೆ. ತಂದೆತಾಯಿಗಳ ಈ ತ್ಯಾಗದಿಂದ ಮಕ್ಕಳು ಒಂದು ಉತ್ತಮ ಗುರಿಯನ್ನು ಮುಟ್ಟಲು ಸಾಧ್ಯವಾಗುತ್ತದೆ ಎಂದರು.
  • < previous
  • 1
  • ...
  • 26
  • 27
  • 28
  • 29
  • 30
  • 31
  • 32
  • 33
  • 34
  • ...
  • 503
  • next >
Top Stories
ಕರ್ನಾಟಕದ 8 ಸಚಿವರ ಬಳಿ ₹100 ಕೋಟಿಗಿಂತ ಹೆಚ್ಚು ಆಸ್ತಿ
ಬುರುಡೆ ಪ್ರಕರಣದ ತನಿಖೆ ಎನ್‌ಐಎ ವಹಿಸಲು ಅಮಿತ್‌ ಶಾಗೆ ಸ್ವಾಮೀಜಿ ನಿಯೋಗ ಮನವಿ
ಪೊಲೀಸ್‌ ಠಾಣೆ ಮೇಲೆ ದಾಳಿ ಸೇರಿ 60 ಕೇಸ್‌ಗಳು ವಾಪಸ್‌ - ಕಾಂಗ್ರೆಸ್ಸಿಗರ ವಿರುದ್ಧದ 15 ಕೇಸುಗಳೂ ಹಿಂತೆಗೆತ
ಸ್ಥಳೀಯ ಚುನಾವಣೆಗೆ ಇವಿಎಂ ಬದಲಾಗಿ ಬ್ಯಾಲೆಟ್‌ : ಸಂಪುಟ
ವಿಚಾರಣೆ ವೇಳೆ ಪಶ್ಚಾತ್ತಾಪದಿಂದ ಚಿನ್ನಯ್ಯ ಕಣ್ಣೀರು!
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved