ಹೆದ್ದಾರಿ ಮೇಲೆ ಹರಿಯುತ್ತಿರುವ ಯುಜಿಡಿ ನೀರುಯುಜಿಡಿ ಪೈಪ್ ಒಡೆದು ಮಲಮೂತ್ರ ತ್ಯಾಜ್ಯ ನೀರು ಹೆದ್ದಾರಿ ರಸ್ತೆಯಲ್ಲಿ ಹರಿಯುತ್ತಿದ್ದು, ಅದರ ಮೇಲೆ ವಾಹನಗಳು ಓಡಾಡುವಾಗ ಸಾರ್ವಜನಿಕರ ಮೈಮೇಲೆ ಸಿಂಪಡಣೆ ಆಗುತ್ತಿದ್ದು, ಈ ಬಗ್ಗೆ ಪುರಸಭೆಯ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ ಎಂದು ಸುತ್ತಮುತ್ತಲಿನ ನಿವಾಸಿಗಳು ಪುರಸಭೆಗೆ ಹಿಡಿಶಾಪ ಹಾಕುತ್ತಿದ್ದಾರೆ. ಮಳೆ ಬಂದರಂತೂ ಮುಖ್ಯ ರಸ್ತೆಯಲ್ಲಿರುವ ಅಂಗಡಿ ಮುಂಗಟ್ಟುಗಳ ಮಾಲೀಕರ ಹಾಗೂ ಜನರ ಕಷ್ಟ ಹೇಳ ತೀರವಾಗಿದೆ. ಯುಜಿಡಿ ಕೊಳಚೆ ನೈರ್ಮಲ್ಯ ಇತರೆ ವಸ್ತುಗಳು ಒಟ್ಟಾಗಿ ಸೇರಿ ಅಂಗಡಿ ಮನೆಯೊಳಗೆ ನುಗ್ಗಿದರೆ ಅಲ್ಲಿ ಒಂದು ನಿಮಿಷ ಕೂಡ ಇರಲು ಅಸಾಧ್ಯವಾಗಿದ್ದು, ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ಇದ್ದು, ಜನರು ಪುರಸಭೆ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.