• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • Hassan

Hassan

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಪ್ರಧಾನಿ ಮೋದಿ ಹುಟ್ಟುಹಬ್ಬದಂಗವಾಗಿ ಪೆಂಡಾಲ್‌ ಗಣಪನಿಗೆ ವಿಶೇಷ ಪೂಜೆ
ಮೋದಿ ಹುಟ್ಟುಹಬ್ಬ ಪೆಂಡಾಲ್ ಗಣಪನಿಗೆ ವಿಶೇಷ ಪೂಜೆ ಮಾಜಿ ಶಾಸಕ ಪ್ರೀತಮ್ ಗೌಡ ಹಾಗೂ ಮೋದಿ ಅಭಿಮಾನಿಗಳಿಂದ ಕಾರ್ಯಕರ್ತರು ಹಾಗೂ ಮುಖಂಡರೊಂದಿಗೆ ಸೇರಿ ವಿಘ್ನ ನಿವಾರಕನಲ್ಲಿ ಪ್ರಾರ್ಥನೆ ಮಾಡಲಾಗಿದೆ ಎಂದರು. ಎಲ್ಲರೂ ವಿನಾಯಕನಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಮೋದಿ ಅವರ ೭೫ನೇ ಹುಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಗಿದೆ ಎಂದರು. ಎಲ್ಲರೂ ವಿನಾಯಕನಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಮೋದಿ ಅವರ ೭೫ನೇ ಹುಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಗಿದೆ ಎಂದರು.
ಹಾಸನ ಮಹಾನಗರ ಪಾಲಿಕೆಗೆ ಗಿರೀಶ್‌ ಚನ್ನವೀರಪ್ಪ ಹೊಸ ಮೇಯರ್
ಜೆಡಿಎಸ್‌ನೊಳಗಿನ ಭಾರೀ ಹಗ್ಗಜಗ್ಗಾಟದ ನಂತರ ಬುಧವಾರ ಹಾಸನ ಮಹಾನಗರ ಪಾಲಿಕೆಯ ನೂತನ ಮೇಯರ್‌ ಆಗಿ 8ನೇ ವಾರ್ಡ್‌ನ ಗಿರೀಶ್‌ ಚನ್ನವೀರಪ್ಪ ಮೇಯರ್‌ ಆಗಿ ಅವಿರೋಧವಾಗಿ ಆಯ್ಕೆಯಾದರು. ಬುಧವಾರ ನಡೆದ ಚುನಾವಣೆಯಲ್ಲಿ ಗಿರೀಶ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದು, ಮಧ್ಯಾಹ್ನದ ನಂತರ ಚುನಾವಣಾಧಿಕಾರಿಗಳಾದ ಮೈಸೂರು ಪ್ರಭಾರಿ ಪ್ರಾದೇಶಿಕ ಆಯುಕ್ತ ವೆಂಕಟರಾಜ ಅವರು ಗಿರೀಶ್‌ ಅವರ ಆಯ್ಕೆ ಘೋಷಿಸಿದರು. ಬಿಜೆಪಿ ಇತರರ ಬೆಂಬಲ ಪಡೆದು ಸ್ಪರ್ಧಾ ಅಖಾಡಕ್ಕಿಳಿಯಬಹುದೆಂದು ನಿರೀಕ್ಷಿಸಿದ್ದರೂ, ಕೊನೆಯಲ್ಲಿ ತಟಸ್ಥವಾಯಿತು.
ಕಾಫಿ ತೋಟಗಳಲ್ಲಿ ಕಾಡಾನೆಗಳ ದಾಂಧಲೆ
ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದಲ್ಲದೆ ಅಪಾರ ಪ್ರಮಾಣದ ಬೆಳೆ ಹಾನಿಯಿಂದ ಲಕ್ಷಾಂತರ ರುಪಾಯಿ ನಷ್ಟ ಅನುಭವಿಸುತ್ತಿದ್ದರು ಇಲಾಖೆಯು ಕೆಲವೇ ಸಾವಿರಾರು ರುಪಾಯಿಗಳ ಪರಿಹಾರ ನೀಡುತ್ತಾ ಕೃಷಿಕರ ಬದುಕನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿಸುತ್ತಿದ್ದಾರೆ ಎಂದು ಬೆಳ್ಳಾವರ ಗ್ರಾಮದ ಕೃಷಿಕರಾದ ವಿಶ್ವನಾಥ್ ನಾಯಕ್ ಬೇಸರ ವ್ಯಕ್ತಪಡಿಸಿದ್ದಾರೆ. ಅರೇಹಳ್ಳಿ ಭಾಗದ ಸುತ್ತಮುತ್ತಲಿನಲ್ಲಿ ಕಾಡಾನೆಗಳ ಹಾವಳಿ ವಿಪರೀತವಾಗುತ್ತಿರುವ ಹಿನ್ನೆಲೆಯಲ್ಲಿ ಇತ್ತೀಚೆಗೆ ಹಲವು ಬೆಳೆಗಾರರು ಸೋಲಾರ್‌ ತಂತಿ ಬೇಲಿಯನ್ನು ಅಳವಡಿಸುವತ್ತ ಮೊರೆ ಹೋಗಿದ್ದಾರೆ.
ಯತ್ನಾಳ್‌ ಹೇಳಿಕೆ ಖಂಡಿಸಿ ಭೀಮ್ ಆರ್ಮಿ ಸಂಘಟನೆ ಪ್ರತಿಭಟನೆ
ಭೀಮ್ ಆರ್ಮಿ ಚನ್ನರಾಯಪಟ್ಟಣ ತಾಲೂಕು ಅಧ್ಯಕ್ಷ ಎಚ್.ಎಸ್. ಮಂಜುನಾಥ್ ಮಾಧ್ಯಮದೊಂದಿಗೆ ಮಾತನಾಡಿ, ದಸರಾ ಉದ್ಘಾಟನೆಯ ಸಂದರ್ಭದಲ್ಲಿ ಮುಸ್ಲಿಂ ಮಹಿಳೆಗೂ ದಲಿತ ಮಹಿಳೆಗೂ ಉದ್ಘಾಟನೆ ಮಾಡುವ ಅರ್ಹತೆ ಇಲ್ಲ. ಕೇವಲ ಸನಾತನ ಧರ್ಮದ ಮಹಿಳೆಯರು ಮಾತ್ರ ಅರ್ಹರು ಎಂದು ಸಾರ್ವಜನಿಕವಾಗಿ ಮಾಧ್ಯಮದ ಮೂಲಕ ಹೇಳಿಕೆ ನೀಡಿದ್ದಾರೆ. ಇಂತಹ ಹೇಳಿಕೆಗಳು ಮುಸ್ಲಿಂ ಹಾಗೂ ದಲಿತ ಮಹಿಳೆಯರ ಗೌರವವನ್ನು ಹಾಳು ಮಾಡುತ್ತವೆ. ಜಾತಿ ಮತ್ತು ಧಾರ್ಮಿಕ ಭೇದಭಾವವನ್ನು ಪ್ರೋತ್ಸಾಹಿಸುತ್ತವೆ. ಇದು ಸಂವಿಧಾನದ ಜಾತ್ಯತೀತ ಮತ್ತು ಸಮಾನತೆಯ ತತ್ವಗಳಿಗೆ ವಿರುದ್ಧವಾಗಿದೆ ಎಂದು ದೂರಿದರು.
ಗಾಂಜಾ ಸಹಿತ ಓರ್ವನ ಬಂಧನ
ಹೊರವಲಯದ ಆನೆಮಹಲ್ ಗ್ರಾಮದ ಬಡಾವಣೆಯೊಂದರಲ್ಲಿ ಹಸೈನಾರ್ ಆಲಿಯಾಸ್ ಹ್ಯಾರೀಸ್ ಸಹಚರರು ಕಾರೊಂದರಲ್ಲಿ ಬಂದು ಗಾಂಜಾ ಸೊಪ್ಪನ್ನು ಮಾರಾಟ ಮಾಡುವಾಗ ಪ್ರಜ್ವಲ್ ಎಂಬುವನನ್ನು ಪೊಲೀಸರು ಬಂಧಿಸಿದ್ದು , ಹಸೈನಾರ್, ಶೋಯಬ್ ಪರಾರಿಯಾಗಿರುತ್ತಾರೆ. ಆರೋಪಿಗಳು ಕಾರಿನಲ್ಲಿ ಬಂದು ಗಾಂಜಾ ಸೊಪ್ಪನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಸಕಲೇಶಪುರ ನಗರ ಠಾಣೆಯ ಇನ್ಸ್‌ಪೆಕ್ಟರ್‌ ಎಂ.ಜಗದೀಶ್ ಅವರ ತಂಡ ದಾಳಿ ಮಾಡಿ ಸುಮಾರು ೭೫೦ ಗ್ರಾಂ ಗಾಂಜಾವನ್ನು ವಶಪಡಿಸಿ ಒಬ್ಬ ಆರೋಪಿಯನ್ನು ಬಂಧಿಸಿರುತ್ತಾರೆ.
ಗಣಪತಿ ಸನ್ನಿಧಾನದಲ್ಲಿ ಮುರುಳಿ ತಂಡದಿಂದ ಗಾನಸುಧೆ
ಹೊಳೆನರಸೀಪುರ ಪಟ್ಟಣದ ಗಣಪತಿ ಪೆಂಡಾಲಿನ ಮಹಾಗಣಪತಿ ಸಾಂಸ್ಕೃತಿಕ ವೇದಿಕೆಯಲ್ಲಿ ಮಂಗಳವಾರ ರಾತ್ರಿ ನಡೆದ ಗೀತಗಾಯನ ಕಾರ್ಯಕ್ರಮ ಸಭಿಕರ ಗಮನ ಸೆಳೆಯಿತು. ಹಾಸನದ ವಿದ್ವಾನ್ ಬಿ ಎನ್‌ ಎಸ್ ಮುರುಳಿ ಹಾಗೂ ಅವರ ಸಂಗೀತ ಶಾಲೆಯ ವಿದ್ಯಾರ್ಥಿಗಳಾದ ಸೌಮ್ಯ, ಪುಷ್ಪ, ರೇಖಾ ರಮೇಶ್, ರೇಖಾ ಸುರೇಶ್, ಪೂರ್ಣಶ್ರೀ, ಹರಿಣಿ, ಸುಮನಾ, ಸಿರಿ ಅವರು ಹಾಡಿದ ವಾರ ಬಂತಮ್ಮ ಗುರುವಾರ ಬಂತಮ್ಮ, ರಾಯರ ನೆನೆಯಮ್ಮ, ಶಿವನು ಬಿಕ್ಷಕೆ ಬಂದ ನೋಡುಬಾರೆ ತಂಗಿ, ಕಾಣದ ಕಡಲಿಗೆ, ಶಂಕರಾ ಭರಣಂ ಚಿತ್ರದ ತೆಲುಗು ಗೀತೆ ಜೊತೆಗೆ ತಂಡದವರು ಹಾಡಿದ ಭಾವಗೀತೆ, ರಾಗಾಧಾರಿತ ಚಲನಚಿತ್ರೆ ಗೀತೆ, ಭಕ್ತಿಗೀತೆಗಳು ಸಭಿಕರು ತಲೆದೂಗುವಂತೆ ಮಾಡಿತು.
ಸಮಾಜಕ್ಕೆ ವಿಶ್ವಕರ್ಮರ ಪಾತ್ರ ಅನನ್ಯ
ಜಗತ್ತಿಗೆ ಎಲ್ಲವನ್ನೂ ನೀಡಿದ ವಿಶ್ವಕರ್ಮರ ಕೊಡುಗೆ ಅಪಾರ. ವಿಶ್ವಕರ್ಮರು ಕುಲಕಸುಬು ಮಾಡುವುದರೊಂದಿಗೆ ಆರ್ಥಿಕವಾಗಿ ಸಬಲರಾಗಬೇಕು. ಸ್ವಾವಲಂಬಿ ಬದುಕು ನಡೆಸುವಂತಾಗಬೇಕು. ಅಜಂತಾ, ಎಲ್ಲೋರ ದೇವಾಲಯಗಳು, ಬೇಲೂರು ಹಳೇಬೀಡು ಶಿಲ್ಪ ಕಲೆಗಳು ವಿಶ್ವ ಪ್ರಸಿದ್ಧಿ ಪಡೆದಿವೆ. ಇದಕ್ಕೆ ಅಲ್ಲಿನ ಕೆತ್ತನೆ ಹಾಗೂ ಶಿಲ್ಪ ಕಲೆಗಳೇ ಸಾಕ್ಷಿ. ಆ ನಿಟ್ಟಿನಲ್ಲಿ ವಿಶ್ವಕರ್ಮರ ಕ್ರಿಯಾಶೀಲತೆಯನ್ನು ಕಾಣಬಹುದಾಗಿದೆ. ವಿಶ್ವಕರ್ಮರ ಕೆಲಸವು ಸ್ಥಳೀಯ ಉತ್ಪನ್ನಗಳನ್ನು, ಸಂಸ್ಕೃತಿಯನ್ನು ಮತ್ತು ಪರಂಪರೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಕರಕುಶಲಕರ್ಮಿಗಳ ಕೌಶಲ್ಯಗಳನ್ನು ಹೆಚ್ಚಿಸಲು ಮತ್ತು ಅವರನ್ನು ಬೆಂಬಲಿಸಲು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ’ಪಿಎಂ ವಿಶ್ವಕರ್ಮ ಯೋಜನೆ’ಯನ್ನು ಪ್ರಾರಂಭಿಸಿದೆ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು.
ತೇರಾಪಂಥ್‌ ಯುವಕ ಪರಿಷದ್‌ನಿಂದ ರಕ್ತದಾನ ಶಿಬಿರ
ರಕ್ತದಾನ ಶಿಬಿರವು ಹಾಸನದ ಅನೇಕ ಕಾಲೇಜುಗಳಲ್ಲಿ ಹಾಗೂ ನಮ್ಮ ತೇರಾಪಂಥ್ ಸಭಾಭವನದಲ್ಲಿ ಯಶಸ್ವಿಯಾಗಿ ನೆರವೇರಿತು. ಒಟ್ಟಾಗಿ 13 ರಕ್ತದಾನ ಶಿಬಿರಗಳು ಸೇರಿ 870 ರಕ್ತ-ಚೀಲವನ್ನು ಸಂಗ್ರಹಿಸಲಾಯಿತು. ಕಾರ್ಯಕ್ರಮಕ್ಕೆ ಸಂಸದರಾದ ಶ್ರೇಯಸ್ ಎಂ. ಪಟೇಲ್, ಶಾಸಕರಾದ ಸ್ವರೂಪ್ ಪ್ರಕಾಶ್ , ಜಿಲ್ಲಾಧಿಕಾರಿಗಳಾದ ಕೆ.ಎಸ್. ಲತಾ ಕುಮಾರಿ ಹಾಗೂ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾದ ಪುನೀತ್ ಗೌಡ ಕಾರ್ಯಕ್ರಮಕ್ಕೆ ಆಗಮಿಸಿದ್ದರು.
ಎಪಿಜೆ ಅಬ್ದುಲ್ ಕಲಾಂರವರು ಒಂದು ದೊಡ್ಡ ಶಕ್ತಿ
ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಫೌಂಡೇಶನ್ ವತಿಯಿಂದ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ತಾಲೂಕು ಘಟಕ ಚನ್ನರಾಯಪಟ್ಟಣ ಇವರ ಸಹಯೋಗದೊಂದಿಗೆ ಅಂತಾರಾಷ್ಟ್ರೀಯ ಪ್ರಥಮ ಚಿಕಿತ್ಸಾ ದಿನಾಚರಣೆಯ ಅಂಗವಾಗಿ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಹಾಗೂ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. ಕಲಾಂರವರ ಜೀವನಶೈಲಿಯು ಬಹಳ ಸರಳವಾಗಿತ್ತು ಹಾಗೂ ಎಷ್ಟು ಬಡ ವಿದ್ಯಾರ್ಥಿಗಳಿಗೆ ಜೀವನ ಕಲ್ಪಿಸಿ ಕೊಟ್ಟಂತ ಮಹಾತ್ಮ, ಇಂದು ಡಾ. ಎ.ಪಿ.ಜೆ ಅಬ್ದುಲ್ ಕಲಾಂ ರವರ ಹೆಸರನ್ನು ಅನುಸರಿಸಿ ನಮ್ಮ ಚನ್ನರಾಯಪಟ್ಟಣದಲ್ಲಿ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಫೌಂಡೇಶನ್ ಸಂಸ್ಥೆಯನ್ನು ಸ್ಥಾಪಿಸುತ್ತಿರುವುದು ಹೆಮ್ಮೆಯ ವಿಷಯ ಎಂದು ತಿಳಿಸಿದರು.
ಬೆಳೆಗೆ ಸೂಕ್ತ ಬೆಲೆ ಇಲ್ಲದಿದ್ದರೆ ರೈತರಿಗೆ ಸಂಕಷ್ಟ
ಬೆಳೆಗಾರರ ಶ್ರಮಕ್ಕೆ ಸೂಕ್ತ ಬೆಲೆ ಸಿಗದಿದ್ದರೆ ರೈತರ ಮತ್ತು ವರ್ತಕರ ಜೀವನ ಸಂಕಷ್ಟಕ್ಕೆ ಸಿಲುಕುತ್ತದೆ ಎಂದು ರಾಜ್ಯ ಹಸಿ ಶುಂಠಿ ವರ್ತಕರ ಮತ್ತು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಸಾಗರ್ ಬಾಬು ತಿಳಿಸಿದರು. ಶುಂಠಿ ಕೃಷಿಯು ಸುದೀರ್ಘ ಇತಿಹಾಸವನ್ನು ಹೊಂದಿದೆ. ಜಗತ್ತಿನಲ್ಲಿ ಬೆಳೆಯುವ ಶುಂಠಿಯ ಒಟ್ಟು ಪ್ರಮಾಣದಲ್ಲಿ ಸುಮಾರು ಶೇ. 30ರಷ್ಟು ಭಾರತದಲ್ಲಿ ಉತ್ಪಾದನೆಯಾಗುತ್ತದೆ, ಇದು ವಿಶೇಷ ಸಂಗತಿಯಾಗಿದೆ. ಶುಂಠಿ ಬೆಳೆಗಾರರು ಮತ್ತು ವರ್ತಕರಿಗೆ ವಿಶೇಷ ಸೌಲಭ್ಯಗಳು ಮತ್ತು ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು ಎಂದು ಅವರು ಹೇಳಿದರು.
  • < previous
  • 1
  • ...
  • 28
  • 29
  • 30
  • 31
  • 32
  • 33
  • 34
  • 35
  • 36
  • ...
  • 545
  • next >
Top Stories
ಹೊಸಬರ ಸಂತೈಸುವ ಬೆಚ್ಚಗಿನ ಕೈಯೊಂದು ಇಲ್ಲವಾದ ಸಂಕಟ! ಅಪ್ಪು ಇಲ್ಲದ ನಾಲ್ಕು ವರ್ಷಗಳು
ಬಿಹಾರ ಚುನಾವಣೆ ಬಳಿಕ ರಾಜ್ಯಕ್ಕೆ ರಾಹುಲ್‌ ಗಾಂಧಿ : ಬೇಳೂರು ಗೋಪಾಲಕೃಷ್ಣ
ಎಸಿ ಬಸ್‌ಗಳಲ್ಲಿ ಅಗ್ನಿ ಸುರಕ್ಷತಾ ಆಡಿಟ್‌ಗೆ ಮುಂದಾದ ನಿಗಮ
ನವೆಂಬರ್‌ ಕ್ರಾಂತಿ ಬಗ್ಗೆ ಚರ್ಚಿಸಿ ದಣಿವು ಮಾಡ್ಕೊಬೇಡಿ - ಶಿವಕುಮಾರ್‌ ಸಲಹೆ
ರಂಗಸನ್ಸ್ ಏರೋಸ್ಪೇಸ್ ಘಟಕಕ್ಕೆ ಎಂಬಿಪಾ ಚಾಲನೆ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved