ದೇವಾಲಯಗಳು ಇತಿಹಾಸದ ಮೇಲೆ ಬೆಳಕು ಚೆಲ್ಲುವ ಜೀವಂತ ಸ್ಮಾರಕಗಳುನಮ್ಮ ಭಾರತದ ಸನಾತನ ಸಾಹಿತ್ಯ, ಸಂಸ್ಕೃತಿ, ಧಾರ್ಮಿಕ ಕಾರ್ಯಕ್ರಮಗಳನ್ನು ಅಳವಡಿಸಿಕೊಂಡು ಹಾಗೂ ನಮ್ಮ ಪರಂಪರೆ ಮತ್ತು ದೇವಾಲಯಗಳು ಇತಿಹಾಸದ ಮೇಲೆ ಬೆಳಕು ಚೆಲ್ಲುವ ಜೀವಂತ ಸ್ಮಾರಕಗಳಾಗಿವೆ ಎಂದು ಮಾಜಿ ಸಚಿವ ಹಾಗೂ ಶಾಸಕರು ಎ ಮಂಜು ತಿಳಿಸಿದರು. ಇಂದಿನ ದಿನಗಳಲ್ಲಿ ಅನೇಕ ಒತ್ತಡಗಳಲ್ಲಿ ನಾವು ಕೆಲವು ಸಮಯ ಬದುಕಿನಲ್ಲಿ ದೇವರು ಮತ್ತು ಧರ್ಮದ ಹಾದಿಯಲ್ಲಿ ಸಾಗಿದರೆ ಮಾತ್ರ ನಾವು ಹಿಡಿದ ಕೆಲಸಗಳು ಕೈಗೂಡುವುದಲ್ಲದೆ ಮನಸ್ಸಿಗೆ, ಸುಖ, ಶಾಂತಿ, ನೆಮ್ಮದಿಯಿಂದ ಬಾಳಲು ಸಹಕಾರ ದೊರೆಯುತ್ತದೆ ಎಂದರು.