• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • Hassan

Hassan

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಕಾಡು ಕಡಿಮೆಯಾಗುತ್ತಿರುವುದರಿಂದ ಆನೆಗಳು ನಾಡಿಗೆ
ಹಾಸನ ಜಿಲ್ಲೆಯಲ್ಲಿ ಆನೆಗಳ ದಾಳಿಯಿಂದ ಕಳೆದ ವರ್ಷ ೭ ಹಾಗೂ ಈ ವರ್ಷ ಒಂದು ಸಾವು ಸಂಭವಿಸಿದೆ. ಈ ಬಗ್ಗೆ ನಮಗೆ ವಿಷಾದ ಇದೆ. ಅರಣ್ಯ ಪ್ರದೇಶ ಕಡಿಮೆ ಆಗುತ್ತಿದ್ದು, ಕಾಡಿನಲ್ಲಿನ ಪ್ರಾಣಿಗಳು ನಾಡಿಗೆ ಬರಲು ಪ್ರಾರಂಭಿಸಿವೆದೆ. ಹಾಸನ ಜಿಲ್ಲೆಯ ಆಲೂರು, ಬೇಲೂರು, ಬಿಕ್ಕೋಡು, ಸಕಲೇಶಪುರದ ಭಾಗಗಳಲ್ಲಿ ಕಾಡಾನೆಗಳು ತೋಟಗಳಿಗೆ ನುಗ್ಗಿ ಬೆಳೆ ಹಾನಿ ಮಾಡಿವೆ. ಪ್ರಾಣಹಾನಿ ಮಾಡಿವೆ. ಈ ಬಗ್ಗೆ ಸರ್ಕಾರಕ್ಕೆ ಸಂಪೂರ್ಣ ಮಾಹಿತಿ ಇದ್ದು, ಆನೆಗಳ ಹಾವಳಿ ತಡೆಗಟ್ಟಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಅರಣ್ಯ ಸಚಿವ ಈಶ್ವರ್ ಬಿ.ಖಂಡ್ರೆ ತಿಳಿಸಿದರು.
ಬೇಲೂರು ಪುರಸಭೆ ಅವಿಶ್ವಾಸದಲ್ಲಿ ಅಶೋಕ್‌ಗೆ ವಿಜಯ
ಪುರಸಭೆ ಅಧ್ಯಕ್ಷರ ವಿರುದ್ಧದ ಅವಿಶ್ವಾಸ ನಿರ್ಣಯ ಗೊತ್ತುವಳಿ ಸಭೆಯಲ್ಲಿ ಸದಸ್ಯರು ಮುಖ್ಯಾಧಿಕಾರಿ ವಿರುದ್ಧ ಹರಿಹಾಯ್ದರಲ್ಲದೆ ಕುರ್ಚಿಗಳನ್ನು ಪುಡಿ ಮಾಡಿದ್ದು ಇದನ್ನು ಸಂಸದರು ಹಾಗೂ ಶಾಸಕರು ಮೂಕಪ್ರೇಕ್ಷಕರಾಗಿ ನೋಡುವಂತಾಯಿತು. ಕೆಲ ಕೈ ಸದಸ್ಯರು ವೇದಿಕೆಯತ್ತ ದೌಡಾಯಿಸಿ ಸುಜಯ್ ಅವರ ಕೊರಳಪಟ್ಟಿ ಹಿಡಿದು ಎಳೆದಾಡಿದರು. ಪುರಸಭೆ ಸಭಾಂಗಣದಿಂದ ಮುಖ್ಯಾಧಿಕಾರಿಯನ್ನು ಹೊರದಬ್ಬಿದರು. ಇನ್ನೂ ಕೆಲವರು ಕುರ್ಚಿ, ಮೇಜುಗಳನ್ನು ಎಳೆದಾಡಿ ಮುರಿದು ಹಾಕಿ ಮೈಕನ್ನು ಧ್ವಂಸಗೊಳಿಸಿದರು. ಅವಿಶ್ವಾಸ ನಿರ್ಣಯ ಸಭೆಯಲ್ಲಿ ಮುಖ್ಯಾಧಿಕಾರಿ ಹಿಡಿದು ಎಳೆದಾಡಿದ ಕೈ ಸದಸ್ಯರು ಸಭೆ ನಡೆಸಲು ಮುಖ್ಯ ಅಧಿಕಾರಿಗೆ ಯಾವುದೇ ಅಧಿಕಾರವಿಲ್ಲ ಎಂದು ಆಕ್ರೋಶ ಹೊರ ಹಾಕಿದರು.
ಚಿರತೆ ಹಾವಳಿಗೆ ಮುಧೋಳ ನಾಯಿ ಬಲಿ
ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಸುಮಾರು ಕೇವಲ ೧೦೦ ಅಡಿಯ ದೂರದ ಕೃಷ್ಣಮೂರ್ತಿ ಅವರ ಮನೆಯಲ್ಲಿ ಮಧ್ಯರಾತ್ರಿ ೧-೨೫ಕ್ಕೆ ಈ ಘಟನೆ ನಡೆದಿದೆ. ಎಂದಿನಂತೆ ಮುಂಜಾನೆ ಬಾಗಿಲು ತೆಗೆದು ಮನೆಯಿಂದ ಹೊರಗಡೆ ಬಂದ ಕೃಷ್ಣಮೂರ್ತಿಯರು ನೋಡಿದಾಗ ನಾಯಿ ಇಲ್ಲದೆ ರಕ್ತ ಚೆಲ್ಲಿದ್ದು ಕಂಡು ಗಾಬರಿಯಿಂದ ಸಿಸಿಟಿವಿ ಪರೀಕ್ಷೆ ನಡೆಸಿದಾಗ ಚಿರತೆಯೊಂದು ನಾಯಿಯನ್ನು ಎಳೆದೊಯ್ದಿರುವುದು ಗೊತ್ತಾಗಿದೆ. ತದನಂತರ ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಿಷಯ ತಿಳಿಸಿದರೂ ಕೂಡ ಸ್ಥಳಕ್ಕೆ ಬಾರದೆ ಅಲ್ಲಿ ಬೋನ್ ಕೂಡ ಇಟ್ಟಿಲ್ಲ. ಚಿರತೆ ಓಡಾಡಿದ ಹೆಜ್ಜೆ ಗುರುತುಗಳು ಕಂಡುಬಂದಿದ್ದು ಕುಟುಂಬದವರು ಭಯಭೀತರಾಗಿದ್ದಾರೆ.
ಚೆಸ್ಕಾಂ ನೌಕರರು ಹಾಗೂ ಕುಟುಂಬಸ್ಥರಿಗೆ ಹೆಲ್ತ್‌ ಕಾರ್ಡ್‌

ಚೆಸ್ಕಾಂನ  ಅಧಿಕಾರಿಗಳು, ನೌಕರರು ಹಾಗೂ ಕುಟುಂಬ ಸದಸ್ಯರಿಗೆ ಆರೋಗ್ಯ ವಿಮೆ ಕಾರ್ಡ್ 

ಪುನೀತ್ ರಾಜ್‌ಕುಮಾರ್‌ ಪ್ರತಿಮೆ ಸುತ್ತ ಫ್ಲೆಕ್ಸ್ ಹಾವಳಿ
ಎನ್.ಆರ್‌. ವೃತ್ತದಲ್ಲಿರುವ ಪುನೀತ್ ರಾಜಕುಮಾರ್ ಪ್ರತಿಮೆಯ ಸುತ್ತ ಫ್ಲೆಕ್ಸ್, ಬ್ಯಾನರ್‌ಗಳ ಹಾವಳಿ ಹೆಚ್ಚಾಗಿದ್ದು, ತರೆವುಗೊಳಿಸುವಂತೆ ಅಖಿಲ ಕರ್ನಾಟಕ ಡಾ. ರಾಜ್ ಕುಮಾರ್, ಶಿವರಾಜಕುಮಾರ್, ಪುನೀತ್ ರಾಜಕುಮಾರ್ ಅಭಿಮಾನಿಗಳ ಸಂಘದಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಪ್ರತಿಮೆ ಸುತ್ತ ಪ್ಲೆಕ್ಸ್‌ಗಳಿಂದ ತುಂಬಿ ಹೋಗಿದ್ದು, ಸುಂದರವಾದ ಪ್ರತಿಮೆಯಲ್ಲಿ ಒಳ್ಳೆಯ ಸಂದೇಶವಿದೆ.. ಅದನ್ನ ಇತರರು ನೋಡಲು ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು.
ಶನಿದೇವರ ದೇವಸ್ಥಾನ ಲೋಕಾರ್ಪಣೆ
ಕೇರಳಾಪುರ ಗ್ರಾಮದ ಕಾವೇರಿ ಎಡದಂಡೆಯ ಮೇಲೆ ನೂತನವಾಗಿ ನಿರ್ಮಾಣ ಮಾಡಿರುವ ಶ್ರೀ ಶನೇಶ್ವರದೇವರ ಶಿಲೆ ಹಾಗೂ ನೂತನ ದೇವಾಲಯ ಲೋಕಾರ್ಪಣೆ ಹಾಗೂ ವಿಗ್ರಹ ಪ್ರತಿಷ್ಠಾಪನಾ ಕಾರ್ಯಕ್ರಮವುಜರುಗಿತು. ದೇವಸ್ಥಾನ ಪ್ರವೇಶದ ನಂತರ ಪೂಜಾದಿ ಕೈಂಕರ್ಯ, ನೂತನ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠಾಪನೆ ನಂತರ ರುದ್ರಬೀಷೆಕ, ಹೂವಿನ ಅಲಂಕಾರ, ಮಹಾಮಂಗಳಾರತಿ, ಹವನ, ಹೋಮ, ಅಷ್ಟದೇವರ ಪೂಜೆ ಇತ್ಯಾದಿಗಳನ್ನು ಅರ್ಚಕರಾದ ಅರುಣ್ ಕುಮರ್ ಶಾಸ್ತ್ರಿಗಳು ಮತ್ತು ತಂಡದವರು ನೇರವೇರಿಸಿದರು.
ಸಕಲೇಶಪುರ : ಮೊದಲ ದಿನವೇ ಕಾಡಾನೆ ಸೆರೆ

ಹಲವು ಜನರ ಜೀವಹರಣಕ್ಕೆ ಕಾರಣವಾಗಿದ್ದ ಕಾಡಾನೆ  ಡಿಎಫ್‌ಒ ಸೌರಭ್‌ ಕುಮಾರ್‌ ನೇತೃತ್ವದಲ್ಲಿ  ಸೆರೆ 

ಶಾಸಕರ ಕುಮ್ಮಕ್ಕಿನಿಂದ ಪುರಸಭೆ ಅಧ್ಯಕ್ಷರು ಉಲ್ಟಾ ಹೊಡೀತಿದಾರೆ
ಪುರಸಭೆ ಅಧ್ಯಕ್ಷ ಆರ್‌ ಅಶೋಕ್ ಅವರು ಕೊಟ್ಟ ಮಾತಿನಂತೆ ನಡೆದುಕೊಳ್ಳಲಿಲ್ಲ. ಆರಂಭದಲ್ಲಿ ನನಗೆ ಐದು ತಿಂಗಳ ಅವಕಾಶ ಕೊಡಿ ಎಂದು ಬೇಡಿಕೊಂಡರು. ಇರಲಿ ನಮ್ಮ ಹುಡುಗ ಎಂದು ಅಧಿಕಾರ ಕೊಟ್ಟೆವು. ಆರು ತಿಂಗಳ ಬಳಿಕ ಒಡಂಬಡಿಕೆಯಂತೆ ರಾಜೀನಾಮೆ ಕೊಡು ಎಂದು ಕೇಳಿದಾಗ ಚನ್ನಕೇಶವ ಸ್ವಾಮಿ ಜಾತ್ರೆ ಮುಗಿದ ಮೇಲೆ ಕೊಡುತ್ತೇನೆ ಎಂದರು. ಇದಕ್ಕೂ ಒಪ್ಪಿಗೆ ನೀಡಿ ಅವಕಾಶ ಕೊಡಲಾಗಿತ್ತು. ನಂತರದಲ್ಲಿ ನಮಗೆ ಅವರು ಉಲ್ಟಾ ಹೊಡೆದರು. ಈಗಾಗಲೇ ಕೊಟ್ಟ ಮಾತಿನಂತೆ ಇನ್ನೂ ಮೂವರಿಗೆ ಅಧ್ಯಕ್ಷ ಪದವಿಯನ್ನು ನೀಡಲು ಒಪ್ಪಂದವಾಗಿದೆ ಎಂದರು.
ಸಿಡಿಲಿನಿಂದ ವಿದ್ಯುತ್ ಪರಿವರ್ತಕಕ್ಕೆ ಹಾನಿ
ಸಿಡಿಲಿನ ಹೊಡೆತಕ್ಕೆ ವಿದ್ಯುತ್ ಪರಿವರ್ತಕ ಹಾನಿಯಾದ ಪರಿಣಾಮ ಇಲ್ಲಿನ ನಿವಾಸಿಗಳು ಕಳೆದ ಒಂದು ವಾರದಿಂದ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಸಿಂಗಲ್ ಫೇಸ್ ವಿದ್ಯುತ್ತನ್ನು ಇದೇ ಟಿಸಿ ಮೂಲಕ ಪೂರೈಸಲಾಗುತ್ತಿದೆ. ೫ ಕೊಳವೆಬಾವಿಗಳು ಈ ಟಿಸಿಯನ್ನೇ ಅವಲಂಬಿಸಿದ್ದು, ಓವರ್‌ ಹೆಡ್ ಟ್ಯಾಂಕ್ ಭರ್ತಿ ಮಾಡಿ ನೀರನ್ನು ಸರಬರಾಜು ಮಾಡಲಾಗುತ್ತಿತ್ತು. ಆದರೆ ಒಂದು ವಾರದಿಂದ ಸಿಂಗಲ್ ಫೇಸ್ ವಿದ್ಯುತ್ ಕಾರಣದಿಂದಾಗಿ ಕೊಳವೆ ಬಾವಿ ಮೋಟಾರ್ ಚಾಲನೆ ಆಗದ ಪರಿಣಾಮ ಸಂತೋಷನಗರ, ಮೇಲನಹಳ್ಳಿ, ಈದ್ಗಾ ರಸ್ತೆ, ಮುಖ್ಯ ರಸ್ತೆಯ ನಿವಾಸಿಗಳು ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ.
ಭಾರತೀಯ ಸೇನೆಗೆ ಜಯ ಸಿಗಲೆಂದು ಪೂಜೆ
ಪ್ರವಾಸಿಗರ ಮೇಲೆ ನಡೆದಿರುವ ದಾರುಣ ಹತ್ಯೆಯಿಂದ ಇಡೀ ರಾಜ್ಯ ಪ್ರವಾಸಿಗರಿಂದ ದೂರವೇ ಉಳಿಯಲಿದೆ. ಇದರಿಂದ ಪ್ರವಾಸೋದ್ಯಮ ನಂಬಿ ಜೀವಿಸುತ್ತಿರುವವರ ಒಂದೊತ್ತಿನ ಊಟಕ್ಕೂ ಸಮಸ್ಯೆಯಾಗಲಿದೆ ಆದರೂ ಸ್ಥಳೀಯರು ಉಗ್ರರಿಗೆ ಸಹಾಯ ಮಾಡುತ್ತಾರೆಂದರೆ ಇವರ ಧರ್ಮದ ಮೇಲಿನ ಧರ್ಮಾಂಧತೆಯನ್ನು ಎತ್ತಿ ಹಿಡಿಯುತ್ತಿದೆ. ಅತಿಯಾದ ಧರ್ಮಾಂದತೆ ಶಾಂತಿಯನ್ನು ಕದಡಲಿದೆ. ಸದ್ಯ ಕಾಶ್ಮೀರದಲ್ಲಿ ನಡೆಯುತ್ತಿರುವುದೇ ಇದೆ ಬೆಳವಣಿಗೆ. ಆದ್ದರಿಂದ ಈ ಬಾರಿ ಕೇಂದ್ರ ಸರ್ಕಾರ ಉಗ್ರಗಾಮಿ ಪೋಷಕರು ತಿರುಗಿ ನೋಡದಂತೆ ಪೆಟ್ಟು ನೀಡಬೇಕು ಎಂದು ಒತ್ತಾಯಿಸಿದರು.
  • < previous
  • 1
  • ...
  • 33
  • 34
  • 35
  • 36
  • 37
  • 38
  • 39
  • 40
  • 41
  • ...
  • 442
  • next >
Top Stories
ಒಂದೇ ದಿನ 7 ಸ್ಕೇರ್‌ ಇಂಡಿಯಾ ವಿಮಾನ ಹಾರಾಟ ರದ್ದು
ರೋಹಿತ್‌ ನಿವೃತ್ತಿಗೂ ಮೊದಲೇ ನಾಯಕತ್ವ ಬೇಡ ಅಂದಿದ್ದೆ: ಬೂಮ್ರಾ
ಭಾರತ-ಇಂಗ್ಲೆಂಡ್‌ ಟೆಸ್ಟ್‌ ಸರಣಿಯಿಂದ ಇಸಿಬಿಗೆ ₹600-800 ಕೋಟಿ?
ಇಂಗ್ಲೆಂಡ್‌ ಸರಣಿಗೂ ಮುನ್ನ ಲಂಡನಲ್ಲಿ ಗಿಲ್‌ ಜತೆ ಕೊಹ್ಲಿ ಸಭೆ
ಹಿರೇಬೆಣಕಲ್ ಮೊರೇರ ಬೆಟ್ಟ ವಿಶ್ವಪಾರಂಪರಿಕ ಪಟ್ಟಿಗೆ ಶೀಘ್ರ ಸೇರ್ಪಡೆ
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಪ್ರಪಂಚ
  • ಮನರಂಜನೆ
  • ವಿಶೇಷ
  • ಭಾರತ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved