ಹಾಸನ ದುರಂತ ಸ್ಥಳಕ್ಕೆ ಉಸ್ತುವಾರಿ ಕೃಷ್ಣಬೈರೇಗೌಡ ಭೇಟಿ, ಪರಿಶೀಲನೆಮೃತಪಟ್ಟಿರುವವರು, ಗಾಯಾಳುಗಳ ಪೈಕಿ ಅನೇಕರು ವಿದ್ಯಾರ್ಥಿಗಳು, ಯುವಕರು, ವಯಸ್ಸಾಗಿರುವಂತಹವರು, ಕುಟುಂಬದಲ್ಲಿ ಯಜಮಾನ ಸ್ಥಾನದಲ್ಲಿ ಇರುವಂತವರು ಆಗಿರುವುದರಿಂದ ಅವರ ಕುಟುಂಬದವರು ತಕ್ಷಣ ಚೇತರಿಸಿಕೊಳ್ಳಲು ಮುಖ್ಯಮಂತ್ರಿಯವರು ಸರ್ಕಾರದಿಂದ ೫ ಲಕ್ಷ ರು.ಗಳ ಪರಿಹಾರ ಮೊತ್ತ ಘೋಷಿಸಿದ್ದಾರೆ. ಅದನ್ನು ಇಂದೇ ತಲುಪಿಸಲು ತಹಸೀಲ್ದಾರ್ ಅವರಿಗೆ ಸೂಚಿಸಿದ್ದೇನೆ. ಸ್ಥಳೀಯ ಜನ ಇನ್ನೂ ಹೆಚ್ಚಿನ ಪರಿಹಾರ ಮೊತ್ತವನ್ನು ನೀಡಬೇಕೆಂದು ಒತ್ತಾಯ ಮಾಡಿದ್ದಾರೆ. ಈ ವಿಷಯ ಕುರಿತಾಗಿ ಮುಖ್ಯಮಂತ್ರಿಗಳ ಜೊತೆಗೆ ಚರ್ಚಿಸುವುದಾಗಿ ತಿಳಿಸಿದರು.