• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • Hassan

Hassan

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಹೆಸರಿಗಷ್ಟೇ ಗಂಭೀರ ಕಾಯಿಲೆಗಳ ತಪಾಸಣಾ ಶಿಬಿರ
ಏಳೆಂಟು ಟೇಬಲ್‌ನಲ್ಲಿ ಆಸ್ಪತ್ರೆಯ ಶುಶ್ರೂಷಕರು, ಪ್ರಾಥಮಿಕ ಆರೋಗ್ಯ ಕೇಂದ್ರಗಳ ನೌಕರರು ಹಾಗೂ ಕೆಲವು ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಕುಳಿತು ಬಿಪಿ, ಶುಗರ್‌ ಪರೀಕ್ಷೆ ನಡೆಸಿದರು. ಆಸ್ಪತ್ರೆಯ ಒಳಗೆ ವೈದ್ಯರು ದೊರೆಯುವ ಕೊಠಡಿಯ ಸಂಖ್ಯೆ ತಿಳಿಸಿ, ಅಲ್ಲಿಗೆ ಹೋಗಿ ವೈದ್ಯರನ್ನು ಭೇಟಿ ಮಾಡಿ ಎನ್ನುತ್ತಿದ್ದರು. ಆದರೆ ಟೇಬಲ್ ಮೇಲೆ ಜೋಡಿಸಿದ್ದ ಹಲವು ಔಷಧಿಗಳು ಪ್ರದರ್ಶನಕ್ಕೆ ಇಟ್ಟಂತಿತ್ತು. ಜತೆಗೆ ತಾಲೂಕು ಆಡಳಿತದ ಶೀರ್ಷಿಕೆಯಡಿ ಆಯೋಜನೆ ಮಾಡಿದ್ದ ಬೃಹತ್ ಆರೋಗ್ಯ ಮೇಳವು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಜಿಲ್ಲಾ ಮಟ್ಟಕ್ಕೆ ಬಸವರಾಜೇಂದ್ರ ಫ್ರೌಢಶಾಲೆಯ ವಿದ್ಯಾರ್ಥಿನಿಯರು ಆಯ್ಕೆ
ಬೇಲೂರು ತಾಲೂಕು ಮಟ್ಟದ ಪ್ರೌಢಶಾಲೆಯ ಕ್ರೀಡಾಕೂಟದಲ್ಲಿ ಹಳೇಬೀಡಿನ ಶ್ರೀ ಶೈಲ ಬಸವರಾಜೇಂದ್ರ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಥ್ರೋಬಾಲ್‌ನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಅದರಲ್ಲಿ ೩ ವಿದ್ಯಾರ್ಥಿನಿಯರಾದ ನಯನ, ವಿನುತ, ಅಕ್ಷತಾ ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿರುವುದು ಸಂತೋಷ ವಿಚಾರ ಎಂದು ನಿವೃತ ದೈಹಿಕ ಶಿಕ್ಷಕರಾದ ಚಂದ್ರೇಗೌಡ ತಿಳಿಸಿದರು. ಬಾಲಕಿ ವಿಭಾಗದಲ್ಲಿ ಥ್ರೋಬಾಲ್‌ನಲ್ಲಿ ಪ್ರಥಮ ಸ್ಥಾನಗಳಿಸಿದ್ದರು. ತಾಲೂಕು ಮಟ್ಟಕ್ಕೆ ನಯನ, ವಿನುತಾ, ಅಕ್ಷತಾ, ಗುಣಶ್ರೀ ,ಸೌಮ್ಯ, ಯೋಗ, ಖುಷಿ, ರೇವತಿ, ಅಮೃತ ಆಯ್ಕೆಯಾಗಿದ್ದರು.
ಕ್ರೀಡಾಭ್ಯಾಸದಿಂದ ಆರೋಗ್ಯ ಲಭಿಸಲಿದೆ
ಜ್ಞಾನದಿಂದ ವಿದ್ಯೆ ಲಭಿಸಿದರೇ,ದೈಹಿಕ ಶ್ರಮ ಮತ್ತು ಮಾನಸಿಕ ದೃಢತೆಯಿಂದ ಕ್ರೀಡೆಯಲ್ಲಿ ಸಾಧನೆ ಮಾಡಬಹುದಾಗಿದೆ. ತಾಲೂಕಿನಲ್ಲಿಯೂ ಅಂತಾರಾಷ್ಟ್ರೀಯ ಕ್ರೀಡಾಪಟುಗಳು ಚಿನ್ನ, ಬೆಳ್ಳಿ ಪದಕಗಳನ್ನು ಗೆದ್ದಿದ್ದಾರೆ. ಅಲ್ಲದೆ ಉತ್ತಮ ಜೀವನವನ್ನು ಸಹ ಕಟ್ಟಿಕೊಂಡಿದ್ದಾರೆ. ಕೇವಲ ಹವ್ಯಾಸಿಯಾಗಿ ಕ್ರೀಡಯಲ್ಲಿ ತೊಡಗಬಾರದು. ಸಾಧನೆ ಮಾಡುವ ನಿಟ್ಟಿನಲ್ಲಿ ತೊಡಗಿಕೊಳ್ಳಿ ಎಂದು ಸಲಹೆ ಮಾಡಿದರು.
ಜಗದ ನೋವಿಗೆ ಕಿವಿಗೊಡುವವನೇ ನಿಜವಾದ ಸಾಹಿತಿ
ಪೂರ್ಣಿಮಾರವರ "ಒಂದೆಲ ಮೇಲಿನ ಕಾಡು " ಕೃತಿಯನ್ನು ವಿಮರ್ಶೆ ಮಾಡುತ್ತಾ, ಸಾಹಿತ್ಯದಲ್ಲಿ ಸಂತೋಷಕ್ಕೆ ಒಂದೇ ಮುಖವಿದ್ದರೆ, ದುಃಖಕ್ಕೆ ಸಾವಿರಾರು ಮುಖಗಳಿವೆ. ಆದರೆ ಆ ನೋವಿನ ಹೂರಣಕ್ಕೆ ನಲಿವಿನ ಹೊದಿಕೆಯನ್ನು ನೀಡುವ ಪ್ರಕಾರವೇ ಲಲಿತ ಪ್ರಬಂಧ. ಪೂರ್ಣಿಮಾರವರ ಈ ಸಂಕಲನ ಒಂದು ಎಲೆಗೂ ತನ್ನದೇ ಆದ ಕಥೆ ಇರುವುದು ಎಂಬುದನ್ನು ನೆನಪಿಸುವಂತೆ, ಓದುಗರ ಮನಸ್ಸಿನ ಪರದೆಯ ಮೇಲೆ ಜೀವಂತ ಚಿತ್ರಗಳನ್ನು ಮೂಡಿಸುತ್ತದೆ ಎಂದರು.
ಸಮಾಜಕ್ಕೆ ಗುರುಗಳ ಕೊಡುಗೆ ಮರೆಯಬೇಡಿ
ಗುರುಗಳ ಕೊಡುಗೆ ಸದಾ ಅಮೂಲ್ಯವಾಗಿದ್ದು, ಸಮಾಜದ ನವೀನ ಪೀಳಿಗೆಯನ್ನು ರೂಪಿಸುವ ಶಕ್ತಿ ಗುರುಗಳಲ್ಲಿ ಅಡಕವಾಗಿದೆ ಎಂದು ನೆನಪಿಸಿದರು. ಮಹಾಸಭಾ ವತಿಯಿಂದ ನಡೆಯುತ್ತಿರುವ ಎಲ್ಲ ಕಾರ್ಯಕ್ರಮಗಳ ಬಗ್ಗೆ ಮತ್ತು ಎಲ್ಲರೂ ಆಸಕ್ತಿಯಿಂದ ವಿನೂತನ ಕಾರ್ಯಕ್ರಮಗಳನ್ನು ಆಚರಿಸುತ್ತಿರುವುದರ ಬಗ್ಗೆ ಪ್ರಶಂಸೆಯನ್ನು ಸಹ ವ್ಯಕ್ತಪಡಿಸಿದರು. ೨೦೨೫ ಸೆಪ್ಟಂಬರ್ 21ರ ಭಾನುವಾರ ನಡೆಯುವ ಬಸವ ಸಂಸ್ಕೃತಿ ಅಭಿಯಾನ ಜಿಲ್ಲೆಯಲ್ಲಿ ವಿಶೇಷವಾಗಿ ವಿನೂತನವಾಗಿ ಆಚರಿಸುವುದರ ಬಗ್ಗೆ ಜಿಲ್ಲೆಯ ಸಮಸ್ತ ಜನರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕರೆಯನ್ನು ಸಹ ನೀಡಿದರು ಮತ್ತು ಎಲ್ಲರಿಗೂ ಆಶೀರ್ವಚನ ನೀಡಿದರು.
ರೈಲ್ವೆ ಕಾಮಗಾರಿಯಿಂದ ಸ್ಥಳೀಯರಿಗೆ ತೊಂದರೆ
ರೈಲ್ವೆ ಕಾಮಗಾರಿಯಿಂದ ಸುತ್ತಮುತ್ತಲಿನ ಎಂಟು ಹಳ್ಳಿಗಳ ಜನತೆಗೆ ತೊಂದರೆ ಉಂಟಾಗಿದೆ. ಕೈಗಾರಿಕಾ ಪ್ರದೇಶಕ್ಕೆ ತೆರಳುವ ಕಾರ್ಮಿಕರು, ನಗರ ಪ್ರದೇಶ ಮತ್ತು ಬೈಪಾಸ್ ರಸ್ತೆಯಿಂದ ಸಂಚಾರ ನಡೆಸುವ ವಾಹನ ಸವಾರರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ದಿನನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಸ್ಥಳದಲ್ಲಿಯೇ ಜನರ ಅಹವಾಲುಗಳನ್ನು ಆಲಿಸಿದ ಶಾಸಕ ಸ್ವರೂಪ್, ತಕ್ಷಣ ಅಧಿಕಾರಿಗಳೊಂದಿಗೆ ಚರ್ಚಿಸಿ ಜನರ ಪರವಾಗಿ ಕಟುವಾಗಿ ಮಾತನಾಡಿ, ಕಾಮಗಾರಿ ತಕ್ಷಣ ನಿಲ್ಲಿಸಬೇಕು ಎಂದು ಸೂಚಿಸಿದರು.
ಖೋ ಖೋ ಪಂದ್ಯದಲ್ಲಿ ಮುದುಡಿ ಶಾಲೆ ಮಕ್ಕಳು ಜಿಲ್ಲಾ ಮಟ್ಟಕ್ಕೆ ಆಯ್ಕೆ
ತಾಲೂಕು ಮಟ್ಟದ ಪ್ರೌಢಶಾಲಾ ಕ್ರೀಡಾಕೂಟದ ಅಂಗವಾಗಿ ನಡೆದ ಬಾಲಕರ ಖೋ ಖೋ ವಿಭಾಗದಲ್ಲಿ ಗಂಡಸಿ ಹೋಬಳಿಯ ಮುದುಡಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದಿದ್ದಾರೆ. ಶಿಕ್ಷಕರು ಮತ್ತು ಪೋಷಕರಾಗಿ ನಿಂತಿರುವ ಶಿಕ್ಷಕ ವೃಂದ ವಿದ್ಯಾರ್ಥಿಗಳ ಈ ಸಾಧನೆಗೆ ಶ್ಲಾಘಿಸಿದರು. ನಮ್ಮ ಮಕ್ಕಳು ಪಠ್ಯ ವಿಷಯಗಳಲ್ಲಿ ಮಾತ್ರವಲ್ಲ, ಕ್ರೀಡಾ ಕ್ಷೇತ್ರದಲ್ಲಿಯೂ ಮುನ್ನಡೆಸುತ್ತಿದ್ದಾರೆ. ಇದೊಂದು ಸಮಗ್ರ ಶಿಕ್ಷಣದ ಸಾಕ್ಷ್ಯ ಎಂದು ಸಹ ಶಿಕ್ಷಕಿಯೊಬ್ಬರು ಉಲ್ಲೇಖಿಸಿದರು.
ಮಹಿಳೆಯರ ಬಾಳಿನ ನಿಜವಾದ ಶಕ್ತಿ ಶಿಕ್ಷಣದಲ್ಲಿದೆ
ಮಹಿಳೆಯರ ಮೇಲಿನ ಹಿಂಸೆ, ಅಪ್ರಾಪ್ತ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ, ಕಳ್ಳಸಾಗಣೆ ಹಾಗೂ ಬಾಲ್ಯವಿವಾಹ ಇನ್ನೂ ಸಮಾಜದಲ್ಲಿ ಕಾಡುತ್ತಿರುವ ಗಂಭೀರ ಸಮಸ್ಯೆಗಳು. ಶಿಕ್ಷಣ, ಜಾಗೃತಿ ಮತ್ತು ಕಾನೂನುಗಳ ಪರಿಣಾಮಕಾರಿ ಜಾರಿಯ ಮೂಲಕವೇ ಇದಕ್ಕೆ ಕಡಿವಾಣ ಹಾಕಬಹುದು ಎಂದು ತಜ್ಞರು, ಸಾಹಿತಿಗಳು ಹಾಗೂ ಸಮಾಜ ಸೇವಕರು ಅಭಿಪ್ರಾಯಪಟ್ಟರು. ಸಮಾಜ ಸೇವಕಿ ರೂಪ ಹಾಸನ್ ಮಾತನಾಡಿ, ಅಪ್ರಾಪ್ತೆಯರ ಮೇಲಿನ ದೌರ್ಜನ್ಯ ಕುರಿತು ಮಾತನಾಡಿ, ಪ್ರತಿ ವರ್ಷ ಸಾವಿರಾರು ಮಕ್ಕಳು ಲೈಂಗಿಕ ಹಿಂಸೆ, ಕಳ್ಳಸಾಗಣೆ ಮತ್ತು ಬಾಲ್ಯವಿವಾಹದ ಬಲಿಯಾಗುತ್ತಿದ್ದಾರೆ ಎಂದರು.
ಅತಿಥಿ ಉಪನ್ಯಾಸಕರ ನೇಮಕಾತಿ ಬಿಕ್ಕಟ್ಟಿಗೆ ತಕ್ಷಣ ಪರಿಹಾರ ಕೈಗೊಳ್ಳಿ
ರಾಜ್ಯದ ೪೩೨ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಹತ್ತು, ಹದಿನೈದು ಮತ್ತು ಇಪ್ಪತ್ತಕ್ಕೂ ಹೆಚ್ಚು ವರ್ಷಗಳ ಕಾಲಗಳಿಂದ ೧೧ ಸಾವಿರ ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುತ್ತಾ ಬಂದಿದ್ದೇವೆ. ಇವರಲ್ಲಿ ೫,೬೨೩ ಅತಿಥಿ ಉಪನ್ಯಾಸಕರು ಯುಜಿಸಿ ಅರ್ಹತೆ ಪಡೆದವರಿದ್ದು, ಉಳಿದ ೫,೩೫೩ ಅತಿಥಿ ಉಪನ್ಯಾಸಕರು ನಾನ್-ಯುಜಿಸಿ ಅವರುಗಳಾಗಿರುತ್ತಾರೆ. ಅದೇ ರೀತಿ ಹತ್ತಾರೂ ವರ್ಷಗಳ ಕಾಲ ಬೋಧನಾ ಅನುಭವ, ಬೋಧನಾ ಕೌಶಲ್ಯ ಹೊಂದಿ ಇದುವರೆಗೂ ಗುಣಮಟ್ಟದ ಪಾಠ ಪ್ರವಚನ ಮಾಡುತ್ತಾ ಲಕ್ಷಾಂತರ ವಿದ್ಯಾರ್ಥಿಗಳ ಬಾಳಿಗೆ ದಾರಿದೀಪವಾಗಿದ್ದೇವೆ. ನಮ್ಮಿಂದ ಬೋಧನಾ ಲಾಭ ಪಡೆದ ಲಕ್ಷಾಂತರ ವಿದ್ಯಾರ್ಥಿಗಳು ಇಂದು ಅನೇಕ ಉನ್ನತ ಹುದ್ದೆಗಳಲ್ಲಿ ಅವಕಾಶಗಳನ್ನು ಪಡೆದು ಕಾರ್ಯ ನಿರ್ವಹಿಸುತ್ತಿರುತ್ತಾರೆ ಎಂದರು.
ಎಂಸಿಇಯಲ್ಲಿ ಅವಿಶ್ವಾಸ ನಿರ್ಣಯದ ಪ್ರಹಸನ
ಸೋಮವಾರ ಕಾಲೇಜಿನ ಆವರಣದಲ್ಲಿ ಸಭೆಯೊಂದನ್ನು ಏರ್ಪಡಿಸಲಾಗಿತ್ತು. ಪೂರ್ವ ಸಿದ್ಧತೆಯಂತೆ ಹಾಲಿ ಅಧ್ಯಕ್ಷರಾದ ದ್ಯಾವೇಗೌಡರು ತಮ್ಮ 11 ಜನ ನಿರ್ದೇಶಕರೊಂದಿಗೆ ಸಭೆಗೆ ಬಂದಿದ್ದರು. ಅಶೋಕ್‌ ಹಾರನಹಳ್ಳಿ ಅವರು 10 ನಿರ್ದೇಶಕರೊಂದಿಗೆ ಆಗಮಸಿದ್ದರು. ಹೀಗಾಗಿ ಅಶೋಕ್‌ ಹಾರನಹಳ್ಳಿ ತಂಡ ಅಂದುಕೊಂಡಂತೆ ಅವಿಶ್ವಾಸ ನಿರ್ಣಯ ವ್ಯಕ್ತಪಡಿಸಲೂ ಆಗದೇ ವಾಪಸ್‌ ತೆರಳಿದರು. ಅಶೋಕ್‌ ಹಾರನಹಳ್ಳಿ ತಂಡ ಅಧಿಕಾರದ ಗದ್ದುಗೆಗೆ ಏರುತ್ತದೆ ಎಂದೆಲ್ಲಾ ಗುಸುಗುಸು ಇತ್ತು. ಅದರಂತೆ ಕಾಲೇಜಿನ ಎದುರು ಬಿಗಿ ಪೊಲೀಸ್‌ ಬಂದೋಬಸ್ತ್‌ ಕೂಡ ಮಾಡಲಾಗಿತ್ತು. ಆದರೆ, ಅಶೋಕ್‌ ಹಾರನಹಳ್ಳಿ ಅವರ ತಂಡ ಸರಳ ಬಹುಮತವೂ ಇಲ್ಲದ ಕಾರಣ ವಾಪಸ್‌ ತೆರಳಬೇಕಾಯಿತು.
  • < previous
  • 1
  • ...
  • 36
  • 37
  • 38
  • 39
  • 40
  • 41
  • 42
  • 43
  • 44
  • ...
  • 547
  • next >
Top Stories
ಇಂದಿನಿಂದ ಕಾಂತಾರ 1 ಟಿಕೆಟ್ ಬೆಲೆ ರು.99
ಬಿಸಿನೆಸ್ ತಂತ್ರ ಬದಲಿಸಿರುವ ಓಟಿಟಿಗಳು
ಪಟೇಲ್ ಮತ್ತು ಬೋಸ್ : ತತ್ವ ಭೇದಗಳಲ್ಲಡಗಿದ ರಾಷ್ಟ್ರಚಿಂತನೆ
ಗುಡ್‌ ಫ್ರೆಂಡ್‌ ಜೊತೆ ನಟಿಸಿದಷ್ಟು ಖುಷಿ ಆಗಿದ : ಮನೀಶಾ ಕಂದಕೂರ್‌
ರಾಷ್ಟ್ರೀಯ ಐಕ್ಯತೆ ಸಾರುತ್ತಿದೆ ಸರ್ದಾರ್‌ ‘ಮೂರ್ತಿ’!
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved