ಕಲಾವಿದರಿಗೆ ವೇದಿಕೆ ಕಲ್ಪಿಸುತ್ತಿರುವುದಕ್ಕೆ ಶ್ಲಾಘನೆಪಟ್ಟಣದ ಗಣಪತಿ ಪೆಂಡಾಲ್ ವೇದಿಕೆಯಲ್ಲಿ ಸಾರ್ವಜನಿಕ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಹಾಗೂ ಅವರ ಮಕ್ಕಳು ನಡೆಸಿಕೊಟ್ಟ ರಸಮಂಜರಿ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ, ಮಾತನಾಡಿದರು. ಪ್ರತಿದಿನ ಮಧ್ಯಾಹ್ನ ಶ್ರೀಸ್ವಾಮಿಗೆ ಮಹಾ ಮಂಗಳಾರತಿ ನೆರವೇರಿಸಿದ ನಂತರ ಭಕ್ತರಿಗೆ, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಅನ್ನಪ್ರಸಾದ ನೀಡುತ್ತಿರುವುದು ನಮ್ಮ ಸಂಸ್ಕೃತಿಯ ಪಾಲನೆ ಮತ್ತು ಅವರಣೆಗೆ ನೀಡುತ್ತಿರುವ ಗೌರವಕ್ಕೆ ಸಾಕ್ಷಿಯಾಗಿದೆ ಎಂದು ನುಡಿದರು. ರಾಜಕುಮಾರ್ ಹಾಡಿಗೆ ಮಾಡಿದ ನೃತ್ಯ, ಬಾಲಕ ದೊರೆ, ಗಣೇಶ್, ಇಷ್ಟಾರ್ಥ್ ಸ್ವಾಮಿ, ಬಾಲಕಿಯರಾದ ಇಂಪಿನಾ, ಅದ್ವಿತಾ, ಶೋಭಾ, ಸಂದ್ಯಾ ನಡೆಸಿಕೊಟ್ಟ ನೃತ್ಯ, ದಿಶಾಂತ್ನ ಶ್ಲೋಕಗಳು, ಮೇಘನಾ ತಂಡದ ಸಮೂಹ ನೃತ್ಯ ಸಭಿಕರನ್ನು ರಂಜಿಸಿತು.