ಕಂತೇನಹಳ್ಳಿ ಶನಿಮಹಾತ್ಮ ದೇವಸ್ಥಾನದಲ್ಲಿ ವಿಶೇಷ ಯಜ್ಞಮನುಕುಲದ ಆರೋಗ್ಯಕ್ಕಾಗಿ ಪ್ರಾರ್ಥಿಸಿ ಹಾಗೂ ಲೋಕ ಕಲ್ಯಾಣಾರ್ಥವಾಗಿ ಶ್ರೀ ಕ್ಷೇತ್ರ ಕಂತೇನಹಳ್ಳಿ ಶನಿಮಹಾತ್ಮ ದೇವಸ್ಥಾನದ ಸನ್ನಿಧಿಯಲ್ಲಿ ಕೋಟಿ ದತ್ತ ಜಪ ಯಜ್ಞ ಫಲ ಸಮರ್ಪಣೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ದೇವಾಲಯದ ಪ್ರಧಾನ ಅರ್ಚಕರೂ ಆದ ಮುರುಳಿ ಮಂದಾರ್ತಿ ತಿಳಿಸಿದರು. ಮೂರು ದಿನಗಳ ಕಾಲ ನಡೆಯುವ ಈ ಒಂದು ಧಾರ್ಮಿಕ ಸಮಾರಂಭವು, ಪ್ರತಿದಿನ ವಿಶೇಷ ಪೂಜೆಗಳಿಂದ, ಜಪ-ತಪ ಹಾಗೂ ಯಜ್ಞ ಯಾಗಾದಿಗಳಿಂದ ನೆರವೇರಲಿದ್ದು, ಭಕ್ತ ಮಹಾಶಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ದತ್ತಾತ್ರೇಯ ಸ್ವಾಮಿ ಹಾಗೂ ಕ್ಷೇತ್ರಪಾಲಕ ಶನೇಶ್ವರ ಸ್ವಾಮಿ ಅವರ ಕೃಪೆಗೆ ಪಾತ್ರರಾಗುವಂತೆ ಮನವಿ ಮಾಡಿದರು.