• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • Hassan

Hassan

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಡಿಜಿಟಲ್‌ ಗ್ರಂಥಾಲಯ ಉದ್ಘಾಟನೆ
ಪಂಚಾಯತಿಯು ಸಾರ್ವಜನಿಕರಿಗೆ ಸದುಪಯೋಗವಾಗಬೇಕು. ನಾವು ಶಾಶ್ವತವಲ್ಲ, ನಾವು ಮಾಡುವ ಕೆಲಸವೇ ಶಾಶ್ವತ. ಜುನಾಯಿತ ಪ್ರತಿನಿಧಿಗಳು ತಮಗೆ ಸಿಕ್ಕಂತಹ ಅವಕಾಶದಲ್ಲಿ ಸಾರ್ವಜನಿಕರಿಗೆ ಉಪಯೋಗವಾಗುವಂತಹ ಹಾಗೂ ಗ್ರಾಮಗಳಿಗೆ ಶಾಶ್ವತವಾದಂತಹ ಕೆಲಸಗಳನ್ನು ಮಾಡಬೇಕು. ನನ್ನ ಅವಧಿಯಲ್ಲಿ ಜಲಜೀವನ್ ಮೂಲಕ ಇಡೀ ತಾಲೂಕಿನ ಮನೆಮನೆಗೂ ನೀರು ಒದಗಿಸುವ ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯ ಇದನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಿ ಎಂದು ತಿಳಿಸಿದರು.
ಮನೆಕಂದಾಯ ಕಟ್ಟಲು ಆಕ್ಸಿಸ್‌ ಬ್ಯಾಂಕ್‌ನಲ್ಲಿ ಅವ್ಯವಸ್ಥೆ
ನಗರಸಭೆಯಲ್ಲಿ ಸಂಜೆ ೬ ಗಂಟೆಯವರೆಗೂ ಮನೆ ಕಂದಾಯ ಕಟ್ಟಲು ಅವಕಾಶ ನೀಡಿದ್ದರೇ ಎಕ್ಸಿಸ್ ಬ್ಯಾಂಕ್ನಲ್ಲಿ ಕೇವಲ ಮಧ್ಯಾಹ್ನ ೧ ಗಂಟೆಯವರೆಗೂ ಅವಕಾಶ ಕೊಟ್ಟಿರುವುದು ಸಮಸ್ಯೆ ಆಗಿದೆ. ಇನ್ನು ಈ ಬ್ಯಾಂಕಿನಲ್ಲಿ ಎರಡು ಕೌಂಟರ್ ಇದ್ದು, ಇದರಲ್ಲಿ ಬ್ಯಾಂಕ್ ಗ್ರಾಹಕರಿಗೆ ಒಂದು ಕೌಂಟರ್ ಮತ್ತೊಂದು ಕೌಂಟರ್ ನಗರಸಭೆ ಮನೆ ಕಂದಾಯ ಕಟ್ಟಲು ನಿಗದಿ ಮಾಡಿದ್ದಾರೆ. ಒಂದು ಕೌಂಟರ್ ನೀಡಿರುವುದರಿಂದ ಸರದಿ ಸಾಲು ಬ್ಯಾಂಕ್ ಒಳಗಿನಿಂದ ಹೊರಗೆ ಬಂದು ಜನರು ಕ್ಯೂನಲ್ಲಿ ನಿಂತಿದ್ದಾರೆ. ಕೂಡಲೇ ಇನ್ನಷ್ಟು ಬ್ಯಾಂಕುಗಳಲ್ಲಿ ಹಣ ಕಟ್ಟಲು ಅವಕಾಶ ಮಾಡಿಕೊಡುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ.
ನಮ್ಮನಮ್ಮಲ್ಲೇ ಒಡಕುಂಟುಮಾಡುವವರ ಬಗ್ಗೆ ಎಚ್ಚರದಿಂದ ಇರಬೇಕು
ನಮ್ಮನಮ್ಮಲ್ಲೇ ಬಿರುಕು ಉಂಟುಮಾಡುವ ಅನೇಕ ಶಕ್ತಿಗಳು ಸಮಾಜದಲ್ಲಿವೆ. ಅವೆಲ್ಲವನ್ನೂ ಮೆಟ್ಟಿ ನಿಂತು ಒಗ್ಗಟ್ಟಾಗಿರಬೇಕು ಹಾಗೂ ಎಲ್ಲರೂ ಒಂದೇ ಎಂಬಂತೆ ಸಾಮರಸ್ಯದಿಂದ ಸಹೋದರರಂತೆ ಜೀವನ ನಡೆಸಬೇಕು ಎಂದು ಎಸ್.ಸಿ, ಎಸ್.ಟಿ. ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಕ್ಷರ ಸಂಘದ ಜಿಲ್ಲಾಧ್ಯಕ್ಷ ದೊಡ್ಡಮಗ್ಗೆ ರಾಜೇಂದ್ರ ಕರೆ ನೀಡಿದರು. ಎಲ್ಲ ಮಹನೀಯರು ತಮ್ಮ ಜೀವನದಲ್ಲಿ ಎಲ್ಲಾ ಸಮುದಾಯದ ಅಭ್ಯುದಯಕ್ಕಾಗಿ ಅನುಭವಿಸಿದ ಕಷ್ಟ, ನೋವು ನಲಿವುಗಳ ಬಗ್ಗೆ ನಾವೆಲ್ಲ ತಿಳಿಯಬೇಕಿದೆ ಎಂದರು.
ಸಮಾಜವನ್ನು ಬೆಳಕಿನೆಡೆಗೆ ಕೊಂಡೊಯ್ದ ಮಹಾನ್‌ ವ್ಯಕ್ತಿ ಅಂಬೇಡ್ಕರ್‌
ಅಂಬೇಡ್ಕರ್‌ ಎದುರಿಸಿದ ಕಷ್ಟಕರ ಜೀವನವನ್ನು ಮರೆತು ತಮ್ಮದೇ ದೃಢ ನಿರ್ಧಾರ ಕೈಗೊಂಡು ಮುಂದಿನ ಪೀಳಿಗೆಗೆ ಅನುಕೂಲ ಕಲ್ಪಿಸಿದ ನಿಟ್ಟಿನಲ್ಲಿ ಅವರು ಬರೆದ ಮಹಾನ್ ಹಾಗೂ ಬೃಹತ್ ಗ್ರಂಥವಾದ ಸಂವಿಧಾನ ಕೊಡ ಮಾಡಿದ ಮಹಾನ್ ಪುರುಷರು. ಭಾರತರತ್ನ ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನದಲ್ಲಿ ನಮ್ಮ ಹಕ್ಕುಗಳನ್ನು ತಿಳಿಸಿ ಕೊಡುವ ಜತೆಗೆ ನಮ್ಮ ಆದ್ಯ ಕರ್ತವ್ಯವನ್ನೂ ಎಚ್ಚರಿಕೆಯಿಂದ ತಿಳಿಸಿಕೊಟ್ಟಿದ್ದಾರೆ. ಸಮಾಜದ ಅಭಿವೃದ್ಧಿಗೆ ಅವರ ಕೊಡುಗೆ ಅಮೂಲ್ಯವಾಗಿದೆ ಜತೆಗೆ ಅವರ ಆದರ್ಶಗಳನ್ನು ಪಾಲನೆ ಮಾಡುತ್ತಾ, ನಮ್ಮ ಮೇಲಿರುವ ಗುರುತರ ಜವಾಬ್ದಾರಿಯನ್ನು ಉಳಿಸಿಕೊಂಡು, ಬಳಸಿಕೊಂಡು ಉತ್ತಮ ಜೀವನ ನಡೆಸೋಣವೆಂದು ಕರೆ ಕೊಟ್ಟರು.
ಸೇವೆಗಾಗಿ ಸಿದ್ಧನಾಗಿ ಸಮಾಜದಲ್ಲಿ ಉತ್ತಮ ಪ್ರಜೆ ಆಗಬೇಕು
ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್‌ಗೆ ಒಂದು ಉದ್ದೇಶವನ್ನು ಕೊಡಲಾಗಿದ್ದು, ಮುಖ್ಯವಾಗಿ ನೀವು ಸಂತೋಷವಾಗಿರಬೇಕು. ಸೇವೆಗಾಗಿ ಸದಾ ಸಿದ್ಧನಾಗಿರಬೇಕು. ಎಲ್ಲದಕ್ಕಿಂತ ಪ್ರಮುಖವಾಗಿ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಬಾಳ್ವೆಯನ್ನು ನಡೆಸುವುದು ಎಂದು ಸ್ಕೌಟ್ಸ್ ಮತ್ತು ಗೈಡ್ಸ್ ನ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ ತಿಳಿಸಿದರು. ಜಯಚಾಮರಾಜೇಂದ್ರ ಒಡೆಯರ್ ಇದರ ಮೊದಲ ಸದಸ್ಯರಾಗಿ ಅಂದಿನಿಂದ ಇಂದಿನವರೆಗೂ ಬೆಳೆದುಬಂದ ಹಾದಿಯಲ್ಲಿ ಶಿಸ್ತು, ಸಂಯಮ, ಸಮಾಜ ಸೇವೆ, ಪ್ರಕೃತಿ ರಕ್ಷಣೆ ಸಲುವಾಗಿ ಸಂಸ್ಥೆ ಕೆಲಸ ಮಾಡುತ್ತಿದೆ ಎಂದು ಮಾಹಿತಿ ನೀಡಿದರು.
ಅಂಬೇಡ್ಕರ್ ಕೊಡುಗೆ ಭಾರತದ ಬೆಳವಣಿಗೆಗೆ ಭದ್ರ ಬುನಾದಿ
ಬ್ರಿಟೀಷರ ಆಕ್ರಮಣ ನೀತಿ, ರಾಜ ಮಹಾರಾಜರ ಪ್ರಾಂತ್ಯವಾರು ಆಡಳಿತವಿದ್ದ ವಿಭಿನ್ನ ಸನ್ನಿವೇಶದಲ್ಲಿ ರೂಪುಗೊಂಡ ಹಾಗೂ ಸ್ವಾತಂತ್ರ್ಯ ಭಾರತ ಹೇಗೆ ಮುನ್ನಡೆಯಲಿದೆ ಎಂದು ವಿಶ್ವ ಸಮುದಾಯವೇ ಕುತೂಹಲದಿಂದ ನೋಡುತ್ತಿದ್ದ ಕಾಲಘಟ್ಟದಲ್ಲಿ, ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ವಿರಚಿತ ಸಂವಿಧಾನ ಸದೃಢ ಭಾರತ ನಿರ್ಮಾಣಕ್ಕೆ ನೀಡಿದ ಕೊಡುಗೆ ಅಪಾರ ಎಂದು ಹೇಳಿದರು. ಸ್ವಾತಂತ್ರ್ಯ ನಂತರ ಸಂವಿಧಾನದ ಮೂಲಕ ಅಂಬೇಡ್ಕರ್ ನೀಡಿರುವ ಕೊಡುಗೆ ಭವ್ಯ ಭಾರತದ ಬೆಳವಣಿಗೆಗೆ ಭದ್ರ ಬುನಾದಿಯಾಗಿದೆ ಎಂದರು.
ಬೇಲೂರು ಪುರಸಭೆ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಸಭೆಗೆ ಮನವಿ
ಸದಸ್ಯರನ್ನು ಒಗ್ಗೂಡಿಸಿಕೊಂಡು ಹೋಗದ ಹಿನ್ನೆಲೆ ಹಾಗೂ ಸಣ್ಣಪುಟ್ಟ ವೈಮನಸ್ಸಿನಿಂದಾಗಿ ಪಕ್ಷಕ್ಕೆ ಮುಜುಗರ ತಂದಿದ್ದು, ಕಮಲ ಪಕ್ಷದ ವರಿಷ್ಠರ ತೀರ್ಮಾನದಂತೆ ಎಲ್ಲಾ ಸದಸ್ಯರ ಒಮ್ಮತ ಸಂಗ್ರಹಿಸಲು ಅವಿಶ್ವಾಸ ನಿರ್ಣಯವನ್ನು ಮಂಡಿಸಲು ಕೂಡಲೇ ಸಭೆ ಕರೆಯುವಂತೆ ಪುರಸಭೆ ಅಧ್ಯಕ್ಷರಿಗೆ ಹಾಗೂ ಮುಖ್ಯಾಧಿಕಾರಿ ಸುಜಯ್ ಅವರಿಗೆ ಪುರಸಭೆ ಮಾಜಿ ಅಧ್ಯಕ್ಷರು ಹಾಗೂ ಸದಸ್ಯರಾದ ಬಿ ಶಾಂತಕುಮಾರ್, ಬಿ ಗಿರೀಶ್, ಸಿ ಎನ್ ದಾನಿ ಹಾಗೂ ಅಕ್ರಂ ಪಾಷ ಮನವಿ ಪತ್ರ ಸಲ್ಲಿಸಿದ್ದಾರೆ‌.
ಕುಡಿಯುವ ನೀರಿನ ಪೈಪ್‌ಲೈನ್ ಕಾಮಗಾರಿಗೆ ಗುದ್ದಲಿಪೂಜೆ
ವಿಜಯನಗರ ಬಡಾವಣೆಗೆ ಹೇಮಾವತಿ ನದಿಯಿಂದ ಶಾಶ್ವತ ಕುಡಿಯುವ ನೀರು ಒದಗಿಸುವ ಸಲುವಾಗಿ ಪೈಪ್‌ಲೈನ್ ಮಾಡಲು ಶಾಸಕರಾದ ಎಚ್ ಪಿ ಸ್ವರೂಪ್ ಪ್ರಕಾಶರವರು ಭೂಮಿಪೂಜೆ ನೆರವೇರಿಸಿದರು. ಇದುವರೆಗೂ ಈ ಬಡಾವಣೆಗೆ ಕುಡಿಯುವ ನೀರಿಗಾಗಿ ಕೊಳವೆ ಬಾವಿಗಳಿಂದ ಕುಡಿಯುವ ನೀರನ್ನು ಒದಗಿಸಲಾಗುತ್ತಿತ್ತು. ಇನ್ನು ಮುಂದೆ ಹೇಮಾವತಿ ನದಿ ನೀರು ಬರಲಿದೆ ಎಂದರು.
ಆಲೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಸುರೇಶ್ ಆಯ್ಕೆ
ಎಐಸಿಸಿ ಅಧ್ಯಕ್ಷ ಎಂ. ಮಲ್ಲಿಕಾರ್ಜುನ ಖರ್ಗೆ, ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷರಾದ ರಾಜೇಶ್ ಲಿಲೋತಿಯಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರ ನಾಯಕತ್ವದಲ್ಲಿ ಎಚ್. ಸುರೇಶ್, ಮುರುಳಿ ಮೋಹನ್ ಸೇರಿದಂತೆ ಪಕ್ಷದ ಎಲ್ಲಾ ಮುಖಂಡರಿಗೆ ಹಾಗೂ ಕಾಂಗ್ರೆಸ್ ಮುಖಂಡರ ಶಿಫಾರಸ್ಸಿನ ಮೇಲೆ ಹಾಗೂ ಪರಿಶಿಷ್ಟ ಜಾತಿ ವಿಭಾಗದ ಹಾಸನ ಜಿಲ್ಲಾಧ್ಯಕ್ಷ ಎಂ.ಕೆ. ದೇವಪ್ಪ ಮಲ್ಲಿಗೆವಾಲು ಅನುಮೋದನೆಯೊಂದಿಗೆ ಸಕಲೇಶಪುರ ವಿಧಾನಸಭಾ ಕ್ಷೇತ್ರದ ಆಲೂರು ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿರುತ್ತದೆ ಎಂದರು.
ಅರೇಹಳ್ಳಿ ಕಾಫಿ ಬೆಳೆಗಾರರ ಸಂಘಕ್ಕೆ ಬೆಳ್ಳಿ ಹಬ್ಬದ ಸಂಭ್ರಮ
ಅರೇಹಳ್ಳಿಯ ಸಕಲೇಶಪುರ ರಸ್ತೆಯಲ್ಲಿರುವ ಕಾಫಿ ಬೆಳೆಗಾರರ ಸಂಘದ ಶ್ರೀ ಸಿದ್ದೇಶ್ ನಾಗೇಂದ್ರ ವೇದಿಕೆಯಲ್ಲಿ ಆಯೋಜನೆ ಮಾಡಲಾಗಿದ್ದ ಬೆಳ್ಳಿಹಬ್ಬ ಸಂಭ್ರಮ, ಮೊದಲನೇ ಮಹಡಿ ಕಟ್ಟಡದ ಉದ್ಘಾಟನೆ ಹಾಗೂ ವಾರ್ಷಿಕ ಮಹಾಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದ ಅವರು, ಈ ವರ್ಷ ಕಾಫಿ ಮೂಲಕ ವಂತಿಗೆ ರೂಪದಲ್ಲಿ ೧೫ ಲಕ್ಷ ರು. ಸಂಗ್ರಹಿಸಿ ಸಂಘದ ಬೆಳವಣಿಗೆಗಾಗಿ ಸೇವೆ ಮಾಡಲಾಗುತ್ತಿದೆ ಎಂದರು. ಕಾಡಾನೆ ಸಮಸ್ಯೆಗಳಿಗೆ ಸೂಕ್ತ ಪರಿಹಾರ ದೊರಕುವಂತೆ ಮಾಡುವಲ್ಲಿ ನಿರಂತರ ಹೋರಾಟವನ್ನು ಮಾಡಿಕೊಂಡು ಬರಲಾಗುತ್ತಿದೆ ಎಂದರು.
  • < previous
  • 1
  • ...
  • 41
  • 42
  • 43
  • 44
  • 45
  • 46
  • 47
  • 48
  • 49
  • ...
  • 442
  • next >
Top Stories
ಆಲಮಟ್ಟಿ ಅಣೆಕಟ್ಟು ಪುನಶ್ಚೇತನ ಕಾಮಗಾರಿ ಶುರು
ಗ್ಯಾರಂಟಿ ಹೆಸರಲ್ಲಿ ಅಭಿವೃದ್ಧಿ ಕಡೆಗಣನೆ : ನಿಖಿಲ್‌
43 ಕಿಮೀ ಉದ್ದದ ಇಂಗ್ಲಿಷ್‌ ಕಾಲುವೆ 13.37 ಗಂಟೆಯಲ್ಲಿ ಈಜಿದ ಚನ್ನಣ್ಣವರ ತಂಡ!
ಕೆಎಸ್ಸಾರ್ಟಿಸಿಯಲ್ಲಿ 8 ವರ್ಷದ ಬಳಿಕ ನೇಮಕ ಪ್ರಕ್ರಿಯೆ ಶುರು
ಶಾಲೆ ಶುರುವಾಗಿ 20 ದಿನ ಆದ್ರೂ ಶೂ, ಸಾಕ್ಸ್‌ ಇಲ್ಲ!
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಪ್ರಪಂಚ
  • ಮನರಂಜನೆ
  • ವಿಶೇಷ
  • ಭಾರತ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved