• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • Hassan

Hassan

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಹಾಸನದಲ್ಲಿ ನರೇಗಾ ಸಿಬ್ಬಂದಿಗೆ 6 ತಿಂಗಳಿಂದ ವೇತನವಿಲ್ಲ
ರಾಜ್ಯಾದ್ಯಂತ ನರೇಗಾ ಯೋಜನೆಯಡಿ ಹೊರಸಂಪನ್ಮೂಲದ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ಕಳೆದ 6 ತಿಂಗಳುಗಳಿಂದ ವೇತನ ಪಾವತಿಯಾಗಿಲ್ಲ. ಕೂಡಲೇ ನೌಕರರ ಬಾಕಿ ವೇತನವನ್ನು ಪಾವತಿ ಮಾಡಲು ಅಗತ್ಯ ಕ್ರಮ ವಹಿಸುವಂತೆ ಆಗ್ರಹಿಸಿ ಜಿಲ್ಲಾ ಪಂಚಾಯಿತಿ ಮುಂದೆ ರಾಜ್ಯ ಮಹಾತ್ಮ ಗಾಂಧಿ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಪ್ರತತಿಭಟನೆ ನಡೆಸಿ ಜಿಪಂ ಉಪ ಕಾರ್ಯದರ್ಶಿಯವರಿಗೆ ಮನವಿ ಸಲ್ಲಿಸಿದರು.
ಹಾಸನದಲ್ಲಿ ದಶಕದಿಂದ ಮುಚ್ಚಿದ್ದ ಸರ್ಕಾರಿ ಶಾಲೆಗೆ ಮರುಜೀವ
ನೂರು ವರ್ಷಗಳ ಇತಿಹಾಸವಿರುವ ರಾಚೇನಹಳ್ಳಿ ಸರ್ಕಾರಿ ಶಾಲೆಯು ಕಳೆದ 13 ವರ್ಷಗಳ ಹಿಂದೆ ವಿವಿಧ ಕಾರಣಗಳಿಗೆ ಮುಚ್ಚಿ ಹೋಗಿತ್ತು. ಈಗ ಊರಿನ ಜನರೆಲ್ಲರೂ ಸೇರಿ ಮತ್ತೆ ಮರುಜೀವ ನೀಡಿ ಅದೇ ಶಾಲೆಗೆ ಮಕ್ಕಳನ್ನು ಸೇರಿಸಿ ಹಸಿರು ತೋರಣ ಕಟ್ಟಿ ಹಬ್ಬದ ರೀತಿ ಶಾಲೆಗೆ ಚಾಲನೆ ನೀಡಿದ್ದಾರೆ.
ಅರಸೀಕೆರೆಯಲ್ಲಿ ಜೂನ್‌, ಜುಲೈನಲ್ಲಿ ಮಳೆ ಕೊರತೆ: ಸಂಕಷ್ಟದಲ್ಲಿ ರೈತರು
ರಾಜ್ಯದ ಬಹುತೇಕ ಪ್ರದೇಶಗಳಲ್ಲಿ ಮಳೆ ನಿಂತರೆ ಸಾಕು ಎಂದು ದೇವರಿಗೆ ಮೊರೆ ಇಡುತ್ತಿದ್ದರೆ ತಾಲೂಕಿನಲ್ಲಿ ಜೂನ್ ಹಾಗೂ ಜುಲೈ ತಿಂಗಳಲ್ಲಿ ಮಳೆ ಬಾರದೆ ಸಾಲ ಮಾಡಿದ ಬೀಜ ಗೊಬ್ಬರದಿಂದ ಬಿತ್ತನೆ ಮಾಡಿದ್ದ ರೈತರು ಈಗ ಬೆಳೆ ಕಳೆದುಕೊಳ್ಳುವ ಸಂಕಷ್ಟವನ್ನು ಎದುರಿಸುತ್ತಿದ್ದಾರೆ.
ಕೃಷಿ ಅಧಿಕಾರಿಗಳಿಗೆ ನಕಲಿ ಪತ್ರಕರ್ತರ ಕಿರುಕುಳ
ಕೆಲವರು ತಾವು ಪತ್ರಕರ್ತರು ಎಂದು ಹೆಸರೇಳಿಕೊಂಡು ನಿಷ್ಠಾವಂತ ಅಧಿಕಾರಿಗಳ ತೇಜೋವಧೆಗೆ ಮುಂದಾಗುತ್ತಿದ್ದು ಅಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ರೈತ ಸಂಘ ಹಾಗೂ ಸಾರ್ವಜನಿಕರು ಆಗ್ರಹಿದರು. ತಾಲೂಕು ಕಚೇರಿ ಮುಂಭಾಗದಲ್ಲಿ ರೈತ ಸಂಘ ಪ್ರತಿಭಟನೆ ಸಮಯದ ಕೃಷಿ ಇಲಾಖೆ ವಿರುದ್ಧ ಸುಳ್ಳು ಆರೋಪಗಳೊಂದಿಗೆ ಕೃಷಿ ತಾಂತ್ರಿಕಾಧಿಕಾರಿ ಕಾವ್ಯಶ್ರೀ ಇವರ ಮೇಲೆ ಆರೋಪ ಮಾಡಿ ಕರಪತ್ರ ಮುದ್ರಿಸಿ ಹಂಚಲು ಯತ್ನಿಸಿದ ಕೃಷ್ಣಮೂರ್ತಿ ಹಾಗೂ ರತನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಹಾಗೂ ರೈತ ಸಂಘದ ಪದಾಧಿಕಾರಿಗಳು ತಹಸೀಲ್ದಾರ್ ಶ್ರೀಧರ್ ಕಂಕನವಾಡಿ ಅವರಿಗೆ ಮನವಿ ಮಾಡಿದರು.
ಬೇಲೂರನ್ನು ತಾಲೂಕನ್ನು ರಾಜ್ಯಕ್ಕೆ ಮಾದರಿಯಾಗಿಸಿ
ಪೌತಿ ಖಾತೆ ಆಂದೋಲನ ಕಾರ್ಯಕ್ರಮವನ್ನು ಮೊಬೈಲ್ ಫೋನ್ ಆ್ಯಪ್ ಮತ್ತು ಲ್ಯಾಪ್‌ಟಾಪ್ ಆಫ್ ಮೂಲಕ ಇ ಪೌತಿ ಖಾತೆ ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಉದ್ಘಾಟಿಸಿ ಮಾತನಾಡಿ, ತಾಲೂಕಿನ ಅಧಿಕಾರಿಗಳು ಇನ್ನಷ್ಟು ಕಾರ್ಯಪ್ರವೃತ್ತರಾಗಬೇಕು. ನಾಲ್ಕೈದು ತಲೆಮಾರುಗಳಿಂದ ಖಾತೆಗಳಾಗದೆ ಬಾಕಿ ಉಳಿದಿರುವ ಜಮೀನಿನ ಖಾತೆಗಳನ್ನು ಸಂಬಂಧಪಟ್ಟ ವಾರಸುದಾರರ ಅಥವಾ ಕುಟುಂಬದ ಸದಸ್ಯರ ಹೆಸರಿಗೆ ಪೌತಿ ಖಾತೆ ಆಂದೋಲನದ ಮುಖೇನ ಬದಲಾವಣೆಯನ್ನು ಅತ್ಯಂತ ತ್ವರಿತವಾಗಿ ಪೂರ್ಣಗೊಳಿಸಿ ನಮ್ಮ ತಾಲೂಕನ್ನು ಈ ಆಂದೋಲನದ ಮುಖೇನ ರಾಜ್ಯಕ್ಕೆ ಮಾದರಿಯಾಗಲು ನಿಮ್ಮೆಲ್ಲರ ಸಹಕಾರ ಅತ್ಯಗತ್ಯ ಎಂದು ಶಾಸಕರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಂತೇನಹಳ್ಳಿ ಶನಿಮಹಾತ್ಮ ದೇವಸ್ಥಾನದಲ್ಲಿ ವಿಶೇಷ ಯಜ್ಞ
ಮನುಕುಲದ ಆರೋಗ್ಯಕ್ಕಾಗಿ ಪ್ರಾರ್ಥಿಸಿ ಹಾಗೂ ಲೋಕ ಕಲ್ಯಾಣಾರ್ಥವಾಗಿ ಶ್ರೀ ಕ್ಷೇತ್ರ ಕಂತೇನಹಳ್ಳಿ ಶನಿಮಹಾತ್ಮ ದೇವಸ್ಥಾನದ ಸನ್ನಿಧಿಯಲ್ಲಿ ಕೋಟಿ ದತ್ತ ಜಪ ಯಜ್ಞ ಫಲ ಸಮರ್ಪಣೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ದೇವಾಲಯದ ಪ್ರಧಾನ ಅರ್ಚಕರೂ ಆದ ಮುರುಳಿ ಮಂದಾರ್ತಿ ತಿಳಿಸಿದರು. ಮೂರು ದಿನಗಳ ಕಾಲ ನಡೆಯುವ ಈ ಒಂದು ಧಾರ್ಮಿಕ ಸಮಾರಂಭವು, ಪ್ರತಿದಿನ ವಿಶೇಷ ಪೂಜೆಗಳಿಂದ, ಜಪ-ತಪ ಹಾಗೂ ಯಜ್ಞ ಯಾಗಾದಿಗಳಿಂದ ನೆರವೇರಲಿದ್ದು, ಭಕ್ತ ಮಹಾಶಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ದತ್ತಾತ್ರೇಯ ಸ್ವಾಮಿ ಹಾಗೂ ಕ್ಷೇತ್ರಪಾಲಕ ಶನೇಶ್ವರ ಸ್ವಾಮಿ ಅವರ ಕೃಪೆಗೆ ಪಾತ್ರರಾಗುವಂತೆ ಮನವಿ ಮಾಡಿದರು.
ಕಾಡುಗಳ ನಾಶದಿಂದಲೇ ಪ್ರಕೃತಿ ವಿಕೋಪ
ಮಾನವನ ದುರಾಸೆಯಿಂದ ಅರಣ್ಯ ಕ್ಷೀಣಿಸುತ್ತಿದೆ. ಕಾಡುಗಳ ನಾಶದಿಂದಲೇ ಭೂಕಂಪ, ಸುನಾಮಿ, ವೈರಸ್ ಮಹಾಮಾರಿಗಳಂತಹ ವಿಕೋಪಗಳಾಗುತ್ತಿರುವುದು ಎಂದು ಭೈರಾಪುರ ಎಸ್. ವಿ. ಪಬ್ಲಿಕ್ ಶಾಲೆಯ ಕಾರ್ಯದರ್ಶಿ ಬಿ.ಜಿ. ಗಿರೀಶ್ ಅಭಿಪ್ರಾಯಪಟ್ಟರು. ಈ ಹಸಿರನ್ನು ವೃದ್ಧಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಅರಣ್ಯೀಕರಣದ ಬಗ್ಗೆ ಗಮನಹರಿಸಬೇಕಿದೆ. ಮನೆಗೊಂದು ಮರ ಊರಿಗೊಂದು ವನದಂತೆ ಪ್ರತಿ ಪ್ರಜೆಯೂ ಹಸಿರನ್ನು ಉಳಿಸಿ, ಪೋಷಿಸುವ ನಿಟ್ಟಿನಲ್ಲಿ ಮಹತ್ವ ನೀಡಬೇಕಿದೆ ಎಂದರು.
ಶ್ರವಣಬೆಳಗೊಳ ಮಠದ ಕಲಾಕೃತಿಗಳ ಬಣ್ಣ ರಕ್ಷಣೆಗೆ ಸರ್ಕಾರ ಸಿದ್ಧ
ಚಾತುರ್ಮಾಸ ಕಾರ್ಯಕ್ರಮ ಇಂದಿನಿಂದ ಪ್ರಾರಂಭವಾಗುತ್ತದೆ. ಈ ಪವಿತ್ರ ದಿನ ಇಲ್ಲಿಗೆ ಬರಬೇಕು. ಪೂಜ್ಯರ ವಿಗ್ರಹ ದರ್ಶನ ಮಾಡಲು ಬಂದಿದ್ದೆ. ಈ ಐತಿಹಾಸಿಕ ಮಠದಲ್ಲಿ ಅದ್ಭುತವಾದ ಕಲೆ‌ ನೋಡಲು ಸಾಧ್ಯವಾಗುತ್ತದೆ. ಒಂದು ಸಾವಿರ ವರ್ಷಗಳ ಹಿಂದೆ ಕಲಾಕೃತಿಗಳು, ಕಲೆ ಈ ಮಠದಲ್ಲಿವೆ ಎಂದು ಎಂದು ಸಂಸದೀಯ ವ್ಯವಹಾರ ಹಾಗೂ ಪ್ರವಾಸೋದ್ಯಮ ಖಾತೆ ಸಚಿವ ಎಚ್.ಕೆ.ಪಾಟೀಲ್ ಹೇಳಿದರು. ಸ್ವಾಮೀಜಿಯವರು ಅವುಗಳನ್ನು ರಕ್ಷಣೆ ಮಾಡಲು ರಾಜ್ಯ ಸರ್ಕಾರಕ್ಕೆ ಕೊಟ್ಟರೆ ಅವನ್ನ ಪ್ರೊಟೆಕ್ಟೆಡ್ ಪೈಂಟ್ಸ್ ಅಂತ ಮಾಡಲು ನಾವು ಪ್ರಯತ್ನ ಮಾಡುತ್ತೇವೆ ಇಲ್ಲವಾದರೆ ಅವನ್ನು ಪ್ರೊಟೆಕ್ಟ್ ಹೇಗೆ ಮಾಡಬಹುದು ಎಂದು ಯೋಜನೆ ಮಾಡಿ, ಆ ಯೋಜನೆ ಅನುಷ್ಠಾನ ಮಾಡಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಸಂಸದೀಯ ವ್ಯವಹಾರ ಹಾಗೂ ಪ್ರವಾಸೋದ್ಯಮ ಖಾತೆ ಸಚಿವ ಎಚ್.ಕೆ.ಪಾಟೀಲ್ ಹೇಳಿದರು.
ದುಶ್ಚಟದಿಂದ ದೂರವಿದ್ದು ಯಶಸ್ಸಿನ ಮೆಟ್ಟಿಲೇರಿ
ಬಿಜಿಎಸ್ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜು ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಮತ್ತು ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ವಿದ್ಯಾರ್ಥಿ ಜೀವನ ಬದುಕಿನ ಮಹತ್ವದ ಘಟ್ಟವಾಗಿದ್ದು ಜವಾಬ್ದಾರಿಯಿಂದ ಹೆಜ್ಜೆ ಇರಿಸಬೇಕು. ವಿವೇಕವಿಲ್ಲದೆ ಸಹವಾಸ ದೋಷ ಬೆಳೆಸಿಕೊಂಡು ದುಶ್ಚಟ ದುರಾಭ್ಯಾಸ ಮಾದಕ ವ್ಯಸನಗಳಿಗೆ ಬಲಿಯಾದರೆ ಸಮಾಜ ದಾರಿ ತಪ್ಪಲಿದೆ. ಜಿಲ್ಲೆಯಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿವೆ. ಒಳ್ಳೆಯ ಆಹಾರ ಗಾಳಿ ಬೆಳಕು ಮುಖ್ಯ. ಮನಸ್ಸು ಹರಿಬಿಟ್ಟು ಅನ್ಯ ಮಾರ್ಗ ಹಿಡಿಯದೆ ಧನಾತ್ಮಕ ಚಿಂತನೆ ಇಟ್ಟುಕೊಂಡು ಪರಿಶ್ರಮ ವಹಿಸಿ ಕಲಿತು ಬದುಕು ಸಾರ್ಥಕ ಪಡಿಸಿಕೊಂಡು ಪಾಲಕರ ಕನಸು ನನಸಾಗಿಸಬೇಕು ಎಂದರು.
ನಾಯಿ ಕಚ್ಚಿದರೂ ಜಿಲ್ಲಾಸ್ಪತ್ರೆಯಲ್ಲಿ ಸೂಕ್ತ ಔಷಧಿ ಇಲ್ಲ
ಜಿಲ್ಲೆಯಲ್ಲಿ ಹೃದಯಾಘಾತ ಹೆಚ್ಚಿದೆ, ನಾಯಿ ಕಡಿತಕ್ಕೆ ಆಸ್ಪತ್ರೆಯಲ್ಲಿ ಸರಿಯಾದ ಔಷಧ ಇಲ್ಲ. ಮೆಕ್ಕೆ ಜೋಳಕ್ಕೆ ಬಿಳಿಸುಳಿ ರೋಗದಿಂದ ರೈತರು ನಷ್ಟಕ್ಕೀಡಾಗಿದ್ದಾರೆ ಎನ್ನುವುದು ಸೇರಿದಂತೆ ಪ್ರಮುಖ ವಿಚಾರಗಳ ಕುರಿತು ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ್ ಅವರು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸಲಹೆ ನೀಡಿ ಕ್ರಮಕ್ಕೆ ಸೂಚನೆ ನೀಡಿದರು. ಹಾಸನ ನಗರದಲ್ಲಿ ನಾಯಿ ಕಡಿತ ಪ್ರಕರಣ ಹೆಚ್ಚಾಗಿದ್ದು, ನಾಯಿ ಕಡಿತಕ್ಕೆ ವ್ಯಾಕ್ಸಿನ್ ಕೂಡ ಸರಕಾರದಿಂದ ಸರಬರಾಜು ಆಗುತ್ತಿಲ್ಲ. ಶಾಸಕರು ಸದನದಲ್ಲಿ ಗಮನ ಸೆಳೆಯಬೇಕಾಗಿದೆ. ವಾಕ್ ಮಾಡುವವರ ಮೇಲೂ ಬೀದಿ ನಾಯಿಗಳು ದಾಳಿ ಮಾಡುತ್ತಿರುವುದು ಕಂಡುಬಂದಿದೆ ಎಂದು ತಿಳಿಸಿದರು.
  • < previous
  • 1
  • ...
  • 41
  • 42
  • 43
  • 44
  • 45
  • 46
  • 47
  • 48
  • 49
  • ...
  • 506
  • next >
Top Stories
ಮತ್ತೆ ಕಲ್ಲು ತೂರಾಟ: ಮದ್ದೂರು ಕೊತ ಕೊತ..!
ತೊಗರಿ ರೈತನಿಗೆ ಗದರಿದ ಖರ್ಗೆ ವಿರುದ್ಧ ವಿಪಕ್ಷ ಗರಂ
ಯಾದಗಿರಿ ಅಕ್ಕಿ ಜಪ್ತಿ ಕೇಸ್‌ ಅನ್ನಭಾಗ್ಯ ಅಕ್ಕಿ ಫಾರಿನ್‌ಗೆ : ಡೈರಿ ರಹಸ್ಯ ಬಯಲು
ಕಾಶ್ಮೀರದ ಉಗ್ರರಿಗೆ ಹಣ: ರಾಜ್ಯದಲ್ಲಿ ಎನ್‌ಐಎ ಬೇಟೆ
ನೇಪಾಳದಲ್ಲಿ ಫೇಸ್‌ಬುಕ್‌ ನಿಷೇಧಿಸಿದ್ದಕ್ಕೆ ಯುವಕರ ದಂಗೆ: 20 ಬಲಿ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved