• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • Hassan

Hassan

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಪೌರ ಕಾರ್ಮಿಕರಿಗೆ ಗೋಪಾಲಸ್ವಾಮಿ ವಸ್ತ್ರ ವಿತರಣೆ
ರಾಜ್ಯದಲ್ಲಿನ ಪೌರಕಾರ್ಮಿಕರು ಬದುಕಿನ ಬವಣೆ ಅರಿತು ಅವರನ್ನು ಖಾಯಂ ಮಾಡಿದಲ್ಲದೆ ಸಮಾನ ವೇತನ ಜಾರಿಗೆ ತರುವ ಮೂಲಕ ಪೌರಕಾರ್ಮಿಕರಿಗೆ ಹೊಸ ಬದುಕು ಕಟ್ಟಿಕೊಡುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾತ್ರ ಮುಖ್ಯವಾಗಿದೆ ಎಂದು ಮಾಜಿ ಎಂಎಲ್‌ಸಿ ಎಂ.ಎ.ಗೋಪಾಲಸ್ವಾಮಿ ತಿಳಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ೧೦೭ ಪೌರಕಾರ್ಮಿಕರಿಗೆ ಮಾಜಿ ಶಾಸಕ ಎಂ. ಎ. ಗೋಪಾಲಸ್ವಾಮಿ ವಸ್ತ್ರ ವಿತರಿಸಿದರು.
ಎಸ್‌ಆರ್‌ಎಸ್‌ ಶಾಲೆಯಲ್ಲಿ ಧ್ಯಾನ್‌ಚಂದ್‌ಗೆ ನಮನ
ಭಾರತದ ಹಾಕಿ ಕ್ರೀಡೆಯ ಮೇರು ಪ್ರತಿಭೆ ಮೇಜರ್ ಧ್ಯಾನ್‌ಚಂದ್‌ರವರ ಜನ್ಮ ದಿನವನ್ನು ಇಡೀ ದೇಶದಲ್ಲಿ ಆಗಸ್ಟ್ ೨೯ ರಂದು ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಆಚರಿಸಲಾಗುತ್ತದೆ. ೧೯೪೧ರಿಂದ ೧೯೭೯ರ ಅವಧಿಯಲ್ಲಿ ಭಾರತದ ಹಾಕಿ ಕ್ರೀಡೆಯಲ್ಲಿ ವಿರಾಜಮಾನರಾಗಿ ವಿಜೃಂಭಿಸಿ ಹಾಕಿ ಮಾಂತ್ರಿಕ ಎಂದೇ ಪ್ರಖ್ಯಾತರಾಗಿರುವ ಧ್ಯಾನ್‌ಚಂದ್‌ರವರು, ಹಾಕಿ ಕ್ರೀಡೆಯ ದಂತಕಥೆಯಾಗಿದ್ದಾರೆ. ಅವರ ಚೆಂಡಿನ ನಿಯಂತ್ರಣ, ನಿಖರತೆ ಮತ್ತು ಗೋಲು ಮಾಡುವ ಸಾಮರ್ಥ್ಯವು ವಿಶ್ವದ ಮೆಚ್ಚುಗೆ ಗಳಿಸಿತ್ತು.
ರಾಜ್ಯಮಟ್ಟದಲ್ಲಿ ಕೀರ್ತಿ ತಂದ ಸ್ಕಾಲರ್ಸ್ ಇಂಟರ್‌ನ್ಯಾಷನಲ್ ಸ್ಕೂಲ್ ವಿದ್ಯಾರ್ಥಿಗಳು
ವಲಯ-೮ ಹಾಗೂ ರಾಜ್ಯಮಟ್ಟದ ಕ್ರೀಡಾಕೂಟ ಮತ್ತು ನೃತ್ಯ ಸ್ಪರ್ಧೆಯಲ್ಲಿ ಸ್ಕಾಲರ್ಸ್ ಇಂಟರ್‌ನ್ಯಾಷನಲ್ ಸ್ಕೂಲ್‌ನ ಪ್ರತಿಭಾವಂತ ವಿದ್ಯಾರ್ಥಿಗಳು ವಿಜೇತರಾಗಿ ಶಾಲೆಗೆ ಕೀರ್ತಿ ತಂದುಕೊಟ್ಟಿದ್ದಾರೆ. ಬೆಳಗಿನ ಪ್ರಾರ್ಥನಾ ಸಮಾರಂಭದಲ್ಲಿ ವಿಜೇತರನ್ನು ಗೌರವಿಸಿದ ಸಂದರ್ಭದಲ್ಲಿ ಸಂಸ್ಥಾಪಕ ಡಾ. ಎಚ್.ಎನ್. ಚಂದ್ರಶೇಖರ್ ಅವರು, ನಮ್ಮ ವಿದ್ಯಾರ್ಥಿಗಳು ಶ್ರಮ, ಶಿಸ್ತು ಮತ್ತು ಆತ್ಮವಿಶ್ವಾಸದಿಂದ ಶಾಲೆಯ ಹೆಸರನ್ನು ರಾಜ್ಯಮಟ್ಟದಲ್ಲಿ ಎತ್ತಿದ್ದಾರೆ ಎಂದು ಸಂತೋಷ ವ್ಯಕ್ತಪಡಿಸಿದರು.
ಮಲ್ನಾಡ್‌ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾಗಿ ಅಮರೇಂದ್ರ ನೇಮಕ
ಮಲೆನಾಡು ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾಗಿ ಡಾ. ಎಚ್.ಜೆ. ಅಮರೇಂದ್ರ ಅವರನ್ನು ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿಯ ಅಧ್ಯಕ್ಷ ಆರ್.ಟಿ. ದ್ಯಾವೇಗೌಡ, ಪ್ರಧಾನ ಕಾರ್ಯದರ್ಶಿ ಚೌಡವಳ್ಳಿ ಜಗದೀಶ್ ಹಾಗೂ ಖಜಾಂಚಿ ಎಚ್.ಪಿ. ಪಾರ್ಶ್ವನಾಥ್ ರವರು ನೇಮಕಾತಿ ಮಾಡಿ ಆದೇಶ ಪತ್ರ ನೀಡಿ ಅಧಿಕಾರಕ್ಕೆ ನಿಯುಕ್ತಿಗೊಳಿಸಿದರು. ಡಾ. ಅಮರೇಂದ್ರ ಅವರು ಮಲೆನಾಡು ಇಂಜಿನಿಯರಿಂಗ್ ಕಾಲೇಜಿನ ಮೆಕಾನಿಕಲ್ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು.
ಸಂತೋಷ್‌ ಮೇಲೆ ಮಾನಹಾನಿ ಕೇಸ್‌ ಗ್ಯಾರಂಟಿ
ಆಶ್ರಯಮನೆ ವಿತರಣೆಯಲ್ಲಿ ಅರಸೀಕೆರೆ ತಾಲೂಕಿನ ಬಾಣಾವರ ಗ್ರಾಮ ಪಂಚಾಯ್ತಿಯಲ್ಲಿ ಭಾರೀ ಅಕ್ರಮ ನಡೆದಿದೆ. ಇದಕ್ಕೆ ಶಾಸಕ ಶಿವಲಿಂಗೇಗೌಡರೇ ಹೊಣೆ ಎಂದು ಸಂತೋಷ್‌ ಆರೋಪಿಸಿದ್ದಾರೆ. ಆದರೆ, ಈ ಹಗರಣ ಅವರಿಗೂ ಮುನ್ನ ನನ್ನ ಗಮನಕ್ಕೆ ಬಂದಿದ್ದು, ನಾನೇ ಮೊದಲು ಈ ಹಗರಣದ ತನಿಖೆ ಆಗಬೇಕೆಂದು ಒತ್ತಾಯಿಸಿದ್ದೆ. ನಮ್ಮ‌ ತಾಲೂಕು ಸೇರಿದಂತೆ ಹಲವು ಕಡೆ ಹಗರಣ ಆಗಿದೆ. ಸಂತೋಷ್‌ ಹೇಳುವಂತೆ ನಾನೇ ಹಗರಣ ಮಾಡಿದ್ದರೆ ನಾನೇಕೆ ತನಿಖೆಗೆ ಒತ್ತಾಯಿಸುತ್ತಿದ್ದೆ? ಒಂದುವೇಳೆ ಸಂತೋಷ್ ನನ್ನ ಮೇಲಿನ ಆರೋಪ ಸಾಬೀತು ಮಾಡಿದರೆ ರಾಜಕೀಯ ನಿವೃತ್ತಿ ಆಗುತ್ತೇನೆ ಎಂದು ಸವಾಲು ಹಾಕಿದರು.
ಅವಕಾಶ ಬಳಸಿಕೊಳ್ಳಲು ವಿದ್ಯಾರ್ಥಿಗಳಿಗೆ ಕರೆ
ಬಸವಾಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನಡೆದ ೨೦೨೫- ೨೬ನೇ ಸಾಲಿನ ಅರಕಲಗೂಡು ತಾಲೂಕು ಮಟ್ಟದ ವಿಜ್ಞಾನ ವಿಚಾರಗೋಷ್ಠಿ, ವಿಜ್ಞಾನ ನಾಟಕ ಮತ್ತು ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಾರ್ಯಕ್ರಮ ಉದ್ಘಾಟಿಸಿದ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ಹರೀಶ್ ಮಾತನಾಡಿ, ಮಕ್ಕಳಲ್ಲಿರುವ ಪ್ರತಿಭೆ ಹೊರಹಾಕಲು ಇಂತಹ ವಿಜ್ಞಾನ ವಿಚಾರಗೋಷ್ಠಿ, ನಾಟಕ , ವಸ್ತು ಪ್ರದರ್ಶನಗಳು ಸಹಾಯಕವಾಗಿವೆ ಎಂದು ತಿಳಿಸಿದರು.
ರಕ್ತದಾನ ಮಾಡಿ ಜೀವ ಉಳಿಸಿ
ರಕ್ತದಾನವು ಶ್ರೇಷ್ಠ ಸೇವೆ ಎಂದು ನಗರಸಭೆ ಅಧ್ಯಕ್ಷ ಎಂ. ಸಮೀವುಲ್ಲಾ ಅಭಿಪ್ರಾಯ ವ್ಯಕ್ತಪಡಿಸಿದರು. ಇತ್ತೀಚಿನ ದಿನಗಳಲ್ಲಿ ರಕ್ತದ ಕೊರತೆ ಅನೇಕ ಜೀವಗಳನ್ನು ಕಾಡುತ್ತಿರುವುದನ್ನು ವಿವರಿಸಿದರು. "ರಕ್ತದಾನ ಮಾಡುವ ಮೂಲಕ ನಾವು ಜೀವ ಉಳಿಸಬಹುದು,ಸ್ಥಳೀಯ ಶಾಸಕರಿಂದ ನಾವು ರಕ್ತದ ಬ್ಯಾಂಕ್ ಸ್ಥಾಪನೆಗಾಗಿ ಮನವಿಯನ್ನು ತಲುಪಿಸಿದ್ದೇವೆ. ಶೀಘ್ರದಲ್ಲೇ ಬ್ಲಡ್ ಬ್ಯಾಂಕ್ ಸ್ಥಾಪಿಸಲಾಗುವುದು ಎಂದು ಮಾಹಿತಿ ನೀಡಿದರು. ಮಹಿಳೆಯರಿಗೆ ಇತ್ತೀಚೆಗೆ ರಕ್ತದ ಅವಶ್ಯಕತೆ ಹೆಚ್ಚಿದೆ. ರಕ್ತದಾನದಿಂದ ಹೊಸ ರಕ್ತಕಣಗಳ ಉತ್ಪಾದನೆಯನ್ನು ಪ್ರೋತ್ಸಾಹಿಸಲು ಸಹಾಯವಾಗುತ್ತದೆ ಎಂದು ಸಂದೇಶ ನೀಡಿದರು.
ಮಕ್ಕಳ ಜಗಳ ತಂದೆಯ ಹತ್ಯೆಯೊಂದಿಗೆ ಅಂತ್ಯ
ಮಕ್ಕಳ ನಡುವಿನ ಚಿಕ್ಕ ಜಗಳವು ಪೋಷಕರ ನಡುವೆ ದೊಡ್ಡ ಜಗಳವಾಗಿ ಮಾರ್ಪಟ್ಟು ತೌಫಿಕ್(30) ಎಂಬಾತನ ಸಾವಿಗೆ ಕಾರಣವಾದ ಘಟನೆ ನಗರದಲ್ಲಿ ನಡೆದಿದೆ. ತೌಫಿಕ್ ಮತ್ತು ಫರಾನ್ ಎಂಬುವವರ ಮಕ್ಕಳು ಒಂದೇ ಶಾಲೆಯಲ್ಲಿ ಓದುತ್ತಿದ್ದರು. ಜ್ವರದಿಂದ ಬಳಲುತ್ತಿದ್ದ ತೌಫಿಕ್ ಅವರ ಮಗನ ಮೇಲೆ ಫರಾನ್ ಅವರ ಮಗ ತಣ್ಣೀರು ಸುರಿದಿದ್ದಾನೆ ಎಂಬ ವಿಚಾರದಿಂದ ವಾಗ್ವಾದ ಉಂಟಾಯಿತು. ಇದು ವಿಕೋಪಕ್ಕೆ ತಿರುಗಿ ತೌಫಿಕ್ ಮತ್ತು ಫರಾನ್ ಒಬ್ಬರ ಮೇಲೆ ಒಬ್ಬರು ಹಲ್ಲೆ ನಡೆಸಿದ್ದು, ತೌಫಿಕ್‌ ಸಾವನ್ನಪ್ಪಿದ್ದಾರೆ.
ಶಾಂತಿಯುತ ಹಬ್ಬ ಆಚರಣೆಗೆ ಸಾರ್ವಜನಿಕರ ಸಹಕಾರ ಅಗತ್ಯ
ಗಣೇಶೋತ್ಸವ ಹಾಗೂ ಈದ್ ಮಿಲಾದ್ ಹಬ್ಬಗಳ ಹಿನ್ನೆಲೆಯಲ್ಲಿ ಶಾಂತಿ ಮತ್ತು ಸೌಹಾರ್ದತೆಯ ಮನೋಭಾವವನ್ನು ಹೆಚ್ಚಿಸುವ ಉದ್ದೇಶದಿಂದ, ಅರಸೀಕೆರೆ ನಗರ ಪೊಲೀಸ್ ಠಾಣೆಯ ವತಿಯಿಂದ ಶಾಂತಿಸೌಹಾರ್ದದ ಪಥಸಂಚಲನವನ್ನು ಆಯೋಜಿಸಲಾಯಿತು. ಪಥಸಂಚಲನದ ಸಂದರ್ಭ ಮಾತನಾಡಿದ ಪಿಎಸ್ಐ ರಾಘವೇಂದ್ರ ನಮ್ಮ ಸಮಾಜದಲ್ಲಿ ವಿವಿಧ ಧರ್ಮ, ಸಂಸ್ಕೃತಿಗಳ ಜನರು ಸಹಬಾಳ್ವೆಯಲ್ಲಿ ಜೀವನ ನಡೆಸುತ್ತಿದ್ದಾರೆ. ಹಬ್ಬಗಳ ವೇಳೆ ಈ ಸಾಮರಸ್ಯ ಮತ್ತಷ್ಟು ಬಲಗೊಳ್ಳಬೇಕು. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ, ನಗುಮುಖದ ವಾತಾವರಣದಲ್ಲಿ ಹಬ್ಬಗಳನ್ನು ಆಚರಿಸುವದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ನಾಳೆ ಜೆಡಿಎಸ್ ಧರ್ಮಸ್ಥಳ ಸತ್ಯ ಯಾತ್ರೆ
ಜಿಲ್ಲೆ ಸೇರಿದಂತೆ ನೆರೆ ಜಿಲ್ಲೆಗಳಿಂದ ಸುಮಾರು ೫ರಿಂದ ೬ ಸಾವಿರ ಜೆಡಿಎಸ್ ಕಾರ್ಯಕರ್ತರು ಹಾಗೂ ಮುಖಂಡರು ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು. ನಗರದ ಹೊರವಲಯದ ಕಂದಲಿ ಗ್ರಾಮದ ಯಗಚಿ ಇನ್‌ಸ್ಟಿಟ್ಯೂಟ್ ಆವರಣದಲ್ಲಿ ಉಪಹಾರ ವ್ಯವಸ್ಥೆ ಮಾಡಲಾಗಿದ್ದು, ಅಲ್ಲಿಂದ ಪ್ರತ್ಯೇಕ ವಾಹನಗಳಲ್ಲಿ ಧರ್ಮಸ್ಥಳಕ್ಕೆ ತೆರಳಲಾಗುವುದು. ವೀರೇಂದ್ರ ಹೆಗ್ಗಡೆ ಅವರಿಗೆ ಬೆಂಬಲ ಸೂಚಿಸಲು ಈ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.
  • < previous
  • 1
  • ...
  • 45
  • 46
  • 47
  • 48
  • 49
  • 50
  • 51
  • 52
  • 53
  • ...
  • 547
  • next >
Top Stories
ಇಂದಿನಿಂದ ಕಾಂತಾರ 1 ಟಿಕೆಟ್ ಬೆಲೆ ರು.99
ಬಿಸಿನೆಸ್ ತಂತ್ರ ಬದಲಿಸಿರುವ ಓಟಿಟಿಗಳು
ಪಟೇಲ್ ಮತ್ತು ಬೋಸ್ : ತತ್ವ ಭೇದಗಳಲ್ಲಡಗಿದ ರಾಷ್ಟ್ರಚಿಂತನೆ
ಗುಡ್‌ ಫ್ರೆಂಡ್‌ ಜೊತೆ ನಟಿಸಿದಷ್ಟು ಖುಷಿ ಆಗಿದ : ಮನೀಶಾ ಕಂದಕೂರ್‌
ರಾಷ್ಟ್ರೀಯ ಐಕ್ಯತೆ ಸಾರುತ್ತಿದೆ ಸರ್ದಾರ್‌ ‘ಮೂರ್ತಿ’!
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved