ಮಹಾನ್ ವ್ಯಕ್ತಿಗಳನ್ನು ಸೀಮಿತಗೊಳಿಸಲಾಗುತ್ತಿದೆಮಹಾನ್ ವ್ಯಕ್ತಿಗಳನ್ನು ಜಾತಿ, ಧರ್ಮ, ವರ್ಗಕ್ಕೆ, ಭಾಷೆಗೆ ಸೀಮಿತಗೊಳಿಸುತ್ತಿರುವುದು ವಿಷಾದನೀಯ ಸಂಗತಿಯಾಗಿದೆ. ಅಂತಹ ಮಹಾನುಭಾವರು ಎಲ್ಲವನ್ನೂ ಮೀರಿ ಬೆಳೆದವರು. ಆದರೆ ಸಂಕುಚಿತ ಮನೋಭಾವನೆಯಿಂದಾಗಿ ಮಹಾನ್ ವ್ಯಕ್ತಿಗಳು ಸೀಮಿತವಾಗುತ್ತಿದ್ದಾರೆ ಎಂದು ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷರಾದ ಸಂತೋಷ್ ಗೌಡ ವಿಷಾದಿಸಿದರು. ಅವರು ಕೇರಳಾಪುರ ಗ್ರಾಮದಲ್ಲಿ ನಡೆದ ನಾಡಪ್ರಭು ಕೆಂಪೇಗೌಡರ ೫೧೬ನೇ ಜಯಂತಿ ಆಚರಣೆ ವೇಳೆ ಸುದ್ದಿಗಾರರ ಜೊತೆ ಮಾತನಾಡಿ, ಬಸವ, ಕನಕ, ಅಂಬೇಡ್ಕರ್ ಕೆಂಪೇಗೌಡ ಹೀಗೆ ಮಹಾನ್ ನಾಯಕರನ್ನು ಒಂದು ವರ್ಗದ ಸೀಮಿತ ವ್ಯಕ್ತಿಗಳನ್ನಾಗಿ ವರ್ಗೀಕರಿಸುತ್ತಿರುವುದು ವಿಷಾದನೀಯ ಎಂದರು.