• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • Hassan

Hassan

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಧರ್ಮಸ್ಥಳ ಬೆಂಬಲಿಸಿ ಜಯಕರ್ನಾಟಕ ಕಾರ್‌ ರ್ಯಾಲಿ
ಧರ್ಮಸ್ಥಳದಲ್ಲಿನ ಘಟನೆಗಳು ಹಾಗೂ ಅಪಪ್ರಚಾರ ಹೋಗಲಾಡಿಸುವ ನಿಟ್ಟಿನಲ್ಲಿ ಜಯ ಕರ್ನಾಟಕ ಸಂಘಟನೆಯಿಂದ ಬೆಂಗಳೂರಿನಿಂದ ಧರ್ಮಸ್ಥಳದವರೆಗೆ ಹೊರಟ ಕಾರುಗಳ ರ್‍ಯಾಲಿ ಹಾಸನ ಮೂಲಕ ಬೇಲೂರಿಗೆ ಆಗಮಿಸಿದ ಸಂದರ್ಭ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಧಾರ್ಮಿಕ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಆರೋಪ, ಅಪಸ್ವರಗಳಂತಹ ಘಟನೆಗಳನ್ನ ಸೃಷ್ಠಿಸುವಂತಹ ಸಂದರ್ಭಗಳನ್ನು ನೋಡಿದಾಗ ಆಘಾತವಾಯಿತು. ಇಳಿ ವಯಸ್ಸಿನ ಮಹಿಳೆಯೊಬ್ಬರು ಸುಳ್ಳು ಹೇಳಿದ್ದೇನೆ ಎಂಬುದನ್ನು ಆಕೆಯೇ ಒಪ್ಪಿಕೊಂಡಿರುವುದು ಮಾಧ್ಯಮದಲ್ಲಿ ನೋಡಿದ್ದೇವೆ. ಇದಕ್ಕೆಲ್ಲ ಯಾರೂ ಕಾರಣ, ಈ ಚಿತ್ರಕತೆ ಬರೆದವರ್‍ಯಾರು, ನಿರ್ಮಾಪಕ ಯಾರು ತಿಳಿಯುತ್ತಿಲ್ಲ ಎಂದರು.
ಮಕ್ಕಳಿಗೆ ನಮ್ಮ ಪರಂಪರೆಯ ಜ್ಞಾನ ಅತ್ಯಗತ್ಯ
ವಂಶವೃಕ್ಷವು ನಮ್ಮ ತಂದೆ- ತಾಯಿ, ಅವರ ತಂದೆ- ತಾಯಿಗಳು, ಸಹೋದರ- ಸಹೋದರಿಯರು, ರಕ್ತ ಸಂಬಂಧಗಳನ್ನು ತಿಳಿಸುತ್ತದೆ. ಆದರೆ ಇಂದಿನ ವಿಭಕ್ತ ಕುಟುಂಬ ವ್ಯವಸ್ಥೆಯಲ್ಲಿ ಅಪ್ಪ- ಅಮ್ಮ ಬಿಟ್ಟರೆ ಎಷ್ಟೋ ಮಕ್ಕಳಿಗೆ ತಾತ-ಮುತ್ತಾತಂದಿರ ಪರಿಕಲ್ಪನೆಯೇ ಇರುವುದಿಲ್ಲ. ಆದ್ದರಿಂದ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಸಂಸ್ಥೆ ಮಕ್ಕಳಲ್ಲಿ ವಂಶವೃಕ್ಷದ ಪರಿಕಲ್ಪನೆ ಮೂಡಿಸಲು ತಳಮಟ್ಟದಿಂದಲೂ ಇಂತಹ ಅಗತ್ಯ ಸ್ಪರ್ಧೆಗಳನ್ನು ಏರ್ಪಡಿಸುತ್ತಿರುವುದು ಸ್ತುತ್ಯಾರ್ಹ ಎಂದರು.
ಸ್ವಾಮಿ ವಿವೇಕಾನಂದರ ಸಂದೇಶಗಳನ್ನು ಅಳವಡಿಸಿಕೊಳ್ಳಿ
ಸ್ವಾಸ್ಥ್ಯ ಜೀವನ ನಡೆಸಲು ಜ್ಞಾನ ಮತ್ತು ಸಮಾನತೆ ಅಗತ್ಯ. ನಿಮ್ಮ ಜೀವನದಲ್ಲಿ ಸ್ವಾಮಿ ವಿವೇಕಾನಂದರ ಸಂದೇಶಗಳನ್ನು ಅಳವಡಿಸಿಕೊಳ್ಳಿ ಎಂದು ಗಂಡಸಿ ವಿದ್ಯುತ್ ಪ್ರಸರಣ ನಿಗಮದ ಕಾರ್ಯಪಾಲಕ ಅಭಿಯಂತರ ಸುಬ್ರಹ್ಮಣ್ಯ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಶಾಲಾ ಮುಖ್ಯಶಿಕ್ಷಕ ದಯಾನಂದ್ ಮಾತನಾಡಿ ಮಕ್ಕಳಿಗೆ ಜ್ಞಾನ ಪಡೆಯುವ ಬಯಕೆ ಇರುವಂತೆಯೇ, ಅದನ್ನು ಹೇಗೆ ಪ್ರಾಯೋಗಿಕ ಜೀವನದಲ್ಲಿ ಉಪಯೋಗಿಸಬೇಕು ಎಂಬ ಅರಿವೂ ಬೆಳೆಸಬೇಕು. ಶಿಕ್ಷಣದ ಉದ್ದೇಶ ಕೇವಲ ಉದ್ಯೋಗವಲ್ಲ, ಉತ್ತಮ ನಾಗರಿಕನಾಗಿ ರೂಪುಗೊಳ್ಳುವ ದಿಕ್ಕಿನಲ್ಲಿ ಪ್ರಯಾಣಿಸಬೇಕು ಎಂದು ಹೇಳಿದರು.
ಮಾದರಿ ಸೌರಗ್ರಾಮ ಯೋಜನೆಗೆ ಹೋಬಳಿಗಳ ಆಯ್ಕೆ
ಭಾರತ ಸರ್ಕಾರದ ಸೌರ ವಿದ್ಯುತ್ ಉತ್ಪಾದನೆಯ ಸೌರಗ್ರಾಮ ಯೋಜನೆ ಅಡಿಯ ಎಂಎನ್‌ಆರ್‌ಇ ಮಾದರಿ ಸೂಚಿಯಂತೆ ಪ್ರತಿ ಜಿಲ್ಲೆಯಲ್ಲಿ ೫ ಸಾವಿರಕ್ಕಿಂತ ಹೆಚ್ಚಿನ ಜನಸಂಖ್ಯೆ ಹೊಂದಿರುವ ಹಾಲಿ ವಿದ್ಯುತ್ ಜಾಲದಿಂದ ಸಂಪರ್ಕ ಹೊಂದಿರುವ ಕಂದಾಯ ಗ್ರಾಮಗಳು ಸ್ಪರ್ಧಿಸುವ ಅವಕಾಶ ಇರುವುದರಿಂದ ಹೊಳೆನರಸೀಪುರ ತಾಲೂಕಿನ ಹಳ್ಳಿಮೈಸೂರು, ಬೇಲೂರು ತಾಲೂಕಿನ ಹಳೇಬೀಡು, ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳ ಹಾಗೂ ಹಿರೀಸಾವೆ, ಅರಸೀಕೆರೆ ತಾಲೂಕಿನ ಬಾಣಾವರ, ಜಾವಗಲ್, ಹಾರನಹಳ್ಳಿ, ಮತ್ತು ಅರಕಲಗೂಡು ತಾಲೂಕಿನ ಕೊಣನೂರು ಗ್ರಾಮಗಳನ್ನು ಗುರುತಿಸಲಾಗಿದೆ.
ಕರವೇ ಪದಾಧಿಕಾರಿಗಳ ಪದಗ್ರಹಣ ಸಮಾರಂಭ
ಕರವೇ ಸಂಘಟನೆ ಒಂದು ವಿರೋಧ ಪಕ್ಷದ ರೀತಿಯಲ್ಲಿ ನಿತ್ಯ ನೊಂದವರ ಮತ್ತು ಶೋಷಿತರ ಪರವಾಗಿ ಕೆಲಸ ನಿರ್ವಹಿಸುತ್ತಿದೆ. ರಾಜ್ಯದ ಗಡಿಭಾಗಗಳಲ್ಲಿ ಮತ್ತು ಕನ್ನಡಿಗರ ಪರ ಧ್ವನಿಯಾಗಿ ನಿಲ್ಲುವುದು ಹಾಗೂ ನಾಡಿನಾದ್ಯಂತ ನಾಡು, ನುಡಿ, ಜಲ, ಸಂಸ್ಕೃತಿ, ಭಾಷೆಗೆ ಧಕ್ಕೆಯಾದ ಸಂದರ್ಭ ದಿಟ್ಟ ಧ್ವನಿ ಎತ್ತುವ ಮೂಲಕ ಭ್ರಷ್ಟರಿಗೆ ಮತ್ತು ಅನ್ಯ ಭಾಷಿಕರಿಗೆ ಸಿಂಹ ಸ್ವಪ್ನವಾಗಿ ರಾಜ್ಯಾದ್ಯಂತ ಬೆಳೆದು ನಿಂತಿದೆ ಎಂದರು. ಕರ್ನಾಟಕದ ನಾಡು, ನುಡಿ, ಜಲದ ಬಗ್ಗೆ ನಿರಂತರ ಹೋರಾಟ ನಡೆಸುತ್ತಿರುವ ಸಂಘಟನೆಯಾಗಿದೆ ಎಂದು ಕರವೇ ಜಿಲ್ಲಾಧ್ಯಕ್ಷ ಸಿ.ಡಿ. ಮನು ಕುಮಾರ್ ತಿಳಿಸಿದರು.
500 ಕ್ಕೂ ಹೆಚ್ಚು ಕಾರುಗಳಲ್ಲಿ ಧರ್ಮಸ್ಥಳಕ್ಕೆ ಧರ್ಮ ಯಾತ್ರೆ

ರಾಜ್ಯ ಬಿಜೆಪಿ ಕಾರ್ಯದರ್ಶಿ ತಿಮ್ಮೇಶ್‌ ಗೌಡರ ನೇತೃತ್ವದಲ್ಲಿ ಸುಮಾರು ೫೦೦ಕ್ಕೂ ಹೆಚ್ಚು ಕಾರುಗಳಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಅಪಪ್ರಚಾರ ವಿರುದ್ಧ ಧರ್ಮ ಯಾತ್ರೆ ಎಂಬ ಶೀರ್ಷಿಕೆ ಅಡಿ ಕಾರುಗಳಲ್ಲಿ ಧರ್ಮಸ್ಥಳಕ್ಕೆ ಯಾತ್ರೆ ನಡೆಯಿತು. 

ಗೆದ್ದಿದ್ದರೆ ನಾನೂ ಅನುದಾನ ತರುತ್ತಿದ್ದೆ
ರಾಜ್ಯ ಸರ್ಕಾರ ಯಾವ ಶಾಸಕರಿಗೂ ತಾರತಮ್ಯ ನೀತಿ ಮಾಡಿಲ್ಲ, ಇಲ್ಲಿನ ಶಾಸಕರು ಸರ್ಕಾರದೊಂದಿಗೆ ಬೆರೆತು ಅಭಿವೃದ್ಧಿಪಡಿಸಲಿ. ಪುರಸಭೆಯ ನಗರೋತ್ಥಾನ ಅನುದಾನದಲ್ಲಿ ಪಟ್ಟಣದ ರಸ್ತೆಗಳನ್ನು ಸರಿಪಡಿಸಿಲ್ಲ. ಯಾವುದೇ ಅಭಿವೃದ್ಧಿ ಕೆಲಸಗಳು ನಡೆದಿಲ್ಲ. ಶಾಸಕರು ಪುರಸಭೆಯ ಅಧ್ಯಕ್ಷರನ್ನು ಜೇಬಿನಲ್ಲಿ ಇಟ್ಟುಕೊಂಡು ಓಡಾಡಿದ್ದು ಬಿಟ್ಟರೆ ಬೇರೇನು ಕೆಲಸ ಮಾಡಿಲ್ಲ. ತಮ್ಮದೇ ಸರ್ಕಾರವಿರುವುದರಿಂದ ಕಾಂಗ್ರೆಸ್‌ ಕಾರ್ಯಕರ್ತರು ವರ್ಗಾವಣೆಗಾಗಿ ಇತರ ಕೆಲಸಗಳಿಗಾಗಿ ಬರುತ್ತಾರೆ. ನಾನು ತಮ್ಮ ಕೈಲಾದ ಸಹಾಯವನ್ನು ಮಾಡುತ್ತೇನೆ. ಇದನ್ನೇ ವರ್ಗಾವಣೆ ದಂಧೆ ಎಂದು ಬಿಂಬಿಸಿದರೆ ಏನು ಮಾಡಲು ಸಾಧ್ಯ ಎಂದರು.
ಅರಸೀಕೆರೆ ನಗರಸಭೆಗೆ ಆಯ್ಕೆಯಾಗಿ ಒಂದು ವರ್ಷ
ನಗರಸಭಾ ಅಧ್ಯಕ್ಷ ಎಂ. ಸಮೀವುಲ್ಲಾ ಮತ್ತು ಉಪಾಧ್ಯಕ್ಷ ಮನೋಹರ್ ಮೇಸ್ತ್ರಿ ಅವರು ಅಧಿಕಾರಕ್ಕೆ ಬಂದು ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ, ನಗರಸಭಾ ಸದಸ್ಯರು ಹಾಗೂ ಅವರ ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ಹಂಚಿ, ರಸ್ತೆಯಲ್ಲಿ ರೋಡ್ ಶೋ ನಡೆಸುವ ಮೂಲಕ ಸಂಭ್ರಮಾಚರಣೆ ನಡೆಸಿದರು. ಅರಸೀಕೆರೆಯನ್ನು ಮಾದರಿ ಕ್ಷೇತ್ರವನ್ನಾಗಿ ರೂಪಿಸಬೇಕೆಂಬ ದೃಷ್ಟಿಕೋನದಲ್ಲಿ, ಕ್ಷೇತ್ರದ ಶಾಸಕ ಶಿವಲಿಂಗೇಗೌಡರ ಮಾರ್ಗದರ್ಶನದಡಿಯಲ್ಲಿ ನಾವು ಅಭಿವೃದ್ಧಿಯ ದಾರಿಯಲ್ಲಿ ಸ್ಥಿರವಾಗಿ ಸಾಗುತ್ತಿದ್ದೇವೆ. ಭವಿಷ್ಯದಲ್ಲೂ ಈ ಬದ್ಧತೆಯಿಂದ ಕಾರ್ಯನಿರ್ವಹಿಸುತ್ತೇವೆ ಎಂದು ತಿಳಿಸಿದರು.
ಫೋಟೋ ಇಲ್ಲದ ಪತ್ರಿಕೋದ್ಯಮ ಕಲ್ಪನೆ ಅಸಾಧ್ಯ
ಮಾಧ್ಯಮ ಕ್ಷೇತ್ರದಲ್ಲಿ ಛಾಯಾಗ್ರಾಹಕರ ಕಾರ್ಯಕ್ಕೆ ತನ್ನದೇಯಾದ ಮೌಲ್ಯವಿದೆ. ಇಡೀ ಸುದ್ದಿಯ ಸಾರಾಂಶವನ್ನು ಒಂದು ದೃಶ್ಯ ಹಾಗೂ ಛಾಯಾಚಿತ್ರ ಹೇಳುತ್ತದೆ. ಹಲವಾರು ಪ್ರಕರಣಗಳಲ್ಲಿ ಇದು ಸಾಬೀತಾಗಿದೆ ಎಂದರು. ತಾಂತ್ರಿಕ ಕ್ಷೇತ್ರದಲ್ಲಿ ಆದಂತಹ ಬದಲಾವಣೆಗಳಿಂದಾಗಿ ಛಾಯಾಗ್ರಾಹಕರಿಗೆ ನಾನಾ ಸಮಸ್ಯೆ ಎದುರಾಗಿದೆ. ಇದರಿಂದ ಆರ್ಥಿಕ ಭದ್ರತೆ ಇಲ್ಲವಾಗಿದ್ದು ಈ ನಡುವೆಯೂ ಮಾಧ್ಯಮ ಕ್ಷೇತ್ರದಲ್ಲಿ ಅನೇಕ ಛಾಯಾಗ್ರಹಕರು ವೃತ್ತಿಯನ್ನು ಮಾಡುತ್ತಿರುವುದು ಶ್ಲಾಘನೀಯ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಚ್. ವೇಣುಕುಮಾರ್ ತಿಳಿಸಿದರು.
ಸಾಲ ಮನ್ನಾ ಪರಿಕಲ್ಪನೆ ತಂದವರೇ ಅರಸು
ಡಿ.ದೇವರಾಜ ಅರಸು ಅವರ ೧೧೦ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಜೀತ ಪದ್ಧತಿ ನಿರ್ಮೂಲನೆ, ಋಣಮುಕ್ತ ಕಾಯ್ದೆಯನ್ನು ಜಾರಿಗೆ ತಂದು ಸಾಲ ಮನ್ನಾ ಮಾಡಿ ಬಡ ಜನತೆಯ ಭವಿಷ್ಯದಲ್ಲಿ ಜ್ಯೋತಿ ಬೆಳಗಿಸಿದ ಮಹಾನ್ ವ್ಯಕ್ತಿಯಾಗಿದ್ದರು ಎಂದರು. ಭೂ ಸುಧಾರಣಾ ಕಾಯ್ದೆ ಜಾರಿ ಮಾಡುವ ಮೂಲಕ ೮ ಲಕ್ಷ ರೈತರಿಗೆ ಭೂ ಮಾಲೀಕರಿಂದ ಭೂಮಿ ಕೊಡಿಸುವಲ್ಲಿ ಡಿ.ದೇವರಾಜ ಅರಸು ಪ್ರಮುಖ ಪಾತ್ರವಹಿಸಿದ್ದರು ಎಂದು ನೆನೆದರು.
  • < previous
  • 1
  • ...
  • 50
  • 51
  • 52
  • 53
  • 54
  • 55
  • 56
  • 57
  • 58
  • ...
  • 547
  • next >
Top Stories
ಈ ಬಾರಿ ಮಳೆ ಹೆಚ್ಚು, ಕೃಷಿ ಹಾನಿ ಕಮ್ಮಿ!
ದೇಶ ಯಾವುದಾದರೇನು ಕನ್ನಡ ಕಂಪನು ಮೆರೆವೆನು
ಕೈಗಾರಿಕಾ ತ್ಯಾಜ್ಯದಿಂದ ಜಲಮಾಲಿನ್ಯ: ನರೇಂದ್ರಸ್ವಾಮಿ
‘ಅಲೆಮಾರಿಗಳಿಗೆ 1% ಮೀಸಲು ಬಗ್ಗೆ ತಜ್ಞರ ಜತೆ ಚರ್ಚೆ’
ಇಂದಿರಾರ ಆದರ್ಶವನ್ನು ಎಲ್ಲರೂ ಪಾಲಿಸಬೇಕು : ಸಿದ್ದರಾಮಯ್ಯ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved