• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • Hassan

Hassan

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಅನಂತ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ
ಅರಸೀಕೆರೆ ನಗರದ ಅನಂತ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಕ್ಕಳು ಶ್ರೀಕೃಷ್ಣನ ವೇಷದಲ್ಲಿ ಹಾಗೂ ತಾಯಂದಿರು ಯಶೋಧರೆಯ ವೇಷದಲ್ಲಿ ಭಾಗವಹಿಸಿ, ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ತಂದರು. ಪ್ರಾಂಶುಪಾಲ ಡಾ. ಸುರೇಶ್ ಕುಮಾರ್ ಕುಂದೂರು ಮಾತನಾಡಿ, ಮನುಷ್ಯನ ಆಧ್ಯಾತ್ಮಿಕ ಚಿಂತನೆಗಳು ಅವನಲ್ಲಿ ಧನಾತ್ಮಕ ಮನೋಭಾವವನ್ನು ಬೆಳೆಸುತ್ತವೆ. ಇಂತಹ ಕಾರ್ಯಕ್ರಮಗಳು ಮಕ್ಕಳ ಮನಸ್ಸನ್ನು ಸದೃಢಗೊಳಿಸಿ ಅವರ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗುತ್ತವೆ ಎಂದು ಹೇಳಿದರು.
ನೊಂದವರ ಬಾಳಿಗೆ ಬೆಳಕಾದವರು ದೇವರಾಜ ಅರಸು
ತಾಲೂಕು ಪಂಚಾಯತ್ ಸಂಭಾಗಣದಲ್ಲಿ ದೇವರಾಜ ಅರಸುರವರ ೧೧೦ನೇ ಜನ್ಮದಿನಾಚರಣೆ ಉದ್ದೇಶಿಸಿ ಮಾತನಾಡಿ, ಸ್ವಾತಂತ್ರ್ಯ ಭಾರತದಲ್ಲಿ ಹಿಂದುಳಿದ ವರ್ಗದಿಂದ ಆಯ್ಕೆಯಾದ ಮೊದಲ ಮುಖ್ಯಮಂತ್ರಿ ದೇವರಾಜ್ ಅರಸು. ತಮ್ಮ ಆಡಳಿತದ ಅವಧಿಯಲ್ಲಿ ದಿನದಲಿತರ ಪರವಾಗಿ ಕೆಲಸ ಮಾಡಿದ ಪರಿಣಾಮ ಲಕ್ಷಾಂತರ ಜನರು ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದೆ. ಅಧಿಕಾರ ದೊರೆತ ವೇಳೆ ಯಾವ ಮಾದರಿಯಲ್ಲಿ ಸೇವೆ ಸಲ್ಲಿಸಬೇಕು ಎಂಬ ಮಾರ್ಗದರ್ಶನ ನೀಡಿದವರು ಅರಸರು. ಇಂದಿನ ಯುವ ಜನತೆ ಅರಸುರವರ ಬದುಕನ್ನು ಆದರ್ಶವನ್ನಾಗಿ ಪಾಲಿಸಬೇಕು ಎಂದರು.
ತಾಳೂರು ಶಾಲೆಯಲ್ಲಿ ರಾಷ್ಟ್ರೀಯ ಸದ್ಭಾವನಾ ದಿನಾಚರಣೆ
ಸದ್ಭಾವನ ದಿವಸ್‌ನ ಪ್ರಮುಖ ವಿಷಯವೆಂದರೆ ವಿವಿಧ ನಂಬಿಕೆಗಳು ಮತ್ತು ಸಂಸ್ಕೃತಿಗಳ ಜನರಲ್ಲಿ ರಾಷ್ಟ್ರೀಯ ಏಕತೆ ಮತ್ತು ಸಾಮಾಜಿಕ ಸದ್ಭಾವನೆಯನ್ನು ಪ್ರೋತ್ಸಾಹಿಸುವುದು. ಭಾರತದಲ್ಲಿ ಸದ್ಭಾವನಾ ದಿವಸದಂದು ರಾಜ್ಯಗಳಾದ್ಯಂತ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಸ್ಪರ್ಧೆಗಳನ್ನು ನಡೆಸಲಾಗುತ್ತದೆ. ಸದ್ಭಾವನಾ ದಿವಸ್ ಹಸಿರು, ಪ್ರಕೃತಿಯ ಸೌಂದರ್ಯ, ಪರಿಸರ ಸಂರಕ್ಷಣೆ ಮತ್ತು ಜೀವವೈವಿಧ್ಯ ಸಂರಕ್ಷಣೆಗೆ ಸಂಬಂಧಿಸಿದೆ. ಸದ್ಭಾವನಾ ದಿವಸ್‌ನ ಅನೇಕ ಕಾರ್ಯಕ್ರಮಗಳ ಮುಖ್ಯ ಗುರಿ ಈ ನಿರ್ಣಾಯಕ ಪರಿಸರ ಸವಾಲುಗಳ ಬಗ್ಗೆ ನಾಗರಿಕರಲ್ಲಿ ಪ್ರಜ್ಞೆಯನ್ನು ಉತ್ತೇಜಿಸುವುದಾಗಿದೆ ಎಂದರು.
ಪತ್ರಿಕೆ ಹಂಚುವ ಹುಡುಗರಿಗೆ ರೇನ್‌ ಕೋಟ್‌ ವಿತರಣೆ
ಮಳೆಗಾಲ, ಬೇಸಿಗೆ ಅಥವಾ ಚಳಿಗಾಲ ಯಾವ ಋತುವಾಗಿದ್ದರೂ ಬೆಳಿಗ್ಗೆ ನಮ್ಮ ಮನೆ ಬಾಗಿಲಿಗೆ ಪತ್ರಿಕೆ ತಲುಪಿಸುವುದು ಇವರ ನಿರಂತರ ಸೇವಾಭಾವ. ಇವರು ಸುದ್ದಿಗಳ ಹರಿಕಾರರು, ಸಮಾಜಕ್ಕೆ ಜಾಗೃತಿಯ ದಾರಿ ತೋರಿಸುವವರು. ಇವರ ಸೇವೆಯನ್ನು ನಾವು ಎಲ್ಲರೂ ಸ್ಮರಿಸಿ ಗೌರವಿಸಬೇಕು. ಪತ್ರಿಕೆ ಹಂಚುವ ವಿತರಕರ ಸಂಕಷ್ಟಕ್ಕೆ ನೆರವಾಗುವುದು ನಮ್ಮೆಲ್ಲರ ಕರ್ತವ್ಯ ಎಂದು ಜಿಲ್ಲಾ ಕೆಡಿಪಿ ಸದಸ್ಯೆ ಸೌಮ್ಯಾ ಆನಂದ್ ಹೇಳಿದರು.
ಪರಿಸರಕ್ಕೆ ಧಕ್ಕೆಯಾಗದ ರೀತಿ ಗಣೇಶ ಹಬ್ಬ ಆಚರಿಸಿ
ಪುರಾತನ ಕಾಲದಿಂದಲೂ ಗೌರಿ ಗಣೇಶ ಮೂರ್ತಿಯನ್ನು ಜೆಡಿ ಮಣ್ಣಿನಿಂದ ತಯಾರಿಸಿ ಪೂಜಿಸಿ, ಆರಾಧಿಸಿ, ನದಿ, ಬಾವಿ, ಕೆರೆ, ಕಟ್ಟೆಗಳಾದ ಜಲಮೂಲಗಳಿಂದ ಪರಿಸರದಲ್ಲಿ ಲೀನವಾಗುವಂತೆ ವಿಸರ್ಜಿಸುವ ಮೂಲಕ ಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತಿದೆ. ಪಿಒಪಿಯಿಂದ ತಯಾರಿಸುವ ಮತ್ತು ರಸಾಯನಿಕ ಮುಕ್ತ ಬಣ್ಣವನ್ನು ಬಳಸುವುದರಿಂದ ಪರಿಸರ ಮತ್ತು ನೀರು ಕಲ್ಮಶವಾಗಿ ಮನುಷ್ಯರು, ಪ್ರಾಣಿಗಳ ಮೇಲೆ ಆರೋಗ್ಯದ ದುಷ್ಪರಿಣಾಮ ಬೀರುತ್ತಿದೆ. ಈ ಕುರಿತು ಗೌರಿ, ಗಣೇಶ ಮೂರ್ತಿಗಳನ್ನು ತಯಾರಿಸುವ, ಮಾರಾಟ ಮಾಡುವ ಮತ್ತು ಪ್ರತಿಷ್ಠಾಪಿಸುವ ಸಮಿತಿಗಳ ಗಮನಕ್ಕೆ ತಂದು, ಪಿಒಪಿ ಮತ್ತು ರಸಾಯನಿಕ ಬಣ್ಣದಿಂದ ತಯಾರು ಮಾಡಿರುವ ಮೂರ್ತಿಗಳನ್ನು ಹೊರತುಪಡಿಸಿ, ಮಣ್ಣಿನಿಂದ ತಯಾರು ಮಾಡುವ ಮೂರ್ತಿಗಳನ್ನು ಪ್ರತಿಷ್ಠಾಪಿಸಿಲು ತಿಳಿಸಿದರು.
ಸಾರ್ವಜನಿಕ ಗಣಪತಿ ಪ್ರತಿಷ್ಠಾಪನೆಗೆ ಅನುಮತಿ ಕಡ್ಡಾಯ
ಶ್ರೀ ಗಣೇಶ ಮೂರ್ತಿ ಪ್ರತಿಷ್ಟಾಪನೆಯ ಅನುಮತಿಗಾಗಿ ಈ ಕೆಳಕಂಡ ದಾಖಲಾತಿಗಳನ್ನು ನೀಡುವಂತೆ ಸೂಚಿಸಲಾಗಿದೆ. ಪ್ರತಿಷ್ಠಾಪನೆ ಮತ್ತು ವಿಸರ್ಜನೆ ಸಂಬಂಧಿಸಿದಂತೆ ಆಯೋಜಿಸುವ ಕಾರ್ಯಕ್ರಮಗಳ ವಿವರದೊಂದಿಗೆ ಮನವಿ ಪತ್ರ, ಪ್ರತಿಷ್ಠಾಪನೆ ಮಾಡುವ ಸ್ಥಳದ ಮಾಲೀಕರ ಅನುಮತಿ ಪತ್ರ, ವಿದ್ಯುತ್ ಇಲಾಖೆಯಿಂದ ಅನುಮತಿ ಪತ್ರ, ಗ್ರಾಮ ಪಂಚಾಯಿತಿಯಿಂದ ಅನುಮತಿ ಪತ್ರ, ವಿಸರ್ಜನೆ ವೇಳೆಯಲ್ಲಿ ವಾಹನ ಬಳಕೆ ಮಾಡಿದಲ್ಲಿ ವಾಹನದ ವಿವರ ಕಡ್ಡಾಯ ಎಂದು ತಿಳಿಸಲಾಗಿದೆ.
ಮಕ್ಕಳಿಗೆ ಸಂಸ್ಕೃತಿ ಮತ್ತು ನೈತಿಕ ಮೌಲ್ಯ ಪರಿಚಯಿಸಬೇಕು
ಇಂದು ಮಕ್ಕಳು ಮೊಬೈಲ್, ಲ್ಯಾಪ್‌ಟಾಪ್‌ಗಳ ದಾಸರಾಗುತ್ತಿದ್ದಾರೆ. ಪೋಷಕರು ತಮ್ಮ ಮಕ್ಕಳಿಗೆ ಭಾರತೀಯ ಸಂಸ್ಕೃತಿ ಮತ್ತು ನೈತಿಕ ಮೌಲ್ಯಗಳನ್ನು ಪರಿಚಯಿಸಬೇಕಾಗಿದೆ. ತಂತ್ರಜ್ಞಾನ ಬಳಕೆ ನಿಯಂತ್ರಣದೊಳಗಿರಬೇಕು, ಉಪಯೋಗದ ಮಟ್ಟದವರೆಗೆ ಮಾತ್ರ ಇರಬೇಕು. ಹಾಲು ಹೆಪ್ಪಾದರೆ ಮೊಸರಾಗುತ್ತದೆ, ಮೊಸರು ಬಡಿದರೆ ಬೆಣ್ಣೆ, ಬೆಣ್ಣೆ ಕಾಸಿದರೆ ತುಪ್ಪ. ಈ ರೀತಿಯ ಪ್ರಕ್ರಿಯೆಯಂತೆ ನಮ್ಮ ವ್ಯಕ್ತಿತ್ವವೂ ಸಂಸ್ಕಾರ, ಶ್ರಮ ಮತ್ತು ಜೀವನ ಅನುಭವದ ಮೂಲಕ ಶುದ್ಧತೆಯತ್ತ ಸಾಗಬೇಕು. ಈ ಪ್ರಕ್ರಿಯೆಯಲ್ಲಿ ಮೊಬೈಲ್‌ಗಳಿಗೆ ದಾಸರಾಗದೆ ಗುರು-ಪೋಷಕರ ಮಾರ್ಗದರ್ಶನಕ್ಕೆ ಒಲಿಯಬೇಕು ಎಂದು ಹೇಳಿದರು.
ಸರ್ಕಾರಿ ಶಾಲೆಯಲ್ಲಿ ಓದಿ ಐಐಟಿ ಸೇರಿದ ದೀಪಕ್‌ಗೆ ರೋಟರಿ ಆರ್ಥಿಕ ನೆರವು
ಸರ್ಕಾರಿ ಶಾಲೆಯಲ್ಲಿ ಓದಿ ಪ್ರತಿಭೆಯಿಂದ ಐಐಟಿ ಪ್ರವೇಶ ಪಡೆದಿದ್ದ ವಿದ್ಯಾರ್ಥಿ ದೀಪಕ್ ಅವರಿಗೆ ರೋಟರಿ ಸಂಸ್ಥೆ ಆರ್ಥಿಕ ನೆರವು ನೀಡಿ ಗೌರವಿಸಿದೆ. ದೀಪಕ್ ಅವರ ಬಡತನದ ಹಿನ್ನೆಲೆ ಅರಿತು ರೋಟರಿ ಅಧ್ಯಕ್ಷ ಜ್ಯೋತಿ ಶ್ರೀನಿವಾಸ್, ವಲಯ ಅಧಿಕಾರಿ ಯಶವಂತ್ ಮತ್ತು ತಂಡವು ನೆರವಾಗಲು ಮುಂದಾಯಿತು. ದೀಪಕ್ ತನ್ನ ಬದುಕಿನ ನೋವಿನ ನಡುವೆಯೂ ಸಾಧನೆ ಮಾಡಿದ್ದಾನೆ. ಎಸ್.ಎಸ್.ಎಲ್.ಸಿ ವ್ಯಾಸಂಗ ಮಾಡುವಾಗ ತಾಯಿ ಮೃತಪಟ್ಟರೂ, ಮನೆಯಲ್ಲೇ ಕುಳಿತು ಓದಿ ಉತ್ತಮ ಅಂಕ ಪಡೆದಿದ್ದಾನೆ. ಇವನ ಸಾಧನೆ ಮತ್ತೊಬ್ಬರಿಗೆ ಪ್ರೇರಣೆಯಾಗಲಿ ಎಂದು ಆಶಿಸಿದರು.
ನರ್ಸರಿ ಉದ್ಯಮವನ್ನು ನಷ್ಟಕ್ಕೆ ತಳ್ಳಿದ ಮಳೆ
ಸಾಮಾನ್ಯವಾಗಿ ನರ್ಸರಿ ಉದ್ಯಮ ಆರಂಭವಾಗುವುದು ಏಪ್ರಿಲ್ ಮಧ್ಯಭಾಗದಿಂದ ಮೇ ಮಧ್ಯಭಾಗದ ನಡುವೆ. ನರ್ಸರಿ ಮಾಡಿದ ಗಿಡಗಳು ಮಣ್ಣಿಗೆ ಬೇರು ನೆಲಕಚ್ಚಲು ಒಂದೇರಡು ತಿಂಗಳ ಕಾಲವಕಾಶ ಬೇಕಾಗಿದೆ. ಆದರೆ, ಈ ಬಾರಿ ಅವಧಿಗೂ ಮೊದಲೇ ಮಳೆ ಆರಂಭವಾಗಿರುವುದರಿಂದ ನರ್ಸರಿಯಲ್ಲಿ ಗಿಡಗಳು ಬೇರುಗಟ್ಟುವ ಮುನ್ನ ಶೀತದಿಂದ ಕೊಳೆಯಲಾರಂಭಿಸಿದ್ದು, ಎಷ್ಟೇ ಮುಂಜಾಗ್ರತ ಕ್ರಮ ಕೈಗೊಂಡರೂ ನರ್ಸರಿ ಉಳಿಸಿಕೊಳ್ಳಲು ಸಾಕಷ್ಟು ನರ್ಸರಿ ಮಾಲೀಕರಿಗೆ ಸಾಧ್ಯವಾಗಿಲ್ಲ.
ಹೊಳೆನರಸೀಪುರಕ್ಕೆ ಡಿಸಿ ಭೇಟಿ ನೀಡಿ ಸಮಸ್ಯೆ ಬಗೆಹರಿಸುವ ಭರವಸೆ
ಸಮಸ್ಯೆಗಳನ್ನು ಖುದ್ದು ವೀಕ್ಷಿಸಿದ ನಂತರವೇ ಅದರ ನೈಜ ಸ್ವರೂಪ ಅರಿಯಲು ಸಾಧ್ಯ. ಹೀಗಾಗಿ ಪ್ರತಿ ತಾಲೂಕಿಗೂ ಭೇಟಿ ನೀಡುತ್ತೇನೆ ಜತೆಗೆ ಸೂಕ್ತ ಪರಿಹಾರ ಕಂಡು ಕೊಡುವ ಬಗ್ಗೆ ಪ್ರಯತ್ನಿಸಬಹುದು ಎಂದರು. ಇಲ್ಲಿನ ಪ್ರಶಾಂತ ವಾತಾವರಣ, ದೇಗುಲಗಳ ಸೊಬಗು ಭಕ್ತಿ ಭಾವ ಮೂಡಿಸಿವೆ ಎಂದು ಅಭಿಮಾನದಿಂದ ನುಡಿದರು. ಹಂಗರಹಳ್ಳಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, ಪೂರ್ವ ಪ್ರಾಥಮಿಕ ಶಾಲೆಯನ್ನು ಗ್ರಾಮದ ಮುಖಂಡರು ದತ್ತು ಪಡೆದು ಸವಲತ್ತು ಒದಗಿಸಿಕೊಟ್ಟಿರುವ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
  • < previous
  • 1
  • ...
  • 53
  • 54
  • 55
  • 56
  • 57
  • 58
  • 59
  • 60
  • 61
  • ...
  • 548
  • next >
Top Stories
ಎಐ ಸವಾಲುಗಳ ಯುಗಕ್ಕೆ ಕನ್ನಡ ಅಣಿಗೊಳಿಸಲು ನಾವು ಬದ್ಧ: ಸಿದ್ದರಾಮಯ್ಯ
ಬೆಳಗಾವಿ ಕನ್ನಡ ರಾಜ್ಯೋತ್ಸವದಲ್ಲಿ 5 ಮಂದಿಗೆ ಇರಿತ
ಕಿರ್ಕ್‌ ಪತ್ನಿ ಜತೆ ವ್ಯಾನ್ಸ್‌ ಆಪ್ತತೆ : ಉಷಾ ಜತೆ ವಿಚ್ಛೇದನ ವದಂತಿ
ಖರ್ಗೆ ಆರ್‌ಎಸ್‌ಎಸ್‌ ಹೇಳಿಕೆಗೆ ಹೊಸಬಾಳೆ, ಶಾ ತಿರುಗೇಟು
ಇಂದು ಭಾರತ vs ದ.ಆಫ್ರಿಕಾ ಐತಿಹಾಸಿಕ ಫೈನಲ್‌
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved