ಇರುವ ಶೈಕ್ಷಣಿಕ ಸವಲತ್ತುಗಳನ್ನು ಬಳಸಿಕೊಂಡು ಸಾಧನೆ ಮಾಡಿಶಿಕ್ಷಣ ಕ್ಷೇತ್ರದಲ್ಲಿ ಸರ್ಕಾರ ರೂಪಿಸಿರುವ ಯೋಜನೆಗಳು ಹಾಗೂ ಕಲಿಕಾ ಪೂರಕ ವ್ಯವಸ್ಥೆಯಿಂದಾಗಿ ವಿದ್ಯಾರ್ಥಿಗಳಿಗೆ ಭವಿಷ್ಯ ರೂಪಿಸಿಕೊಳ್ಳಲು ಉತ್ತಮ ಅವಕಾಶಗಳು ಇದ್ದು, ಅವರು ದೊರೆತ ಸದಾವಕಾಶವನ್ನು ಸದುಪಯೋಗಪಡಿಸಿಕೊಂಡು ಪೋಷಕರು ಕಂಡ ಕನಸ್ಸನ್ನು ಸಕಾರಗೊಳಿಸುವ ನಿಟ್ಟಿನಲ್ಲಿ ಕಲಿಕೆಯ ಕಾರ್ಯಸೂಚಿ ರೂಪಿಸಿಕೊಂಡು ಮುನ್ನಡೆಯುವುದು ಅಗತ್ಯವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಲಿಂಗೇಗೌಡ ಸಲಹೆ ನೀಡಿದರು. ಓದುವ ಸಮಯದಲ್ಲಿ ನಿಶ್ಚಿಂತೆಯಿಂದ ಓದಿ, ಚೆನ್ನಾಗಿ ಊಟ ಹಾಗೂ ನಿದ್ದೆ ಮಾಡಿ, ಕಲಿಕೆಯನ್ನು ಒತ್ತಡದಲ್ಲಿ ಮಾಡದೇ ಪ್ರೀತಿಯಿಂದ ಕಲಿತಾಗ ಯಶಸ್ಸು ದೊರೆಯುತ್ತದೆ ಎಂದರು.