ಗುಜ್ಜನಹಳ್ಳಿಯಲ್ಲಿ ನೂತನ ಗಣಪತಿ ಪೆಂಡಾಲ್ ಉದ್ಘಾಟನೆಚಿಕ್ಕ ಹಳ್ಳಿ, ಕಡಿಮೆ ಜನಸಂಖ್ಯೆ ಹೊಂದಿದ್ದರೂ ಸಹ ಗಣಪತಿ ಪೆಂಡಾಲ್ ಎಂಬ ಭವ್ಯ ಕಟ್ಟಡ ತಲೆ ಎತ್ತಿರುವುದು ಪುಟ್ಟ ಗ್ರಾಮದ ಸಾಧನೆಯಾಗಿದೆ ಎಂದು ಶಾಸಕ ಹುಲ್ಲಳ್ಳಿ ಸುರೇಶ್ ಹೇಳಿದರು. ತಾಲೂಕಿನ ಅರೇಹಳ್ಳಿ ಹೋಬಳಿಯ ತುಂಬದೇವನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗುಜ್ಜನಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾದ ಗಣಪತಿ ಪೆಂಡಾಲ್ ಅನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂಸ್ಕಾರ, ಸಹಬಾಳ್ವೆ ಹಾಗೂ ಸಹಬಾಳ್ವೆಯ ಪ್ರತೀಕವಾಗಿ ಪೆಂಡಾಲ್ ನಿರ್ಮಿಸಿರುವುದು ಶ್ಲಾಘನೀಯ. ಇದೇ ರೀತಿ ಗ್ರಾಮವು ವಿನಾಯಕನ ಅನುಗ್ರಹದಿಂದ ಸರ್ವಾಂಗೀಣ ಅಭಿವೃದ್ಧಿ ಸಾಧಿಸಲಿ ಎಂದು ಹಾರೈಸಿದರು.