• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • Hassan

Hassan

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ರಾಗಿ ಖರೀದಿಯ ಬಾಕಿ ಹಣಕ್ಕಾಗಿ ರೈತರ ಮನವಿ
ತಾಲೂಕು ಕರವೇ ಯುವ ಘಟಕದ ಅಧ್ಯಕ್ಷ ದಯಾನಂದ ಮಾತನಾಡಿ, ತಾಲೂಕಿನ ತೆರೆದಿದ್ದ ರಾಗಿ ಖರೀದಿ ಕೇಂದ್ರಕ್ಕೆ ರೈತರು ನೀಡಿದ ರಾಗಿಗೆ ಈಗಾಗಲೇ ಹಣ ಪಾವತಿ ಮಾಡಿದ್ದಾರೆ. ಆದರೆ ಹಳ್ಳಿಮೈಸೂರು ಹೋಬಳಿಯ ರೈತರು ನೀಡಿರುವ ರಾಗಿಗೆ ಇನ್ನೂ ಹಣ ಪಾವತಿ ಮಾಡದ ಕಾರಣದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಮುಂಗಾರು ಬೆಳೆಗೆ ಅಗತ್ಯವಾದ ರಸಗೊಬ್ಬರ ಹಾಗೂ ಇತರೆ ಅಗತ್ಯತೆಗಳನ್ನು ಕೊಳ್ಳಲಾಗದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ರೈತರ ಸಮಸ್ಯೆಯ ತೀವ್ರತೆಯನ್ನು ಅರಿತು ರೈತರು ನೀಡಿದ ರಾಗಿಗೆ ಹಣ ಪಾವತಿಸಲು ಅಗತ್ಯ ಕ್ರಮಕೈಗೊಳ್ಳಬೇಕೆಂದು ತಹಸೀಲ್ದಾರ್‌ ಅನುಪಸ್ಥಿತಿಯಲ್ಲಿ ಉಪ ತಹಸೀಲ್ದಾರ್ ರೂಪೇಶ್ ಅವರಿಗೆ ಮನವಿ ಮಾಡಿದ್ದೇವೆ ಎಂದರು.
ಪಂಚಮುಖಿ ಕಲ್ಯಾಣಿಯಲ್ಲಿ ಗೌರಿ ಮೂರ್ತಿ ವಿಸರ್ಜನೆ
ಸ್ವರ್ಣ ಗೌರಿ ಹಬ್ಬದಂದು ಗ್ರಾಮದ ಪುರವರ್ಗ ಹಿರೇಮಠದ ಡಾ. ಮಹೇಶ್ವರ ಶಿವಾಚಾರ್ಯ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ವೀರಶೈವ ಸಮಾಜದ ಮುತ್ತೈದೆಯರು ಪಂಚಮುಖಿ ಕಲ್ಯಾಣಿಯಿಂದ ಗಂಗೆ ಪೂಜೆಯೊಂದಿಗೆ ಸ್ವರ್ಣ ಗೌರಿಯನ್ನು ಕರೆ ತರುವ ಮೂಲಕ ಗ್ರಾಮದ ಪೇಟೆ ಬೀದಿಯಲ್ಲಿರುವ ಶ್ರೀ ಬಸವೇಶ್ವರ ದೇವಾಲಯದಲ್ಲಿ ಗೌರಮ್ಮನನ್ನು ಪ್ರತಿಷ್ಠಾಪಿಸಿದ್ದರು. 3 ದಿನಗಳ ನಂತರ ಗೌರಿ ಮೂರ್ತಿಯನ್ನು ಕಲ್ಯಾಣಿಯಲ್ಲಿ ವೀರಶೈವ ಸಮಾಜದ ಶೆಟ್ರು ಕುಟುಂಬದ ನೇತೃತ್ವದಲ್ಲಿ ಪಂಚಮುಖಿ ಕಲ್ಯಾಣಿಯಲ್ಲಿ ವಿಸರ್ಜಿಲಾಯಿತು.
ಜಿಲ್ಲಾ ಬಿಜೆಪಿಯಿಂದ ಧರ್ಮಸ್ಥಳ ಚಲೋ
ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಷಡ್ಯಂತ್ರ ಮತ್ತು ಅಪಪ್ರಚಾರವನ್ನು ಖಂಡಿಸಿ ಸೆಪ್ಟೆಂಬರ್ 1ರಂದು ಬಿಜೆಪಿ ವತಿಯಿಂದ ''ಧರ್ಮಸ್ಥಳ ಚಲೋ'' ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ ಹಾಗೂ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಪ್ರೀತಂ ಜೆ.ಗೌಡ ತಿಳಿಸಿದರು. ಸನಾತನ ಹಿಂದೂ ಧರ್ಮದ ವಿರುದ್ಧ ಸಂಘಟಿತವಾಗಿ ಷಡ್ಯಂತ್ರ ನಡೆಯುತ್ತಿದೆ. ಧರ್ಮಸ್ಥಳದ ಹೆಸರಿಗೆ ಧಕ್ಕೆ ತರುವ ಪ್ರಯತ್ನಗಳನ್ನು ಎದುರಿಸಲು ನಾವು ಧರ್ಮಕ್ಕಾಗಿ ಹೋರಾಟ ನಡೆಸುತ್ತಿದ್ದೇವೆ. ಇದು ರಾಜಕೀಯ ಹೋರಾಟವಲ್ಲ ಎಂದು ಪ್ರೀತಂ ಗೌಡ ಸ್ಪಷ್ಟಪಡಿಸಿದರು.
ಸ್ವಚ್ಛತೆಗೆ ಆದ್ಯತೆ ನೀಡಿದ ಹಳೇಬೀಡು ಗ್ರಾಮ ಪಂಚಾಯಿತಿ
ಈ ಹಿಂದೆ ಗ್ರಾಮ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ತಹಸೀಲ್ದಾರ್ ಶ್ರೀಧರ್ ಕಂಕನವಾಡಿ ನೇತೃತ್ವದಲ್ಲಿ ಪೂರ್ವಭಾವಿ ಸಭೆಯನ್ನು ಕರೆದು ಹಳೇಬೀಡಿಗೆ ಹೆಚ್ಚು ಪ್ರವಾಸಿಗರು ಬರುವ ಸ್ಥಳವಾಗಿದ್ದು, ಈ ಸ್ಥಳದಲ್ಲಿ ಸುಂದರತೆ ಮತ್ತು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ತಿಳಿಸಿದ್ದರು. ಪ್ರಮುಖ ರಸ್ತೆಯಲ್ಲಿ ಇರುವ ಗೂಡಂಗಡಿ ತೆರವು ಮಾಡಿಸಿ ಅವರಿಗೆ ತಾತ್ಕಾಲಿಕ ಅಂಗಡಿಗಳನ್ನು ಮಾಡುವ ಉದ್ದೇಶ ನಮ್ಮದಾಗಿದೆ. ನಮ್ಮ ಪಂಚಾಯತಿ ಸ್ಥಳದಲ್ಲಿ ಸಣ್ಣ ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಡುತ್ತೇವೆ ಎಂದರು.
ಗ್ರಾಮಗಳ ಅಭಿವೃದ್ಧಿಯಲ್ಲಿ ರಾಜಕೀಯ ಬೇಡ
ಹೆಬ್ಬಾಳು ಗ್ರಾಮದಲ್ಲಿ ಸಮುದಾಯ ಭವನದ ಅಡುಗೆಮನೆ ಕಾಮಗಾರಿಗೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿ, ಈಗಾಗಲೇ ಲೋಕಸಭಾ ಸದಸ್ಯರು ಮತ್ತು ಸ್ಥಳೀಯ ವಿಧಾನಸಭಾ ಸದಸ್ಯರು ಅನುದಾನ ನೀಡಿದ ಹಿನ್ನೆಲೆಯಲ್ಲಿ ಸಮುದಾಯದ ಭವನ ನಿರ್ಮಾಣವಾಗಿದೆ. ಸಮುದಾಯದ ಭವನದ ಪಕ್ಕದಲ್ಲಿ ಅಡುಗೆಮನೆ, ಶೌಚಾಲಯ ನಿರ್ಮಿಸಲು ಹಾಸನ ಲೋಕಸಭಾ ಸದಸ್ಯರಾದ ಶ್ರೇಯಸ್ ಎಂ‌ ಪಟೇಲ್ 5 ಲಕ್ಷವನ್ನು ನೀಡಿದ್ದಾರೆ. ಈ ಗ್ರಾಮಕ್ಕೆ ಅನುದಾನ ಬರಲು ಮಾಜಿ ಸಚಿವರಾದ ಬಿ.ಶಿವರಾಂ ಕೂಡ ಕಾರಣಕರ್ತರಾಗಿದ್ದಾರೆ. ಗ್ರಾಮದ ಅಭಿವೃದ್ಧಿಯಲ್ಲಿ ಯಾವುದೇ ರಾಜಕಾರಣ ಬೇಡ ಎಂದು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ದೇಶಾಣಿ‌ ಆನಂದ್ ಹೇಳಿದರು.
ಪ್ರತಿ ಬೆಳೆ ಬೆಳೆಯಲೂ ತಜ್ಞರ ಸಲಹೆ ಅಗತ್ಯ
ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ಅತಿವೃಷ್ಠಿಯಿಂದ ಮುಸುಕಿನ ಜೋಳ ಬಿಳಿಸುಳಿ ರೋಗದಿಂದ ಶೇ. ೧೧.೫೫ರಷ್ಟು ಬೆಳೆ ಹಾನಿಯಾಗಿದ್ದು, ಇತರೆ ಬೆಳೆಗಳಿಗೆ ಹಾನಿಯಾಗದೇ ಇದ್ದರೂ ಮುಂದಿನ ದಿನಗಳಲ್ಲಿ ರೈತರು ಕೃಷಿ ಇಲಾಖೆಯ ವಿಜ್ಞಾನಿಗಳ ಸಲಹೆ ಜತೆಗೆ ಅಗತ್ಯ ಮುಂಜಾಗ್ರತೆ ಹಾಗೂ ಜಾಗೃತಿ ಅಗತ್ಯವಾಗಿದೆ. ಕೃಷಿ ಇಲಾಖೆಯ ವಿಜ್ಞಾನಿಗಳ ಸೂಚನೆಯಂತೆ ತಾಲೂಕು ಕೃಷಿ ಇಲಾಖೆ ಉಪ ನಿರ್ದೇಶಕರ ಕಚೇರಿಯ ಹಿರಿಯ ಅಧಿಕಾರಿಗಳು ನೀಡುವ ಸಲಹೆ ಹಾಗೂ ಮಾರ್ಗದರ್ಶನ ಪಾಲನೆಯೂ ಬೆಳೆನಷ್ಟವನ್ನು ಶೂನ್ಯದತ್ತ ಕೊಂಡ್ಯೊಯುವ ಸಾಧ್ಯೆತೆಯೂ ಇದೆ.
ಗುಜ್ಜನಹಳ್ಳಿಯಲ್ಲಿ ನೂತನ ಗಣಪತಿ ಪೆಂಡಾಲ್ ಉದ್ಘಾಟನೆ
ಚಿಕ್ಕ ಹಳ್ಳಿ, ಕಡಿಮೆ ಜನಸಂಖ್ಯೆ ಹೊಂದಿದ್ದರೂ ಸಹ ಗಣಪತಿ ಪೆಂಡಾಲ್ ಎಂಬ ಭವ್ಯ ಕಟ್ಟಡ ತಲೆ ಎತ್ತಿರುವುದು ಪುಟ್ಟ ಗ್ರಾಮದ ಸಾಧನೆಯಾಗಿದೆ ಎಂದು ಶಾಸಕ ಹುಲ್ಲಳ್ಳಿ ಸುರೇಶ್ ಹೇಳಿದರು. ತಾಲೂಕಿನ ಅರೇಹಳ್ಳಿ ಹೋಬಳಿಯ ತುಂಬದೇವನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗುಜ್ಜನಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾದ ಗಣಪತಿ ಪೆಂಡಾಲ್ ಅನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂಸ್ಕಾರ, ಸಹಬಾಳ್ವೆ ಹಾಗೂ ಸಹಬಾಳ್ವೆಯ ಪ್ರತೀಕವಾಗಿ ಪೆಂಡಾಲ್ ನಿರ್ಮಿಸಿರುವುದು ಶ್ಲಾಘನೀಯ. ಇದೇ ರೀತಿ ಗ್ರಾಮವು ವಿನಾಯಕನ ಅನುಗ್ರಹದಿಂದ ಸರ್ವಾಂಗೀಣ ಅಭಿವೃದ್ಧಿ ಸಾಧಿಸಲಿ ಎಂದು ಹಾರೈಸಿದರು.
ಅರಸೀಕೆರೆಯ ಭ್ರಷ್ಟಾಚಾರಗಳಿಗೆ ಶಾಸಕ ಶಿವಲಿಂಗೇಗೌಡರೇ ಹೊಣೆ
corruptionಮೂಲತಃ ಗುತ್ತಿಗೆದಾರರಾಗಿ ಇಂದು ಸಂಪುಟದರ್ಜೆ ಅಧಿಕಾರದಲ್ಲಿರುವ ಅರಸೀಕೆರೆ ಕ್ಷೇತ್ರದ ಶಾಸಕರಾದ ಕೆ.ಎಂ.ಶಿವಲಿಂಗೇಗೌಡರು ತಾಲೂಕಿನಲ್ಲಿ ಅಧಿಕಾರಿಗಳನ್ನು ತಮ್ಮ ಕಪಿಮುಷ್ಠಿಯಲ್ಲಿ ಇಟ್ಟುಕೊಂಡು ಭಾರೀ ಭ್ರಷ್ಟಾಚಾರ ಮಾಡಿದ್ದಾರೆ. ಅದಕ್ಕೆ ಸಂಬಂಧಪಟ್ಟ ದಾಖಲೆಗಳೂ ನನ್ನ ಬಳಿ ಇದ್ದು, ಅರಸೀಕೆರೆಯಿಂದ ಜಿ ಪಂ ಕಛೇರಿವರೆಗೂ ಪಾದಯಾತ್ರೆ ನಡೆಸುವುದಾಗಿ ಜೆಡಿಎಸ್ ಮುಖಂಡ ಎನ್.ಆರ್. ಸಂತೋಷ್ ಎಚ್ಚರಿಸಿದರು. ತಮಗೆ ಬೇಕಾದವರನ್ನು ಬೇಕಾದಲ್ಲಿಗೆ ನೇಮಕ ಮಾಡಿಕೊಂಡು ಹಣ‌ ವಸೂಲಿ‌ ಮಾಡಿದ್ದಾರೆ. ಮುಂದಿನ ತಾಲೂಕು ಪಂಚಾಯ್ತಿ ಹಾಗೂ ಜಿಲ್ಲಾ ಪಂಚಾಯ್ತಿ ಚುನಾವಣೆಯನ್ನು ಮುಂದಿಟ್ಟುಕೊಂಡು ಈ ಮೂಲಕ ಹಣ ಕ್ರೂಢೀಕರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ವಿಜೃಂಭಣೆಯಿಂದ ನೆರವೇರಿದ ಪಾಂಚಜನ್ಯ ಗಣಪತಿ ಪ್ರತಿಷ್ಠಾಪನೆ
ಪಾಂಚಜನ್ಯ ಹಿಂದೂ ಗಣಪತಿ ಸಮಿತಿಯಿಂದ ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆವರಣದಲ್ಲಿ ಬುಧವಾರ ಮಧ್ಯಾಹ್ನದಂದು ಗಣ್ಯರ ಎದುರು ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿ ಗಣೇಶ ಪ್ರತಿಷ್ಠಾಪನೆಯು ವಿಜೃಂಭಣೆಯಿಂದ ನೆರವೇರಿತು. ನಾಡಿನಲ್ಲಿ ಉತ್ತಮ ಮಳೆ, ಬೆಳೆ ಸಿಗಲಿ. ಸಮಾಜದಲ್ಲಿ ಸೌಹಾರ್ದತೆ ಇನ್ನಷ್ಟು ಹೆಚ್ಚಿಸಲಿ. ಬಂಧು- ಬಾಂಧವರಿಗೆ ಉತ್ತಮ ಆರೋಗ್ಯ ಕಲ್ಪಿಸಲಿ ಎಂದು ವಿಘ್ನೇಶ್ವರನಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದರು.
ಮೂರನೇ ಬಾರಿಗೆ ಡಿಸಿಸಿ ಬ್ಯಾಂಕ್‌ ನಿರ್ದೇಶಕರಾದ ನಾಗರಾಜ
ದೇವೇಗೌಡರ ಕುಟುಂಬ ಹಾಗೂ ತಾಲೂಕಿನ ಜೆಡಿಎಸ್‌ ಕಾರ್ಯಕರ್ತರ ಮೆಚ್ಚುಗೆಗೆ ಪಾತ್ರವಾಗಿರುವ ಒಕ್ಕಲಿಗ ಸಮಾಜದ ಪ್ರಭಾವಿ ಮುಖಂಡ ಎಂ.ಎ ನಾಗರಾಜ್ ಅವರಿಗೆ ಮೂರನೇ ಬಾರಿಗೆ ಎಚ್‌ಡಿಸಿಸಿ ಬ್ಯಾಂಕಿನ ನಿರ್ದೇಶಕ ಸ್ಥಾನ ದೊರಕಿರುವುದು ಮಂಕಾಗಿದ್ದ ಜೆಡಿಎಸ್ ಪಾಳಯಕ್ಕೆ ಮತ್ತೆ ಶಕ್ತಿ ಬಂದಂತಾಗಿದೆ. ಈಗ ಮೂರನೇ ಬಾರಿಗೆ ಎಚ್‌ಡಿಸಿಸಿ ಬ್ಯಾಂಕಿನ ನಿರ್ದೇಶಕ ಸ್ಥಾನವನ್ನು ಬೇಲೂರಿನ ಒಕ್ಕಲಿಗರ ಪ್ರಭಾವಿ ಮುಖಂಡ, ಮಾಜಿ ತಾಪಂ ಅಧ್ಯಕ್ಷ ಎಂ ಎ ನಾಗರಾಜ್ ಅವರಿಗೆ ಕೊಡುವುದರ ಮೂಲಕ ಜೆಡಿಎಸ್ ಪಕ್ಷವನ್ನು ಮತ್ತೆ ಬಲಿಷ್ಠಗೊಳಿಸುವತ್ತ ಪಕ್ಷದ ವರಿಷ್ಠರು, ಮುಂದಾಗಿರುವ ಕ್ರಮಕ್ಕೆ ಶ್ಲಾಘನೆ ವ್ಯಕ್ತವಾಗುತ್ತಿದೆ.
  • < previous
  • 1
  • ...
  • 46
  • 47
  • 48
  • 49
  • 50
  • 51
  • 52
  • 53
  • 54
  • ...
  • 547
  • next >
Top Stories
ಇಂದಿನಿಂದ ಕಾಂತಾರ 1 ಟಿಕೆಟ್ ಬೆಲೆ ರು.99
ಬಿಸಿನೆಸ್ ತಂತ್ರ ಬದಲಿಸಿರುವ ಓಟಿಟಿಗಳು
ಪಟೇಲ್ ಮತ್ತು ಬೋಸ್ : ತತ್ವ ಭೇದಗಳಲ್ಲಡಗಿದ ರಾಷ್ಟ್ರಚಿಂತನೆ
ಗುಡ್‌ ಫ್ರೆಂಡ್‌ ಜೊತೆ ನಟಿಸಿದಷ್ಟು ಖುಷಿ ಆಗಿದ : ಮನೀಶಾ ಕಂದಕೂರ್‌
ರಾಷ್ಟ್ರೀಯ ಐಕ್ಯತೆ ಸಾರುತ್ತಿದೆ ಸರ್ದಾರ್‌ ‘ಮೂರ್ತಿ’!
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved