• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • Hassan

Hassan

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಸಿಂದೂರ ಯಶಸ್ವಿ ಹಿನ್ನೆಲೆ ಬೇಲೂರಲ್ಲಿ ತಿರಂಗಾ ಯಾತ್ರೆ
ಪಹಲ್ಗಾಮ್ ದಾಳಿಗೆ ಪ್ರತಿ ದಾಳಿಯಾಗಿ ಭಾರತವು ಆಪರೇಷನ್ ಸಿಂಧೂರ ಮೂಲಕ ಪ್ರತ್ಯುತ್ತರ ನೀಡಿದ್ದಕ್ಕಾಗಿ ಮತ್ತು ನಮ್ಮ ಹೆಮ್ಮೆಯ ಸೈನಿಕರಿಗೆ ನೈತಿಕ ಸ್ಥೈರ್ಯ ನೀಡುವ ಸಲುವಾಗಿ ಚನ್ನಕೇಶವಸ್ವಾಮಿ ದೇವಸ್ಥಾನದ ಮುಂಭಾಗದಿಂದ ಬಸವೇಶ್ವರ ವೃತ್ತದವರೆಗೂ ಬಿಜೆಪಿ ಹಾಗೂ ಪ್ರಗತಿಪರ ಸಂಘಟನೆಗಳ ವತಿಯಿಂದ ಶಾಸಕ ಎಚ್.ಕೆ.ಸುರೇಶ್ ನೇತೃತ್ವದಲ್ಲಿ "ರಾಷ್ಟ್ರ ರಕ್ಷಣೆಗಾಗಿ ನಾವೆಲ್ಲರೂ " ಎಂಬ ಘೋಷವಾಕ್ಯದಡಿ ತಿರಂಗಾ ಯಾತ್ರೆ ಮಾಡಲಾಯಿತು.
ಅರ್ಚಕನ ಆತ್ಮಹತ್ಯೆಗೆ ಕಾರಣರಾದವರ ಬಂಧನಕ್ಕೆ ಆಗ್ರಹ
ಬೇಲೂರು ತಾಲೂಕಿನ ಹಳೇಬೀಡು ಹೋಬಳಿಯ ಗಂಗೂರು ಗ್ರಾಮದ ಶ್ರೀ ಲಕ್ಷ್ಮೀರಂಗನಾಥಸ್ವಾಮಿ ದೇವಾಲಯದ ಅರ್ಚಕ ದೇವಾಲಯದಲ್ಲೇ ನೇಣಿಗೆ ಶರಣಾಗಿದ್ದು, ಆತ್ಮಹತ್ಯೆಗೆ ಕಾರಣರಾದವರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮಕೈಗೊಳ್ಳಬೇಕು ಹಾಗೂ ಮೃತರ ಕುಟುಂಬಕ್ಕೆ ೧೦ ಲಕ್ಷ ಪರಿಹಾರ ನೀಡಬೇಕೆಂದು ಆಗ್ರಹಿಸಿ ರಾಜ್ಯ ಧಾರ್ಮಿಕ ದತ್ತಿ ದೇವಾಲಯಗಳ ಆರ್ಚಕರ ಮತ್ತು ಆಗಮಿಕರ ಸಂಘದಿಂದ ಮಂಗಳವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಅಪ್ಪನ ಎದುರಲ್ಲೇ ಮಗಳ ಕಿಡ್ನಾಪ್ ಮಾಡಿದ ಯುವಕ
ಅರೇಹಳ್ಳಿ ಪಟ್ಟಣದ ಮುಖ್ಯ ರಸ್ತೆಯಲ್ಲಿ ಕಾರ್‌ನಲ್ಲಿ ಬಂದ ನಾಲ್ವರು ತಂದೆಯ ಎದುರಲ್ಲೇ ಮಗಳನ್ನು ಕಿಡ್ನಾಪ್ ಮಾಡಿದ್ದಲ್ಲದೆ ಕಾರನ್ನು ತಡೆದು ನಿಲ್ಲಿಸಲು ಹೋಗಿ ಡೋರ್‌ನಲ್ಲಿ ನೇತಾಡುತ್ತಿದ್ದ ತಂದೆಯನ್ನು ಸಹ ರಸ್ತೆಯುದ್ದಕ್ಕೂ ಎಳೆದೊಯ್ದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಚನ್ನರಾಯಪಟ್ಟಣ ಮೂಲದ ಯುವಕ, ಕೆಲ ತಿಂಗಳ ಹಿಂದೆ ಅರೇಹಳ್ಳಿ ಸಮೀಪದ ಹುಡುಗಿಯನ್ನು ಪ್ರೀತಿಸಿ ಪೋಷಕರ ನಿರಾಕರಣೆಯೊಂದಿಗೆ ಮದುವೆ ಆಗಿದ್ದ ಎನ್ನಲಾಗಿದೆ. ಕೆಲ ದಿನಗಳ ಹಿಂದೆ ಮಗಳನ್ನು ಒಪ್ಪಿಸಿ ಹುಡುಗನ ಮನೆಯಿಂದ ಪೋಷಕರು ಮನೆಗೆ ವಾಪಸ್‌ ಕರೆ ತಂದಿದ್ದರು ಎನ್ನಲಾಗಿದೆ.
ಒಳ ಮೀಸಲಾತಿ ಸಮೀಕ್ಷೆಯ ಲೋಪದೋಷ ಸರಿಪಡಿಸಿ
ಒಳ ಮೀಸಲಾತಿ ಸಂಬಂಧ ಎಸ್.ಸಿ. ಪಟ್ಟಿಯಲ್ಲಿಯ ೧೦೧ ಜಾತಿಗಳ ಸಮೀಕ್ಷೆ ಕಾರ್ಯದಲ್ಲಿ ಹಲವು ಲೋಪದೋಷಗಳು ಕಂಡುಬಂದಿದ್ದು, ಕೂಡಲೇ ಅವುಗಳನ್ನು ಸರಿಪಡಿಸಿ, ಸಮೀಕ್ಷೆ ಕಾರ್ಯವನ್ನು ಪರಿಣಾಮಕಾರಿಯಾಗಿ ನಡೆಸುವಂತೆ ಮಾಜಿ ಸಚಿವ ಎಚ್.ಕೆ. ಕುಮಾರಸ್ವಾಮಿ ಒತ್ತಾಯಿಸಿದರು. ಪರಿಶಿಷ್ಟ ಜಾತಿಯ ೧೦೧ ಜಾತಿಗಳ ಸಮೀಕ್ಷೆ ಕಾರ್ಯ ಮೇ ೫, ೨೦೨೫ರಿಂದ ಪ್ರಾರಂಭವಾಗಿದೆ. ಮೂರು ಹಂತಗಳಲ್ಲಿ ನಡೆಯುತ್ತಿರುವ ಈ ಸಮೀಕ್ಷೆ ಕಾರ್ಯ ಮೇ ೨೩ರಂದು ಕೊನೆಗೊಳ್ಳುತ್ತದೆ ಎಂದು ತಮ್ಮ ಪ್ರಕಟಣೆಯಲ್ಲಿ ತಿಳಿಸಲಾಗಿದೆ ಎಂದರು.
ರಥ ನಿರ್ಮಾಣಕ್ಕೆ ಶಾಸಕರಿಂದ ಹೆಚ್ಚಿನ ಸಹಕಾರದ ಭರವಸೆ

ಗ್ರಾಮದ ಶ್ರೀ ಸಂತೆಕಾಳೇಶ್ವರಿ ಶ್ರೀ ಚಿಕ್ಕಮ್ಮ ದೇವಿಯವರ ದೇವಾಲಯದಲ್ಲಿ ಶನಿವಾರ ನಡೆದ 48ನೇ ದಿನದ ಮಂಡಲ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು 

ನೂತನ ಬಡಾವಣೆಗಳ ನಿರ್ಮಾಣಕ್ಕೆ ಜನರ ಸಹಕಾರ ಬೇಕು
ಪೂರ್ಣ ಪ್ರಮಾಣದಲ್ಲಿ ಮನೆಗಳು ನಿರ್ಮಾಣವಾದ ನಂತರ ಇನ್ನಷ್ಟು ಸೌಲಭ್ಯ ದೊರೆಯುತ್ತವೆ. ಕುಡಿಯುವ ನೀರಿನ ವ್ಯವಸ್ಥೆಯು ಶೀಘ್ರದಲ್ಲಿಯೇ ಆಗಲಿದೆ. ಮನೆಗಳ ನಡುವೆಯೇ ಇರುವ ಸ್ಮಶಾನವನ್ನು ತೆರವುಗೊಳಿಸಿ ಅಲ್ಲಿ ಉದ್ಯಾನವನ ನಿರ್ಮಾಣ ಮಾಡುವ ಚಿಂತನೆ ಇದೆ. ಇದರಿಂದ ನಾಗರಿಕರಿಗೂ ಅನುಕೂಲವಾಗಲಿದೆ. ಪುರಸಭೆ ತೆರಿಗೆ ಅನುದಾನದಲ್ಲಿ ಪ್ರತಿವರ್ಷ ಸುಮಾರು ಏಳು ಕೋಟಿ ರು. ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದರು. ಹೊಸ ಬಡಾವಣೆಗಳ ನಾಗರಿಕರು ಅಲ್ಲಿನ ಅಭಿವೃದ್ಧಿಗೆ ಪುರಸಭೆಯೊಂದಿಗೆ ಸಹಕರಿಸಬೇಕು ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.
ಮಕ್ಕಳಿಗೆ ದೇಶಾಭಿಮಾನದ ಪಾಠ ಹೇಳಿಕೊಡಿ
ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರ ಜೊತೆಗೆ ನಮ್ಮ ದೇಶದ ಬಗ್ಗೆ ಅಭಿಮಾನದ ಪಾಠ ಹೇಳಿಕೊಡುವಂತೆ ಪೋಷಕರಲ್ಲಿ ನಿವೃತ್ತ ಸೈನಿಕರ ಸಂಘದ ಅಧ್ಯಕ್ಷರಾದ ನಾಗಭೂಷಣ್ ಹಾಗೂ ಧರ್ಮರಾಜ್ ತಿಳಿಸಿದರು. ಇತ್ತೀಚೆಗೆ ೨೬ ಪ್ರವಾಸಿಗರನ್ನು ಹತ್ಯೆ ಮಾಡಿದ್ದ ಉಗ್ರರ ವಿರುದ್ಧ ಸಿಡಿದು ಆ ದೇಶಕ್ಕೆ ನುಗ್ಗಿ ಪಾಕಿಸ್ತಾನವನ್ನು ಆಪರೇಷನ್ ಸಿಂದೂರ ಎಂಬ ಹೆಸರಿನಲ್ಲಿ ಆದೇಶಕ್ಕೆ ನುಗ್ಗಿ ಅವರನ್ನು ಬಗ್ಗು ಬಡಿದಿದ್ದು ನಾವು ದೇಶದ ಹೊರಭಾಗದಲ್ಲಿರುವಂತಹ ದೇಶದ್ರೋಹಿಗಳನ್ನು ಹೊಡೆದೋಡಿಸಿ ಜೊತೆಗೆ ನಮ್ಮ ದೇಶದ ಒಳಗಿರುವವರಿಗೂ ನಾವು ತಕ್ಕ ಶಾಸ್ತಿ ಮಾಡಬೇಕೆಂದರು.
ವಿಜೃಂಭಣೆಯ ಲಕ್ಷ್ಮೀ ನರಸಿಂಹಸ್ವಾಮಿ ಬ್ರಹ್ಮರಥೋತ್ಸವ
ಅರಸೀಕೆರೆ ನಗರದ ಮೈಸೂರು ರಸ್ತೆ ಶ್ರೀವಿದ್ಯಾನಗರದ ಶ್ರೀಮಾರುತಿ ಸಚ್ಚಿದಾನಂದ ಆಶ್ರಮದಲ್ಲಿ ಶ್ರೀವಿಷ್ಣು ಪಂಚಾಯತನ ವೈಶಿಷ್ಟತೆಯಲ್ಲಿ ನೂತನವಾಗಿ ನಿರ್ಮಿಸಿರುವ ಸುಕ್ಷೇತ್ರದ ಶ್ರೀಲಕ್ಷ್ಮೀನರಸಿಂಹ ಸ್ವಾಮಿ ಹಾಗೂ ಪರಿವಾರ ದೇವತೆಗಳ ಪ್ರತಿಷ್ಠಾಪನಾ ವರ್ಧಂತಿ, ಶ್ರೀನರಸಿಂಹ ಜಯಂತಿ ಹಾಗೂ ಬ್ರಹ್ಮೋತ್ಸವ ಧಾರ್ಮಿಕ ಸಮಾರಂಭವು ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಅದ್ಧೂರಿಯಾಗಿ ಸಂಪನ್ನಗೊಂಡಿತು.
ಸಮೀಕ್ಷೆ ವೇಳೆ ಮಾದಿಗ ಎಂದೇ ನಮೂದಿಸಬೇಕು
ಪರಿಶಿಷ್ಟ ಜಾತಿಗಳ ಒಳಮೀಸಲಾತಿ ವರ್ಗೀಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸರ್ಕಾರ ಸಮೀಕ್ಷೆ ಆರಂಭಿಸಿದ್ದು ಜನರಲ್ಲಿ ತಿಳಿವಳಿಕೆ ಮೂಡಿಸುವ ಸಲುವಾಗಿ ೩ ದಿನಗಳ ಕಾಲ ತಾಲೂಕಿನಲ್ಲಿ ಜಾಗೃತಿ ರಥ ಸಂಚರಿಸಲಿದೆ ಎಂದು ಮಾದಿಗ ದಂಡೋರ ಸಮಿತಿಯ ತಾಲೂಕು ವಕ್ತಾರ ನಾಗರಾಜು ಕೆ.ಎಂ. ತಿಳಿಸಿದರು. ಮಾದಿಗ ಸಮುದಾಯದವರು ಗಣತಿದಾರರರು ಬರುವ ಮುನ್ನ ಕುಟುಂಬದ ಬಿಪಿಎಲ್ ಪಡಿತರ ಚೀಟಿ, ಆಧಾರ್‌ ಕಾರ್ಡ್ ಅಥವಾ ಜಾತಿ ಪ್ರಮಾಣ ಪತ್ರವನ್ನು ಮೊದಲೇ ಸಂಗ್ರಹಿಸಿಟ್ಟುಕೊಂಡು ಸಮೀಕ್ಷೆಯ ಯಶಸ್ಸಿಗೆ ಹಾಗೂ ಮಾದಿಗ ಜನಾಂಗದ ಶ್ರೇಯಸ್ಸಿಗೆ ಸಹಕರಿಸಬೇಕಿದೆ ಎಂದರು.
ಚಾಡಿ ಮಾತು ಕೇಳುವ ಶಿವರಾಂ ಅಣ್ಣರಿಂದ ಪಕ್ಷ ಸಂಘಟನೆ ಸಾಧ್ಯವೆ
ಪಕ್ಷವನ್ನು ಕಟ್ಟಿ ಬೆಳೆಸಬೇಕಾದ ನಾಯಕರೇ ಪಕ್ಷ ಒಡೆಯುವ ಕೆಲಸ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ. ಕಂಡಕಂಡವರ ಮಾತಿಗೆಲ್ಲಾ ಕಿವಿಗೊಡುವ ಬಿ.ಶಿವರಾಂ ಅವರಿಂದ ಪಕ್ಷ ಸಂಘಟನೆ ಸಾಧ್ಯವೇ ಎಂದು ಪುರಸಭೆ ಅಧ್ಯಕ್ಷ ಎ ಆರ್ ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು. ನಾನು ಇತ್ತೀಚಿಗೆ ರಾಜಕೀಯಕ್ಕೆ ಬಂದವನಲ್ಲ ಸುಮಾರು ೨೫ ವರ್ಷಗಳಾಗಿದ್ದು ಉಪಾಧ್ಯಕ್ಷನಾಗಿ ಕಾಂಗ್ರೆಸ್ ನಗರ ಅಧ್ಯಕ್ಷನಾಗಿ ಕೆಲಸ ಮಾಡಿರುವ ಅನುಭವವಿದ್ದು ಇತ್ತೀಚೆಗೆ ಪಕ್ಷದಲ್ಲಿ ಬಂದ ಸೇರ್ಪಡೆಯಾದವರಿಗೆ ಮಣೆ ಹಾಕುತ್ತಿರುವ ಬಿ ಶಿವರಾಂ ಅವರು ತಮ್ಮ ಪಕ್ಷವನ್ನೇ ಒಡೆದು ಆಳುವ ನೀತಿಗೆ ಅನುಸರಿಸುತ್ತಿದ್ದಾರೆ ಎಂದು ದೂರಿದರು.
  • < previous
  • 1
  • ...
  • 24
  • 25
  • 26
  • 27
  • 28
  • 29
  • 30
  • 31
  • 32
  • ...
  • 441
  • next >
Top Stories
ಆಸ್ಪತ್ರೆಗಳಿಗೆ ಏಕರೂಪದ ಪ್ಯಾಕೇಜ್‌ ದರ ಶಿಫಾರಸಿಗೆ ತಜ್ಞರ ಸಮಿತಿ ರಚನೆ
ಪ್ರಜ್ವಲ್‌ ರೇ‍ವಣ್ಣ ಸಂಕಷ್ಟ ನೋಡಿ ಸರ್ಕಾರಕ್ಕೆ ಸಂತೋಷ : ವಕೀಲ
ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ : ಅ.5ರಂದು ಭಾರತ vs ಪಾಕ್ ಮಹಿಳೆಯರ ಫೈಟ್‌
ಸೋನಂ ಬಳಸಿದ್ದ ಮಚ್ಚು ಪತ್ತೆ : ರಘುವಂಶಿ ದಂಪತಿ ಕೊನೇ ವಿಡಿಯೋ ಬಯಲು
ಶೀಘ್ರ 13 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗುವುದು : ಮಧು ಬಂಗಾರಪ್ಪ
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಪ್ರಪಂಚ
  • ಮನರಂಜನೆ
  • ವಿಶೇಷ
  • ಭಾರತ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved