ಕೃಷಿಕರು ಮಣ್ಣು ಪರೀಕ್ಷೆಗೆ ಮಹತ್ವ ನೀಡಿರೈತರು ಉತ್ತಮ ಬೆಳೆಯ ನಿರೀಕ್ಷೆಯೊಂದಿಗೆ ಬಿತ್ತನೆ ಬೀಜ, ಗೊಬ್ಬರ ಮತ್ತು ನೀರಾವರಿ ವ್ಯವಸ್ಥೆ ಮಾಡಿಕೊಳ್ಳುತ್ತಾರೆ. ಆದರೆ, ಇವುಗಳಿಗಿಂತಲೂ ಪ್ರಮುಖವಾದದ್ದು ಮೊದಲು ಭೂಮಿಯ ಮಣ್ಣು ಪರೀಕ್ಷೆ ಮಾಡಿಸುವುದು ಎಂದು ತಿಪಟೂರು ಕೆ.ವಿ.ಕೆ ಕೃಷಿ ವಿಜ್ಞಾನಿ ತಸ್ಮಿಯಾ ಕೌಸರ್ ರೈತರಿಗೆ ಸಲಹೆ ನೀಡಿದರು. ಮಣ್ಣಿನಲ್ಲಿ ಸ್ವಾಭಾವಿಕವಾಗಿ ಇರುವ ಪೋಷಕಾಂಶಗಳು, ಕೃತಕವಾಗಿ ಪೂರೈಸಬೇಕಾದ ಪೋಷಕಾಂಶಗಳು, ಪ್ರತಿ ಮೂರು ವರ್ಷಕ್ಕೊಮ್ಮೆ ಮಣ್ಣು ಪರೀಕ್ಷಿಸುವುದರಿಂದ ಆಗುವ ಲಾಭಗಳ ಬಗ್ಗೆ ಮಾಹಿತಿ ನೀಡಿದರು. ಮಣ್ಣು ಸಂಗ್ರಹಿಸುವ ವಿಧಾನವನ್ನು ಪ್ರಾಯೋಗಿಕವಾಗಿ ತೋರಿಸಿ ರೈತರಿಗೆ ತಿಳಿಸಿದರು. ಜೊತೆಗೆ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಲು ಹಸಿರು ಗೊಬ್ಬರ ಬಳಕೆ ಹಾಗೂ ನೀರಿನ ಗುಣಮಟ್ಟ ಪರಿಶೀಲನೆಯ ಅಗತ್ಯತೆಯನ್ನು ವಿವರಿಸಿದರು.