ಅರಸೀಕೆರೆಯಲ್ಲಿ ವಿಶೇಷವಾಗಿ ಗುರುಪೂರ್ಣಿಮೆ ಆಚರಣೆ ನಗರದ ಶ್ರೀವಿದ್ಯಾನಗರದ ಶ್ರೀಮಾರುತಿ ಸಚ್ಚಿದಾನಂದ ಆಶ್ರಮದಲ್ಲಿನ ಶ್ರೀವಿಷ್ಣು ಪಂಚಾಯತ್ ದೇವಾಲಯದಲ್ಲಿ ಗುರು ಪೂರ್ಣಿಮೆ ಅಂಗವಾಗಿ ಶ್ರೀಲಕ್ಷ್ಮೀ ನರಸಿಂಹಸ್ವಾಮಿಯವರಿಗೆ ಮುಂಜಾನೆ ಫಲಪಂಚಾಮೃತ ಅಭಿಷೇಕ ಹಾಗೂ ಪವಮಾನ, ಶ್ರೀಲಕ್ಷ್ಮೀ ನರಸಿಂಹ ಮೂಲಮಂತ್ರ ಹೋಮ, ದಕ್ಷಿಣಾಮೂರ್ತಿ ಮಂತ್ರ ಹೋಮ, ದತ್ತಾತ್ರೇಯ ಮಂತ್ರ ಹೋಮದ ಪೂರ್ಣಾಹುತಿ ನೆರವೇರಿಸಿದ ನಂತರ ಗುರುಗಳಿಂದ ಸಂಸ್ಥಾನ ಪೂಜೆ ಆದಿತ್ಯ, ಅಂಬಿಕಾ ಪರಮೇಶ್ವರಿ, ಪಂಚಮುಖಿ ಗಣಪತಿ ಶ್ರೀಕಂಠೇಶ್ವರ,ಆಂಜನೇಯರ ಮತ್ತು ಲಕ್ಷ್ಮೀನರಸಿಂಹಸ್ವಾಮಿ ಸನ್ನಿಧಿಯಲ್ಲಿ ಮಹಾಪೂಜೆ, ಗುರುಪಾದುಕಾ ಪೂಜೆ, ಗುರುವಂದನೆ ನಡೆಯಿತು.