ರಕ್ತದಾನ ಮಾಡಿ ಅನೇಕರ ಜೀವ ಉಳಿಸಿದ ಶಿಕ್ಷಕ ಮೋಹನ್ ರಾಜ್ಹಳೆಬೀಡು ಹೋಬಳಿಯ ರಾಜನಸಿರಿಯೂರು ಗ್ರಾಮದ ಸಾಮಾನ್ಯ ಕೃಷಿ ಕುಟುಂಬದಲ್ಲಿ ಜನಿಸಿದ ಶಿಕ್ಷಕ ಮೋಹನ್ ರಾಜ್, ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆ ಮೆಚ್ಚುವಂಥದ್ದು. ವೃತ್ತಿಯ ಜತೆಗೆ ಪರಿಸರ ಉಳಿಸಿ ಬೆಳೆಸುವತ್ತ ಅವರಿಗಿದ್ದ ಒಲವು, ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಪ್ರತಿ ಮೂರು ತಿಂಗಳಿಗೆ ರಕ್ತದಾನ ಮಾಡುವ ಕಾರ್ಯ ಮಾಡಿ ಅನೇಕ ಜನರ ಪ್ರಾಣವನ್ನು ಉಳಿಸಿದ್ದಾರೆ. ಈಗಾಗಲೇ ಒಟ್ಟು ೩೫ ಬಾರಿ ರಕ್ತದಾನ ಮಾಡಿದ್ದಾರೆ. ಇವರಿಗೆ ಹಾಸನ ಜಿಲ್ಲಾ ಆಡಳಿತದಿಂದ ಪ್ರಶಸ್ತಿ ಸಹ ಲಭಿಸಿದೆ.