• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • Hassan

Hassan

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಮಳೆಗೆ ಸಕಲೇಶಪುರ ತಾಲೂಕು ತತ್ತರ
ಮೇ ೭ರಿಂದ ತಾಲೂಕಿನಲ್ಲಿ ಆರಂಭವಾಗಿರುವ ಜಿಟಿಜಿಟಿ ಮಳೆಗೆ ಜುಲೈ೨೭ಕ್ಕೆ ಎರಡೂವರೆ ತಿಂಗಳು ತುಂಬಿದ್ದು, ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಭೂಮಿ ಶೀತಪೀಡಿತಗೊಂಡಿದ್ದು ಹಲವು ಕಾಫಿತೋಟಗಳಲ್ಲಿ ಭಾರಿ ಪ್ರಮಾಣದ ಕೊಳೆರೋಗ ಕಾಣಿಸಿಕೊಂಡಿದೆ. ಹೆಚ್ಚಿನ ಪ್ರಮಾಣದಲ್ಲಿ ಫಸಲು ನೆಲಸೇರುತ್ತಿರುವುದರಿಂದ ಬೆಳೆಗಾರರ ಮುಖದಲ್ಲಿ ಚಿಂತೆಯ ಕಾರ್ಮೋಡ ಕವಿಯುವಂತೆ ಮಾಡಿದೆ. ನಿರಂತರ ಗಾಳಿ ಮಳೆಗೆ ಹಲವೆಡೆ ಮರಗಳು ಧರೆಗೆ ಉರುಳಿದ್ದರೆ ಪಟ್ಟಣ ಸಮೀಪದ ಬಾಳೆಗದ್ದೆ ಬಡಾವಣೆ ಸಮೀಪ ಭೂಮಿ ಕುಸಿದು ನಾಲ್ಕು ಮನೆಗಳು ಅಪಾಯದ ಸ್ಥಿತಿ ತಲುಪಿವೆ.
ಮಳೆಗೆ ಬೀಳುತ್ತಿರುವ ಮನೆಗಳು
ಗಾಳಿ ಸಹಿತ ಸುರಿದ ಮಳೆಗೆ ಪಟ್ಟಣದ ಬೇಲೂರು ರಸ್ತೆಯಲ್ಲಿರುವ ಆಸಿಯಾ ಬಾನುರವರಿಗೆ ಸೇರಿದ ಮನೆಯ ಮತ್ತು ಈದ್ಗಾ ಬೀದಿಯಲ್ಲಿರುವ ಶಫಿ ರವರಿಗೆ ಸೇರಿದ ಮನೆಯ ಗೋಡೆ ಸಂಪೂರ್ಣ ಕುಸಿದಿದ್ದು, ಮನೆಯ ಸುತ್ತಲೂ ಬಿರುಕು ಕಾಣಿಸಿಕೊಂಡು ಕುಸಿಯುವ ಹಂತದಲ್ಲಿದೆ. ಅದೆ ರೀತಿ ಪಟ್ಟಣದ ಮೇಲಳ್ಳಿ ಬೀದಿಯಲ್ಲಿರುವ ವಾಮಿದ ರವರಿಗೆ ಸೇರಿದ ಮನೆಯು ಸಂಪೂರ್ಣ ಹಾನಿಯಾಗಿದೆ.
ಅರಸೀಕೆರೆಯ ಯಳವಾರೆ ಕೃಷಿ ಸಂಘಕ್ಕೆ ಎನ್‌.ಟಿ.ವಸಂತ್ ನೂತನ ಅಧ್ಯಕ್ಷರಾಗಿ ಆಯ್ಕೆ
ಅರಸೀಕೆರೆಯ ಯಳವಾರೆ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ನಾರಾಯಣಗಟ್ಟಳಿಯ ಎನ್‌ ಟಿ ವಸಂತ್‌ ಕುಮಾರ್ ಬಹುಮತದಿಂದ ಆಯ್ಕೆಯಾದರು.
ಅಸ್ಸಾಂ ಮಾದರಿಯಲ್ಲಿ ಕಲ್ಲು ಗಣಿಗಾರಿಕೆ ನಿಷೇಧಕ್ಕೆ ಆಲೂರಿನ ರಾಧಮ್ಮ ಜನಸ್ಪಂದನ ವೇದಿಕೆ ಒತ್ತಾಯ
ಆಲೂರು ಮತ್ತು ಅರಕಲಗೂಡು ತಾಲೂಕುಗಳಲ್ಲಿ ಕಲ್ಲು ಗಣಿಗಾರಿಕೆಯನ್ನು ನಿಷೇಧ ಮಾಡಲು ಕ್ರಮ ಕೈಗೊಳ್ಳಬೇಕೆಂದು ವಿಧಾನಸಭೆಯಲ್ಲಿ ಸರ್ಕಾರದ ಗಮನ ಸೆಳೆಯಬೇಕೆಂದು ಬೇಲೂರು ಶಾಸಕ ಎಚ್‌ ಕೆ. ಸುರೇಶ್ ಅವರಿಗೆ ಆಲೂರಿನ ರಾಧಮ್ಮ ಜನಸ್ಪಂದನ ವೇದಿಕೆ ಅಧ್ಯಕ್ಷ ಹೇಮಂತಕುಮಾರ್ ವಿಧಾನಸೌಧದ ಆವರಣದಲ್ಲಿ ಮನವಿ ಸಲ್ಲಿಸಿದ್ದಾರೆ.
ರಕ್ತದಾನ ಮಾಡಿ ಅನೇಕರ ಜೀವ ಉಳಿಸಿದ ಶಿಕ್ಷಕ ಮೋಹನ್ ರಾಜ್‌
ಹಳೆಬೀಡು ಹೋಬಳಿಯ ರಾಜನಸಿರಿಯೂರು ಗ್ರಾಮದ ಸಾಮಾನ್ಯ ಕೃಷಿ ಕುಟುಂಬದಲ್ಲಿ ಜನಿಸಿದ ಶಿಕ್ಷಕ ಮೋಹನ್‌ ರಾಜ್‌, ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆ ಮೆಚ್ಚುವಂಥದ್ದು. ವೃತ್ತಿಯ ಜತೆಗೆ ಪರಿಸರ ಉಳಿಸಿ ಬೆಳೆಸುವತ್ತ ಅವರಿಗಿದ್ದ ಒಲವು, ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಪ್ರತಿ ಮೂರು ತಿಂಗಳಿಗೆ ರಕ್ತದಾನ ಮಾಡುವ ಕಾರ್ಯ ಮಾಡಿ ಅನೇಕ ಜನರ ಪ್ರಾಣವನ್ನು ಉಳಿಸಿದ್ದಾರೆ. ಈಗಾಗಲೇ ಒಟ್ಟು ೩೫ ಬಾರಿ ರಕ್ತದಾನ ಮಾಡಿದ್ದಾರೆ. ಇವರಿಗೆ ಹಾಸನ ಜಿಲ್ಲಾ ಆಡಳಿತದಿಂದ ಪ್ರಶಸ್ತಿ ಸಹ ಲಭಿಸಿದೆ.
ಭಾರಿ ಮಳೆಗೆ ಮಠದ ಮೇಲೆ ಬಿದ್ದ ಮರ
ಹಾಸನ ನಗರದ ಶ್ರೀ ಸಂಗಮೇಶ್ವರ ಬಡಾವಣೆಯಲ್ಲಿರುವ ಸುಮಾರು ೭೦೦ ವರ್ಷಗಳ ಇತಿಹಾಸ ಹೊಂದಿರುವ ಶ್ರೀ ಜವೇನಹಳ್ಳಿ ಮಠದ ಮೇಲೆ ಬೃಹತ್ ಮರವೊಂದು ಉರುಳಿದ ಹಿನ್ನೆಲೆಯಲ್ಲಿ ಮಠದ ಕಲ್ಲಿನ ಕಟ್ಟಡ ಬಹುತೇಕ ಹಾನಿಗೀಡಾಗಿದ್ದು, ಸಂಘಮೇಶ್ವರ ಸ್ವಾಮಿ ದೇಗುಲದ ಗರ್ಭಗುಡಿಗೆ ಹೋಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸತತವಾಗಿ ಸುರಿಯುತ್ತಿರುವ ಮಳೆಯಿಂದ ಭೂಮಿ ತೇವಾಂಶ ಹೆಚ್ಚಾಗಿ ಈಗಾಗಲೇ ಅನೇಕ ಮರಗಳು ಕಳೆಗೆ ಬೀಳುತ್ತಿವೆ. ಮರ ಬೀಳುವ ವೇಳೆ ಏನಾದರೂ ಮಠದ ಒಳಗೆ ಭಕ್ತರು ಇದ್ದರೇ ಬಾರಿ ಅನಾಹುತವೇ ಆಗುತಿತ್ತು. ಆದರೇ ಮರ ಬಿದ್ದ ವೇಳೆ ಭಕ್ತರು ಗರ್ಭ ಗುಡಿಯ ದೂರದಲ್ಲಿ ಇದ್ದುದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಹಿರೇಮಠಕ್ಕೆ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಗಂಗೇಗೌಡ ಭೇಟಿ
ಅಖಿಲ ಭಾರತ ವೀರಶೈವ ಮಹಾಸಭಾ ನುಗ್ಗೇಹಳ್ಳಿ ತಾಲೂಕು ನೂತನ ಅಧ್ಯಕ್ಷರು ಹಾಗೂ ನಿರ್ದೇಶಕರಿಗೆ ಪುರ ವರ್ಗ ಹಿರೇಮಠದ ಡಾ. ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಆಶೀರ್ವದಿಸಿ ಸನ್ಮಾನಿಸಿದರು.
ಬಿಷ್ಟಮ್ಮ ಕೆರೆಗೆ ಗ್ರಾಮಸ್ಥರಿಂದ ಬಾಗಿನ
ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಬಿಷ್ಟಮ್ಮನ ಕೆರೆ (ವಿಷ್ಣುಸಮುದ್ರ) ಸಂಪೂರ್ಣ ಭರ್ತಿಯಾಗಿ ಕೋಡಿ ಬಿದ್ದ ಹಿನ್ನೆಲೆಯಲ್ಲಿ ಬಿಟ್ರವಳ್ಳಿ ಗ್ರಾಮಸ್ಥರು ವಿಶೇಷ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು. ಈ ಕೆರೆಯಲ್ಲಿ ಬೋಟಿಂಗ್ ವ್ಯವಸ್ಥೆ ಕಾಯಕಲ್ಪವಾದರೆ ಇನ್ನು ಸರ್ಕಾರಕ್ಕೆ ಹೆಚ್ಚಿನ ಆದಾಯ ಬರುತ್ತದೆ. ಇದಕ್ಕೆ ಸಂಬಂಧಪಟ್ಟ ಇಲಾಖೆಯವರು ಅಭಿವೃದ್ಧಿ ಮಾಡುತ್ತಿಲ್ಲ ಎಂದು ಸ್ಥಳೀಯರು ಬೇಸರ ಹೊರಹಾಕಿದ್ದಾರೆ.
ಹುಚ್ಚಮ್ಮ ದೇಗುಲದಲ್ಲಿ ಚಂಡಿಕಾ ಹೋಮ
ಹಾರನಹಳ್ಳಿ ಸಮೀಪದ ಯಳವಾರೆ ಗ್ರಾಮ ದೇವತೆ ಹುಚ್ಚಮ್ಮ ದೇವಿ ಮೂಲ ಸನ್ನಿಧಾನದಲ್ಲಿ ಜು. 28ರಂದು ಲೋಕಕಲ್ಯಾಣಾರ್ಥವಾಗಿ ಮಹಾ ಚಂಡಿಕಾ ಹೋಮ ನಡೆಯಲಿದೆ. ಕೋಡಿಮಠ ಪೀಠಾಧ್ಯಕ್ಷರಾದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಕೆಎಂ ಶಿವಲಿಂಗೇಗೌಡರು ಅಧ್ಯಕ್ಷರು ಕರ್ನಾಟಕ ಗೃಹ ಮಂಡಳಿ ಶಾಸಕರು ಅರಸೀಕೆರೆ ಕ್ಷೇತ್ರ ಶ್ರೇಯಸ್ ಪಟೇಲ್ ಲೋಕಸಭಾ ಸದಸ್ಯರು ಹಾಸನ ಮಾಜಿ ಅಡ್ವೋಕೆಟ್ ಜನರಲ್ ಅಶೋಕ್ ಹಾರನಹಳ್ಳಿ ಇವರು ಭಾಗವಹಿಸಲ್ಲಿದ್ದಾರೆ.
ಅರಸೀಕೆರೆಯ ರಸ್ತೆ ಮೇಲೆ ಹರಿಯುತ್ತಿರುವ ಚರಂಡಿಯ ಕಲುಷಿತ ನೀರು
ಅರಸೀಕೆರೆಯ ಹೃದಯ ಭಾಗದಲ್ಲಿರುವ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ರಸ್ತೆಯಲ್ಲಿ ಚರಂಡಿ ಕುಸಿದು, ಕಲುಷಿತ ನೀರು ಸರಾಗವಾಗಿ ಸಾಗದೆ ರಸ್ತೆ ಮೇಲೆ ಹರಿಯುತ್ತಿದ್ದು ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಜನತೆಯನ್ನು ಕಾಡುತ್ತಿದೆ.
  • < previous
  • 1
  • ...
  • 379
  • 380
  • 381
  • 382
  • 383
  • 384
  • 385
  • 386
  • 387
  • ...
  • 552
  • next >
Top Stories
ಟಾಕ್ಸಿಕ್‌ನಂಥಾ ಸಿನಿಮಾ ಭಾರತದಲ್ಲೇ ಬಂದಿಲ್ಲ: ರುಕ್ಮಿಣಿ ವಸಂತ್‌
ನಿಮ್ಮ ಮಿನುಗುವ ಮುಖದ ಗುಟ್ಟು ಏನು? : ಮೋದಿಗೆ ಹರ್ಲಿನ್‌ ಪ್ರಶ್ನೆ
ವಿಶ್ವವ್ಯಾಪಿ ಹರಡಿದ ಬಾಯಿ ಕ್ಯಾನ್ಸರ್ : ಭೀಕರ ಖಾಯಿಲೆ ಕಾರಣ, ಲಕ್ಷಣ, ಚಿಕಿತ್ಸೆ ಹೇಗೆ?
ನವೆಂಬರ್‌ಗಲ್ಲ, 2028ಕ್ಕೆ ಕ್ರಾಂತಿ: ಡಿಸಿಎಂ ಡಿಕೆಶಿ
ಗಿಲ್ಲಿ ನಟನ ಕುರಿತು 6 ಇಂಟರೆಸ್ಟಿಂಗ್‌ ಸಂಗತಿಗಳು
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved