• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • Hassan

Hassan

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಸಕಲೇಶಪುರ ತಾಲೂಕಿಗೆ ವಿಶೇಷ ಪ್ಯಾಕೇಜ್ ಘೋಷಿಸಿ
ಕಳೆದ ಎರಡು ತಿಂಗಳಿಂದ ಸಕಲೇಶಪುರ ತಾಲೂಕಿನಲ್ಲಿ ಎಡೆಬಿಡದೆ ಸುರಿದಿರುವ ಧಾರಾಕಾರ ಮಳೆಯಿಂದಾಗಿ ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ, ಬೆಳೆಗಾರರು ಬೆಳೆದ ಕಾಫಿ, ಮೆಣಸು ಅಡಿಕೆ ಭತ್ತ ಮುಂತಾದ ಬೆಳೆಗಳು ಮಳೆಯ ರಭಸಕ್ಕೆ ನೆಲಕ್ಕುರುಳಿದೆ. ಆದ್ದರಿಂದ ತಾಲೂಕಿನಲ್ಲಿ ಉಂಟಾಗಿರುವ ಮಳೆ ಹಾನಿಗೆ ಸರ್ಕಾರ ಕೂಡಲೆ ವಿಶೇಷ ಪರಿಹಾರ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಶಾಸಕ ಸಿಮೆಂಟ್ ಮಂಜು ಒತ್ತಾಯಿಸಿದರು.
ನಮ್ಮ ಮಹಾಕಾವ್ಯಗಳೇ ನಮಗೆ ಗುರುಗಳಿದ್ದಂತೆ
ಭಗವದ್ಗೀತೆ, ರಾಮಾಯಣ, ಮಹಾಭಾರತಗಳು ನಮಗೆ ಗುರುವಿನ ಸ್ಥಾನದಲ್ಲಿವೆ. ಅವುಗಳಿಂದ ಎಷ್ಟು ಅರಿತರೂ ಸಾಲದು ಮತ್ತು ಜ್ಞಾನದ ದಾಹ ನೀಗದು. ಸ್ವಾಮಿ ವಿವೇಕಾನಂದರಿಗೆ ಶ್ರೀರಾಮಕೃಷ್ಣ ಪರಹಂಸರು ಮತ್ತು ಮಾತಾಜಿ ಅವರು ಗುರುವಾಗಿ ದೊರೆತಿದ್ದರು ಎಂದು ರಾಷ್ಟ್ರ ಸೇವಿಕಾ ಸಮಿತಿಯ ಭಗವದ್ಗೀತೆ ಪ್ರಚಾರಕರಾದ ಸುಧಾ ಸುರೇಶ್‌ ತಿಳಿಸಿದರು.
ಮಳೆಯ ನಡುವೆ ಡೆಂಘೀ ಕುರಿತು ಜನಜಾಗೃತಿ
ಹುನುಗನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಸ್ವಚ್ಛತಾ ಕಾರ್ಯದ ಮೂಲಕ ಡೆಂಘೀ ಕುರಿತು ಜಾಗೃತಿ ಮೂಡಿಸಲಾಯಿತು. ಮಳೆಯಿಂದಾಗಿ ರಸ್ತೆ ಹಾಗೂ ಮನೆಯ ಅಕ್ಕ-ಪಕ್ಕ ಗುಂಡಿಗಳಲ್ಲಿ ನೀರು ನಿಂತು ಡೆಂಘೀ ಹಾಗೂ ಸಾಂಕ್ರಾಮಿಕ ರೋಗಗಳು ಹೆಚ್ಚುತ್ತಿರುವ ಕಾರಣ ಜಾಗರೂಕರಾಗಿರುವಂತೆ ತಿಳಿಸಲಾಯಿತು. ಡೆಂಘೀಯಂತಹ ರೋಗವನ್ನು ತಡೆಗಟ್ಟಲು ಪ್ರಥಮವಾಗಿ ನಮ್ಮ ಮನೆಗಳ ಸುತ್ತಮುತ್ತಲಿನ ಪ್ರದೇಶದಲ್ಲಿನ ಗುಂಡಿಗಳಲ್ಲಿ ಮತ್ತಿತರೆಡೆ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು ಎಂದು ತಿಳಿ ಹೇಳಿದರು.
ಬೇಲೂರು ಬಸ್‌ ನಿಲ್ದಾಣ ಸ್ಥಳಾಂತರಕ್ಕೆ ವಿರೋಧ
ಬೇಲೂರು ಬಸ್ ನಿಲ್ದಾಣವನ್ನು ಸ್ಥಳಾಂತರಿಸಲು ಹೊರಟಿರುವ ಶಾಸಕರ ವಿರುದ್ಧ ಪ್ರಗತಿಪರ ಸಂಘಟನೆ ಮುಖಂಡರು ಪ್ರತಿಭಟನೆ ನಡೆಸಿದರು. ಬಸ್ ನಿಲ್ದಾಣವನ್ನು ಸ್ಥಳಾಂತರಿಸದೆ ಬಸ್ ನಿಲ್ದಾಣ ಪಕ್ಕದಲ್ಲಿರುವ ಖಾಲಿ ಜಾಗವನ್ನು ಪಡೆಯುವ ಮೂಲಕ ಇಲ್ಲಿಯೇ ಅಭಿವೃದ್ಧಿಪಡಿಸಬೇಕೆಂದು ಆಗ್ರಹಿಸಿದರು.
ವಾಟೇಹೊಳೆ ಜಲಾಶಯಕ್ಕೆ ಶಾಸಕ ಸಿಮೆಂಟ್‌ ಮಂಜು ಬಾಗಿನ
ಆಲೂರು ತಾಲೂಕಿನ ತಾಲೂಕಿನ ಪಾಳ್ಯ ಹೋಬಳಿ ಸಮುದ್ರವಳ್ಳಿ ಗ್ರಾಮದ ಸಮೀಪ ಹಾಗೂ ಬೇಲೂರು ತಾಲೂಕಿನ ಚಿನ್ನಹಳ್ಳಿ ಗ್ರಾಮದ ಸಮೀಪದಲ್ಲಿರುವ ವಾಟೇಹೊಳೆ ಜಲಾಶಯವು ತುಂಬಿದ ಹಿನ್ನೆಲೆಯಲ್ಲಿ ಶಾಸಕ ಸಿಮೆಂಟ್ ಮಂಜು ಅವರು ಭಾನುವಾರ ಮೊದಲ ಬಾರಿಗೆ ಬಾಗಿನ ಅರ್ಪಿಸಿ ಗಂಗಾ ಮಾತೆಗೆ ಪೂಜೆ ಸಲ್ಲಿಸಿದರು. ವಾಟೇಹೊಳೆ ಜಲಾಶಯವು ಆಲೂರು ತಾಲೂಕಿನ 18 ಸಾವಿರ ಎಕರೆಯ ರೈತರ ಹಾಗೂ ಬೇಲೂರು ತಾಲೂಕಿನ 500 ಎಕರೆಯ ರೈತರ ಹಾಗೂ ಜನಸಾಮಾನ್ಯರ ಜೀವನಾಡಿ ಆಗಿರುವ ವಾಟೇಹೊಳೆ ಡ್ಯಾಂ ತುಂಬಿರುವುದು ನಿಜಕ್ಕೂ ಹರ್ಷ ತಂದಿದೆ ಎಂದರು.
ಗುಂಡಿಮಯವಾದ ರಾಜನಶಿರಿಯೂರು ರಸ್ತೆ
ಹಳೇಬೀಡಿನ ಅಂಬೇಡ್ಕರ್‌ ಸರ್ಕಲ್ ವೃತ್ತದಿಂದ ರಾಜನಸಿರಿಯೂರು ಹೋಗುವ ರಸ್ತೆ ಅಧೋಗತಿ ತಲುಪಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಳೇಬೀಡು ಬೇಲೂರು ತಾಲೂಕಿಗೆ ದೊಡ್ಡ ಹೋಬಳಿ ಕೇಂದ್ರವಾಗಿದ್ದು ಇಲ್ಲಿನ ಅಂಬೇಡ್ಕರ್ ಸರ್ಕಲ್ ವೃತ್ತದಿಂದ ಬಿದರಿಕೆರೆ ಪ್ರಥಮ ಹಂತದ ಕೋಡಿವರೆಗೆ ರಸ್ತೆ ತೀರಾ ಹದಗೆಟ್ಟಿದೆ. ಈ ರಸ್ತೆಯಲ್ಲಿ ಎಸ್.ಬಿ.ಎಮ್. ಬ್ಯಾಂಕ್‌, ಬಜಾಜ್ ಶೋರೂಮ್, ಹಲವಾರು ಅಂಗಡಿಗಳು, ತರಕಾರಿ ಮಾರುಕಟ್ಟೆ ಇದ್ದು ಜನರಿಗೆ ಓಡಾಡಲು ಭಾರಿ ತೊಂದರೆಯಾಗಿದೆ.ಜೊತೆಗೆ ಮಳೆಯ ಪ್ರಭಾವದಿಂದ ರಸ್ತೆ ತುಂಬೆಲ್ಲಾ ಗುಂಡಿಗಳಾಗಿದ್ದು, ದ್ವಿ ಚಕ್ರ ವಾಹನ ಸವಾರರ ಸ್ಥಿತಿ ಹೇಳತೀರದ್ದಾಗಿದೆ.
ದೇಶ ಕಾಯುವ ಸೈನಿಕರಾದ್ರೆ ಕಾರ್ಯಕ್ರಮ ಸಾರ್ಥಕ
ರೋಟರಿ ಸುವರ್ಣ ಭವನದಲ್ಲಿ ಇನ್ನರ್‌ವ್ಹೀಲ್ ಕ್ಲಬ್ ಆಫ್ ಹಾಸನ ಗೋಲ್ಡ್ ಇವರ ಸಂಯುಕ್ತಾಶ್ರಯದಲ್ಲಿ ೨೫ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ಆಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.ಇಷ್ಟೊಂದು ಜನ ವಿದ್ಯಾರ್ಥಿಗಳಲ್ಲಿ ಕನಿಷ್ಠ ೧೦ ಜನರು ನಮ್ಮ ದೇಶ ಕಾಯುವ ಸೈನಿಕನಾದರೇ ಈ ಕಾರ್ಯಕ್ರಮ ಆಯೋಜಿಸಿರುವುದಕ್ಕೆ ಸಾರ್ಥಕತೆ ಆಗುತ್ತದೆ ಎಂದು ಇನ್ನರ್‌ವ್ಹೀಲ್ ಕ್ಲಬ್ ಆಫ್ ಹಾಸನ ಗೋಲ್ಡ್ ಅಧ್ಯಕ್ಷೆ ಡಾ. ತನುಜಾ ಅಭಿಪ್ರಾಯಪಟ್ಟರು.
ಅನೇಕ ರೋಗಗಳಿಗೆ ಉತ್ತಮ ಪರಿಸರವೇ ಪರಿಹಾರ
ಅರಸೀಕೆರೆ ನಗರದ ಸೇವಾ ಸಂಕಲ್ಪ ಶಾಲಾ ಆವರಣದಲ್ಲಿ ತಮ್ಮ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ನಮ್ಮ ಮುಂದಿನ ಪೀಳಿಗೆಗಾಗಿ ನಾವು ಗಿಡ ಮರಗಳನ್ನು ಬೆಳೆಸಬೇಕಿದೆ, ವಿದ್ಯಾರ್ಥಿ ಜೀವನದಲ್ಲಿ ಪರಿಸರದ ಬಗ್ಗೆ ಹೆಚ್ಚಿನ ಜಾಗೃತಿ ಹೊಂದಿದಾಗ ಈ ಮಹತ್ವಾಕಾಂಕ್ಷೆ ಈಡೇರಲು ಸಾಧ್ಯವಾಗುತ್ತದೆ ಎಂದು ಇನ್ನರ್‌ವ್ಹೀಲ್ ಅಧ್ಯಕ್ಷೆ ರೇಖಾ ಅಭಿಪ್ರಾಯಪಟ್ಟರು.
ಇಂಟರ್‌ ಮೀಡಿಯಾ ಬ್ಯಾಡ್ಮಿಂಟನ್‌ ಪಂದ್ಯಾವಳಿ
ಬೇಲೂರು ಪಟ್ಟಣದ ವಿಷ್ಣು ಅಕಾಡೆಮಿ ಸಂಸ್ಥಾಪಕರಾದ ರಾಘವೇಂದ್ರ ಹಾಗೂ ಅವರ ಪುತ್ರ ವಾದಿರಾಜ್ ಪ್ರತಿವರ್ಷದಂತೆ ಪುರುಷರ ವಿಭಾಗದ ಡಬಲ್ಸ್ ಬ್ಯಾಡ್ಮಿಂಟನ್‌ ಪಂದ್ಯಾವಳಿಯನ್ನು ಆಯೋಜಿಸಿದ್ದರು. ಈ ಪಂದ್ಯಾವಳಿಯಲ್ಲಿ ಸುಮಾರು ೧೮ ತಂಡಗಳು ಭಾಗವಹಿದ್ದವು. ಕಾರ್ಯಕ್ರಮವನ್ನು ಕರವೆ ಅಧ್ಯಕ್ಷ ವಿ ಎಸ್ ಭೋಜೇಗೌಡ ಸಂಸ್ಥೆಯ ವ್ಯವಸ್ಥಾಪಕ ವಾದಿರಾಜ್ ಉದ್ಘಾಟಿಸಿದರು.
ಹಾಸನದಲ್ಲಿ ಮಳೆ ನಿಂತು ಎಲ್ಲೆಲ್ಲೂ ಬಿಸಿಲು
ಜೂನ್ ತಿಂಗಳಿನಿಂದ ಜುಲೈ ತಿಂಗಳ ಕೊನೆವಾರದವರೆಗೂ ಹೆಚ್ಚಿನ ಮಳೆ ಹಗಲು ರಾತ್ರಿ ಸುರಿದಿದ್ದರಿಂದ ಬಹುತೇಕ ಕೆರೆಕಟ್ಟೆಗಳು ತುಂಬಿ ಹೋಗಿ ಒಂದು ಕಡೆ ಸಂತೋಷವಾದರೇ ಇನ್ನೊಂದು ಕಡೆ ಶಾಲಾ-ಕಾಲೇಜು ಮಕ್ಕಳಿಗೆ, ಸಣ್ಣ ಸಣ್ಣ ವ್ಯಾಪಾರಸ್ಥರಿಗೆ ಹಾಗೂ ಕೆಲಸಕ್ಕೆ ಹೋಗುವ ಕಾರ್ಮಿಕರಿಗೆ ಸಮಸ್ಯೆ ಆಗಿತ್ತು.ಕಳೆದ ಒಂದೂವರೆ ತಿಂಗಳಿನಿಂದಲೂ ಸತತವಾಗಿ ಬಾರಿ ಮಳೆ ಬಂದು ತತ್ತರಿಸಿ ಹೋಗಿದ್ದ ಜನತೆಗೆ ಶನಿವಾರ ಸೂರ್ಯನ ಆಗಮನದಿಂದ ಸಲ್ಪ ನಿಟ್ಟುಸಿರು ಬಿಟ್ಟಿದ್ದು, ಎಂದಿನಂತೆ ಜನತೆ ತಮ್ಮ ದಿನನಿತ್ಯದ ಚಟುವಟಿಕೆಯಲ್ಲಿ ತೊಡಗಿದ್ದರು.
  • < previous
  • 1
  • ...
  • 377
  • 378
  • 379
  • 380
  • 381
  • 382
  • 383
  • 384
  • 385
  • ...
  • 552
  • next >
Top Stories
ಟಾಕ್ಸಿಕ್‌ನಂಥಾ ಸಿನಿಮಾ ಭಾರತದಲ್ಲೇ ಬಂದಿಲ್ಲ: ರುಕ್ಮಿಣಿ ವಸಂತ್‌
ನಿಮ್ಮ ಮಿನುಗುವ ಮುಖದ ಗುಟ್ಟು ಏನು? : ಮೋದಿಗೆ ಹರ್ಲಿನ್‌ ಪ್ರಶ್ನೆ
ವಿಶ್ವವ್ಯಾಪಿ ಹರಡಿದ ಬಾಯಿ ಕ್ಯಾನ್ಸರ್ : ಭೀಕರ ಖಾಯಿಲೆ ಕಾರಣ, ಲಕ್ಷಣ, ಚಿಕಿತ್ಸೆ ಹೇಗೆ?
ನವೆಂಬರ್‌ಗಲ್ಲ, 2028ಕ್ಕೆ ಕ್ರಾಂತಿ: ಡಿಸಿಎಂ ಡಿಕೆಶಿ
ಗಿಲ್ಲಿ ನಟನ ಕುರಿತು 6 ಇಂಟರೆಸ್ಟಿಂಗ್‌ ಸಂಗತಿಗಳು
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved