ಸಂಕ್ರಾಂತಿ ದಿನ ಹೊಳೆನರಸೀಪುರದಲ್ಲಿ ಸಂಪನ್ನಗೊಂಡ ಭಜನಾ ಮಹೋತ್ಸವಹಾಸನ ಜಿಲ್ಲೆಯ ಹೊಳೆನರಸೀಪುರದ ದೇವಾಂಗ ಶ್ರೀ ರಾಮಮಂದಿರದಲ್ಲಿ ೮೫ನೇ ವರ್ಷದ ಧನುರ್ಮಾಸ ತಿಂಗಳ ಭಜನಾ ಮಹೋತ್ಸವವು ಡಿ. ೧೭ ರಂದು ಪ್ರಾರಂಭಗೊಂಡಿದ್ದು, ಸಂಪ್ರದಾಯದ ಆಚರಣೆಯಲ್ಲಿ ಶ್ರೀ ರಾಮನ ಭಕ್ತರು ತೊಡಗಿಸಿಕೊಂಡು ಸಂಸ್ಕೃತಿಯ ಪಾಲನೆ ಮಾಡುವ ಜತೆಗೆ ಭಜನಾ ಮಹೋತ್ಸವಕ್ಕೆ ವಿಶೇಷ ಮೆರಗನ್ನು ನೀಡುತ್ತ ಸಾಗಿದ ಆಚರಣೆಯೂ ಸಂಕ್ರಾಂತಿ ಹಬ್ಬದ ದಿನದಂದು ಸಂಪನ್ನವಾಯಿತು.