• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • Hassan

Hassan

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ವಿಪುಲ ಅವಕಾಶಗಳಿವೆ
ಜೀವನದಲ್ಲಿ ನಾನು ಏನಾಗಬೇಕು ಹಾಗೂ ಏನು ಓದಬೇಕೆಂಬ ಕನಸು ಹಾಗೂ ಹಂಬಲದ ಜತೆಗೆ ಕನಸನ್ನು ನನಸು ಮಾಡುವ ಮೌಲ್ಯತೆ ಇರಬೇಕು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಜ್ಞಾನ, ಕೌಶಲ್ಯ ಹಾಗೂ ವಿದ್ಯಾರ್ಹತೆ ಮತ್ತು ತುಡಿತ ಇದ್ದಾಗ ಮಾತ್ರ ಕನಸು ನನಸು ಮಾಡಿಕೊಳ್ಳಲು ಸಾಧ್ಯವೆಂದು ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರೊಫೆಸರ್ ಮಂಜುರಾಜು ಎಚ್.ಎನ್. ಸಲಹೆ ನೀಡಿದರು.
ರಾಜ್ಯದ ಹಲವು ನೀರಾವರಿ ಸಮಸ್ಯೆಗಳಿಗೆ ದೇವೇಗೌಡರಿಂದ ಪರಿಹಾರ
ತಾಲೂಕು ಪಂಚಾಯಿತಿ ಮಾಜಿ ಸದಸ್ಯ ನಟರಾಜ್ ನಾಕಲಗೂಡು ಮಾತನಾಡಿ, ಎಚ್.ಡಿ.ದೇವೇಗೌಡರು ಅಧಿಕಾರಕ್ಕೆ ಅಂಟಿಕೂರದೆ ನಿರಂತರ ಕಾವೇರಿ ಹೋರಾಟ ಸೇರಿದಂತೆ ರೈತ ಪರ ನಿಂತವರು. ಪ್ರಧಾನಿ ಮೋದಿಯವರು ಸಹ ದೇವೇಗೌಡರಿಂದ ಸಲಹೆ ಪಡೆಯುತ್ತಾರೆ. ನಮ್ಮ ಜಿಲ್ಲೆಯ ಹಲವು ತಾಲೂಕುಗಳಿಗೆ ಹೇಮಾವತಿ ನೀರು ತಂದು ಕೃಷಿಗೆ ಅನುಕೂಲ ಮಾಡಿಕೊಟ್ಟು ರೈತರ ಬದುಕಿಗೆ ಆಶಾಕಿರಣವಾಗಿದ್ದಾರೆ. ಇಂತಹ ಧೀಮಂತ ನಾಯಕರಿಗೆ ಭಗವಂತ ಮತ್ತಷ್ಟು ಆಯಸ್ಸು ನೀಡುವ ಮೂಲಕ ನಮ್ಮಂತಹ ಯುವಕರಿಗೆ ಮಾರ್ಗದರ್ಶನ ನೀಡುವಂತಾಗಲಿ ಎಂದರು.
ಕಲ್ಲು ಗಣಿಗಾರಿಕೆಗೆ ಸ್ಥಳೀಯರಿಂದ ಹಣದ ಬೇಡಿಕೆ
ಕಲ್ಲು ಒಡೆದು ಜೀವನ ಸಾಗಿಸುವ ನಮಗೆ ಯಲಹಂಕ ಗ್ರಾಮದ ಮನು ಎಂಬುವವರು ಪ್ರತಿ ತಿಂಗಳು ಇಂತಿಷ್ಟು ಹಣ ಕೊಡಬೇಕು. ಇಲ್ಲದಿದ್ದಲ್ಲಿ ಕಲ್ಲು ಒಡೆಯಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕುತಿದ್ದಾರೆ ಎಂದು ಬೋವಿ ಸಮಾಜದ ಕಲ್ಲು ಕೆಲಸಗಾರ ಚಂದ್ರು ಆರೋಪಿಸಿದರು. ಮನು ಎಂಬುವವರು ಮಾತ್ರ ನನಗೆ ಹಣ ಕೊಡದೆ ಕಲ್ಲು ಒಡೆಯಲು ಬಿಡುವುದಿಲ್ಲ. ಮತ್ತು ನಿಮ್ಮ ವಿರುದ್ಧ ಕೇಸ್ ಹಾಕಿಸುತ್ತೇನೆ ಎಂದು ಬೆದರಿಕೆ ಹಾಕುತಿದ್ದಾರೆ. ಆದ್ದರಿಂದ ನಮಗೆ ಇವರಿಂದ ರಕ್ಷಣೆ ಬೇಕು. ಜತೆಗೆ ಅನುಮತಿ ಪಡೆಯುವವರೆಗೂ ಅನಧಿಕೃತವಾಗಿ ಕಲ್ಲು ಒಡೆಯುವುದಿಲ್ಲ ಎಂದರು.
ಹಾಸನದಲ್ಲಿ ಬೃಹತ್ ತಿರಂಗಾ ಯಾತ್ರೆ
ಭಾರತದ ಸೇನೆಯೊಂದಿಗೆ ರಾಷ್ಟ್ರ ರಕ್ಷಣೆಗಾಗಿ ಘೋಷಣೆಯೊಂದಿಗೆ ನಗರದ ಸಾಲಗಾಮೆ ರಸ್ತೆ, ಜಿಲ್ಲಾ ಕ್ರೀಡಾಂಗಣದಿಂದ ಹೊರಟ ಬೃಹತ್ ಆಪರೇಷನ್ ಸಿಂದೂರ ತಿರಂಗಾ ಯಾತ್ರೆಯ ವೇಳೆ ತಡೆ ರಹಿತ ಮಳೆ ಬರುತ್ತಿದ್ದರೂ ಯಾವುದನ್ನು ಲೆಕ್ಕಿಸದೇ ಮಳೆಯಲ್ಲಿಯೇ ಸೈನಿಕರು, ಮಾಜಿ ಸೈನಿಕರು, ವೀರ ನಾರಿಯರು, ವಿದ್ಯಾರ್ಥಿಗಳು, ನಾಗರಿಕರು ಪಾಲ್ಗೊಂಡು ದೇಶದ ಧ್ವಜದೊಂದಿಗೆ ಘೋಷಣೆ ಕೂಗಿ ಹೊರಟರು.
ಹಾಸನ ಹಾಲು ಒಕ್ಕೂಟದಿಂದ ಹಸುಗಳ ಚಿಕಿತ್ಸೆಗೆ ಪಶುವೈದ್ಯರ ನೇಮಕ
ಅಕ್ಕನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಸುಮಾರು 16 ಲಕ್ಷ ರು. ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ನೂತನ ಕಟ್ಟಡ ಹಾಗೂ 32 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ಬಿಎಂಸಿ ಘಟಕವನ್ನು ಉದ್ಘಾಟಿಸಿ ಮಾತನಾಡಿದರು. ನೂತನ ಕಟ್ಟಡ ನಿರ್ಮಾಣಕ್ಕೆ ಕೆಎಂಎಫ್‌ನಿಂದ 4.50 ಲಕ್ಷ ಹಾಸನ ಹಾಲು ಒಕ್ಕೂಟದಿಂದ 3ಲಕ್ಷ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ 1.50 ಲಕ್ಷ ಅನುದಾನವನ್ನು ಕೊಡಲಾಗುತ್ತಿದೆ. ತಾಲೂಕಿನ ರೈತರನ್ನುಆರ್ಥಿಕವಾಗಿ ರೈತರ ಕೈ ಬಲಪಡಿಸುವೆ ಎಂದು ಶಾಸಕ ಬಾಲಕೃಷ್ಣ ಹೇಳಿದರು.
ದೃಢ ಮನಸ್ಸಿನಿಂದ ಗುರಿ ಸಾಧಿಸುವ ಛಲ ಇರಬೇಕು
ಮುಂದೆ ಗುರಿ ಹಿಂದೆ ಗುರು ಮತ್ತು ದೃಢಸಂಕಲ್ಪ ಇದ್ದರೆ ಏನನ್ನಾದರೂ ಸಾಧಿಸಬಹುದು. ತಿದ್ದಿ, ಬುದ್ಧಿ ಹೇಳಿ ಭವಿಷ್ಯದ ಸರಿ ಮಾರ್ಗ ತೋರುವ ಗುರು ಮತ್ತು ಛಲದಿಂದ ಗುರಿಯನ್ನು ಸಾಧಿಸುವ ಮನೋಭಾವವನ್ನು ವಿದ್ಯಾರ್ಥಿನಿಯರು ರೂಢಿಸಿಕೊಳ್ಳಬೇಕು ಆಗ ಮಾತ್ರ ಯಶಸ್ಸು ಲಭಿಸುತ್ತದೆ ಎಂದರು. ತಾವು ನಡೆದು ಬಂದ ಹಾದಿ, ಕಠಿಣ ಶ್ರಮ, ಮಾರ್ಗದರ್ಶಕರಾಗಿ ನಿಂತ ಗುರುಗಳು ಮತ್ತು ಶ್ರಮದ ಫಲ ಅದರ ಮಹತ್ವದ ಬಗ್ಗೆ ಅರ್ಥಪೂರ್ಣವಾಗಿ ವಿವರಿಸಿದ ಅವರು, ಭವಿಷ್ಯದಲ್ಲಿ ಇರುವ ಉದ್ಯೋಗಾವಕಾಶದ ಬಗ್ಗೆ ಮತ್ತು ಪೂರ್ವ ತಯಾರಿ ಬಗ್ಗೆ ತಿಳಿಸಿದರು.
ಮಕ್ಕಳಿಗಿಂತ ಪೋಷಕರಲ್ಲಿ ಆಂಗ್ಲ ಭಾಷೆಯ ವ್ಯಾಮೋಹ ಹೆಚ್ಚುತ್ತಿದೆ
ಸರ್ಕಾರ ಹಾಗೂ ಕನ್ನಡಪರ ಸಂಘಸಂಸ್ಥೆಗಳು ನಾಡು, ನುಡಿ ರಕ್ಷಣೆಗೆ ನೀಡುವ ಆದ್ಯತೆಯಂತೆ ಶಾಲಾ ಕಾಲೇಜುಗಳಲ್ಲಿ ನಡೆಯುವ ವಾರ್ಷಿಕ ಪರೀಕ್ಷೆಯಲ್ಲಿ ಕನ್ನಡದಲ್ಲಿ ಪೂರ್ಣ ಅಂಕ ಪಡೆಯುವ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸುವ ಕೆಲಸ ಮಾಡಿದೆ. ಆದರೆ ಬಾಲ್ಯದಿಂದಲೇ ಮಕ್ಕಳಲ್ಲಿ ಕನ್ನಡ ಅಭಿಮಾನ ಬೆಳೆಯಲು ಸಹಕಾರಿಯಾಗುತ್ತದೆ ಎಂದು ತಾಲೂಕು ಕಾರ್ಯ ನಿರತ ಪತ್ರಕರ್ತ ಸಂಘದ ಮಾಜಿ ಅಧ್ಯಕ್ಷ ಕಣಕಟ್ಟೆ ಕುಮಾರ್ ಹೇಳಿದರು.
ಕಸಾಯಿಖಾನೆಗೆ ಸಾಗಿಸುತ್ತಿದ್ದ ಜಾನುವಾರುಗಳ ರಕ್ಷಣೆ
ರಾಯಪುರದ ಬಳಿ ಅಕ್ರಮವಾಗಿ ಹಾಸನದ ಕಡೆಯಿಂದ ಚಿಕ್ಕಮಗಳೂರು ಕಡೆಗೆ ಗೂಡ್ಸ್ ವಾಹನದಲ್ಲಿ ಹಾಸನ ಸಂತೆಯಿಂದ ಖರೀದಿ ಮಾಡಿ ಚಿಕ್ಕಮಗಳೂರಿಗೆ ಅಕ್ರಮವಾಗಿ ಕಸಾಯಿ ಖಾನೆಗೆ ಸಾಗಿಸುತ್ತಿದ್ದ ಕರುಗಳು ಹಾಗು ಜಾನುವಾರುಗಳನ್ನು ಸಾಗಿಸುತ್ತಿರುವ ಬಗ್ಗೆ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರಿಗೆ ಮಾಹಿತಿ ತಿಳಿದಿತ್ತು. ತಕ್ಷಣ ಬೇಲೂರು ಪಿಎಸ್ಐ ಎಸ್ ಜಿ ಪಾಟೀಲ್ ನೇತೃತ್ವದಲ್ಲಿ ಅತಿ ವೇಗವಾಗಿ ಚಲಿಸುತ್ತಿದ್ದ ಗೂಡ್ಸ್ ವಾಹನ ಹಿಂಬಾಲಿಸಿ ಅಡ್ಡಗಟ್ಟಿ ಚಾಲಕನನ್ನು ವಿಚಾರಿಸಿದಾಗ ಹಾಸನದ ಸಂತೆಯಿಂದ ಚಿಕ್ಕ ಕರುಗಳು ಸೇರಿದಂತೆ ಒಟ್ಟು ೧೨ ಕರುಗಳನ್ನು ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿರುವುದಾಗಿ ತಿಳಿದು ಬಂದಿದೆ.
ಜಿಲ್ಲೆಯಲ್ಲಿ ಆಶಾಢಕ್ಕೂ ಮೊದಲೇ ಸೋನೆ ಮಳೆ
ಸಾಮಾನ್ಯವಾಗಿ ಜುಲೈ ತಿಂಗಳಿನಲ್ಲಿ ಆಶಾಢದ ಅನುಭವವಾಗುತ್ತದೆ. ಅಂದರೆ ಜಿಟಿಜಿಟಿ ಸುರಿಯುವ ಸೋನೆ ಮಳೆ, ಚುಮುಚುಮು ಚಳಿ, ಹೊರಗೆ ಕಾಲಿಟ್ಟರೆ ಕೆಸರು. ಆದರೆ ಇದೆಲ್ಲಾ ಅನುಭವ ಮೇ ತಿಂಗಳಲ್ಲೇ ಆಗುತ್ತಿದೆ. ಕಾರಣ ಹಠಾತ್ತಾಗಿ ಶುರುವಾಗಿರುವ ಸೋನೆ ಮಳೆ ಜುಲೈ ತಿಂಗಳ ಆಶಾಢದ ಅನುಭವವನ್ನು ಮೇ ತಿಂಗಳಲ್ಲೇ ಉಣಬಡಿಸುತ್ತಿದೆ. ಕೆರೆಕಟ್ಟೆಗಳೇ ಭರ್ತಿಯಾಗದೆ ಸೋನೆ ಮಳೆಯ ಜಿನುಗುವ ನೀರಿಗೆ ಭತ್ತ ನಾಟಿ ಮಾಡಲು ಸಾಧ್ಯವಿಲ್ಲ. ಹಾಗಾಗಿ ಈ ವರ್ಷ ಬತ್ತದ ಉತ್ಪಾದನೆ ಮೇಲೆ ಪರಿಣಾಮ ಉಂಟಾಗುವ ಸಾಧ್ಯತೆ ಇದೆ.
ಕಲ್ಲುಸಾದರಹಳ್ಳಿ ವಿದ್ಯುತ್ ವಿತರಣಾ ಕೇಂದ್ರಕ್ಕೆ ಚಾಲನೆ
ಅರಸೀಕೆರೆ ತಾಲೂಕಿನ ಕಣ್ಣಕಟ್ಟೆ ಹೋಬಳಿಯ ಕಲ್ಲುಸಾದರಹಳ್ಳಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊಸದಾಗಿ ವಾಲೇಹಳ್ಳಿ ಫೀಡರ್ ಸಿದ್ಧವಾಗಿದ್ದು ಇದಕ್ಕೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಮಂಜುನಾಥ್ ಚಾಲನೆ ನೀಡಿದರು. ಈ ಹೊಸ ಫೀಡರ್‌ನಿಂದಾಗಿ ವಾಲೇಹಳ್ಳಿ, ಬೈರಾಪುರ, ರಂಗನಾಯಕನಕೊಪ್ಪಲು, ಕಲ್ಲುಗುಂಡಿ, ಕಲ್ಲುಸಾಧಾರಹಳ್ಳಿ ಹಾಗೂ ಸುತ್ತಮುತ್ತಲಿನ ರೈತರಿಗೆ ಅನುಕೂಲ ವಾಗಲಿದೆ ಎಂದರು. ಸಹಾಯಕ ಎಂಜಿನಿಯರ್ ಪರಮೇಶ್ವರಪ್ಪ ಇನ್ನು ಮುಂತಾದ ಅಧಿಕಾರಿಗಳು ಮತ್ತು ವಿದ್ಯುತ್ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.
  • < previous
  • 1
  • ...
  • 84
  • 85
  • 86
  • 87
  • 88
  • 89
  • 90
  • 91
  • 92
  • ...
  • 508
  • next >
Top Stories
ರಾಜ್ಯದಲ್ಲಿ ಇನ್ನೂ 3-4 ದಿನ ಮಳೆ ಸಾಧ್ಯತೆ
‘ಬಳ್ಳಾರಿ ಜೈಲಿಗೆ ದರ್ಶನ್‌ ಸ್ಥಳಾಂತರ ಇಲ್ಲ’
ಶಾಸಕ ಪಪ್ಪಿ ಬಳಿ ಇದ್ದ 21 ಕೇಜಿ ಚಿನ್ನ ಇ.ಡಿ. ಜಪ್ತಿ!
ಎಂಎಲ್ಸಿಗಳ ಜತೆ ಸಿಎಂ ಸಭೆ, ಅನುದಾನ ಭರವಸೆ
‘ಕೈ’ ಸರ್ಕಾರ ಇದೆ ಎಂದು ದುಸ್ಸಾಹಸ : ಜೋಶಿ ಟೀಕೆ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved