ಉಚಿತ ಸಾಮೂಹಿಕ ವಿವಾಹಕ್ಕೆ ಚಂದಾವಸೂಲಿ ಆರೊಪಚಿತ್ತಾಪುರ ತಾಲೂಕಿನಲ್ಲಿ ಕಳೆದ ಹತ್ತು ವರ್ಷಗಳಿಂದ ವೀರಶೈವ ಸಮಾಜದವರು ಬಸವ ಉತ್ಸವ ಸಮಿತಿ ಮಾಡಿಕೊಂಡು ಕಡು ಬಡವರಿಗೆ ಅನುಕೂಲವಾಗುವ ಉದ್ದೇಶದಿಂದ ಉಚಿತ ಸಾಮೂಹಿಕ ವಿವಾಹವನ್ನು ಮಾಡಿಕೊಂಡು ಬರುತ್ತಿದ್ದು ಇದರ ಎಲ್ಲಾ ಖರ್ಚು ವೆಚ್ಚವನ್ನು ಬಸವ ಉತ್ಸವ ಸಮಿತಿ ಮಾಡಿಕೊಂಡು ಬರುತ್ತಿದೆ. ಇದಕ್ಕೆ ಸಾರ್ವಜನಿಕರಿಂದ ಯಾವುದೇ ರೀತಿಯ ದೇಣಿಗೆಯನ್ನು ಪಡೆಯುವುದಿಲ್ಲಾ. ಆದರೆ ಮಣಿಕಂಠ ರಾಠೋಡ ಅವರು ಸುಳ್ಳು ಮಾಹಿತಿ ಪಡೆದು ದೇಣಿಗೆ ಪಡೆದು ಸಾಮೂಹಿಕ ವಿವಾಹ ಮಾಡುತ್ತಿದ್ದಾರೆ ಎಂದು ಸುಳ್ಳು ಆರೊಪ ಮಾಡಿದ್ದಾರೆ ಎಂದು ವೀರಶೈವ ಸಮಾಜದ ತಾಲೂಕು ಅಧ್ಯಕ್ಷ ನಾಗರಾಜ ಬಂಕಲಗಾ ಹೇಳಿದರು.