ಕೊಪ್ಪಕ್ಕೆ ಶುದ್ಧ ನೀರು ಒದಗಿಸಲು ಸುಧಾಕರ್ ಶೆಟ್ಟಿ ಆಗ್ರಹಕೊಪ್ಪ, ಪಟ್ಟಣದ ಪ್ರಮುಖ ನಾಲ್ಕು ಒವರ್ ಹೆಡ್ ಟ್ಯಾಂಕ್ಗಳಿಂದ ಪಟ್ಟಣಕ್ಕೆ ಸರಬರಾಜಾಗುತ್ತಿರುವ ನೀರು ಕುಡಿಯಲು ಯೋಗ್ಯವಲ್ಲ ಎಂದು ಜಿಲ್ಲಾ ಪ್ರಯೋಗಾಲಯದ ವರದಿ ದೃಢಪಡಿಸಿದ್ದರೂ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಸಾರ್ವಜನಿಕರ ಬಗ್ಗೆ ಒಂದಿಷ್ಟು ಕಳಕಳಿ ಇಲ್ಲದ ಪಟ್ಟಣ ಆಡಳಿತದ ಬಗ್ಗೆ ಜೆಡಿಎಸ್ ರಾಜ್ಯ ಹಿರಿಯ ಉಪಾಧ್ಯಕ್ಷ ಅಮ್ಮ ಫೌಂಡೇಷನ್ ಅಧ್ಯಕ್ಷ ಸುಧಾಕರ್ ಎಸ್. ಶೆಟ್ಟಿ ಅಸಮಧಾನ ವ್ಯಕ್ತಪಡಿಸಿದರು.