ಅಭಿವೃದ್ಧಿ ವಿಚಾರದಲ್ಲಿ ಎಲ್ಲರ ಸಹಕಾರ ಅಗತ್ಯ: ಸಂಗಣ್ಣ ಕರಡಿಸಿಂಧನೂರಿನಲ್ಲಿ ಹಿರೇಹಳ್ಳ ಸೇತುವೆಯನ್ನು ಕೊಪ್ಪಳ ಸಂಸದ ಸಂಗಣ್ಣ ಕರಡಿ ಉದ್ಘಾಟಿಸಿ ಮಾತನಾಡಿದರು. ಪ್ರಧಾನ ಮಂತ್ರಿ ಆದಿ ಆದರ್ಶ ಗ್ರಾಮ ಯೋಜನೆಯಡಿ ಸಿಂಧನೂರು ತಾಲೂಕಿನ ರಾಗಲಪರ್ವಿ, ಯದ್ದಲದೊಡ್ಡಿ, ಮಸ್ಕಿ ತಾಲೂಕಿನ ಭೋಗಾಪುರ, ವೀರಾಪೂರ ಗ್ರಾಮಗಳು ಆಯ್ಕೆಗೊಂಡಿದ್ದು, ಒಟ್ಟು ರು. 56 ಲಕ್ಷ ವೆಚ್ಚದಲ್ಲಿ ಗ್ರಾಮಗಳ ಅಭಿವೃದ್ಧಿಗೆ ಮೂಲಸೌಕರ್ಯ ಕಲ್ಪಿಸಲಾಗುವುದು ಎಂದರು.