ರೈತರಿಗೆ ಭೂಮಿ ಪಟ್ಟಾ ನೀಡದ ಕಂದಾಯ ಅಧಿಕಾರಿತಾಲೂಕಿನ ಗುರುಗುಂಟಾ ಕಂದಾಯ ಹೋಬಳಿಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ರೈತರಿಗೆ ಭೂಮಿ ಪಟ್ಟಾ ನೀಡುತ್ತಿಲ್ಲ. ಅಲ್ಲದೇ ರೈತರ ಭೂಮಿ ಸಮಸ್ಯೆ ಪರಿಹಾರಕ್ಕೆ ವಿಪರೀತ ಹಣ ವಸೂಲಿ ಮಾಡುತ್ತಿದ್ದೂ ಕೂಡಲೇ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಸಿಪಿಐ (ಎಂಎಲ್) ಮಾಸ್ಲೈನ್ ಕರ್ನಾಟಕ ರೈತ ಸಂಘ ಪಟ್ಟಣದ ಮಿನಿ ವಿಧಾನಸೌಧದಲ್ಲಿರುವ ತಹಸಿಲ್ ಕಚೇರಿ ಮುಂದೆ ಧರಣಿ ನಡೆಸಿದರು.