ತುಂಗಭದ್ರಾ ಜಲಾಶಯ ಗೇಟ್ ಬದಲಿಸಲು ಎನ್ಡಿಟಿ ಪರೀಕ್ಷೆ ಮೊರೆ!ಕಲ್ಯಾಣ ಕರ್ನಾಟಕದ ರೈತರ ಜೀವನಾಡಿ ತುಂಗಭದ್ರಾ ಜಲಾಶಯದ ಕ್ರಸ್ಟ್ಗೇಟ್ಗಳನ್ನು ಬದಲಿಸುವುದಕ್ಕಾಗಿ ತುಂಗಭದ್ರಾ ಮಂಡಳಿ ಆಂಧ್ರಪ್ರದೇಶ ಮೂಲದ ಏಜೆನ್ಸಿಯೊಂದರಿಂದ ವಿನಾಶಕಾರಿಯಲ್ಲದ ಪರೀಕ್ಷೆ (ಎನ್ಡಿಟಿ) ಯನ್ನು ಮಾಡಿಸುತ್ತಿದೆ. ಒಂದು ತಿಂಗಳಿನಿಂದ ಜಲಾಶಯದ ಗೇಟ್ಗಳಲ್ಲಿ ಈ ಪರೀಕ್ಷೆ ನಡೆಯುತ್ತಿದ್ದು, ಈ ಏಜೆನ್ಸಿ ನೀಡುವ ವರದಿ ಆಧಾರದ ಮೇಲೆ ಗೇಟ್ಗಳನ್ನು ಬದಲಿಸಲು ಇ-ಟೆಂಡರ್ ಪ್ರಕ್ರಿಯೆ ಆರಂಭಗೊಳ್ಳಲಿದೆ.