ನಡಹಳ್ಳಿಗೆ ಅಪಮಾನ ಮಾಡಿದ್ರೆ ತಕ್ಕ ಉತ್ತರಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಪಕ್ಷಕ್ಕೆ ಮುಜುಗರವನ್ನುಂಟು ಮಾಡುವ ಹೇಳಿಕೆಗಳನ್ನು ಕೊಟ್ಟಿದ್ದರಿಂದ ಅವರನ್ನು ಉಚ್ಚಾಟಿಸಿದ್ದಾರೆಯೇ ವಿನಃ ಇದರಲ್ಲಿ ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿಯವರ ಯಾವುದೇ ಪಾತ್ರವಿಲ್ಲ. ಆದರೆ, ಮತಕ್ಷೇತ್ರದ ಕೆಲವರು ನಡಹಳ್ಳಿಯವರ ಭಾವಚಿತ್ರಕ್ಕೆ ಅಪಮಾನ ಮಾಡಿದ್ದನ್ನು ಖಂಡಿಸುತ್ತೇನೆ. ಮುಂದಿನ ಪ್ರತಿಭಟನೆಗಳಲ್ಲಿ ನಡಹಳ್ಳಿಯವರಿಗೆ ಅಪಮಾನ ಮಾಡಿದರೆ ನಾವು ಅದೇ ರೀತಿಯ ಹೋರಾಟದ ಮೂಲಕ ತಕ್ಕ ಉತ್ತರ ಕೊಡಬೇಕಾಗುತ್ತದೆ ಎಂದು ಬಿಜೆಪಿ ಮುಖಂಡ ಸಿದ್ದರಾಜ ಹೊಳಿ, ದಲಿತ ಮುಖಂಡ ಮಲ್ಲಣ್ಣ ತಂಗಡಗಿ ಎಚ್ಚರಿಸಿದ್ದಾರೆ.