ಜಾತಿ ಆಧಾರದಲ್ಲಿ ಹುದ್ದೆ ಸುಲಭವಾಗಿ ಸಿಗುವುದು ಸತ್ಯಕನ್ನಡಪ್ರಭ ವಾರ್ತೆ ನಿಡಗುಂದಿ ದೇಹದಲ್ಲಿ ಉಸಿರು ನಿಲ್ಲುವರೆಗೂ ಶಿಕ್ಷಕರ ಸೇವೆಗೆ ಸದಾ ಸಿದ್ಧನಿದ್ದೇನೆ. ಅವರ ಪ್ರೀತಿ, ಆಶೀರ್ವಾದ ಹಾಗೂ ಹಿರಿಯರ ತ್ಯಾಗದ ಫಲವಾಗಿ ರಾಜ್ಯಾಧ್ಯಕ್ಷನಾಗಲು ಸಾಧ್ಯವಾಗಿದೆ. ಹುದ್ದೆಗಳು ಜಾತಿ ಆಧಾರದಲ್ಲಿ ಸುಲಭವಾಗಿ ಸಿಗುತ್ತವೆ ಎನ್ನುವುದು ಸತ್ಯ. ಎಲ್ಲ ವ್ಯವಸ್ಥೆಗಳ ಮಧ್ಯ ತಮ್ಮೆಲ್ಲರ ಆಶೀರ್ವಾದದಿಂದ ಸ್ಥಾನ ಲಭಿಸಿದೆ ಎಂದು ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಲಿ ಹೇಳಿದರು.